ETV Bharat / state

ಮಂಚೇನಹಳ್ಳಿ ತಾಲೂಕು ಘೋಷಣೆ ವಿಚಾರ: ತೊಂಡೆಬಾವಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ - Protest aginst Manchchenahalli Taluk Declaration

ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರೆ ತೊಂಡೆಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಗ್ರಾಮಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತೊಂಡೆಬಾವಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ
author img

By

Published : Nov 1, 2019, 11:17 PM IST

ಚಿಕ್ಕಬಳ್ಳಾಪುರ: ಜನಭಿಪ್ರಾಯವಿಲ್ಲದೆ ಏಕಾಏಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಸರ್ಕಾರದ ನಿರ್ಧಾರದ ವಿರುದ್ದ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತೊಂಡೆಬಾವಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಕಾಂಗ್ರೆಸ್​ ಮುಖಂಡ ಜೆ. ಕಾಂತ್​ ರಾಜ್ ಮಾತನಾಡಿ, ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರೆ ತೊಂಡೆಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಗ್ರಾಮಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ. ಗೌರಿಬಿದನೂರು ತಾಲೂಕಿನಿಂದ ಇಲ್ಲಿಗೆ ಬರಲು ಬಸ್ ಸಂಪರ್ಕವಿದ್ದು, ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ ಬರಲು ಸುಲಭ ಮಾರ್ಗ ಇದಾಗಿದೆ. ಆದರೆ ಕೆಲ ರಾಜಕೀಯ ವ್ಯಕ್ತಿಗಳ ಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀಧರ್ ರೆಡ್ಡಿ ಮಾತನಾಡಿ, ಅನಾದಿ ಕಾಲದಿಂದಲೂ ಇಲ್ಲಿನ ಜನ ಗೌರಿಬಿದನೂರು ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ. ಜೊತೆಗೆ ಮಿನಿ ವಿಧಾನಸೌಧ ಸಹ ನಿರ್ಮಾಣವಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ಘೋಷಣೆ ಮಾಡಿದ ತಾಲೂಕನ್ನು ಕೂಡಲೇ ಕೈಬಿಡದಿದ್ದರೆ ನವೆಂಬರ್ 5ರಂದು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್. ಶ್ರೀನಿವಾಸ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಪಿ ಕೃಷ್ಣಮೂರ್ತಿ, ರಫೀಕ್, ಕೆ.ಎನ್. ಶಿವರೆಡ್ಡಿ, ಪಿ.ಎನ್. ಶಿವಶಂಕರರೆಡ್ಡಿ, ವೆಂಕಟೇಶ್ ರೆಡ್ಡಿ ,ರಾಮಚಂದ್ರಪ್ಪ, ಶಂಕರರೆಡ್ಡಿ, ಭಾಸ್ಕರ್ ರೆಡ್ಡಿ, ಟಿ.ವಿ. ರಾಮಣ್ಣ, ನಾಗರಾಜು, ಕಿಟ್ಟಿ, ಶ್ರೀನಿವಾಸಗೌಡ, ಅಶ್ವತ್ಥ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ: ಜನಭಿಪ್ರಾಯವಿಲ್ಲದೆ ಏಕಾಏಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಸರ್ಕಾರದ ನಿರ್ಧಾರದ ವಿರುದ್ದ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತೊಂಡೆಬಾವಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಕಾಂಗ್ರೆಸ್​ ಮುಖಂಡ ಜೆ. ಕಾಂತ್​ ರಾಜ್ ಮಾತನಾಡಿ, ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರೆ ತೊಂಡೆಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಗ್ರಾಮಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ. ಗೌರಿಬಿದನೂರು ತಾಲೂಕಿನಿಂದ ಇಲ್ಲಿಗೆ ಬರಲು ಬಸ್ ಸಂಪರ್ಕವಿದ್ದು, ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ ಬರಲು ಸುಲಭ ಮಾರ್ಗ ಇದಾಗಿದೆ. ಆದರೆ ಕೆಲ ರಾಜಕೀಯ ವ್ಯಕ್ತಿಗಳ ಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀಧರ್ ರೆಡ್ಡಿ ಮಾತನಾಡಿ, ಅನಾದಿ ಕಾಲದಿಂದಲೂ ಇಲ್ಲಿನ ಜನ ಗೌರಿಬಿದನೂರು ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ. ಜೊತೆಗೆ ಮಿನಿ ವಿಧಾನಸೌಧ ಸಹ ನಿರ್ಮಾಣವಾಗುತ್ತಿದೆ. ಇದರಿಂದ ಇಲ್ಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ಘೋಷಣೆ ಮಾಡಿದ ತಾಲೂಕನ್ನು ಕೂಡಲೇ ಕೈಬಿಡದಿದ್ದರೆ ನವೆಂಬರ್ 5ರಂದು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್. ಶ್ರೀನಿವಾಸ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಪಿ ಕೃಷ್ಣಮೂರ್ತಿ, ರಫೀಕ್, ಕೆ.ಎನ್. ಶಿವರೆಡ್ಡಿ, ಪಿ.ಎನ್. ಶಿವಶಂಕರರೆಡ್ಡಿ, ವೆಂಕಟೇಶ್ ರೆಡ್ಡಿ ,ರಾಮಚಂದ್ರಪ್ಪ, ಶಂಕರರೆಡ್ಡಿ, ಭಾಸ್ಕರ್ ರೆಡ್ಡಿ, ಟಿ.ವಿ. ರಾಮಣ್ಣ, ನಾಗರಾಜು, ಕಿಟ್ಟಿ, ಶ್ರೀನಿವಾಸಗೌಡ, ಅಶ್ವತ್ಥ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

