ETV Bharat / state

ಬೈಕ್​-ಲಾರಿ ಅಪಘಾತಕ್ಕೆ ತುಂಬು ಗರ್ಭಿಣಿ ಸೇರಿ ಮೂವರ ಸಾವು... - undefined

ಮನೆಗೆ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿದ್ದ ಆ ಕುಟುಂಬಕ್ಕೆ ಜವರಾಯ ಅಡ್ಡಿಯಾಗಿದ್ದಾನೆ. ಇನ್ನೇನು ಆ ಮಹಿಳೆಗೆ ಕೆಲ ದಿನಗಳ ಅಂತರದಲ್ಲಿ ಹೆರಿಗೆಯಾಗಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಪತಿ ಹಾಗೂ ಇನ್ನೋರ್ವ ಸಂಬಂಧಿ ಹುಡುಗನ ಜೊತೆಗೆ ಆಸ್ಪತ್ರೆ​ಗೆ ಹೋಗಿ ಬರುವಾಗ ನಡೆದಾಗ ಅಪಘಾತದಲ್ಲಿ ಈ ನಾಲ್ಕೂ ಜೀವಗಳು ಬಲಿಯಾಗಿವೆ.

ಬೈಕ್​-ಲಾರಿ ಅಪಘಾತಕ್ಕೆ ತುಂಬು ಗರ್ಭಿಣಿ ಸೇರಿ ಮೂವರ ಸಾವು
author img

By

Published : Jun 11, 2019, 1:53 AM IST

ಚಿತ್ರದುರ್ಗ: ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಯಮ ಸ್ವರೂಪಿಯಂತೆ ಬಂದ ಮೈನ್ಸ್ ಲಾರಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ದ್ವಿಚಕ್ರ ವಾಹನಕ್ಕೆ ಮೈನ್ಸ್ ಲಾರಿ ಅಪ್ಪಳಿಸಿದ ರಭಸಕ್ಕೆ ಪತಿ, ಗರ್ಭಿಣಿ ಪತ್ನಿ ಹಾಗೂ ಓರ್ವ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಗುವಿನ ಆಗಮನದ ಕನಸು ಕಂಡಿದ್ದ ತಂದೆ-ತಾಯಿ ಯಾರೂ ಬಾರದ ಲೋಕಕ್ಕೆ ಪಯಣಿಸಿದ್ದು, ಪ್ರಪಂಚ ಕಾಣುವ ಮೊದಲೇ, ಹಸುಗೂಸು ಗರ್ಭದಲ್ಲೇ ಇಹಲೋಕ ತ್ಯಜಿಸಿರುವ ಮನ ಕಲಕುವ ಘಟನೆಗೆ ಕೋಟೆನಾಡು ಸಾಕ್ಷಿಯಾಗಿದೆ.

ಪತಿ ಮಹಾತೇಂಶ್ (28), ಪತ್ನಿ ದೀಪಾ ಬಾಯಿ (21) ಹಾಗೂ ಮಹಾತೇಂಶ್ ಅಣ್ಣನ ಮಗ ಚೇತನ್ (08) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್​-ಲಾರಿ ಅಪಘಾತ-ಸ್ಥಳೀಯರ ಆಕ್ರೋಶ

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜು ಹೊಡೆದು ಶಾಶ್ವತ ಪರಿಹಾರಕ್ಕಾಗಿ ಬೇಡಿಕೆಯನ್ನಿಟು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇನ್ನು ಪ್ರತಿಭಟನೆಯಲ್ಲಿ ನಿರತರಾದ ಮೃತರ ಸಂಬಂಧಿಕರ ಮನವೋಲಿಸಲು ಎಸ್​ಪಿ ಡಾ. ಅರುಣ್ ಮುಂದಾದರು. ಈ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಡಿಆರ್ ವ್ಯಾನ್ ತುಕಡಿ ಸಮೇತ ಹಿರೇಗುಂಟನೂರು ಗ್ರಾಮಕ್ಕಾಗಮಿಸಿದ ಪೋಲಿಸರು ನೆರೆದಿದ್ದ ಜನರನ್ನು ಚದುರಿಸಿದರು.

