ETV Bharat / state

ಮೆಕ್ಯಾನಿಕ್​ನಿಂದ ಬಸ್​ ಚಲಾವಣೆ ಮಾಡಿಸಿದ ಅಧಿಕಾರಿ: ಕಿಡಿಗೇಡಿಗಳಿಂದ ಕಲ್ಲು ತೂರಾಟ

author img

By

Published : Apr 8, 2021, 8:54 PM IST

ಚಿಂತಾಮಣಿಯಲ್ಲಿ ಮೆಕ್ಯಾನಿಕ್​ನಿಂದ ಅಧಿಕಾರಿಗಳು ಬಸ್​ ಚಲಾವಣೆ ಮಾಡಿಸಿದ್ದಾರೆ. ಆತಂಕದ ಸಂಗತಿಯೆಂದರೆ, ಬಸ್​ ಚಾಲನೆ ಮಾಡಿದ ಮೆಕ್ಯಾನಿಕ್​ಗೆ ಆರೋಗ್ಯದ ದೃಷ್ಟಿಯಿಂದ ಬಸ್​ ಚಲಾಯಿಸಲು ಸಾಧ್ಯವಿಲ್ಲ.

Stone pelting on KSRTC Bus in Chinthamani
ಚಾಲನೆ ಸಾಧ್ಯವಿಲ್ಲದ ಮೆಕ್ಯಾನಿಕ್​ನಿಂದ ಬಸ್​ ಚಲಾಯಿಸಿದ ಅಧಿಕಾರಿ

ಚಿಂತಾಮಣಿ : ಸಾರಿಗೆ ನೌಕರರ ಮುಷ್ಕರದ ನಡುವೆಯೇ ತಾಲೂಕಿನ ಕೆಎಸ್​ಆರ್​ಟಿಸಿ ಡಿಪೋ ಅಧಿಕಾರಿಗಳು ಮೆಕ್ಯಾನಿಕ್​ನಿಂದ ಬಸ್​ ಚಲಾವಣೆ ಮಾಡಿಸಿದ್ದಾರೆ.

ಸರ್ಕಾರದ ಒತ್ತಡಕ್ಕೆ ಮಣಿದ ಚಿಂತಾಮಣಿ ಕೆಎಸ್​ಆರ್​ಟಿಸಿ ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ, ಪೊಲೀಸ್ ಬಂದೋಬಸ್ತ್​​ನೊಂದಿಗೆ ಮೆಕ್ಯಾನಿಕ್ ಹನೀಫ್ ಎಂಬಾತನಿಂದ ಬಸ್ ಚಲಾವಣೆ ಮಾಡಿಸಿದ್ದಾರೆ. ಅಧಿಕಾರಿಯ ಸೂಚನೆ ಮೇರೆಗೆ ಮೆಕ್ಯಾನಿಕ್ ಹನೀಫ್, ಚಿಂತಾಮಣಿಯಿಂದ ಶ್ರೀನಿವಾಸಪುರಕ್ಕೆ ಜನರನ್ನು ಕರೆದೊಯ್ದು ಮತ್ತೆ ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಂದಿದ್ದಾನೆ.

ಚಾಲನೆ ಸಾಧ್ಯವಿಲ್ಲದ ಮೆಕ್ಯಾನಿಕ್​ನಿಂದ ಬಸ್​ ಚಲಾಯಿಸಿದ ಅಧಿಕಾರಿ

ವೈದ್ಯರ ಸೂಚನೆ ಲೆಕ್ಕಿಸದ ಅಧಿಕಾರಿಗಳು : ಮೆಕ್ಯಾನಿಕ್ ಹನೀಫ್​ ಅನಾರೋಗ್ಯ ಇರುವ ಕಾರಣ ಕಳೆದ ಒಂದು ವರ್ಷದ ಹಿಂದೆಯೇ ಆತ ಚಾಲಕ ಹುದ್ದೆಗೆ ಅನರ್ಹ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಡಿಪೋ ಅಧಿಕಾರಿ ಆತನ ಕೈಯ್ಯಲ್ಲಿ ಬಸ್​ ಚಲಾವಣೆ ಮಾಡಿಸಿದ್ದಾರೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರೆ, ಶ್ರೀನಿವಾಸಪುರದಿಂದ ಬಸ್​ ವಾಪಸ್​ ಆಗುತ್ತಿದ್ದ ವೇಳೆ ಹನೀಫ್​ಗೆ ಚಾಲನೆ ಮಾಡಲು ಸಾಧ್ಯವಾಗದ ಕಾರಣ ದೊಡ್ಡಗಂಜೂರು ಗ್ರಾಮದ ನಾಗಪ್ಪ ಎಂಬ ಮತ್ತೋರ್ವ ಮೆಕ್ಯಾನಿಕ್ ಬಸ್​ ಚಲಾಯಿಸಿದ್ದಾನೆ. ಈ ಮೂಲಕ ಅಧಿಕಾರಿಗಳು ಜನರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಲ್ಲು ತೂರಾಟ : ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಸ್​ ವಾಪಸಾಗುತ್ತಿದ್ದ ವೇಳೆ ದೊಡ್ಡಗಂಜೂರು ಮತ್ತು ಮಾಡಿಕೇರಿ ಮಧ್ಯೆ ಕಿಡಿಗೇಡಿಗಳು ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್​​​ನಲ್ಲಿ ಚಿಂತಾಮಣಿಗೆ ಬಸ್​ ತರಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಓದಿ : ಕೋಲಾರದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

