ಚಿತ್ರದುರ್ಗ: ಕೃಷಿ ಕೈಕೊಟ್ಟ ಹಿನ್ನೆಲೆ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ವಡ್ಡರಪಾಳ್ಯ ಗ್ರಾಮದಲ್ಲಿ ನಡೆದಿದೆ.
ವಡ್ಡರಪಾಳ್ಯ ಗ್ರಾಮದ ಪ್ರವೀಣ್(40) ನೇಣಿಗೆ ಶರಣಾದ ರೈತ ಎಂದು ತಿಳಿದುಬಂದಿದೆ. ಚಿತ್ರದುರ್ಗದ ಕರ್ನಾಟಕ ಬ್ಯಾಂಕ್ನಲ್ಲಿ 10 ಲಕ್ಷ ಸಾಲ ಮಾಡಿಕೊಂಡಿದ್ದ ರೈತ, ಕೊಳವೆ ಬಾವಿ ವಿಫಲ, ಅಡಿಕೆ ತೋಟ ಒಣಗಿದ ಹಿನ್ನೆಲೆ ಸಾಲದ ಸುಳಿಗೆ ಸಿಲುಕಿದ್ದ. ಈತ ಬ್ಯಾಂಕ್ ಮ್ಯಾನೇಜರ್ ಕಿರುಕುಳದಿಂದ ನೇಣಿಗೆ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಭೀಮಸಮುದ್ರ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.