ಇನ್ನು ಅಪಘಾತ ನಡೆದ ಸ್ಥಳದಲ್ಲೇ ಈವರೆಗೆ ಸುಮಾರು 10 ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಅಪಘಾತ ಸಂಭವಿಸಿದ ಬಳಿಕ ಪರಿಹಾರ ನೀಡುವ ತನಕ ಶವ ಎತ್ತಲು ಬಿಡಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಇನ್ನು ಜಿಲ್ಲಾಧಿಕಾರಿ ಸ್ಥಳ್ಕಕಾಗಮಿಸುವಂತೆ ಬೇಡಿಕೆ ಇಟ್ಟ ಪ್ರತಿಭಟನಾಕಾರರೊಂದಿಗೆ ಶಾಸಕ ತಿಪ್ಪಾರೆಡ್ಡಿ ಮಾತನಾಡಿದರು. ಸಭೆ ಮಾಡುವ ಮೂಲಕ ಒಂದು ಪ್ರಮುಖ ತೀರ್ಮಾನಕ್ಕೆ ಬರಲಾಗುವುದೆಂದು ಶಾಸಕರ ಮಾತಿಗೆ ತಲೆಬಾಗಿ ಶವ ಸಾಗಿಸಲು ಸ್ಥಳೀಯರು ಅನುವು ಮಾಡಿಕೊಟ್ಟರು. ಮೈನಿಂಗ್ ಲಾರಿಗಳ ಹಾವಳಿಯಿಂದ ಬೇಸತ್ತಿರುವ ಸ್ಥಳೀಯರು ಸಂಚಾರವನ್ನು ಸ್ಥಗಿತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಒಟ್ಟಾರೆ ಮೈನಿಂಗ್ ಲಾರಿ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಇಬ್ಭಾಗವಾಗಿ, ಮೂವರನ್ನು ಬಲಿಪಡೆದುಕೊಂಡಿದೆ. ಈ ಭಾಗದ ಮೈನ್ಸ್ ಲಾರಿ ಚಾಲಕರ ಡೆಡ್ಲಿ ಡ್ರೈವಿಂಗ್​ಗೆ ಜನಸಾಮಾನ್ಯರು ಬೆಚ್ಚಿಬಿದ್ದಿದ್ದು, ಗರ್ಭಿಣಿ ಸೇರಿದಂತೆ ಮೂರು ಜನ ಕೊನೆಯುಸಿರೆಳೆದಿರುವುದು ದುರಂತವೇ ಸರಿ.

ಚಿತ್ರದುರ್ಗ: ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಯಮ ಸ್ವರೂಪಿಯಂತೆ ಬಂದ ಮೈನ್ಸ್ ಲಾರಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ದ್ವಿಚಕ್ರ ವಾಹನಕ್ಕೆ ಮೈನ್ಸ್ ಲಾರಿ ಅಪ್ಪಳಿಸಿದ ರಭಸಕ್ಕೆ ಪತಿ, ಗರ್ಭಿಣಿ ಪತ್ನಿ ಹಾಗೂ ಓರ್ವ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಗುವಿನ ಆಗಮನದ ಕನಸು ಕಂಡಿದ್ದ ತಂದೆ-ತಾಯಿ ಯಾರೂ ಬಾರದ ಲೋಕಕ್ಕೆ ಪಯಣಿಸಿದ್ದು, ಪ್ರಪಂಚ ಕಾಣುವ ಮೊದಲೇ, ಹಸುಗೂಸು ಗರ್ಭದಲ್ಲೇ ಇಹಲೋಕ ತ್ಯಜಿಸಿರುವ ಮನ ಕಲಕುವ ಘಟನೆಗೆ ಕೋಟೆನಾಡು ಸಾಕ್ಷಿಯಾಗಿದೆ.

ಪತಿ ಮಹಾತೇಂಶ್ (28), ಪತ್ನಿ ದೀಪಾ ಬಾಯಿ (21) ಹಾಗೂ ಮಹಾತೇಂಶ್ ಅಣ್ಣನ ಮಗ ಚೇತನ್ (08) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್​-ಲಾರಿ ಅಪಘಾತ-ಸ್ಥಳೀಯರ ಆಕ್ರೋಶ

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜು ಹೊಡೆದು ಶಾಶ್ವತ ಪರಿಹಾರಕ್ಕಾಗಿ ಬೇಡಿಕೆಯನ್ನಿಟು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇನ್ನು ಪ್ರತಿಭಟನೆಯಲ್ಲಿ ನಿರತರಾದ ಮೃತರ ಸಂಬಂಧಿಕರ ಮನವೋಲಿಸಲು ಎಸ್​ಪಿ ಡಾ. ಅರುಣ್ ಮುಂದಾದರು. ಈ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಡಿಆರ್ ವ್ಯಾನ್ ತುಕಡಿ ಸಮೇತ ಹಿರೇಗುಂಟನೂರು ಗ್ರಾಮಕ್ಕಾಗಮಿಸಿದ ಪೋಲಿಸರು ನೆರೆದಿದ್ದ ಜನರನ್ನು ಚದುರಿಸಿದರು.

