ETV Bharat / state

ಲಿಂಗಾಯತ ಸಮುದಾಯದ ವಿರುದ್ಧ ಸಿಟಿ ರವಿ ಹೇಳಿಕೆ ಪೋಸ್ಟ್ ಪ್ರಕರಣ: ಮೂವರ ವಿರುದ್ದ FIR ದಾಖಲು

ಲಿಂಗಾಯತ ಸಮುದಾಯದ ವಿರುದ್ಧ ಸಿ ಟಿ ರವಿ ಹೇಳಿಕೆ ನೀಡಿದ್ದಾರೆಂಬ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ದ ಎಫ್ ಐ ಆರ್ ದಾಖಲು ಮಾಡಲಾಗಿದೆ.

author img

By

Published : Apr 5, 2023, 7:22 AM IST

HC Kalmuradappa
ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ

ಚಿಕ್ಕಮಗಳೂರು : ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಸಂಬಂಧ ಜಿಲ್ಲಾ ಎಸ್​ಪಿಗೆ ದೂರು ಸಲ್ಲಿಸಿದ್ದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹರೀಶ್ ಕೆಂಗಳಹಳ್ಳಿ, ಗುರು ಪಾಟೀಲ್, ಸುವರ್ಣಗಿರಿ ಕುಮಾರ್ ಎಂಬವರ ಮೇಲೆ ಕೇಸ್​ ದಾಖಲಿಸಿದ್ದಾರೆ ಎಂದು ತಿಳಿಸಿದರು.

complaint copy
ದೂರು ಪ್ರತಿ

ಇದನ್ನೂ ಓದಿ : ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಇಲ್ಲ: ಶಾಸಕ ಸಿ.ಟಿ. ರವಿ

ಹರೀಶ್ ಕೆಂಗಳಹಳ್ಳಿ ಕಾಂಗ್ರೆಸ್ ಐಟಿ ಸೆಲ್‍ನ ಕಾರ್ಯದರ್ಶಿಯಾಗಿದ್ದು, ಗುರುಪಾಟೀಲ್ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾರೆ. ಸುವರ್ಣಗಿರಿ ಕುಮಾರ್ ಎಂಬಾತ ಕಾಂಗ್ರೆಸ್‍ನ ಕಾರ್ಯದರ್ಶಿಯಾಗಿದ್ದು, ಈ ಮೂವರು ಆರೋಪಿಗಳು ಸಿ ಟಿ ರವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು, ಶಾಸಕರು ಲಿಂಗಾಯತ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಪತ್ರಿಕೆಯಲ್ಲಿ ವರದಿ ಬಂದಿರುವಂತೆ ನಕಲಿ ಸುದ್ದಿಯನ್ನು ಸೃಷ್ಟಿಸಿ ಅಪ ಪ್ರಚಾರ ಮಾಡಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಶಾಸಕ ಸಿ ಟಿ ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ನೀಡಿದ್ದಾರೆಂಬ ಹೇಳಿಕೆ ಸುಳ್ಳು ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದರು.

ಇದನ್ನೂ ಓದಿ : ಅವರು ಹೇಳಿದ ಮಾತುಗಳೇ ಅವರಿಗೆ ತಿರುಗುಬಾಣವಾಗುತ್ತವೆ: ಡಿಕೆಶಿ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸುಳ್ಳು ಸುದ್ದಿ ಹಬ್ಬಿಸಿ ಅಭಿವೃದ್ಧಿಯನ್ನು ಮರೆಮಾಚಬೇಕು ಎನ್ನುವುದು ಕಾಂಗ್ರೆಸ್​ನ ಉದ್ದೇಶ. ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದ ಕುರಿತು ಕಾಂಗ್ರೆಸ್​ ಚರ್ಚೆಗೆ ಬರಲು ತಯಾರಿಲ್ಲ. ಮೆಡಿಕಲ್​ ಕಾಲೇಜ್​ ತಂದಿರುವ ಬಗ್ಗೆ, ಹೈವೇ ರಸ್ತೆಗಳನ್ನು ಮಾಡಿರುವ ಬಗ್ಗೆ, ಕೆರೆ ತುಂಬಿಸಿರುವ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್​ನವರಿಗೆ ಯೋಗ್ಯತೆ ಇಲ್ಲ. ಹಾಗಾಗಿ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಮನೆ ಬಾಗಿಲು ಬಿಡೋ ಒಳಗೆ ಸುಳ್ಳು ಊರನ್ನೆಲ್ಲಾ ಸುತ್ತಾಡಿತ್ತು ಅನ್ನೋ ಹಾಗೆ ಕಾಂಗ್ರೆಸ್​ನವರು ಸುಳ್ಳನ್ನು ವಿಜ್ರಂಭಿಸುವ ಕೆಲಸ ಮಾಡಿದ್ರು. ಆದ್ರೆ, ಇಂದು ಸತ್ಯಾವಾದ ವಿಚಾರಕ್ಕೆ ನ್ಯಾಯ ಸಿಕ್ಕಿದೆ. ಸಿ ಟಿ ರವಿ ಅವರು ಎಲ್ಲೂ ಕೂಡ ಹೇಳಿಕೆ ಕೊಟ್ಟಿಲ್ಲ, ಇದು ಸುಳ್ಳು ಸುದ್ದಿ. ಪೊಲೀಸ್​ನವರು ಕೂಡಲೇ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕಲ್ಮರುಡಪ್ಪ ಒತ್ತಾಯಸಿದರು.

