ETV Bharat / state

ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್​ಎಸ್​ಎಸ್​ ಕೈವಾಡವಿದೆ: ವೀರಪ್ಪ ಮೊಯ್ಲಿ

author img

By

Published : Feb 19, 2022, 10:16 PM IST

Updated : Feb 19, 2022, 11:02 PM IST

ನರೇಂದ್ರ ಮೋದಿ ನಿಜವಾದ ದೇಶ ಭಕ್ತರಾಗಿದ್ದರೆ ಸಚಿವ ಕೆ ಎಸ್​ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ತೆಗೆದು ಹಾಕಲಿ ಎಂದು ಕೇಂದ್ರದ ಮಾಜಿ ಸಚಿವ ಎಂ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

veerappa moily reaction on hijab and ishwarappa resignation
ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್‌ಎಸ್ಎಸ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್​ಎಸ್​ಎಸ್​ ಕೈವಾಡವಿದೆ: ವೀರಪ್ಪ ಮೊಯ್ಲಿ

ಶನಿವಾರ ತಾಲೂಕಿನ ನಂದಿ ಗಿರಿಧಾಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಸಭೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 50 ಸಾವಿರ ಸದಸ್ಯತ್ವ ಅಭಿಯಾನ‌ ಶುರುವಾಗಿದೆ. ಪ್ರತಿ ಕ್ಷೇತ್ರದಿಂದ ಸಾಕಷ್ಟು ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ವಿಶೇಷ ಕಾಳಜಿ ಜನತೆಗೆ ಉಲ್ಲಾಸವಿದೆ ಎಂದು ತಿಳಿಸಿದರು.

ಅಧಿವೇಶನದ ಧರಣಿ ಬಗ್ಗೆ ಮಾತಾನಾಡಿದ ಮೊಯ್ಲಿ, ಇದೆಲ್ಲಾ ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದ ಪ್ರಾರಂಭವಾಗಿದೆ. ಅವರ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು. ಸಚಿವರಾಗಿ, ಶಾಸಕರಾಗಿ ಸಂವಿಧಾನಕ್ಕೆ ಮಾಡಿರುವ ದ್ರೋಹ. ಈ ಬಗ್ಗೆ ಅವರಿಗೆ ಪಶ್ಚಾತ್ತಾಪ ಇಲ್ಲಾ, ಅವರು ಮಾಡಿದ್ದೇ ಸರಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ನಕಲಿ ದೇಶ ಭಕ್ತರು ಎಂದು ನಾನು ಹೇಳುವುದಿಲ್ಲಾ. ಅವರಿಗೆ ದೇಶಭಕ್ತಿ ಇದ್ದರೆ, ಸಂವಿಧಾನದ ಮೇಲೆ ಗೌರವವಿದ್ದರೆ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ತೆಗೆದುಹಾಕಲಿ ಎಂದು ಒತ್ತಾಯಿಸಿದರು.

ಹಿಜಾಬ್ ವಿಚಾರವಾಗಿ ಮಾತಾನಾಡಿದ ಮಾಜಿ ಸಿಎಂ ನೂರಕ್ಕೆ ನೂರು ಪಾಲು ಅದನ್ನು ಬಿಜೆಪಿ ಮಾಡಿದೆ. ನೂರಾರು ವರ್ಷಗಳಿಂದ ಮುಸ್ಲಿಂರು ಹಿಜಾಬ್ ಧರಿಸುತ್ತಿದ್ದಾರೆ. ಈಗ ಆರ್​ಎಸ್​ಎಸ್​ನವರು ಕೇಸರಿ ಶಾಲು ತಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್ ಜವಾಬ್ದಾರಿ ಇಲ್ಲದ ಪ್ರತಿಪಕ್ಷ, ಧರಣಿ ನಡೆಸಿ ಜನರ ಹಣ ವ್ಯರ್ಥ ಮಾಡ್ತಿದಾರೆ: ತೇಜಸ್ವಿ ಸೂರ್ಯ

ಚಿಕ್ಕಬಳ್ಳಾಪುರ: ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್‌ಎಸ್ಎಸ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್​ಎಸ್​ಎಸ್​ ಕೈವಾಡವಿದೆ: ವೀರಪ್ಪ ಮೊಯ್ಲಿ

ಶನಿವಾರ ತಾಲೂಕಿನ ನಂದಿ ಗಿರಿಧಾಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಸಭೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 50 ಸಾವಿರ ಸದಸ್ಯತ್ವ ಅಭಿಯಾನ‌ ಶುರುವಾಗಿದೆ. ಪ್ರತಿ ಕ್ಷೇತ್ರದಿಂದ ಸಾಕಷ್ಟು ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ವಿಶೇಷ ಕಾಳಜಿ ಜನತೆಗೆ ಉಲ್ಲಾಸವಿದೆ ಎಂದು ತಿಳಿಸಿದರು.

ಅಧಿವೇಶನದ ಧರಣಿ ಬಗ್ಗೆ ಮಾತಾನಾಡಿದ ಮೊಯ್ಲಿ, ಇದೆಲ್ಲಾ ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದ ಪ್ರಾರಂಭವಾಗಿದೆ. ಅವರ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು. ಸಚಿವರಾಗಿ, ಶಾಸಕರಾಗಿ ಸಂವಿಧಾನಕ್ಕೆ ಮಾಡಿರುವ ದ್ರೋಹ. ಈ ಬಗ್ಗೆ ಅವರಿಗೆ ಪಶ್ಚಾತ್ತಾಪ ಇಲ್ಲಾ, ಅವರು ಮಾಡಿದ್ದೇ ಸರಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ನಕಲಿ ದೇಶ ಭಕ್ತರು ಎಂದು ನಾನು ಹೇಳುವುದಿಲ್ಲಾ. ಅವರಿಗೆ ದೇಶಭಕ್ತಿ ಇದ್ದರೆ, ಸಂವಿಧಾನದ ಮೇಲೆ ಗೌರವವಿದ್ದರೆ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ತೆಗೆದುಹಾಕಲಿ ಎಂದು ಒತ್ತಾಯಿಸಿದರು.

ಹಿಜಾಬ್ ವಿಚಾರವಾಗಿ ಮಾತಾನಾಡಿದ ಮಾಜಿ ಸಿಎಂ ನೂರಕ್ಕೆ ನೂರು ಪಾಲು ಅದನ್ನು ಬಿಜೆಪಿ ಮಾಡಿದೆ. ನೂರಾರು ವರ್ಷಗಳಿಂದ ಮುಸ್ಲಿಂರು ಹಿಜಾಬ್ ಧರಿಸುತ್ತಿದ್ದಾರೆ. ಈಗ ಆರ್​ಎಸ್​ಎಸ್​ನವರು ಕೇಸರಿ ಶಾಲು ತಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್ ಜವಾಬ್ದಾರಿ ಇಲ್ಲದ ಪ್ರತಿಪಕ್ಷ, ಧರಣಿ ನಡೆಸಿ ಜನರ ಹಣ ವ್ಯರ್ಥ ಮಾಡ್ತಿದಾರೆ: ತೇಜಸ್ವಿ ಸೂರ್ಯ

Last Updated : Feb 19, 2022, 11:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.