ETV Bharat / state

ಹೆರಿಗೆ ಕೊಠಡಿಯ ದಾದಿಯರಿಗೆ ಸೋಂಕು, ಆತಂಕದಲ್ಲಿ ಗರ್ಭಿಣಿ, ಬಾಣಂತಿಯರು

author img

By

Published : Jul 28, 2020, 9:33 PM IST

ಸ್ತ್ರೀರೋಗ ತಜ್ಞರಿಗೆ ಸೋಂಕು ತಗುಲಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಸಡ್ಡೆ ತೋರಿರುವುದು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ..

ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗೂ ಸೋಂಕು ಆವರಿಸುತ್ತಿದೆ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುವ ದಾದಿ (ನರ್ಸ್)ಗೆ ಕೊರೊನಾ ಬಂದಿರುವುದು ಗರ್ಭಿಣಿಯರು ಹಾಗೂ ಬಾಣಂತಿಯರ ಆತಂಕಕ್ಕೆ‌ ಕಾರಣವಾಗಿದೆ.

ಹೆರಿಗೆ ಕೊಠಡಿಯಲ್ಲಿ ಕೆಲಸ ಮಾಡುವ ದಾದಿಯರಿಗೆ ತಗುಲಿದ ಸೋಂಕು

ಸ್ತ್ರೀರೋಗ ತಜ್ಞರೊಬ್ಬರಿಗೆ ಕೊರೊನಾ ತಗುಲಿದ ಪರಿಣಾಮ ನರ್ಸ್​ಗೆ ಇವರ ಸಂಪರ್ಕದಿಂದ ಸೋಂಕು ತಗುಲಿದೆ. ಈಗಾಗಲೇ ಸೋಂಕಿತ ವೈದ್ಯ ಗುಣಮುಖರಾಗಿದ್ದು, ಇತ್ತ ಸೋಂಕಿತ ದಾದಿ(ನರ್ಸ್) ಸಾಕಷ್ಟು ಹೆರಿಗೆಗಳನ್ನು ಮಾಡಿಸಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ತಲೆ ಬಿಸಿಯಾಗಿದೆ. ಸೋಂಕಿತ ನರ್ಸ್​ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 19 ಜನರ ಸ್ವ್ಯಾಬ್ ಟೆಸ್ಟ್​​ಗೆ ಕಳುಹಿಸಲಾಗಿದೆ. ಹೆರಿಗೆ ಮಾಡಿಸಿಕೊಂಡಿದ್ದ ಬಾಣಂತಿಯರು ಸಾಕಷ್ಟು ಆತಂಕಕ್ಕೊಳಗಾಗಿದ್ದಾರೆ.

ಸ್ತ್ರೀರೋಗ ತಜ್ಞರಿಗೆ ಸೋಂಕು ತಗುಲಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಸಡ್ಡೆ ತೋರಿರುವುದು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನರ್ಸ್​ ಹೆರಿಗೆ ಮಾಡಿಸಿದ ಬಳಿಕ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹೆರಿಗೆ ಮಾಡಿಸಿಕೊಂಡಿರುವ ಬಾಣಂತಿಯರು ಹಾಗೂ ಪುಟ್ಟ ಪುಟ್ಟ ಕಂದಮ್ಮಗಳ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ಬರಬೇಕಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲು ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರಂತೆ.

ಚಿತ್ರದುರ್ಗ : ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್​ಗೂ ಸೋಂಕು ಆವರಿಸುತ್ತಿದೆ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುವ ದಾದಿ (ನರ್ಸ್)ಗೆ ಕೊರೊನಾ ಬಂದಿರುವುದು ಗರ್ಭಿಣಿಯರು ಹಾಗೂ ಬಾಣಂತಿಯರ ಆತಂಕಕ್ಕೆ‌ ಕಾರಣವಾಗಿದೆ.

ಹೆರಿಗೆ ಕೊಠಡಿಯಲ್ಲಿ ಕೆಲಸ ಮಾಡುವ ದಾದಿಯರಿಗೆ ತಗುಲಿದ ಸೋಂಕು

ಸ್ತ್ರೀರೋಗ ತಜ್ಞರೊಬ್ಬರಿಗೆ ಕೊರೊನಾ ತಗುಲಿದ ಪರಿಣಾಮ ನರ್ಸ್​ಗೆ ಇವರ ಸಂಪರ್ಕದಿಂದ ಸೋಂಕು ತಗುಲಿದೆ. ಈಗಾಗಲೇ ಸೋಂಕಿತ ವೈದ್ಯ ಗುಣಮುಖರಾಗಿದ್ದು, ಇತ್ತ ಸೋಂಕಿತ ದಾದಿ(ನರ್ಸ್) ಸಾಕಷ್ಟು ಹೆರಿಗೆಗಳನ್ನು ಮಾಡಿಸಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ತಲೆ ಬಿಸಿಯಾಗಿದೆ. ಸೋಂಕಿತ ನರ್ಸ್​ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 19 ಜನರ ಸ್ವ್ಯಾಬ್ ಟೆಸ್ಟ್​​ಗೆ ಕಳುಹಿಸಲಾಗಿದೆ. ಹೆರಿಗೆ ಮಾಡಿಸಿಕೊಂಡಿದ್ದ ಬಾಣಂತಿಯರು ಸಾಕಷ್ಟು ಆತಂಕಕ್ಕೊಳಗಾಗಿದ್ದಾರೆ.

ಸ್ತ್ರೀರೋಗ ತಜ್ಞರಿಗೆ ಸೋಂಕು ತಗುಲಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಸಡ್ಡೆ ತೋರಿರುವುದು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನರ್ಸ್​ ಹೆರಿಗೆ ಮಾಡಿಸಿದ ಬಳಿಕ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹೆರಿಗೆ ಮಾಡಿಸಿಕೊಂಡಿರುವ ಬಾಣಂತಿಯರು ಹಾಗೂ ಪುಟ್ಟ ಪುಟ್ಟ ಕಂದಮ್ಮಗಳ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ಬರಬೇಕಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲು ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.