ಇದನ್ನೂ ಓದಿ : ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನ‌ವು ಕೈಮಾಬಾದ್ ಆಗಿರುತ್ತಿತ್ತು:ಸಿಟಿ ರವಿ

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ

ಚಿಕ್ಕಮಗಳೂರು : ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್ ಸಿ ಕಲ್ಮುರಡಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ಸಂಬಂಧ ಜಿಲ್ಲಾ ಎಸ್​ಪಿಗೆ ದೂರು ಸಲ್ಲಿಸಿದ್ದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹರೀಶ್ ಕೆಂಗಳಹಳ್ಳಿ, ಗುರು ಪಾಟೀಲ್, ಸುವರ್ಣಗಿರಿ ಕುಮಾರ್ ಎಂಬವರ ಮೇಲೆ ಕೇಸ್​ ದಾಖಲಿಸಿದ್ದಾರೆ ಎಂದು ತಿಳಿಸಿದರು.

complaint copy
ದೂರು ಪ್ರತಿ

ಇದನ್ನೂ ಓದಿ : ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆ ಇಲ್ಲ: ಶಾಸಕ ಸಿ.ಟಿ. ರವಿ

ಹರೀಶ್ ಕೆಂಗಳಹಳ್ಳಿ ಕಾಂಗ್ರೆಸ್ ಐಟಿ ಸೆಲ್‍ನ ಕಾರ್ಯದರ್ಶಿಯಾಗಿದ್ದು, ಗುರುಪಾಟೀಲ್ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾರೆ. ಸುವರ್ಣಗಿರಿ ಕುಮಾರ್ ಎಂಬಾತ ಕಾಂಗ್ರೆಸ್‍ನ ಕಾರ್ಯದರ್ಶಿಯಾಗಿದ್ದು, ಈ ಮೂವರು ಆರೋಪಿಗಳು ಸಿ ಟಿ ರವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು, ಶಾಸಕರು ಲಿಂಗಾಯತ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಪತ್ರಿಕೆಯಲ್ಲಿ ವರದಿ ಬಂದಿರುವಂತೆ ನಕಲಿ ಸುದ್ದಿಯನ್ನು ಸೃಷ್ಟಿಸಿ ಅಪ ಪ್ರಚಾರ ಮಾಡಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಶಾಸಕ ಸಿ ಟಿ ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ನೀಡಿದ್ದಾರೆಂಬ ಹೇಳಿಕೆ ಸುಳ್ಳು ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದರು.

ಇದನ್ನೂ ಓದಿ : ಅವರು ಹೇಳಿದ ಮಾತುಗಳೇ ಅವರಿಗೆ ತಿರುಗುಬಾಣವಾಗುತ್ತವೆ: ಡಿಕೆಶಿ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸುಳ್ಳು ಸುದ್ದಿ ಹಬ್ಬಿಸಿ ಅಭಿವೃದ್ಧಿಯನ್ನು ಮರೆಮಾಚಬೇಕು ಎನ್ನುವುದು ಕಾಂಗ್ರೆಸ್​ನ ಉದ್ದೇಶ. ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದ ಕುರಿತು ಕಾಂಗ್ರೆಸ್​ ಚರ್ಚೆಗೆ ಬರಲು ತಯಾರಿಲ್ಲ. ಮೆಡಿಕಲ್​ ಕಾಲೇಜ್​ ತಂದಿರುವ ಬಗ್ಗೆ, ಹೈವೇ ರಸ್ತೆಗಳನ್ನು ಮಾಡಿರುವ ಬಗ್ಗೆ, ಕೆರೆ ತುಂಬಿಸಿರುವ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್​ನವರಿಗೆ ಯೋಗ್ಯತೆ ಇಲ್ಲ. ಹಾಗಾಗಿ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಮನೆ ಬಾಗಿಲು ಬಿಡೋ ಒಳಗೆ ಸುಳ್ಳು ಊರನ್ನೆಲ್ಲಾ ಸುತ್ತಾಡಿತ್ತು ಅನ್ನೋ ಹಾಗೆ ಕಾಂಗ್ರೆಸ್​ನವರು ಸುಳ್ಳನ್ನು ವಿಜ್ರಂಭಿಸುವ ಕೆಲಸ ಮಾಡಿದ್ರು. ಆದ್ರೆ, ಇಂದು ಸತ್ಯಾವಾದ ವಿಚಾರಕ್ಕೆ ನ್ಯಾಯ ಸಿಕ್ಕಿದೆ. ಸಿ ಟಿ ರವಿ ಅವರು ಎಲ್ಲೂ ಕೂಡ ಹೇಳಿಕೆ ಕೊಟ್ಟಿಲ್ಲ, ಇದು ಸುಳ್ಳು ಸುದ್ದಿ. ಪೊಲೀಸ್​ನವರು ಕೂಡಲೇ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕಲ್ಮರುಡಪ್ಪ ಒತ್ತಾಯಸಿದರು.

ಇದನ್ನೂ ಓದಿ : ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನ‌ವು ಕೈಮಾಬಾದ್ ಆಗಿರುತ್ತಿತ್ತು:ಸಿಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.