ETV Bharat / state

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ ಭೂ ಕುಸಿತಕ್ಕೆ 'ಸಂಜೀವಿನಿ' ಕಂಡುಕೊಂಡ ಅರಣ್ಯ ಇಲಾಖೆ...!!

author img

By

Published : Sep 13, 2020, 2:38 PM IST

ಕಳೆದ ಎರಡು-ಮೂರು ವರ್ಷಗಳಿಂದ ಮಲೆನಾಡಿಗರು ಮಳೆಯಿಂದ ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ವರುಣನಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ . ಹೀಗಾಗಿ, ಇದೆಲ್ಲದರ ಪರಿಹಾರಕ್ಕೆ ಅರಣ್ಯ ಇಲಾಖೆ ಲಾವಂಚದ ಮೊರೆ ಹೋಗಿದೆ.

lavancha Gross planting
ಚಾರ್ಮಾಡಿ ಘಾಟ್

ಚಿಕ್ಕಮಗಳೂರು: ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಭೂ ಕುಸಿತ ಉಂಟಾಗಿತ್ತು. ಪರಿಣಾಮ ಮಲೆನಾಡಿಗರ ಬದುಕು ತತ್ತರಿಸಿಹೋಗಿತ್ತು.ಅಲ್ಲದೇ ಈ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಸರ್ಕಾರ ಮಾತ್ರ ಮೌನ ವಹಿಸಿತ್ತು. ಹೀಗಾಗಿ ಇದರಿಂದ ಬೇಸತ್ತ ಜಿಲ್ಲಾ ಅರಣ್ಯ ಇಲಾಖೆ ಇವೆಲ್ಲಾ ಸಮಸ್ಯೆಯ ಪರಿಹಾರೋಪಾಯವಾಗಿ ಇದೀಗ ಹೊಸದೊಂದು ಮಾರ್ಗವನ್ನು ಕಂಡುಕೊಂಡಿದೆ.

ಚಾರ್ಮಾಡಿ ಘಾಟ್​ ಭೂ ಕುಸಿತಕ್ಕೆ ಅರಣ್ಯ ಇಲಾಖೆ ಪರಿಹಾರ ಕ್ರಮ

ಹೌದು, ಮಲೆನಾಡಿನಲ್ಲಿ ಮಳೆ ಅಂದ್ರೆ ಅದು ಸರ್ವೇಸಾಮಾನ್ಯ, ಆದರೂ ಕಳೆದ ವರ್ಷದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣ ಹಲವಾರು ಅನಾಹುತಗಳನ್ನು ತಂದೊಡ್ಡಿದ್ದಾನೆ. ಇದಕ್ಕೆ ಉದಾಹರಣೆಯೆಂಬಂತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಕುಸಿತವನ್ನು ನಾವು ಪರಿಗಣಿಸಬಹುದು. ಅಲ್ಲದೇ ಇಷ್ಟೊಂದು ಭೂ ಕುಸಿತಕ್ಕೆ ಕಾರಣವನ್ನು ಕಂಡುಕೊಂಡಾಗ ಮೊದಲಿಗೆ ತಿಳಿದುಬಂದಿದ್ದು ಭೂಮಿಯ ಮೇಲ್ಪದರದ ಸವಕಳಿ. ಇದಕ್ಕೆ ಕಾರಣ ದುರ್ಬಲವಾದ ಹುಲ್ಲುಗಾವಲು. ಹೀಗಾಗಿ ಈ ಸಮಸ್ಯೆಯ ಪರಿಹಾರೋಪಾಯವಾಗಿ ಅರಣ್ಯ ಇಲಾಖೆ ಕಳೆದ ವರ್ಷ ಭಾರೀ ಮಳೆಯಿಂದ ಚಾರ್ಮಾಡಿಯಲ್ಲಿ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ಲಾವಂಚ ಹುಲ್ಲನ್ನ ನೆಡಲು ಮುಂದಾಗಿದ್ದಾರೆ.