ಇನ್ನು ಅಪಘಾತ ನಡೆದ ಸ್ಥಳದಲ್ಲೇ ಈವರೆಗೆ ಸುಮಾರು 10 ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಅಪಘಾತ ಸಂಭವಿಸಿದ ಬಳಿಕ ಪರಿಹಾರ ನೀಡುವ ತನಕ ಶವ ಎತ್ತಲು ಬಿಡಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಇನ್ನು ಜಿಲ್ಲಾಧಿಕಾರಿ ಸ್ಥಳ್ಕಕಾಗಮಿಸುವಂತೆ ಬೇಡಿಕೆ ಇಟ್ಟ ಪ್ರತಿಭಟನಾಕಾರರೊಂದಿಗೆ ಶಾಸಕ ತಿಪ್ಪಾರೆಡ್ಡಿ ಮಾತನಾಡಿದರು. ಸಭೆ ಮಾಡುವ ಮೂಲಕ ಒಂದು ಪ್ರಮುಖ ತೀರ್ಮಾನಕ್ಕೆ ಬರಲಾಗುವುದೆಂದು ಶಾಸಕರ ಮಾತಿಗೆ ತಲೆಬಾಗಿ ಶವ ಸಾಗಿಸಲು ಸ್ಥಳೀಯರು ಅನುವು ಮಾಡಿಕೊಟ್ಟರು. ಮೈನಿಂಗ್ ಲಾರಿಗಳ ಹಾವಳಿಯಿಂದ ಬೇಸತ್ತಿರುವ ಸ್ಥಳೀಯರು ಸಂಚಾರವನ್ನು ಸ್ಥಗಿತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಒಟ್ಟಾರೆ ಮೈನಿಂಗ್ ಲಾರಿ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಇಬ್ಭಾಗವಾಗಿ, ಮೂವರನ್ನು ಬಲಿಪಡೆದುಕೊಂಡಿದೆ. ಈ ಭಾಗದ ಮೈನ್ಸ್ ಲಾರಿ ಚಾಲಕರ ಡೆಡ್ಲಿ ಡ್ರೈವಿಂಗ್​ಗೆ ಜನಸಾಮಾನ್ಯರು ಬೆಚ್ಚಿಬಿದ್ದಿದ್ದು, ಗರ್ಭಿಣಿ ಸೇರಿದಂತೆ ಮೂರು ಜನ ಕೊನೆಯುಸಿರೆಳೆದಿರುವುದು ದುರಂತವೇ ಸರಿ.

