ETV Bharat / state

ಯುಗಾದಿ ಒಳಗೆ ಸಿಎಂ ಬದಲಾಗ್ತಾರೆ, ಉತ್ತರ ಕರ್ನಾಟಕದವರಿಗೆ ಪಟ್ಟ : ಶಾಸಕ ಯತ್ನಾಳ

author img

By

Published : Feb 3, 2021, 1:59 AM IST

ನನ್ನ ಡಿನ್ನರ್ ಪಾರ್ಟಿಗೆ ಕರೆಯಬೇಡಿ ಎಂದು ಸಿಎಂಗೆ ಹೇಳಿದೀನಿ. ಶಾಸಕಾಂಗ ಸಭೆಗೆ ನಾವು ಒತ್ತಾಯಿಸಿದ್ದೆವು. ಡಿನ್ನರ್ ಪಾರ್ಟಿಯಿಂದ ಏನು ಲಾಭ ಆಗುವುದಿಲ್ಲ. ಯಾರಿಗೂ ಡಿನ್ನರ್ ಅವಶ್ಯವಿಲ್ಲ.ಯಾರು ಡಿನ್ನರ್ ಇಲ್ದೇ ಇರಲ್ಲ. ಎಲ್ಲರ‌ ಮನೆಯಲ್ಲೂ ಡಿನ್ನರ್,ಲಂಚ್,ಬ್ರೇಕ್ ಫಾಸ್ಟ್ ಇರುತ್ತದೆ. ನಮಗೆ ಬೇಕಿದ್ದು ಶಾಸಕಾಂಗ ಸಭೆ ಎಂದರು‌.

ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ

ಚಿತ್ರದುರ್ಗ: ಯುಗಾದಿ ಒಳಗೆ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ. ಅದಕ್ಕಾಗಿ ಹೈಕಮಾಂಡ್ ಏನ್ ತೀರ್ಮಾನ ಮಾಡಬೇಕೊ ಮಾಡುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಿತ್ರದುರ್ಗ ನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಪಂಚಮಸಾಲಿ ಸಮುದಾಯ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ , ದೇಶದಲ್ಲಿ ಹುಟ್ಟಿರುವ ಎಲ್ಲರಿಗೂ ಸಿಎಂ, ಪಿಎಂ ಆಗುವ ಅರ್ಹತೆ ಇದೆ. ಅಂತೆಯೇ ನಮಗೂ ಯಾಕ್ ಇರಬಾರದು ಎಂದು ಪ್ರಶ್ನಿಸಿದರು. ಬಿಎಸ್ ವೈ ಸಂಪುಟದಲ್ಲಿ ನಾನು ಮಂತ್ರಿ ಆಗುವುದಿಲ್ಲ. ನಾನು ಮಂತ್ರಿಯಾಗಲು ಮಠಾಧೀಶರ ಕಾಲು ಹಿಡಿಯಲ್ಲ. ಕೆಲವರು ಮಠಾಧೀಶರಿಂದ ಲಾಭಿ ಮಾಡಿಸಿ, ದಕ್ಷಿಣೆ ಕೊಟ್ಟು ಮಂತ್ರಿಯಾಗಿದ್ದಾರೆ ಆದ್ರೆ, ನಾನು ಅಂತ‌ರಾಜಕಾರಣಿ ಅಲ್ಲ, ನಾನು ಸ್ವಾಭಿಮಾನಿಎಂದಿರುವ ಅವರು ಯುಗಾದಿ ಹಬ್ಬದ ಬಳಿಕ ಎರಡನೇ ಹಂತದ ಯುಗ, ನಾಯಕತ್ವ ಪ್ರಾರಂಭವಾಗಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿ ಈ ರಾಜ್ಯಕ್ಕೆ‌ ಅಗತ್ಯವಿದೆ.ಎಲ್ಲಾ ವರ್ಗದ ವಿಶ್ವಾಸ ಪಡೆದು ಸಿಎಂ ಆಗುವ ಕಾಲ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದಿಂದ ಅಂತಹ ರಾಜಕಾರಣಿ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಡಿನ್ನರ್ ಪಾರ್ಟಿಗೆ ಕರೆಯಬೇಡಿ ಎಂದು ಸಿಎಂಗೆ ಹೇಳಿದೀನಿ. ಶಾಸಕಾಂಗ ಸಭೆಗೆ ನಾವು ಒತ್ತಾಯಿಸಿದ್ದೆವು. ಡಿನ್ನರ್ ಪಾರ್ಟಿಯಿಂದ ಏನು ಲಾಭ ಆಗುವುದಿಲ್ಲ. ಯಾರಿಗೂ ಡಿನ್ನರ್ ಅವಶ್ಯವಿಲ್ಲ.ಯಾರು ಡಿನ್ನರ್ ಇಲ್ದೇ ಇರಲ್ಲ. ಎಲ್ಲರ‌ ಮನೆಯಲ್ಲೂ ಡಿನ್ನರ್,ಲಂಚ್,ಬ್ರೇಕ್ ಫಾಸ್ಟ್ ಇರುತ್ತದೆ. ನಮಗೆ ಬೇಕಿದ್ದು ಶಾಸಕಾಂಗ ಸಭೆ ಎಂದರು‌.

ಇನ್ನು ಸಿಎಂ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಬೇಕು. ಬಿಜೆಪಿ ಶಾಸಕರ ಮತಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸಬೇಕು. ಕಾಂಗ್ರೆಸ್​ನ ಸಿದ್ದರಾಮಯ್ಯ, ಜಮೀರ್ ಅಹಮ್ಮದ್​, ಡಿಕೆಶಿ, ಜಾರ್ಜ್ ಕ್ಷೇತ್ರಗಳಿಗೆ ಹಣ ನೀಡುವುದನ್ನು ಬಂದ್ ಮಾಡಬೇಕು ಎಂದು ಸಿಎಂ ಬಿಎಸ್‌ವೈ ವಿರುದ್ಧ ವಿಜಯಪುರ ನಗರ ಶಾಸಕ ಸಿಡಿಮಿಡಿಗೊಂಡರು.