ಏನಿದು ಲಾವಂಚ?: ಲಾವಂಚ ಅಂದ್ರೆ ಇದೊಂದು ಹುಲ್ಲು ಜಾತಿಗೆ ಸೇರಿದ ಸಸ್ಯ. ಈ ಸಸ್ಯಕ್ಕೆ ಅದೆಂತಹ ಮಳೆರಾಯನಿಗೂ ಸೆಡ್ಡು ಹೊಡೆದು ಭೂ ಭಾಗದ ಮೇಲ್ಪದರವನ್ನು ರಕ್ಷಿಸುವ ಶಕ್ತಿಯಿದೆ. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ. ಭೂಮಿಯೊಳಗೆ ಅರ್ಧ ಅಡಿಯಷ್ಟು ಆಳಕ್ಕೆ ಹೋಗುವುದರ ಜೊತೆಗೆ ಸುಮಾರು ನಾಲ್ಕೈದು ಅಡಿ ಅಗಲ ವಿಸ್ತರಿಸಿಕೊಳ್ಳುತ್ತೆ. ಸಣ್ಣ-ಸಣ್ಣದಾಗಿ ಹರಡಿಕೊಳ್ಳುವ ಇದರ ಬೇರುಗಳು ಮಣ್ಣನ್ನ ಗಟ್ಟಿ ಹಿಡಿದುಕೊಳ್ಳುತ್ತೆ. ಆ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಮಣ್ಣಿನ ಸವಕಳಿಯನ್ನು ತಡೆಯುವ ಕೆಲಸವನ್ನು ಮಾಡುತ್ತದೆ.

ಅಲ್ಲದೇ, ಎಷ್ಟೆ ಪ್ರಮಾಣದಲ್ಲಿ ಮಳೆ ಸುರಿದರೂ, ಎಷ್ಟೇ ವೇಗವಾಗಿ ನೀರು ಹರಿದರೂ, ಈ ಹುಲ್ಲಿನ ಮೇಲೆ ನೀರು ಸರಾಗವಾಗಿ ಹರಿದು ಹೋಗುತ್ತೆ. ಹಾಗೆಯೇ ಎಷ್ಟು ನೀರು ಬೇಕು ಅಷ್ಟನ್ನು ಮಾತ್ರ ಹಿಡಿದುಕೊಂಡು ಉಳಿದಿದ್ದನ್ನ ಹಾಗೆಯೇ ಹರಿಸುತ್ತೆ. ಆಗ ಭೂಮಿಯ ತೇವಾಂಶ ಹೆಚ್ಚಾಗಿ ಮಣ್ಣು ಜಾರುವುದಾಗಲಿ ಅಥವಾ ಕೊಚ್ಚಿ ಹೋಗುವುದಾಗಲಿ ಸಂಭವಿಸುವುದು ತೀರಾ ಕಡಿಮೆ. ಹಾಗಾಗಿ, ಅರಣ್ಯ ಇಲಾಖೆ ಚಾರ್ಮಾಡಿ ಘಾಟ್‍ನಲ್ಲಿ ಮಣ್ಣು ಕುಸಿದ ಜಾಗದಲ್ಲಿ ಈ ಹುಲ್ಲನ್ನ ಬೆಳೆಯಲು ಮುಂದಾಗಿದೆ.

ಚಾರ್ಮಾಡಿ ಘಾಟ್​​ನಲ್ಲಿಯೇ ಮಣ್ಣು ಕುಸಿತವಾಗುವುದು ಏಕೆ?: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಪ್ರಾರಂಭವಾಗುವ ಚಾರ್ಮಾಡಿ ಘಾಟ್​ ಇದು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ಹತ್ತಾರು ಝರಿ-ತೊರೆಗಳನ್ನು ಕಾಣಬಹುದು. ಮಳೆಗಾಲದಲ್ಲಿ ನೀರಿನ ಹರಿವಿನ ಪ್ರಮಾಣ ಒಂದೇ ಕಡೆ ಹೆಚ್ಚಾಗಿದ್ದುದರಿಂದ ಅಲ್ಲೆಲ್ಲಾ ಭೂಕುಸಿತ ಉಂಟಾಗಿತ್ತು. ಆದ್ದರಿಂದ ಮುಂದಿನ ದಿನಗಳಲ್ಲೂ ಈ ರೀತಿಯ ಅವಘಡಗಳನ್ನ ತಡೆಯಲು ಅರಣ್ಯ ಇಲಾಖೆ ಲಾವಂಚ ಗಿಡಗಳನ್ನ ಬೆಳೆಸಲು ಮುಂದಾಗಿದೆ.

ಪ್ರಕೃತಿಯೊಂದಿಗೆ ಮಲೆನಾಡ ಜನರನ್ನು ಉಳಿಸಲು ಹೊರಟಿರುವ ಅರಣ್ಯ ಇಲಾಖೆ: ಕಳೆದ ಎರಡು-ಮೂರು ವರ್ಷಗಳಿಂದ ಮಲೆನಾಡಿಗರು ಮಳೆಯಿಂದ ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ವರುಣನಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ . ಹಾಗಾಗಿ, ಮಲೆನಾಡಿಗರು ಮಳೆ ಅಂದ್ರೆ ಭಯಗೊಳ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಅರಣ್ಯ ಇಲಾಖೆ ಈಗ ಹಾಕ್ತಿರೋ ಲಾವಂಚ ಗಿಡ ಭವಿಷ್ಯದಲ್ಲಿ ಉತ್ತಮವಾದ ಫಲಿತಾಂಶ ಕೊಡಲಿದೆ ಎಂಬ ಭರವಸೆಯಲ್ಲಿ ಮಲೆನಾಡಿನ ಜನರು ಎದುರುನೋಡುತ್ತಿದ್ದಾರೆ.