Intro:ಅಪಘಾತಕ್ಕೆ ತುತ್ತಾಗಿ ಗರ್ಭೀಣಿ ಸಾವು: ಜಗತ್ತು ನೋಡಬೇಕಾಗಿದ್ದ ಹಸುಕೂಸು ಗರ್ಭದಲ್ಲೇ ಕೊನೆಯುಸಿರೆಳೆದ ಪುಟ್ಟ ಕಂದಮ್ಮ
ಆ್ಯಂಕರ್:-  ಅದು ಗಂಡ ಹೆಂಡತಿಯಿಂದ ಕೂಡಿದ್ದ ಪುಟ್ಟ ಕುಟುಂಬ, ಅ ಮನೆಗೆ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿದ್ದಅ ಕುಟುಂಬಕ್ಕೆ ಜವರಾಯ ಅಡ್ಡಿಯಾಗಿದ್ದಾನೆ.  ದಂಪತಿಗಳಿಬ್ಬರು ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಯಮ ಸ್ವರೂಪಿಯಂತೆ ಆಗಮಿಸಿದ ಮೈನ್ಸ್ ಲಾರಿ ಮೂರು ಜನ್ರನ್ನು ಬಲಿ ತೆಗೆದುಕೊಂಡಿದೆ.  ಅದ್ರೆ ಮಗು ಆಗಮನ ಕನಸು ಕಂಡಿದ್ದ ತಂದೆ ತಾಯಿ ಕೂಡ ಯಾರು ಬಾರದ ಲೋಕಕ್ಕೆ ಪಯಣಿಸಿದ್ದು, ಪ್ರಪಂಚ ಕಾಣುವ ಮೊದಲೇ ಗರ್ಭಧಲ್ಲೆ ಹಸುಗೂಸು ಇಹ್ಯಾಲೋಕ ತ್ಯಾಜಿಸಿರುವ ಮನ ಕಲಕುವ ಘಟನೆಗೆ ಕೋಟೆನಾಡು ಸಾಕ್ಷಿಯಾಗಿದೆ.
ಲುಕ್…
ಫ್ಲೋ,,,,,
ವಾಯ್ಸ್ 01:- ಕೋಟೆನಾಡು ಚಿತ್ರದುರ್ಗ ಅಪಘಾತಕ್ಕೆ ಹೆಸರುವಾಸಿ ಅದ್ರೇ ಇಂದು ನಡೆದಂತಹ ಅಪಘಾತ ಎಂತಹವರ ಮನಕಲಕುವಂತ್ತೆ ಇತ್ತು. ಹೌದು ಚಿತ್ರದುರ್ಗ ತಾಲೂಕಿನ  ಹಿರೇಗುಂಟನೂರು ಗ್ರಾಮದ ಬಳಿ ದ್ವೀಚಕ್ರ ವಾಹನಕ್ಕೆ ಅಪ್ಪಳಿಸಿದ ಮೈನ್ಸ್ ಲಾರಿ ರಭಸಕ್ಕೆ ಗರ್ಭೀಣಿ ಸೇರಿ ಮೂರು ಜನ ಸ್ಥಳದಲ್ಲೇ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ. ಆಸ್ಪತ್ರೆಗೆ ತೆರಳಿ ಮನೆಗೆ ಮರಳುವಾಗ ಈ ಘಟನೆ ಸಂಭವಿಸಿದ್ದು, ಅಫಘಾತದಲ್ಲಿ ಮಹಾತೇಂಶ್ 28, ದೀಪಾ ಬಾಯಿ 21, ಹಾಗೂ ಚೇತನ್ 08 ಮೂರು ಜನ ಸ್ಥಳದಲ್ಲೇ ಸಾವನಪ್ಗಪಿದ್ದಾರೆ. ಜಿಲ್ಲೆಯ ಭೀಮಸಮುದ್ರ ಗ್ರಾಮದಲ್ಲಿರುವ  ಸೆಸ್ಸಾ ಗೋವಾ ಕಂಪನಿಯಿಂದ ಗಣಿ ಸರಬರಾಜು ಮಾಡುತ್ತಿದ್ದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆ ಪರಿಣಾಮ 9 ತಿಂಗಳ ತುಂಬು ಗರ್ಭೀಣಿ ದೀಪಾ ಬಾಯಿ ಹಾಗೂ ಪ್ರಪಂಚವನ್ನೇ ಕಾಣದ ಮಗು ಗರ್ಭದಲ್ಲೇ ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜು ಹೊಡೆದು ಶಾಶ್ವತ ಪರಿಹಾರಕ್ಕಾಗಿ ಬೇಡಿಕೆಯನ್ನೀಟು ರಸ್ತೆ ತಡೆದು ಪ್ರತಿಭಟಿಸಿದ್ರು. ಇನ್ನೂ ಪ್ರತಿಭಟನೆಯಲ್ಲಿ ನಿರತರಾದ ಮೃತರ ಸಂಬಂಧಿಕರನ್ನು ಮನವೋಲಿಸುವ ಪಯತ್ನವನ್ನು ಎಸ್ಪಿ ಡಾ ಅರುಣ್ ಮುಂದಾಗಿದ್ದು, ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಅದ್ರೇ ಡಿಆರ್ ವ್ಯಾನ್ ತುಕಡಿ ಸಮೇತ ಹಿರೇಗುಂಟನೂರು ಗ್ರಾಮಕ್ಕಾಗಮಿಸಿದ ಪೋಲಿಸರು ನೆರೆದಿದ್ದ ಜನ್ರನ್ನು ಚದುರಿಸಿದರು.
ಫ್ಲೋ,,,,
ಬೈಟ್01:- ಹೆಚ್ ತಿಪ್ಪಾರೆಡ್ಡಿ, ಶಾಸಕ
ವಾಯ್ಸ್:- ಅಪಘಾತ ಸ್ಥಳದಲ್ಲೇ ಸುಮಾರು 10 ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು,  ಅಪಘಾತ ಸಂಭವಿಸಿದ ಬಳಿಕ ಪರಿಹಾರ ನೀಡುವ ತನಕ ಶವ ಎತ್ತಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದ ಸ್ಥಳೀಯರ ವಿರುದ್ಧ ಎಸ್ಪಿ ಡಾ ಅರುಣ್ ಕೆಂಡಮಂಡಲರಾದರು. ಇನ್ನೂ ಜಿಲ್ಲಾಧಿಕಾರಿ ಸ್ಥಳ್ಕಕಾಗಮಿಸುವಂತೆ ಬೇಡಿಕೆ ಇಟ್ಟ ಪ್ರತಿಭಟಕಾರರೊಂದಿಗೆ ಸಭೆ ಮಾಡುವ ಮೂಲಕ ಒಂದು ಪ್ರಮುಖವಾದ ತೀರ್ಮಾನಕ್ಕೆ ಬರಲಾಗುವುದೆಂದು ಶಾಸಕ ತಿಪ್ಪಾರೆಡ್ಡಿಯವರ ಮಾತಿಗೆತಲೆಬಾಗಿ ಶವ ಸಾಗಿಸಲು ಅನುವುಮಾಡಿಕೊಟ್ಟರು. ಇಲ್ಲಿ ತನಕ ಈ ಮೈನಿಂಗ್ ಲಾರಿಗಳಿಂದ ಹಾವಳಗಳಿಂದ ಬೇಸತ್ತಿರುವ ಸ್ಥಳೀಯರು ಸಂಚಾರವನ್ನು ಸ್ಥಗಿತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.  ಮೃತರನ್ನು ಕಳೆದುಕೊಂಡಿರುವ ಸಂಭಂಧಿಕರ ಆಕ್ರಂಧನ ಮುಗಿಲು ಮುಟ್ಟಿದ್ದು,  ಮೂರು ಜೀವವನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಜನಸಾಮಾನ್ಯರತು ಕಂಬನಿ ಮಿಡಿದಿದ್ದಾರೆ.  ಅಪಘಾತ ಸ್ಥಳದಲ್ಲೇ ಸುಮಾರು 10 ಕ್ಕೂ ಹೆಚ್ಚು ಪ್ರಕರಣಗಳು ನಡೆದರು ಸಂಬಂಧಪಪಟ್ಟ ಅಧಿಕಾರಿಗಳ ಗಮನಕ್ಕೆ ತಂಧ್ರೂ ಯಾವುದೇ ಪ್ರಯೋಜನ ಆಗಿಲ್ಲ.

