ETV Bharat / state

ಭಿಕ್ಷೆ ನಿಲ್ಲಿಸಿ ಕೃಷಿ ಕಾಯಕ... ನಿಜಕ್ಕೂ ಮಾದರಿ ಈ ಮಂಗಳಮುಖಿಯರು!

ಚಿಕ್ಕಮಗಳೂರಿನ ಮಂಗಳಮುಖಿಯರು ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದು, ಇತರ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.

author img

By

Published : Jun 11, 2019, 7:40 PM IST

ಕೃಷಿ ಆರಂಭಿಸಿ ಮಾದರಿಯಾದ ಮಂಗಳಮುಖಿಯರು

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಟೋಲ್ ಗೇಟ್ ಬಳಿ, ಬಸ್ ನಿಲ್ಡಾಣ, ನಗರ ಪ್ರದೇಶ, ಇನ್ನಿತರ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮಾದರಿ ಜೀವನ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ವಾತಾವರಣ ಇಲ್ಲಿನ ಕೆಲವು ಮಂಗಳಮುಖಿಯರಿಗೆ ಕೃಷಿ ಮಾಡುವಂತೆ ಪ್ರೇರೇಪಣೆ ನೀಡಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ರೈತರೇ ನೋಡಿ ಬೇರಗಾಗುವಂತೆ ಎಲ್ಲರೂ ಸಾಮೂಹಿಕವಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳಮುಖಿಯರು ಪ್ರತಿನಿತ್ಯ ದುಡಿದು ರೈತ ಕುಟುಂಬದಂತೆ ಬದುಕು ಸಾಗಿಸುತ್ತಿದ್ದಾರೆ. ಮೆಕ್ಕೆಜೋಳ, ಟೊಮ್ಯಾಟೋ, ಆಲೂಗೆಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಯುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೃಷಿ ಆರಂಭಿಸಿ ಮಾದರಿಯಾದ ಮಂಗಳಮುಖಿಯರು

ಕೃಷಿಯ ಬಗ್ಗೆ ಗೊತ್ತಿಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು, ಇದೇ ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ದುಡಿದು ಕೃಷಿಯ ಅನುಭವ ಪಡೆದು ಇಂದು ಸ್ವಂತವಾಗಿ ಕೃಷಿ ಮಾಡುವಂತಹ ಹಂತಕ್ಕೆ ತಲುಪಿದ್ದಾರೆ. ಆರು ಜನರು ಕೃಷಿ ಜೊತೆಗೆ ಕುರಿ, ಹಸುಗಳನ್ನು ಸಾಕುವುದರ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ.

ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಟೋಲ್ ಗೇಟ್ ಬಳಿ, ಬಸ್ ನಿಲ್ಡಾಣ, ನಗರ ಪ್ರದೇಶ, ಇನ್ನಿತರ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮಾದರಿ ಜೀವನ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ವಾತಾವರಣ ಇಲ್ಲಿನ ಕೆಲವು ಮಂಗಳಮುಖಿಯರಿಗೆ ಕೃಷಿ ಮಾಡುವಂತೆ ಪ್ರೇರೇಪಣೆ ನೀಡಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ರೈತರೇ ನೋಡಿ ಬೇರಗಾಗುವಂತೆ ಎಲ್ಲರೂ ಸಾಮೂಹಿಕವಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳಮುಖಿಯರು ಪ್ರತಿನಿತ್ಯ ದುಡಿದು ರೈತ ಕುಟುಂಬದಂತೆ ಬದುಕು ಸಾಗಿಸುತ್ತಿದ್ದಾರೆ. ಮೆಕ್ಕೆಜೋಳ, ಟೊಮ್ಯಾಟೋ, ಆಲೂಗೆಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಯುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೃಷಿ ಆರಂಭಿಸಿ ಮಾದರಿಯಾದ ಮಂಗಳಮುಖಿಯರು

ಕೃಷಿಯ ಬಗ್ಗೆ ಗೊತ್ತಿಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು, ಇದೇ ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ದುಡಿದು ಕೃಷಿಯ ಅನುಭವ ಪಡೆದು ಇಂದು ಸ್ವಂತವಾಗಿ ಕೃಷಿ ಮಾಡುವಂತಹ ಹಂತಕ್ಕೆ ತಲುಪಿದ್ದಾರೆ. ಆರು ಜನರು ಕೃಷಿ ಜೊತೆಗೆ ಕುರಿ, ಹಸುಗಳನ್ನು ಸಾಕುವುದರ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ.