Intro:ಜನಭಿಪ್ರಾಯವಿಲ್ಲದೆ ಏಕಾಎಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಬಿಜೆಪಿ ಸರ್ಕಾರಕದ ವಿರುದ್ದ ಕಾಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ನಡೆದಿದೆ.Body:ತೊಂಡೇಭಾವಿ ಡಿ.ಪಾಳ್ಯ ನಾಮಗೊಂಡ್ಲು ಕೆಲ ಗ್ರಾಮಗಳನ್ನು ಮಂಚ್ಚೇನಹಳ್ಳಿ ತಾಲೂಕಿಗೆ ಸೇರಿಸುವುದು ಅಸಂವಿಧಾನವಾಗಿದೆ ಎಂದು ತೊಂಡೇಭಾವಿ ಕಾಂಗ್ರೇಸ್ ಮುಖಂಡರಾದ ಜೆ.ಕಾಂತರಾಜ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತೊಂಡೇಭಾವಿ ಗ್ರಾಮದಲ್ಲಿ ರಸ್ತೆ ತಡೆದು ಮಾತನಾಡಿದ ಪ್ರತಿಭಟನೆಕಾರರು ನೆನ್ನೆಯಷ್ಟೇ ಸರಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗರ್ತಹ ಅದರೆ ಅದಕ್ಕೆ ತೊಂಡೇಭಾವಿ ಭಾಗದ ಕೆಲವು ಗ್ರಾಮ ಪಂಚಾಯಿತಿಗಳನ್ನು ಸೇರಿಸಿರುವುದು ಸ್ಥಳೀಯರ ಅಸಮಾಧಾನವಿದೆ.

ಗೌರಿಬಿದನೂರು ತಾಲೂಕಿನಿಂದ ಇಲ್ಲಿಗೆ ಹೋಗಿಬರಲು ಬಸ್ ಸಂಪರ್ಕ ಸರಾಗವಿದ್ದು ಜೋತೆಗೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಹೋಗಿಬರಲು ಸುಲಭ ಮಾರ್ಗ ಇದಾಗಿದೆ ಅದರೆ ಕೆಲ ರಾಜಕೀಯ ವ್ಯಕ್ತಿಗಳು ಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ಭಾಗಕ್ಕೆ ಸೇರಿಸಿ ದ್ವೇಷ ರಾಜಕಾರಣ ಮಾಡಿದ್ದಾರೆ.ಕೂಡಲೇ ಘೋಷಣೆಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಟಕ್ಕೆ ಮುಂದಾಗಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್ ರೆಡ್ಡಿ ಮಾತನಾಡಿ ಅನಾಧಿ ಕಾಲದಿಂದಲೂ ಇಲ್ಲಿನ ಜನ ಗೌರಿಬಿದನೂರು ಪಟ್ಟಣಕ್ಕೆ ಅವಲಂಭಿತರಾಗಿದ್ದಾರೆ. ಜೊತೆಗೆ ಮಿನಿ ವಿಧಾನಸೌಧ ಸಹ ನಿರ್ಮಾಣವಾಗುತ್ತಿದೆ ಇದರಿಂದ ಇಲ್ಲಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಇದನ್ನು ಪರಿಗಣಿಸಿ ಈ ಅವೈಜ್ಞಾನಿಕವಾಗಿ ಘೋಷಣೆ ಮಾಡಿದ ತಾಲೂಕನ್ನು ಕೂಡಲೆ ಕೈಬಿಡದಿದ್ದರೆ ನವೆಂಬರ್ 5 ರಂದು ಉಗ್ರ ಹೋರಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿ ತಹಿಸೀಲ್ದಾರ್ ಹೆಚ್ ಶ್ರೀನಿವಾಸ್ ಗೆ ಮನವಿ ಪತ್ರವನ್ನು ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಬಿ ಪಿ ಕೃಷ್ಣಮೂರ್ತಿ,ರಫೀಕ್,ಕೆ ಎನ್ ಶಿವರೆಡ್ಡಿ,ಪಿ ಎನ್ ಶಿವಶಂಕರರೆಡ್ಡಿ,ವೆಂಕಟೇಶ್ ರೆಡ್ಡಿ ,ರಾಮಚಂದ್ರಪ್ಪ,ಶಂಕರರೆಡ್ಡಿ,ಭಾಸ್ಕರ್ ರೆಡ್ಡಿ , ಟಿವಿ ರಾಮಣ್ಣ,ನಾಗರಾಜು,ಕಿಟ್ಟಿ, ಶ್ರೀನಿವಾಸಗೌಡ, ಅಶ್ವತ್ಥನಾರಾಯಣರೆಡ್ಡಿ ,ಗ್ರಾಮಸ್ಥರು ಭಾಗವಹಿಸಿದ್ದರು.
Conclusion:ಬೈಟ್

ಜೆ ಕಾಂತ್ ರಾಜ್ ಕಾಂಗ್ರೆಸ್ ಮುಖಂಡ
ಕೃಷ್ಣ ಮೂರ್ತಿ
ಶ್ರೀಧರ್ ರೆಡ್ಡಿ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.