ಚಿಕ್ಕಮಗಳೂರು: ಕಾಫಿನಾಡಲ್ಲಿ ಬೃಹತ್ ಗಾತ್ರದ ಎರಡು ಕಾಡು ಕೋಣಗಳು ಮನೆ ಅಂಗಳದಲ್ಲಿ ಪ್ರತ್ಯಕ್ಷವಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಮ್ಮೆಗೊಂಡ ಗ್ರಾಮದ ರಾಜು ಮನೆಯ ಅಂಗಳದಲ್ಲಿ ಬೃಹತ್ ಗಾತ್ರದ ಎರಡು ಕಾಡುಕೋಣಗಳು ಕಾಣಿಸಿಕೊಂಡಿದ್ದು ಮನೆಯ ಮಾಲೀಕರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನಾಯಿಗಳು ಬೊಗಳಿದರೂ ಕ್ಯಾರೆ ಎನ್ನದೇ ಮನೆಯ ಸುತ್ತ ಮುತ್ತಾ ಅಡ್ಡಾಡಿಕೊಂಡಿವೆ. ಕಳೆದ ಒಂದು ವರ್ಷದಿಂದ ಕಾಡುಕೋಣ ದಾಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಕೊಪ್ಪ ತಾಲೂಕಿನ ಗುಡ್ಡೇತೋಟ, ಕೌವನಹಳ್ಳಿ, ಚನ್ನೇಕಳ್ಳು, ಬಸರೀಕಟ್ಟೆ ಗ್ರಾಮದಲ್ಲಿ ಕಾಡುಕೋಣ ಹಾವಳಿ ಮೀತಿ ಮೀರಿ ಹೋಗಿದೆ. ಕಾಡುಕೋಣ ದಾಳಿಗೆ ಕಳೆದ ಒಂದು ತಿಂಗಳ ಹಿಂದೆ ಗುಡ್ಡೇತೋಟದ ಮಂಜುನಾಥ ಭಟ್ ಎಂಬುವರು ಮೃತಪಟ್ಟಿದ್ದರು.