Intro:R_Kn_Ckm_02_11_Mangala mukiyaru_Rajkumar_Ckm_pkg_Special_7202347Body:

ಚಿಕ್ಕಮಗಳೂರು :-

ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಟೋಲ್ ಗೇಟ್ ಬಳಿ, ಬಸ್ ನಿಲ್ಡಾಣ, ನಗರ ಪ್ರದೇಶ, ಇನ್ನಿತರ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮಂಗಳ ಮುಖಿಯರನ್ನು ಸಾಮಾನ್ಯವಾಗಿ ಎಲ್ಲರೂ ನೋಡಿತ್ತೀರಾ.ಮಂಗಳ ಮುಖಿಯರು ಎಂದರೇ ಹಾಗೇ ಹೀಗೆ ಎಂದೂ ಕೇಳಿರೋರು ಇದ್ದೀರಾ. ಮನೆಯಿಂದಾ ಹೊರಬಂದೂ ಬದುಕಿಗಾಗಿ ಸೆಕ್ಸ್ ವರ್ಕ್ ನಲ್ಲಿ ತೊಡಗಿಸಿಕೊಂಡ ಮಂಗಳ ಮುಖಿಯರನ್ನು ನೋಡಿರುತ್ತೀರಾ.ಆದರೇ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕೆಲ ಮಂಗಳ ಮುಖಿಯರು ತುಂಬಾ ವಿಶೇಷ. ಮೇಲೆ ಹೇಳಿದ ಎಲ್ಲಾ ಕೆಲಸಗಳನ್ನು ಬಿಟ್ಟು ಬದುಕಿಗಾಗಿ ವಿಭಿನ್ನ ಕಾಯಕ ಆಯ್ಕೆ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದು ಇತರರಿಗೆ ಮಾದರಿಯಾಗಿದ್ದಾರೆ.ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೇ ನೋಡಿ.......

ಹೌದು ಮನೆಯಲ್ಲಿ ಹಾಗೂ ಸಮಾಜದಲ್ಲಿ ಬೈಯಿಸಿಕೊಳ್ಳಲು ಎಂದೂ ಹುಟ್ಟಿದ್ದಾರೆ ಎಂದೂ ಅಂದು ಕೊಳ್ಳುವ ಮಂಗಳ ಮುಖಿಯರು ನಮ್ಮೇಲ್ಲರ ನಡುವೆ ಸ್ವಲ್ವ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.ಇವರನ್ನು ನೋಡಿದರೇ ಕೆಲವರು ಮೂಗು ಮೂರಿಯೋರು ಇದ್ದಾರೆ. ಅವರಿಂದ ದೂರ ಸರಿಯೋರು ಇದ್ದಾರೆ.ಆದರೇ ಸದಾ ಇವರ ಕುರಿತು ಬೇರೆ ತರಹ ಮಾತನಾಡುವ ವರ್ಗದ ಜನರು ಮಧ್ಯೆ ನಾವು ಯಾರಿಗೂ ಕಮ್ಮಿ ಇಲ್ಲ ಎಂದೂ ವಿಶೇಷ ಉದ್ಯೋಗ ಮಾಡುವುದರ ಮೂಲಕ ತಮ್ಮ ಜೀವನ ಹಾಗೂ ಸಾಧನೆಯ ಹಾದಿಯನ್ನು ಕಂಡು ಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಹಾಗೂ ಬಯಲು ಸೀಮೆ ಹೊಂದಿರುವಂತಹ ವಿಶೇಷವಾದ ಜಿಲ್ಲೆ.ಒಂದು ಕಡೆ ಹಸಿರು ಇನ್ನೋಂದು ಕಡೆ ಬಿಸಿಲು ಇದರ ಮಧ್ಯೆ ಇಲ್ಲಿನ ಕೆಲ ಮಂಗಳ ಮುಖಿಯರಿಗೆ ಕೃಷಿ ಮಾಡುವಂತೆ ಈ ವಾತವರಣ ಪ್ರೇರಪಣೆ ನೀಡಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕೆಲಸದಲ್ಲಿ ತಲ್ಲಿನನಾಗಿದ್ದಾರೆ. ರೈತರೇ ನೋಡಿ ಬೇರಗಾಗುವಂತೆ ಎಲ್ಲರೂ ಸಾಮೂಹಿಕವಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳ ಮುಖಿಯರು ಪ್ರತಿ ನಿತ್ಯ ದುಡಿದು ರೈತ ಕುಟುಂಬದಂತೆ ಬದುಕು ಸಾಗಿಸುತ್ತಿದ್ದಾರೆ. ಮೆಕ್ಕೆಜೋಳ, ಟಮೋಟೋ, ಆಲೂಗೆಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಯುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.....