ಚಿಂತಾಮಣಿ : ಸಾರಿಗೆ ನೌಕರರ ಮುಷ್ಕರದ ನಡುವೆಯೇ ತಾಲೂಕಿನ ಕೆಎಸ್​ಆರ್​ಟಿಸಿ ಡಿಪೋ ಅಧಿಕಾರಿಗಳು ಮೆಕ್ಯಾನಿಕ್​ನಿಂದ ಬಸ್​ ಚಲಾವಣೆ ಮಾಡಿಸಿದ್ದಾರೆ.

ಸರ್ಕಾರದ ಒತ್ತಡಕ್ಕೆ ಮಣಿದ ಚಿಂತಾಮಣಿ ಕೆಎಸ್​ಆರ್​ಟಿಸಿ ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ, ಪೊಲೀಸ್ ಬಂದೋಬಸ್ತ್​​ನೊಂದಿಗೆ ಮೆಕ್ಯಾನಿಕ್ ಹನೀಫ್ ಎಂಬಾತನಿಂದ ಬಸ್ ಚಲಾವಣೆ ಮಾಡಿಸಿದ್ದಾರೆ. ಅಧಿಕಾರಿಯ ಸೂಚನೆ ಮೇರೆಗೆ ಮೆಕ್ಯಾನಿಕ್ ಹನೀಫ್, ಚಿಂತಾಮಣಿಯಿಂದ ಶ್ರೀನಿವಾಸಪುರಕ್ಕೆ ಜನರನ್ನು ಕರೆದೊಯ್ದು ಮತ್ತೆ ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಂದಿದ್ದಾನೆ.

ಚಾಲನೆ ಸಾಧ್ಯವಿಲ್ಲದ ಮೆಕ್ಯಾನಿಕ್​ನಿಂದ ಬಸ್​ ಚಲಾಯಿಸಿದ ಅಧಿಕಾರಿ

ವೈದ್ಯರ ಸೂಚನೆ ಲೆಕ್ಕಿಸದ ಅಧಿಕಾರಿಗಳು : ಮೆಕ್ಯಾನಿಕ್ ಹನೀಫ್​ ಅನಾರೋಗ್ಯ ಇರುವ ಕಾರಣ ಕಳೆದ ಒಂದು ವರ್ಷದ ಹಿಂದೆಯೇ ಆತ ಚಾಲಕ ಹುದ್ದೆಗೆ ಅನರ್ಹ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಡಿಪೋ ಅಧಿಕಾರಿ ಆತನ ಕೈಯ್ಯಲ್ಲಿ ಬಸ್​ ಚಲಾವಣೆ ಮಾಡಿಸಿದ್ದಾರೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರೆ, ಶ್ರೀನಿವಾಸಪುರದಿಂದ ಬಸ್​ ವಾಪಸ್​ ಆಗುತ್ತಿದ್ದ ವೇಳೆ ಹನೀಫ್​ಗೆ ಚಾಲನೆ ಮಾಡಲು ಸಾಧ್ಯವಾಗದ ಕಾರಣ ದೊಡ್ಡಗಂಜೂರು ಗ್ರಾಮದ ನಾಗಪ್ಪ ಎಂಬ ಮತ್ತೋರ್ವ ಮೆಕ್ಯಾನಿಕ್ ಬಸ್​ ಚಲಾಯಿಸಿದ್ದಾನೆ. ಈ ಮೂಲಕ ಅಧಿಕಾರಿಗಳು ಜನರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಲ್ಲು ತೂರಾಟ : ಶ್ರೀನಿವಾಸಪುರದಿಂದ ಚಿಂತಾಮಣಿಗೆ ಬಸ್​ ವಾಪಸಾಗುತ್ತಿದ್ದ ವೇಳೆ ದೊಡ್ಡಗಂಜೂರು ಮತ್ತು ಮಾಡಿಕೇರಿ ಮಧ್ಯೆ ಕಿಡಿಗೇಡಿಗಳು ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪೊಲೀಸ್ ಬಂದೋಬಸ್ತ್​​​ನಲ್ಲಿ ಚಿಂತಾಮಣಿಗೆ ಬಸ್​ ತರಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಓದಿ : ಕೋಲಾರದಲ್ಲಿ ಬಸ್​ ಮೇಲೆ ಕಲ್ಲು ತೂರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.