ETV Bharat / state

ಚಾರ್ಮಾಡಿ ಘಾಟ್​​​​​ ರಸ್ತೆಯಲ್ಲಿ ಗುಡ್ಡ, ಭೂ ಕುಸಿತ... ಅಲ್ಲಲ್ಲಿ ಕೃತಕ ಫಾಲ್ಸ್​​​ ನಿರ್ಮಾಣ

author img

By

Published : Aug 13, 2019, 5:11 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಗುಡ್ಡ ಹಾಗೂ ಭೂ ಕುಸಿತ ಸಂಭಂವಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.

ಚಾರ್ಮಾಡಿ ಘಾಟ್​​ ರಸ್ತೆಯಲ್ಲಿ ಗುಡ್ಡ, ಭೂ ಕುಸಿತ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಭಾಗ ಹಾಗೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಸಂಭವಿಸಿದೆ. ಈ ಹಿನ್ನೆಲೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು.

ಈ ಭಾಗದಲ್ಲಿ ಇಂದು ಮಳೆ ಸ್ವಲ್ವ ಮಟ್ಟಿಗೆ ಕಡಿಮೆಯಾಗಿರುವ ಕಾರಣ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಸೃಷ್ಟಿಯಾದ ಅವಾಂತರಗಳನ್ನು ನಾವು ನೋಡಬಹುದಾಗಿದೆ. ಘಾಟಿಯ ಐದಾರೂ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ಗುಡ್ಡದ ಎಲ್ಲಾ ಮಣ್ಣು ರಸ್ತೆಗೆ ಬಂದು ಬಿದ್ದಿದೆ. ನಿಜಕ್ಕೂ ಇದು ಚಾರ್ಮಾಡಿ ಘಾಟಿ ರಸ್ತೆಯೇ ಎಂದು ಪ್ರಶ್ನಿಸುವಂತಾಗಿದೆ.

ಚಾರ್ಮಾಡಿ ಘಾಟ್​​ ರಸ್ತೆಯಲ್ಲಿ ಗುಡ್ಡ, ಭೂ ಕುಸಿತ

ಮಳೆ ನಿಂತರೂ ನೀರಿನ ಹರಿವು ಮಾತ್ರ ಈ ರಸ್ತೆಯಲ್ಲಿ ನಿರಂತರವಾಗಿ ಇದೆ. ರಸ್ತೆಯಲ್ಲಿ ಹತ್ತಾರೂ ಕೃತಕ ಫಾಲ್ಸ್​ಗಳು ನಿರ್ಮಾಣ ಆಗಿದ್ದು, ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಂದು ಅಪ್ಪಳಿಸಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರಕ್ಕೂ ತೊಂದರೆ ಆಗಬಹುದಾಗದ ಲಕ್ಷಣಗಳಿವೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಭಾಗ ಹಾಗೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಸಂಭವಿಸಿದೆ. ಈ ಹಿನ್ನೆಲೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು.

ಈ ಭಾಗದಲ್ಲಿ ಇಂದು ಮಳೆ ಸ್ವಲ್ವ ಮಟ್ಟಿಗೆ ಕಡಿಮೆಯಾಗಿರುವ ಕಾರಣ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಸೃಷ್ಟಿಯಾದ ಅವಾಂತರಗಳನ್ನು ನಾವು ನೋಡಬಹುದಾಗಿದೆ. ಘಾಟಿಯ ಐದಾರೂ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ಗುಡ್ಡದ ಎಲ್ಲಾ ಮಣ್ಣು ರಸ್ತೆಗೆ ಬಂದು ಬಿದ್ದಿದೆ. ನಿಜಕ್ಕೂ ಇದು ಚಾರ್ಮಾಡಿ ಘಾಟಿ ರಸ್ತೆಯೇ ಎಂದು ಪ್ರಶ್ನಿಸುವಂತಾಗಿದೆ.

ಚಾರ್ಮಾಡಿ ಘಾಟ್​​ ರಸ್ತೆಯಲ್ಲಿ ಗುಡ್ಡ, ಭೂ ಕುಸಿತ

ಮಳೆ ನಿಂತರೂ ನೀರಿನ ಹರಿವು ಮಾತ್ರ ಈ ರಸ್ತೆಯಲ್ಲಿ ನಿರಂತರವಾಗಿ ಇದೆ. ರಸ್ತೆಯಲ್ಲಿ ಹತ್ತಾರೂ ಕೃತಕ ಫಾಲ್ಸ್​ಗಳು ನಿರ್ಮಾಣ ಆಗಿದ್ದು, ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಂದು ಅಪ್ಪಳಿಸಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರಕ್ಕೂ ತೊಂದರೆ ಆಗಬಹುದಾಗದ ಲಕ್ಷಣಗಳಿವೆ.

Intro:Kn_Ckm_04_Charmadi place_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗ ಹಾಗೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದ ಕಾರಣ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಗುಡ್ಡು ಕುಸಿತ ಹಾಗೂ ಭೂ ಕುಸಿತ ಆದ ಕಾರಣ ಸಂಪೂರ್ಣವಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು.ಆದರೇ ಇಂದೂ ಈ ಭಾಗದಲ್ಲಿ ಮಳೆ ಸ್ವಲ್ವ ಮಟ್ಟಿಗೆ ಕಡಿಮೆ ಆಗಿರುವ ಕಾರಣ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಈ ಮಳೆ ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡಿದೇ ನೀವು ಒಮ್ಮೇ ನೋಡಿ. ಚಾರ್ಮಾಡಿ ಘಾಟಿಯ ಐದಾರೂ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ನೂರಾರು ಮರಗಳು ಧರೆಗೆ ಉರುಳಿದ್ದು ಗುಡ್ಡದ ಎಲ್ಲಾ ಮಣ್ಣುಗಳು ರಸ್ತೆಗೆ ಬಂದೂ ಬಿದ್ದಿದೆ.ನಿಜಕ್ಕೂ ಇದು ಚಾರ್ಮಾಡಿ ಘಾಟಿ ರಸ್ತೆಯೇ ಎಂಬ ಯೋಚನೆ ಮಾಡಬೇಕಾದ ಪರಿಸ್ಥಿತಿ ಈ ಭಾಗದಲ್ಲಿ ಬಂದು ಓದಗಿದ್ದು ನೀರಿನ ಹರಿವು ಮಾತ್ರ ಈ ರಸ್ತೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇದೇ. ರಸ್ತೆಯಲ್ಲಿ ಹತ್ತಾರೂ ಕೃತಕ ಫಾಲ್ಸ್ ಗಳು ನಿರ್ಮಾಣ ಆಗಿದ್ದು ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಂದೂ ಅಪ್ಪಳಿಸಿದ್ದು ತೆರವು ಕಾರ್ಯಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರಕ್ಕೂ ತೊಂದರೆ ಆಗಬಹುದಾಗದ ಲಕ್ಷಣಗಳು ಈ ರಸ್ತೆಯಲ್ಲಿ ಉದ್ಬವವಾಗಿದ್ದು ಚಾರ್ಮಾಡಿ ಘಾಟಿಯ ಮೂರು ನಾಲ್ಕು ತಿರುವುಗಳಲ್ಲಿ ರಸ್ತೆಗಳು ಕುಸಿದು ಸಂಪೂರ್ಣವಾಗಿ ಹಾಳಾಗಿ ಹೋಗಿದೆ...

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.