ETV Bharat / state

ರಕ್ಷಣಾ ಕಾರ್ಯ: ಕುಗ್ರಾಮದಲ್ಲಿದ್ದ 12 ಜನರನ್ನು ಹೊತ್ತು ತಂದ ಅಗ್ನಿಶಾಮಕ ದಳದ ಸಿಬ್ಬಂದಿ

author img

By

Published : Aug 14, 2019, 7:42 AM IST

Updated : Aug 14, 2019, 9:07 AM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ.

ಜನರನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದ ಅಗ್ನಿಶಾಮಕ ದಳದ ಸಿಬ್ಬಂದಿ

ಚಿಕ್ಕಮಗಳೂರು: ಮಹಾಮಳೆಯಿಂದ ಉಂಟಾಗಿದ್ದ ಗುಡ್ಡ ಹಾಗೂ ಭೂ ಕುಸಿತದಿಂದ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಇನ್ನೂ ಕೂಡ ಮಲೆನಾಡು ಭಾಗದಲ್ಲಿ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿದ್ದ ಒಟ್ಟು 12 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.

ಗುಡ್ಡಗಾಡು ಜನರನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ

ಮಳೆಯಿಂದ ಹೊರ ಬರಲಾಗದೇ 12 ಜನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿಯೇ ಕಳೆದ ಒಂದು ವಾರದಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಗ್ರಾಮದ ಸುತ್ತಲೂ ಗುಡ್ಡ ಹಾಗೂ ಭೂ ಕುಸಿತ ಸಂಭವಿಸಿದ ಹಿನ್ನೆಲೆ ಮನೆಯಲ್ಲಿಯೇ ಉಳಿದಿದ್ದರು. ಇವರನ್ನು ಗುರುತಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.

ದುರ್ಗಮ ಹಾದಿಯಲ್ಲಿ ಹಿರಿಯ ಜೀವಗಳು ಸೇರಿದಂತೆ ಕೆಲವು ಸಾಕು ಪ್ರಾಣಿಗಳನ್ನು ಸಹ ಅಗ್ನಿಶಾಮಕ ದಳದ ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದಿದ್ದಾರೆ.

ಚಿಕ್ಕಮಗಳೂರು: ಮಹಾಮಳೆಯಿಂದ ಉಂಟಾಗಿದ್ದ ಗುಡ್ಡ ಹಾಗೂ ಭೂ ಕುಸಿತದಿಂದ ಗುಡ್ಡಗಾಡು ಪ್ರದೇಶದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಇನ್ನೂ ಕೂಡ ಮಲೆನಾಡು ಭಾಗದಲ್ಲಿ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿದ್ದ ಒಟ್ಟು 12 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.

ಗುಡ್ಡಗಾಡು ಜನರನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ

ಮಳೆಯಿಂದ ಹೊರ ಬರಲಾಗದೇ 12 ಜನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿಯೇ ಕಳೆದ ಒಂದು ವಾರದಿಂದ ಅಲ್ಲಿಯೇ ಉಳಿದುಕೊಂಡಿದ್ದರು. ಗ್ರಾಮದ ಸುತ್ತಲೂ ಗುಡ್ಡ ಹಾಗೂ ಭೂ ಕುಸಿತ ಸಂಭವಿಸಿದ ಹಿನ್ನೆಲೆ ಮನೆಯಲ್ಲಿಯೇ ಉಳಿದಿದ್ದರು. ಇವರನ್ನು ಗುರುತಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.

ದುರ್ಗಮ ಹಾದಿಯಲ್ಲಿ ಹಿರಿಯ ಜೀವಗಳು ಸೇರಿದಂತೆ ಕೆಲವು ಸಾಕು ಪ್ರಾಣಿಗಳನ್ನು ಸಹ ಅಗ್ನಿಶಾಮಕ ದಳದ ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದಿದ್ದಾರೆ.

