ETV Bharat / state

ಹದಿನಾಲ್ಕು ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ

author img

By

Published : Mar 16, 2023, 11:36 AM IST

ಚಿಕ್ಕಾಬಳ್ಳಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಸಚಿವ ಸುಧಾಕರ್​ ಮತ್ತು ವಕ್ಕಲಿಗ ಸಮುದಾಯದ ಸ್ವಾಮೀಜಿ ಅನಾವರಣಗೊಳಿಸಿದರು.

ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ
ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ
ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ

ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 14 ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆಯನ್ನು ರಾಜ್ಯದ ಸಚಿವರು ಹಾಗೂ ವಕ್ಕಲಿಗ ಸಮುದಾಯದ ಸ್ವಾಮೀಜಿಗಳು ಬುಧವಾರ ಅನಾವರಣಗೊಳಿಸಿದರು. ಕೆಂಪೇಗೌಡ ಪುತ್ಥಳಿ‌ ಅನಾವರಣ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ‌ನಗರದಲ್ಲಿ ಹಬ್ಬದ ವಾತಾವರಣ‌ ನಿರ್ಮಾಣವಾಗಿತ್ತು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದಿದ್ದು ದಾರಿಯುದ್ದಕ್ಕೂ ಸಮುದಾಯದ ಮುಖಂಡರು ಕೆಂಪೇಗೌಡರಿಗೆ ಜಯಕಾರ ಕೂಗಿ ಕುಣಿದು ಕುಪ್ಪಳಿಸಿದ್ದಾರೆ.

ನಗರದ ಬಿಬಿ ರಸ್ತೆಯಲ್ಲಿರುವ ವಕ್ಕಲಿಗರ ಕಲ್ಯಾಣಮಂಟಪದ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಕೆಂಪೇಗೌಡರ ಪ್ರತಿಮೆಯನ್ನು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಅನಾವರಣ ಮಾಡಲಾಯಿತು. ಶ್ರೀ ನಿರ್ಮಾಲನಂದ ಸ್ವಾಮೀಜಿಗಳು ಹಾಗೂ ಸಹಕಾರ ಸಚಿವ ಸೋಮಶೇಖರ್ ಕಾರ್ಯಕ್ರಮಕ್ಕೆ ಹಾಜರಾಗಿ ಬೃಹತ್ ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಿದರು. ಇನ್ನು ಕೆಂಪೇಗೌಡರ ಕಂಚಿನ ಪ್ರತಿಮೆಯು 14 ಅಡಿ ಎತ್ತರ 16 ಅಡಿ ಉದ್ದ 4 ಅಡಿ ಅಗಲವಿದ್ದು ಸುಮಾರು 2,742 ಕೆಜಿ ತೂಕದ ಕಂಚಿ ಪ್ರತಿಮೆ ಇದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಸಚಿವ ಸುಧಾಕರ್ ಕಾರಣ. ಮುಖ್ಯಮಂತ್ರಿ ಬೊಮ್ಮಾಯಿವರಿಂದ ಇದಕ್ಕೆ ಹಣ ಬಿಡುಗಡೆ ಮಾಡಿಸಿದರು. ಏನ್ ಮೋಡಿ ಮಾಡ್ತಾರೋ ಗೊತ್ತಿಲ್ಲ, ಸುಧಾಕರ್ ಹೇಳಿದ ಹಾಗೆ ಯಡಿಯೂರಪ್ಪ, ಬೊಮ್ಮಾಯಿ ಇಬ್ಬರು ಕೇಳ್ತಾರೆ ಎಂದು ಸಚಿವ ಸುಧಾಕರ್​ ಅವರನ್ನು ಹಾಡಿ ಹೊಗಳಿದರು.

