ETV Bharat / state

ಚಿಕ್ಕಮಗಳೂರು: 14 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಸೆರೆ

author img

By

Published : Jul 17, 2020, 7:02 PM IST

14 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಮುಜೆಖಾನ್ ಗ್ರಾಮದಲ್ಲಿ ನಡೆದಿದೆ.

Python protection
ಹೆಬ್ಬಾವು ರಕ್ಷಣೆ

ಚಿಕ್ಕಮಗಳೂರು: ಬೇಟೆಗಾಗಿ ಕಾದು ಕುಳಿತಿದ್ದ ಬರೊಬ್ಬರಿ 14 ಅಡಿ ಉದ್ದದ ಬೃಹತ್​​ ಗಾತ್ರದ ಹೆಬ್ಬಾವನ್ನು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುಜೆಖಾನ್ ಗ್ರಾಮದ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.

ಚಂದ್ರಶೇಖರ್ ಭಟ್ಟ ಎಂಬವರಿಗೆ ಸೇರಿದ ತೋಟದಲ್ಲಿ ಕಾಫಿ ಸೊಪ್ಪನ್ನು ಕತ್ತರಿಸುವಾಗ ಕಾರ್ಮಿಕರ ಕಣ್ಣಿಗೆ ಈ ಹೆಬ್ಬಾವು ತರಗಲೆಗಳ ಕಸದಲ್ಲಿ ಕಾಣಿಸಿದೆ. ತಲೆ ಮಾತ್ರ ಹೊರ ಹಾಕಿ ಆಹಾರಕ್ಕಾಗಿ ಹೊಂಚು ಹಾಕುತ್ತಿದ್ದನ್ನು ಕಂಡ ಕಾರ್ಮಿಕರು ಬೆಚ್ಚಿಬಿದ್ದರು. ಸ್ವಲ್ಪದರಲ್ಲೇ ಆ ಹಾವಿನ ಬಾಯಿಂದ ಬಚಾವಾದೆವು ಎಂದು ಕಾರ್ಮಿಕರು ಹೇಳುತ್ತಾರೆ.

ಭಾರೀ ಗಾತ್ರದ ಹೆಬ್ಬಾವು ಸೆರೆ

ನಂತರ ತೋಟದ ಮಾಲೀಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ವಿಚಾರ ತಿಳಿಸಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ, ಉರಗ ತಜ್ಞ ರಿಜ್ವಾನ್ ಅವರಿಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡರು. ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಹೆಬ್ಬಾವನ್ನು ರಿಜ್ವಾನ್​​ ಸೆರೆ ಹಿಡಿದು, ಕುದುರೆಮುಖ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಚಿಕ್ಕಮಗಳೂರು: ಬೇಟೆಗಾಗಿ ಕಾದು ಕುಳಿತಿದ್ದ ಬರೊಬ್ಬರಿ 14 ಅಡಿ ಉದ್ದದ ಬೃಹತ್​​ ಗಾತ್ರದ ಹೆಬ್ಬಾವನ್ನು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುಜೆಖಾನ್ ಗ್ರಾಮದ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.

ಚಂದ್ರಶೇಖರ್ ಭಟ್ಟ ಎಂಬವರಿಗೆ ಸೇರಿದ ತೋಟದಲ್ಲಿ ಕಾಫಿ ಸೊಪ್ಪನ್ನು ಕತ್ತರಿಸುವಾಗ ಕಾರ್ಮಿಕರ ಕಣ್ಣಿಗೆ ಈ ಹೆಬ್ಬಾವು ತರಗಲೆಗಳ ಕಸದಲ್ಲಿ ಕಾಣಿಸಿದೆ. ತಲೆ ಮಾತ್ರ ಹೊರ ಹಾಕಿ ಆಹಾರಕ್ಕಾಗಿ ಹೊಂಚು ಹಾಕುತ್ತಿದ್ದನ್ನು ಕಂಡ ಕಾರ್ಮಿಕರು ಬೆಚ್ಚಿಬಿದ್ದರು. ಸ್ವಲ್ಪದರಲ್ಲೇ ಆ ಹಾವಿನ ಬಾಯಿಂದ ಬಚಾವಾದೆವು ಎಂದು ಕಾರ್ಮಿಕರು ಹೇಳುತ್ತಾರೆ.

ಭಾರೀ ಗಾತ್ರದ ಹೆಬ್ಬಾವು ಸೆರೆ

ನಂತರ ತೋಟದ ಮಾಲೀಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ವಿಚಾರ ತಿಳಿಸಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ, ಉರಗ ತಜ್ಞ ರಿಜ್ವಾನ್ ಅವರಿಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡರು. ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಹೆಬ್ಬಾವನ್ನು ರಿಜ್ವಾನ್​​ ಸೆರೆ ಹಿಡಿದು, ಕುದುರೆಮುಖ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.