ಫ್ಲೋ…

ಬೈಟ್02:- ಡಾ, ಅರುಣ್, ಎಸ್ಪಿ
ವಾಯ್ಸ್03:- ಒಟ್ಟಾರೆ. ಮೈನಿಂಗ್ ಲಾರಿ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಇಬ್ಬಾಗವಾಗಿದ್ದು, ಮೂರು ಜನ್ರ ಜೀವವನ್ನು ಬಲಿಪಡೆದಿದೆ. ಅದೇನೆ ಆಗಲಿ  ಈ ಭಾಗದ ಮೈನ್ಸ್ ಲಾರಿ ಚಾಲಕರ ಡೆಡ್ಲಿ ಡ್ರೈವಿಂಗ್ ಗೆ ಜನಸಾಮಾನ್ಯರು ಬೆಚ್ಚಿಬಿದ್ದಿದ್ದು, ಗರ್ಭೀಣಿ ಮಹಿಳೆ ಸೇರಿದ್ದಂತೆ ಒಟ್ಟು ಮೂರು ಜನ ಕೊನೆಯುಸಿರೆಳೆದಿರುವುದು ದುರಂತವೆ ಸರಿ.

ಡಿ ನೂರುಲ್ಲಾ ಈಟಿವಿ ಭಾರತBody:Is Conclusion:Importenr

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.