ಬಳಿಕ ಸಚಿವ ಸುಧಾಕರ್​ ಮಾತನಾಡಿ, ಈ ಹಿಂದೆ ವಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಮಾತು ಕೊಟ್ಟಿದ್ದು, ಈಗ ಅದು ಈಡೇರಿದೆ. ಇದೇ ವಿಚಾರವಾಗಿ ವಕ್ಕಲಿಗ ಸಮುದಾಯದ ಗುರುಗಳ ಅಧ್ಯಕ್ಷತೆಯಲ್ಲಿ ಒಂದೇ ಬಾರಿ ಸಭೆಯನ್ನು ಮಾಡಲಾಗಿತ್ತು. ಸಭೆ ನಡೆದು ಒಂದು ತಿಂಗಳೊಳಗೆ ನಮ್ಮ ಸರ್ಕಾರ ವಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿತು. ಈ ಹಿಂದೆ ಮೀಸಲಾತಿ ವಿಚಾರವಾಗಿ ಕೆಲ ಸಮುದಾಯಗಳು ವರ್ಷಾನುಗಟ್ಟಲೆ ಹೋರಾಟ, ಉಪವಾಸ ಸತ್ಯಾಗ್ರಹಗಳನ್ನು ಮಾಡಿದ್ದವು ಎಂದರು. ಕರ್ನಾಟಕದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ವಿಮಾಣ ನಿಲ್ದಾಣದಲ್ಲಿ ಅನಾವರಣಗೊಳಿಸಲಾಯಿತು. ಇದು ನಮ್ಮ ಸರ್ಕಾರದ ಅವಧಿಯಲ್ಲೇ ಆಯಿತು. ಅಲ್ಲದೇ ಇಡೀ ವಿಶ್ವದಲ್ಲೇ ಎತ್ತರದ ಪ್ರತಿಮೆ ನಮ್ಮ ದೇಶದ ಗುಜರಾತ್​ನಲ್ಲಿದೆ. ಅದು ಸರ್ದಾರ್​ ವಲ್ಲಭಾಯಿ ಪಾಟೇಲ್​​ರದು. ಇದು ದೇಶದ ಹೆಮ್ಮೆ ಎಂದು ನುಡಿದರು.

108 ಅಡಿ ಎತ್ತರದ ಮೂರ್ತಿ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಈ ಮೂರ್ತಿಯನ್ನು ಶಿಲ್ಪಿ ರಾಮ್​ ಸುತಾರ್​ ಅವರು ನಿರ್ಮಿಸಿದ್ದಾರೆ. ಅಲ್ಲದೇ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿ ಮತ್ತು ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನೂ ಇವರೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ನಿರ್ಮಾತೃ ಆದ ಕೆಂಪೇಗೌಡರ ಅತೀ ಎತ್ತರದ ಮೂರ್ತಿಯೂ ಇದಾಗಿದೆ.

ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ

ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ

ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 14 ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆಯನ್ನು ರಾಜ್ಯದ ಸಚಿವರು ಹಾಗೂ ವಕ್ಕಲಿಗ ಸಮುದಾಯದ ಸ್ವಾಮೀಜಿಗಳು ಬುಧವಾರ ಅನಾವರಣಗೊಳಿಸಿದರು. ಕೆಂಪೇಗೌಡ ಪುತ್ಥಳಿ‌ ಅನಾವರಣ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ‌ನಗರದಲ್ಲಿ ಹಬ್ಬದ ವಾತಾವರಣ‌ ನಿರ್ಮಾಣವಾಗಿತ್ತು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದಿದ್ದು ದಾರಿಯುದ್ದಕ್ಕೂ ಸಮುದಾಯದ ಮುಖಂಡರು ಕೆಂಪೇಗೌಡರಿಗೆ ಜಯಕಾರ ಕೂಗಿ ಕುಣಿದು ಕುಪ್ಪಳಿಸಿದ್ದಾರೆ.

