ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಗಮನದಲ್ಲಿ ಇಟ್ಟುಕೊಂಡು, ಸಿಎಂ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಉಪಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆಯ ಮಾತುಗಳನ್ನಾಡಿದರು.
ಕಳೆದ ಉಪಚುನಾವಣೆಯಂತೆ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
![kota srinivas poojari statement on by election](https://etvbharatimages.akamaized.net/etvbharat/prod-images/kn-ckm-02-kota-srinivas-poojari-avb-7202347_01102021141925_0110f_1633078165_1108.jpg)
ಜನಸಾಮಾನ್ಯರಂತೆ ರಸ್ತೆ ಬದಿಯಲ್ಲಿದ್ದ ಹೋಟೆಲ್ನಲ್ಲಿ ಕುಳಿತು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜನಪ್ರಿಯ ನೀರು ದೋಸೆ ತಿನ್ನುವ ಮೂಲಕ ಸಚಿವ ಕೋಟ ಸರಳತೆ ಮೆರೆದರು.