Intro:Kn_Ckm_01_Horatti people_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮಹಾ ಮಳೆಯಿಂದಾ ಉಂಟಾಗಿದ್ದ ಗುಡ್ಡ ಕುಸಿತ ಹಾಗೂ ಭೂ ಕುಸಿತದಿಂದಾ ಗುಡ್ಡಗಾಡು ಪ್ರದೇಶಗಳಲ್ಲಿ ಸಿಲುಕ್ಕಿದ್ದಂತಹ ಜನರನ್ನು ರಕ್ಷಣೆ ಮಾಡುವ ಕೆಲಸ ಇನ್ನೂ ಕೂಡ ಮಲೆನಾಡು ಭಾಗದಲ್ಲಿ ಮುಂದುವರೆದಿದೆ.ಇಂದೂ ಕೂಡ ಅಗ್ನಿಶಾಮಕದ ದಳದ ಸಿಬ್ಬಂಧಿಗಳಿಂದಾ 12 ಜನರ ರಕ್ಷಣೆಯನ್ನು ಮಾಡಲಾಗಿದ್ದು ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮದಿಂದಾ ಮತ್ತೆ 12 ಜನರನ್ನು ಸುರಕ್ಷಿತವಾಗಿ ನಗರ ಪ್ರದೇಶಕ್ಕೆ ಕರೆತರಲಾಗಿದೆ. ಮಹಾ ಮಳೆಯಿಂದಾ ಹೊರ ಬರಲಾಗದೇ ಕಳೆದ ಒಂದು ವಾರದಿಂದಾ ಗ್ರಾಮದಲ್ಲಿಯೇ ಈ 12 ಜನರು ಉಳಿದುಕೊಂಡಿದ್ದರು.ಗ್ರಾಮದ ಸುತ್ತಲೂ ಗುಡ್ಡ ಕುಸಿತ ಹಾಗೂ ಭೂ ಕುಸಿತ ಆದ ಹಿನ್ನಲೆ ಮನೆಯಲ್ಲಿಯೇ ಉಳಿದಿದ್ದು ಇದನ್ನು ಗುರ್ತಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಇಬ್ಬರೂ ರೋಗಿಗಳನ್ನು ಸೇರಿದಂತೆ ಒಟ್ಟು 12 ಜನರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆತಂದಿದ್ದಾರೆ.ರೋಗಿಗಳನ್ನು ಮತ್ತು ಹಿರಿ ಜೀವಗಳನ್ನು ಹೆಗಲ ಮೇಲೆ ಹೊತ್ತು ತಂದಿರುವ ಅಗ್ನಿಶಾಮಕ ದಳದ ಸಿಬ್ಬಂಧಿಗಳು ದುರ್ಗಮ ಹಾದಿಯಲ್ಲಿ ತೆರಳಿ ಈ ಕಾರ್ಯಚರಣೆಯನ್ನು ಮಾಡಿದ್ದಾರೆ.ಮನೆಯಲ್ಲಿದ್ದಂತಹ ನಾಯಿಗಳನ್ನು ಇದೇ ಸಂದರ್ಭದಲ್ಲಿ ರಕ್ಷಣೆ ಮಾಡಿದ್ದು ಅವುಗಳನ್ನು ಜೊತೆಯಲ್ಲಿಯೇ ಕರೆ ತಂದಿದ್ದಾರೆ. ಇದೇ ಗ್ರಾಮ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಒಟ್ಟು 76 ಜನರನ್ನು ಯೋಧರು ರಕ್ಷಣೆ ಮಾಡಿದ್ದರು. ಆದರೇ ಅಂದೂ ಈ ಜನರು ಬರದೇ ಸತ್ತರೇ ನಾವು ಇಲ್ಲೇ ಸಾಯುತ್ತೇವೆ ಎಂದೂ ಹೇಳಿದ್ದರು.ಈಗ ಮತ್ತೆ ಸ್ಥಳೀಯರ ಒತ್ತಾಯದ ಮೇರೆಗೆ ಈ 12 ಜನರನ್ನು ಕರೆ ತಂದಿದ್ದು ಸುರಕ್ಷಿತವಾಗಿ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Aug 14, 2019, 9:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.