ನಗರದ ಬಿಬಿ ರಸ್ತೆಯಲ್ಲಿರುವ ವಕ್ಕಲಿಗರ ಕಲ್ಯಾಣಮಂಟಪದ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಕೆಂಪೇಗೌಡರ ಪ್ರತಿಮೆಯನ್ನು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಅನಾವರಣ ಮಾಡಲಾಯಿತು. ಶ್ರೀ ನಿರ್ಮಾಲನಂದ ಸ್ವಾಮೀಜಿಗಳು ಹಾಗೂ ಸಹಕಾರ ಸಚಿವ ಸೋಮಶೇಖರ್ ಕಾರ್ಯಕ್ರಮಕ್ಕೆ ಹಾಜರಾಗಿ ಬೃಹತ್ ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಿದರು. ಇನ್ನು ಕೆಂಪೇಗೌಡರ ಕಂಚಿನ ಪ್ರತಿಮೆಯು 14 ಅಡಿ ಎತ್ತರ 16 ಅಡಿ ಉದ್ದ 4 ಅಡಿ ಅಗಲವಿದ್ದು ಸುಮಾರು 2,742 ಕೆಜಿ ತೂಕದ ಕಂಚಿ ಪ್ರತಿಮೆ ಇದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಸಚಿವ ಸುಧಾಕರ್ ಕಾರಣ. ಮುಖ್ಯಮಂತ್ರಿ ಬೊಮ್ಮಾಯಿವರಿಂದ ಇದಕ್ಕೆ ಹಣ ಬಿಡುಗಡೆ ಮಾಡಿಸಿದರು. ಏನ್ ಮೋಡಿ ಮಾಡ್ತಾರೋ ಗೊತ್ತಿಲ್ಲ, ಸುಧಾಕರ್ ಹೇಳಿದ ಹಾಗೆ ಯಡಿಯೂರಪ್ಪ, ಬೊಮ್ಮಾಯಿ ಇಬ್ಬರು ಕೇಳ್ತಾರೆ ಎಂದು ಸಚಿವ ಸುಧಾಕರ್​ ಅವರನ್ನು ಹಾಡಿ ಹೊಗಳಿದರು.

ಬಳಿಕ ಸಚಿವ ಸುಧಾಕರ್​ ಮಾತನಾಡಿ, ಈ ಹಿಂದೆ ವಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಕೊಡುವುದಾಗಿ ಮಾತು ಕೊಟ್ಟಿದ್ದು, ಈಗ ಅದು ಈಡೇರಿದೆ. ಇದೇ ವಿಚಾರವಾಗಿ ವಕ್ಕಲಿಗ ಸಮುದಾಯದ ಗುರುಗಳ ಅಧ್ಯಕ್ಷತೆಯಲ್ಲಿ ಒಂದೇ ಬಾರಿ ಸಭೆಯನ್ನು ಮಾಡಲಾಗಿತ್ತು. ಸಭೆ ನಡೆದು ಒಂದು ತಿಂಗಳೊಳಗೆ ನಮ್ಮ ಸರ್ಕಾರ ವಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿತು. ಈ ಹಿಂದೆ ಮೀಸಲಾತಿ ವಿಚಾರವಾಗಿ ಕೆಲ ಸಮುದಾಯಗಳು ವರ್ಷಾನುಗಟ್ಟಲೆ ಹೋರಾಟ, ಉಪವಾಸ ಸತ್ಯಾಗ್ರಹಗಳನ್ನು ಮಾಡಿದ್ದವು ಎಂದರು. ಕರ್ನಾಟಕದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ವಿಮಾಣ ನಿಲ್ದಾಣದಲ್ಲಿ ಅನಾವರಣಗೊಳಿಸಲಾಯಿತು. ಇದು ನಮ್ಮ ಸರ್ಕಾರದ ಅವಧಿಯಲ್ಲೇ ಆಯಿತು. ಅಲ್ಲದೇ ಇಡೀ ವಿಶ್ವದಲ್ಲೇ ಎತ್ತರದ ಪ್ರತಿಮೆ ನಮ್ಮ ದೇಶದ ಗುಜರಾತ್​ನಲ್ಲಿದೆ. ಅದು ಸರ್ದಾರ್​ ವಲ್ಲಭಾಯಿ ಪಾಟೇಲ್​​ರದು. ಇದು ದೇಶದ ಹೆಮ್ಮೆ ಎಂದು ನುಡಿದರು.

108 ಅಡಿ ಎತ್ತರದ ಮೂರ್ತಿ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಈ ಮೂರ್ತಿಯನ್ನು ಶಿಲ್ಪಿ ರಾಮ್​ ಸುತಾರ್​ ಅವರು ನಿರ್ಮಿಸಿದ್ದಾರೆ. ಅಲ್ಲದೇ ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿ ಮತ್ತು ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನೂ ಇವರೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ನಿರ್ಮಾತೃ ಆದ ಕೆಂಪೇಗೌಡರ ಅತೀ ಎತ್ತರದ ಮೂರ್ತಿಯೂ ಇದಾಗಿದೆ.

ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.