ಚಿಕ್ಕಮಗಳೂರು: ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಭೂ ಕುಸಿತ ಉಂಟಾಗಿತ್ತು. ಪರಿಣಾಮ ಮಲೆನಾಡಿಗರ ಬದುಕು ತತ್ತರಿಸಿಹೋಗಿತ್ತು.ಅಲ್ಲದೇ ಈ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಸರ್ಕಾರ ಮಾತ್ರ ಮೌನ ವಹಿಸಿತ್ತು. ಹೀಗಾಗಿ ಇದರಿಂದ ಬೇಸತ್ತ ಜಿಲ್ಲಾ ಅರಣ್ಯ ಇಲಾಖೆ ಇವೆಲ್ಲಾ ಸಮಸ್ಯೆಯ ಪರಿಹಾರೋಪಾಯವಾಗಿ ಇದೀಗ ಹೊಸದೊಂದು ಮಾರ್ಗವನ್ನು ಕಂಡುಕೊಂಡಿದೆ.

ಚಾರ್ಮಾಡಿ ಘಾಟ್​ ಭೂ ಕುಸಿತಕ್ಕೆ ಅರಣ್ಯ ಇಲಾಖೆ ಪರಿಹಾರ ಕ್ರಮ

ಹೌದು, ಮಲೆನಾಡಿನಲ್ಲಿ ಮಳೆ ಅಂದ್ರೆ ಅದು ಸರ್ವೇಸಾಮಾನ್ಯ, ಆದರೂ ಕಳೆದ ವರ್ಷದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ವರುಣ ಹಲವಾರು ಅನಾಹುತಗಳನ್ನು ತಂದೊಡ್ಡಿದ್ದಾನೆ. ಇದಕ್ಕೆ ಉದಾಹರಣೆಯೆಂಬಂತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಕುಸಿತವನ್ನು ನಾವು ಪರಿಗಣಿಸಬಹುದು. ಅಲ್ಲದೇ ಇಷ್ಟೊಂದು ಭೂ ಕುಸಿತಕ್ಕೆ ಕಾರಣವನ್ನು ಕಂಡುಕೊಂಡಾಗ ಮೊದಲಿಗೆ ತಿಳಿದುಬಂದಿದ್ದು ಭೂಮಿಯ ಮೇಲ್ಪದರದ ಸವಕಳಿ. ಇದಕ್ಕೆ ಕಾರಣ ದುರ್ಬಲವಾದ ಹುಲ್ಲುಗಾವಲು. ಹೀಗಾಗಿ ಈ ಸಮಸ್ಯೆಯ ಪರಿಹಾರೋಪಾಯವಾಗಿ ಅರಣ್ಯ ಇಲಾಖೆ ಕಳೆದ ವರ್ಷ ಭಾರೀ ಮಳೆಯಿಂದ ಚಾರ್ಮಾಡಿಯಲ್ಲಿ ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ಲಾವಂಚ ಹುಲ್ಲನ್ನ ನೆಡಲು ಮುಂದಾಗಿದ್ದಾರೆ.

ಏನಿದು ಲಾವಂಚ?: ಲಾವಂಚ ಅಂದ್ರೆ ಇದೊಂದು ಹುಲ್ಲು ಜಾತಿಗೆ ಸೇರಿದ ಸಸ್ಯ. ಈ ಸಸ್ಯಕ್ಕೆ ಅದೆಂತಹ ಮಳೆರಾಯನಿಗೂ ಸೆಡ್ಡು ಹೊಡೆದು ಭೂ ಭಾಗದ ಮೇಲ್ಪದರವನ್ನು ರಕ್ಷಿಸುವ ಶಕ್ತಿಯಿದೆ. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ. ಭೂಮಿಯೊಳಗೆ ಅರ್ಧ ಅಡಿಯಷ್ಟು ಆಳಕ್ಕೆ ಹೋಗುವುದರ ಜೊತೆಗೆ ಸುಮಾರು ನಾಲ್ಕೈದು ಅಡಿ ಅಗಲ ವಿಸ್ತರಿಸಿಕೊಳ್ಳುತ್ತೆ. ಸಣ್ಣ-ಸಣ್ಣದಾಗಿ ಹರಡಿಕೊಳ್ಳುವ ಇದರ ಬೇರುಗಳು ಮಣ್ಣನ್ನ ಗಟ್ಟಿ ಹಿಡಿದುಕೊಳ್ಳುತ್ತೆ. ಆ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಮಣ್ಣಿನ ಸವಕಳಿಯನ್ನು ತಡೆಯುವ ಕೆಲಸವನ್ನು ಮಾಡುತ್ತದೆ.