ಕೃಷಿಯ ಬಗ್ಗೆ ಗೊತ್ತಿಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು ಇದೇ ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಮನೆಯಲ್ಲಿ ಕೂಲಿ ಆಳುಗಳಂತೆ ದುಡಿದು ಕೃಷಿಯ ಅನುಭವ ಪಡೆದು ಇಂದು ಸ್ವಂತವಾಗಿ ಕೃಷಿ ಮಾಡುವಂತಹ ಪರಿಸ್ಥಿತಿ ತಲುಪಿದ್ದಾರೆ. ಆರು ಜನರು ಈ ಕಾಯಕದಲ್ಲಿ ತೊಡಗಿದ್ದು ಈ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮಂಗಳ ಮುಖಿಯರು ಎಲ್ಲಾ ರೀತಿಯ ಕೆಲಸ ಮಾಡಲು ಸಿದ್ದ ಎಂದೂ ಈ ಮೂಲಕ ಸಮಾಜಕ್ಕೆ ಪರಿಚಯಿಸಿಕೊಳ್ಳುತ್ತಿದ್ದಾರೆ...

ಒಟ್ಟಾರೆಯಾಗಿ ಕೃಷಿ ಕುಟುಂಬದಿಂದ ಬಂದು ಗ್ರಾಮಗಳನ್ನ ತೊರೆದು ನಗರಕ್ಕೆ ವಲಸೆ ಹೋಗುವ ಯುವ ಸಮೂಹವನ್ನು ನಾಚಿಸುವಂತೆ ಈ ಮಂಗಳಮುಖಿಯರ ಕೃಷಿ ಇತರರಿಗೆ ಮಾದರಿಯಾಗಿದ್ದು ಇದರ ಜೊತೆ ಕುರಿ, ಹಸುಗಳನ್ನು ಸಾಕುವುದರ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದು ಎಲ್ಲರೂ ಒಮ್ಮೆ ಇತ್ತ ನೋಡುವಂತೆ ಜೀವನ ಸಾಗಿಸುತ್ತಿದ್ದಾರೆ.......


byte:-1 ಮೇಘಾ ಮಲ್ನಾಡ್............. ಮಾದರಿ ಮಂಗಳಮುಖಿ (ಬಿಳಿ ಶರ್ಟ್ ಹಾಕಿರುವವರು)
byte:-2 ಸ್ಪೋರ್ತಿ............. ಮಾದರಿ ಮಂಗಳಮುಖಿ

Conclusion:ರಾಜಕುಮಾರ್,,,,,,,
ಈ ಟಿವಿ ಭಾರತ್.........
ಚಿಕ್ಕಮಗಳೂರು.........

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.