ಇದನ್ನು ಓದಿ:ಶಾಸಕರ ನಿರಾಸಕ್ತಿ: ಸದಸ್ಯರಿಲ್ಲದೇ ಬಣಗುಟ್ಟಿದ ವಿಧಾನಸಭೆ ಕಲಾಪ

ಚಿತ್ರದುರ್ಗ: ಯುಗಾದಿ ಒಳಗೆ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ. ಅದಕ್ಕಾಗಿ ಹೈಕಮಾಂಡ್ ಏನ್ ತೀರ್ಮಾನ ಮಾಡಬೇಕೊ ಮಾಡುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಿತ್ರದುರ್ಗ ನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಪಂಚಮಸಾಲಿ ಸಮುದಾಯ ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ , ದೇಶದಲ್ಲಿ ಹುಟ್ಟಿರುವ ಎಲ್ಲರಿಗೂ ಸಿಎಂ, ಪಿಎಂ ಆಗುವ ಅರ್ಹತೆ ಇದೆ. ಅಂತೆಯೇ ನಮಗೂ ಯಾಕ್ ಇರಬಾರದು ಎಂದು ಪ್ರಶ್ನಿಸಿದರು. ಬಿಎಸ್ ವೈ ಸಂಪುಟದಲ್ಲಿ ನಾನು ಮಂತ್ರಿ ಆಗುವುದಿಲ್ಲ. ನಾನು ಮಂತ್ರಿಯಾಗಲು ಮಠಾಧೀಶರ ಕಾಲು ಹಿಡಿಯಲ್ಲ. ಕೆಲವರು ಮಠಾಧೀಶರಿಂದ ಲಾಭಿ ಮಾಡಿಸಿ, ದಕ್ಷಿಣೆ ಕೊಟ್ಟು ಮಂತ್ರಿಯಾಗಿದ್ದಾರೆ ಆದ್ರೆ, ನಾನು ಅಂತ‌ರಾಜಕಾರಣಿ ಅಲ್ಲ, ನಾನು ಸ್ವಾಭಿಮಾನಿಎಂದಿರುವ ಅವರು ಯುಗಾದಿ ಹಬ್ಬದ ಬಳಿಕ ಎರಡನೇ ಹಂತದ ಯುಗ, ನಾಯಕತ್ವ ಪ್ರಾರಂಭವಾಗಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಪ್ರಾಮಾಣಿಕ, ಹಿಂದುತ್ವದ ಪರ ಇರುವ ರಾಜಕಾರಣಿ ಈ ರಾಜ್ಯಕ್ಕೆ‌ ಅಗತ್ಯವಿದೆ.ಎಲ್ಲಾ ವರ್ಗದ ವಿಶ್ವಾಸ ಪಡೆದು ಸಿಎಂ ಆಗುವ ಕಾಲ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದಿಂದ ಅಂತಹ ರಾಜಕಾರಣಿ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಡಿನ್ನರ್ ಪಾರ್ಟಿಗೆ ಕರೆಯಬೇಡಿ ಎಂದು ಸಿಎಂಗೆ ಹೇಳಿದೀನಿ. ಶಾಸಕಾಂಗ ಸಭೆಗೆ ನಾವು ಒತ್ತಾಯಿಸಿದ್ದೆವು. ಡಿನ್ನರ್ ಪಾರ್ಟಿಯಿಂದ ಏನು ಲಾಭ ಆಗುವುದಿಲ್ಲ. ಯಾರಿಗೂ ಡಿನ್ನರ್ ಅವಶ್ಯವಿಲ್ಲ.ಯಾರು ಡಿನ್ನರ್ ಇಲ್ದೇ ಇರಲ್ಲ. ಎಲ್ಲರ‌ ಮನೆಯಲ್ಲೂ ಡಿನ್ನರ್,ಲಂಚ್,ಬ್ರೇಕ್ ಫಾಸ್ಟ್ ಇರುತ್ತದೆ. ನಮಗೆ ಬೇಕಿದ್ದು ಶಾಸಕಾಂಗ ಸಭೆ ಎಂದರು‌.

ಇನ್ನು ಸಿಎಂ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಬೇಕು. ಬಿಜೆಪಿ ಶಾಸಕರ ಮತಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸಬೇಕು. ಕಾಂಗ್ರೆಸ್​ನ ಸಿದ್ದರಾಮಯ್ಯ, ಜಮೀರ್ ಅಹಮ್ಮದ್​, ಡಿಕೆಶಿ, ಜಾರ್ಜ್ ಕ್ಷೇತ್ರಗಳಿಗೆ ಹಣ ನೀಡುವುದನ್ನು ಬಂದ್ ಮಾಡಬೇಕು ಎಂದು ಸಿಎಂ ಬಿಎಸ್‌ವೈ ವಿರುದ್ಧ ವಿಜಯಪುರ ನಗರ ಶಾಸಕ ಸಿಡಿಮಿಡಿಗೊಂಡರು.

ಇದನ್ನು ಓದಿ:ಶಾಸಕರ ನಿರಾಸಕ್ತಿ: ಸದಸ್ಯರಿಲ್ಲದೇ ಬಣಗುಟ್ಟಿದ ವಿಧಾನಸಭೆ ಕಲಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.