ಅಲ್ಲದೇ, ಎಷ್ಟೆ ಪ್ರಮಾಣದಲ್ಲಿ ಮಳೆ ಸುರಿದರೂ, ಎಷ್ಟೇ ವೇಗವಾಗಿ ನೀರು ಹರಿದರೂ, ಈ ಹುಲ್ಲಿನ ಮೇಲೆ ನೀರು ಸರಾಗವಾಗಿ ಹರಿದು ಹೋಗುತ್ತೆ. ಹಾಗೆಯೇ ಎಷ್ಟು ನೀರು ಬೇಕು ಅಷ್ಟನ್ನು ಮಾತ್ರ ಹಿಡಿದುಕೊಂಡು ಉಳಿದಿದ್ದನ್ನ ಹಾಗೆಯೇ ಹರಿಸುತ್ತೆ. ಆಗ ಭೂಮಿಯ ತೇವಾಂಶ ಹೆಚ್ಚಾಗಿ ಮಣ್ಣು ಜಾರುವುದಾಗಲಿ ಅಥವಾ ಕೊಚ್ಚಿ ಹೋಗುವುದಾಗಲಿ ಸಂಭವಿಸುವುದು ತೀರಾ ಕಡಿಮೆ. ಹಾಗಾಗಿ, ಅರಣ್ಯ ಇಲಾಖೆ ಚಾರ್ಮಾಡಿ ಘಾಟ್‍ನಲ್ಲಿ ಮಣ್ಣು ಕುಸಿದ ಜಾಗದಲ್ಲಿ ಈ ಹುಲ್ಲನ್ನ ಬೆಳೆಯಲು ಮುಂದಾಗಿದೆ.

ಚಾರ್ಮಾಡಿ ಘಾಟ್​​ನಲ್ಲಿಯೇ ಮಣ್ಣು ಕುಸಿತವಾಗುವುದು ಏಕೆ?: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಪ್ರಾರಂಭವಾಗುವ ಚಾರ್ಮಾಡಿ ಘಾಟ್​ ಇದು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ಹತ್ತಾರು ಝರಿ-ತೊರೆಗಳನ್ನು ಕಾಣಬಹುದು. ಮಳೆಗಾಲದಲ್ಲಿ ನೀರಿನ ಹರಿವಿನ ಪ್ರಮಾಣ ಒಂದೇ ಕಡೆ ಹೆಚ್ಚಾಗಿದ್ದುದರಿಂದ ಅಲ್ಲೆಲ್ಲಾ ಭೂಕುಸಿತ ಉಂಟಾಗಿತ್ತು. ಆದ್ದರಿಂದ ಮುಂದಿನ ದಿನಗಳಲ್ಲೂ ಈ ರೀತಿಯ ಅವಘಡಗಳನ್ನ ತಡೆಯಲು ಅರಣ್ಯ ಇಲಾಖೆ ಲಾವಂಚ ಗಿಡಗಳನ್ನ ಬೆಳೆಸಲು ಮುಂದಾಗಿದೆ.

ಪ್ರಕೃತಿಯೊಂದಿಗೆ ಮಲೆನಾಡ ಜನರನ್ನು ಉಳಿಸಲು ಹೊರಟಿರುವ ಅರಣ್ಯ ಇಲಾಖೆ: ಕಳೆದ ಎರಡು-ಮೂರು ವರ್ಷಗಳಿಂದ ಮಲೆನಾಡಿಗರು ಮಳೆಯಿಂದ ಹೈರಾಣಾಗಿದ್ದಾರೆ. ಜಿಲ್ಲೆಯಲ್ಲಿ ವರುಣನಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ . ಹಾಗಾಗಿ, ಮಲೆನಾಡಿಗರು ಮಳೆ ಅಂದ್ರೆ ಭಯಗೊಳ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಅರಣ್ಯ ಇಲಾಖೆ ಈಗ ಹಾಕ್ತಿರೋ ಲಾವಂಚ ಗಿಡ ಭವಿಷ್ಯದಲ್ಲಿ ಉತ್ತಮವಾದ ಫಲಿತಾಂಶ ಕೊಡಲಿದೆ ಎಂಬ ಭರವಸೆಯಲ್ಲಿ ಮಲೆನಾಡಿನ ಜನರು ಎದುರುನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.