ETV Bharat / state

ಮುಂದಿನ ನಿರ್ಣಯ ವ್ಯತಿರಿಕ್ತವಾದರೆ ಅದಕ್ಕೆ ನೀವೆ ಕಾರಣ: ವಿವಿ ಸಾಗರ ನೀರಿನ ವಿಚಾರವಾಗಿ ಸಿಎಂಗೆ ಶಾಸಕಿ ಪತ್ರ

author img

By

Published : May 1, 2020, 2:58 PM IST

ವಾಣಿ ವಿಲಾಸ ಸಾಗರದಿಂದ ಚಳ್ಳಕೆರೆಯ ವೇದಾವತಿ ನದಿಗೆ ನೀರು ಹರಿಸಿದ್ದಕ್ಕೆ ಸಿಎಂ ಬಿಎಸ್​ವೈಗೆ ಪತ್ರ ಬರೆದಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

Hiriyuru MLA Poornima Wrote letter to CM
ರೈತರೊಂದಿಗೆ ನೀರು ನಿಲ್ಲಿಸಿದ ಶಾಸಕಿ ಪೂರ್ಣಿಮಾ

ಚಿತ್ರದುರ್ಗ : ವಾಣಿ ವಿಲಾಸ ಸಾಗರದಿಂದ ನೀರು ಹರಿಸುವ ವಿಚಾರವಾಗಿ ಸಿಎಂ ಬಿಎಸ್​ವೈಗೆ ಪತ್ರ ಬರೆದಿರುವ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನನ್ನ ಮುಂದಿನ ನಿರ್ಣಯ ವ್ಯತಿರಿಕ್ತವಾಗಿದ್ದರೆ‌ ಅದಕ್ಕೆ ನೀವೆ ಕಾರಣ ಎಂದಿದ್ದಾರೆ.

Hiriyuru MLA Poornima Wrote letter to CM
ಸಿಎಂಗೆ ಪತ್ರ ಬರೆದ ಶಾಸಕಿಪೂರ್ಣಿಮಾ ಶ್ರೀನಿವಾಸ್

ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆಯ ವೇದಾವತಿ ನದಿಗೆ ಹೆಚ್ಚುವರಿ ನೀರು ಹರಿಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಿಎಂಗೆ ಪತ್ರ ಬರೆದಿದ್ದು, ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿಯ ಒತ್ತಾಯಕ್ಕೆ ಮಣಿದು ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸಲು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದೇವೆ, ನಿರ್ಧಾರ ತೆಗೆದುಕೊಳ್ಳುವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ರೈತರೊಂದಿಗೆ ತೆರಳಿ ನೀರು ನಿಲ್ಲಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಈ ಹಿಂದೆ ವೇದಾವತಿ ನದಿಗೆ ನೀರು ಹರಿಸಿದಾಗ ರೈತ‌ ಮುಖಂಡರೊಂದಿಗೆ ಖುದ್ದಾಗಿ ಜಲಾಶಯ‌ದ ಬಳಿ ತೆರಳಿ ಹರಿಯುವ ನೀರನ್ನು ಬಂದ್ ಮಾಡಿಸಿದ್ದ ಶಾಸಕಿ, ಇದೀಗ ಮತ್ತೆ ನೀರು ಹರಿಸಲು ಮುಂದಾಗಿರುವುದಕ್ಕೆ ಅಸಮಧಾನ ವ್ಯಕ್ತಡಿಸಿದ್ದಾರೆ.

ಚಿತ್ರದುರ್ಗ : ವಾಣಿ ವಿಲಾಸ ಸಾಗರದಿಂದ ನೀರು ಹರಿಸುವ ವಿಚಾರವಾಗಿ ಸಿಎಂ ಬಿಎಸ್​ವೈಗೆ ಪತ್ರ ಬರೆದಿರುವ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನನ್ನ ಮುಂದಿನ ನಿರ್ಣಯ ವ್ಯತಿರಿಕ್ತವಾಗಿದ್ದರೆ‌ ಅದಕ್ಕೆ ನೀವೆ ಕಾರಣ ಎಂದಿದ್ದಾರೆ.

Hiriyuru MLA Poornima Wrote letter to CM
ಸಿಎಂಗೆ ಪತ್ರ ಬರೆದ ಶಾಸಕಿಪೂರ್ಣಿಮಾ ಶ್ರೀನಿವಾಸ್

ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆಯ ವೇದಾವತಿ ನದಿಗೆ ಹೆಚ್ಚುವರಿ ನೀರು ಹರಿಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಿಎಂಗೆ ಪತ್ರ ಬರೆದಿದ್ದು, ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿಯ ಒತ್ತಾಯಕ್ಕೆ ಮಣಿದು ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸಲು ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದೇವೆ, ನಿರ್ಧಾರ ತೆಗೆದುಕೊಳ್ಳುವಾಗ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ರೈತರೊಂದಿಗೆ ತೆರಳಿ ನೀರು ನಿಲ್ಲಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಈ ಹಿಂದೆ ವೇದಾವತಿ ನದಿಗೆ ನೀರು ಹರಿಸಿದಾಗ ರೈತ‌ ಮುಖಂಡರೊಂದಿಗೆ ಖುದ್ದಾಗಿ ಜಲಾಶಯ‌ದ ಬಳಿ ತೆರಳಿ ಹರಿಯುವ ನೀರನ್ನು ಬಂದ್ ಮಾಡಿಸಿದ್ದ ಶಾಸಕಿ, ಇದೀಗ ಮತ್ತೆ ನೀರು ಹರಿಸಲು ಮುಂದಾಗಿರುವುದಕ್ಕೆ ಅಸಮಧಾನ ವ್ಯಕ್ತಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.