ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ ಶಾರದಾ ಪೀಠದಲ್ಲಿ ದೇವೇಗೌಡರ ಕುಟುಂಬದಿಂದ ಸಹಸ್ರ ಚಂಡಿಕಾ ಯಾಗಕ್ಕೆ ಇಂದು ಸಂಕಲ್ಪ ಮಾಡಲಾಗಿದೆ.
ಆದಿಶಕ್ತಿ ಶಾರದೆಯ ಸನ್ನಿಧಿಯಲ್ಲಿ ಸಹಸ್ರ ಚಂಡಿಕಾಯಾಗ ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಚನ್ನಮ್ಮ ಅವರಿಂದ ಯಾಗಕ್ಕೆ ಸಂಕಲ್ಪ ಮಾಡಲಾಗಿದೆ. ಶಾರದಾಂಬೆ ದೇವಾಲಯದ ಯಾಗ ಮಂಟಪದಲ್ಲಿ ಹೆಚ್.ಡಿ.ಡಿ. ಯಾಗ ನೆರವೇರಿಸುತ್ತಿದ್ದು, ಇಂದಿನಿಂದ 5 ದಿನ ಸಹಸ್ರ ಚಂಡಿಕಾಯಾಗ ನಡೆಯಲಿದೆ.
ಕುಟುಂಬದ ಶ್ರೇಯೋಭಿವೃದ್ದಿ ಹಾಗೂ ರಾಜಕೀಯ ಭವಿಷ್ಯಕ್ಕಾಗಿ ಯಾಗ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, 10 ಋತ್ವಿಜರಿಂದ ಸಹಸ್ರ ಚಂಡಿಕಾಯಾಗ ಮಾಡಲಾಗುತ್ತಿದೆ. ಮಂಗಳವಾರ ಪೂರ್ಣಾಹುತಿಯಲ್ಲಿ ಹೆಚ್.ಡಿ.ಡಿ ಕುಟುಂಬ ಭಾಗಿ ಆಗಲಿದ್ದು, ಶೃಂಗೇರಿಯಲ್ಲಿಯೇ 5 ದಿನ ವಾಸ್ತವ್ಯ ಹೂಡಲಿದ್ದಾರೆ.