ETV Bharat / state

ಸಾವಿರ ಅಡಿ ಕೊರೆದರೂ ಸಿಗ್ತಿಲ್ಲ ನೀರು: ಜನ, ಜಾನುವಾರುಗಳಿಗೆ ತೊಂದರೆ!

ಭೀಕರ ಬರ ಎದುರಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

author img

By

Published : May 9, 2019, 12:40 AM IST

ನೀರಿಗಾಗಿ ಜಗಳವಾಡುತ್ತಿರುವ ಮಹಿಳೆಯರು, ಸಾಲು ಕೊಡಗಳನ್ನು ಇಟ್ಟುಕೊಂಡು ನೀರಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ಮಕ್ಕಳು

ಚಿಂತಾಮಣಿ: ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿಗಾಗಿ ಪ್ರತಿ ದಿನವೂ ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಮಳೆ ಕೊರತೆಯಿಂದಾಗಿ ತಾಲೂಕಿನ ಕೆರೆ, ಬಾವಿ ಬತ್ತಿ ಹೋಗಿವೆ. ಸಾವಿರಕ್ಕೂ ಅಧಿಕ ಅಡಿ ಕೊರೆದರು ನೀರು ಬರುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಪ್ಲೋರೈಡ್​ ಮಿಶ್ರಿತ ನೀರು ಬರುತ್ತಿದೆ. ಇಂತಹ ನೀರಿನ ಸೇವನೆಯಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶವಂತಪುರ ಗ್ರಾಮದ ಜನರು ಕುಡಿಯುವ ನೀರಿಗಾಗಿ 8ರಿಂದ 10 ಕಿ.ಮೀ ದೂರ ನಡೆಯಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಅಧಿಕಾರಿಗಳ ವರ್ತನೆಗೆ ಬೇಸತ್ತ ಸ್ಥಳೀಯರು ಪಿಡಿಒ ಹಾಗೂ ಅಧ್ಯಕ್ಷರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಚಿಂತಾಮಣಿ: ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿಗಾಗಿ ಪ್ರತಿ ದಿನವೂ ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಮಳೆ ಕೊರತೆಯಿಂದಾಗಿ ತಾಲೂಕಿನ ಕೆರೆ, ಬಾವಿ ಬತ್ತಿ ಹೋಗಿವೆ. ಸಾವಿರಕ್ಕೂ ಅಧಿಕ ಅಡಿ ಕೊರೆದರು ನೀರು ಬರುತ್ತಿಲ್ಲ. ಒಂದು ವೇಳೆ ನೀರು ಸಿಕ್ಕರೂ ಪ್ಲೋರೈಡ್​ ಮಿಶ್ರಿತ ನೀರು ಬರುತ್ತಿದೆ. ಇಂತಹ ನೀರಿನ ಸೇವನೆಯಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರು

ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶವಂತಪುರ ಗ್ರಾಮದ ಜನರು ಕುಡಿಯುವ ನೀರಿಗಾಗಿ 8ರಿಂದ 10 ಕಿ.ಮೀ ದೂರ ನಡೆಯಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಅಧಿಕಾರಿಗಳ ವರ್ತನೆಗೆ ಬೇಸತ್ತ ಸ್ಥಳೀಯರು ಪಿಡಿಒ ಹಾಗೂ ಅಧ್ಯಕ್ಷರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

Intro:ಚಿಂತಾಮಣಿ ತಾಲೂಕಿನಲ್ಲಿ ಭೀಕರ ಬರಗಾಲದಿಂದ ತತ್ತರಿಸಿರುವ ಜನರು ಮತ್ತು ಜಾನುವಾರಗಳು ಕುಡಿಯಲು ನೀರಿಲ್ಲದೆ ತತ್ತರಿಸಿ ಹೋಗಿವೆ.
Body:ವಾಣಿಜ್ಯ ನಗರಿ ಎಂಬ ಹೆಸರಿಗೆ ಪ್ರಸಿದ್ದವಾದ ಚಿಂತಾಮಣಿ ತಾಲ್ಲೂಕಿನಲ್ಲಿ ನೀರಿನ ಬರ ಅತಿ ಹೆಚ್ಚಾಗಿದ್ದು. ನೀರಿಗಾಗಿ ಗ್ರಾಮಗಳಲ್ಲಿ ಮಹಿಳೆಯರ ಮದ್ಯೆ ನೀರು ಹಿಡಿಯುವ ಕಡೆ ಮಿನಿ ಸಮರಗಳೇ ನಡೆದು ಹೋಗುತ್ತಿವೆ.
ತಾಲ್ಲೂಕಿನಲ್ಲಿ ವರುಣನ ಕೃಪೆ ಇಲ್ಲದ ಕಾರಣ ಕೆರೆ ಕುಂಟೆಗಳು ಸೇರಿದಂತೆ ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ‌‌. ಈ ತಾಲ್ಲೂಕಿನಲ್ಲಿ ಸಾವಿರದ ಐನೂರು ಅಡಿ ಕೊಳವೆ ಬಾವಿ ತೋಡಿದರೂ ಸಹಾ ನೀರು ಬೀಳುವ ನಂಬಿಕೆ ಇಲ್ಲದಂತಾಗಿದೆ.

ನೀರು ಬಿದ್ದರೂ ಕುಡಿಯಲು ಯೋಗ್ಯ ವಲ್ಲದ ಫ್ಲೋರೈಡ್ ಮಿಶ್ರಿತ ವಿಷಪೂರಿತ ನೀರು ಸಿಗುತ್ತಿದೆ.ವಿಧಿ ಇಲ್ಲದೆ ಈ ನೀರು ಕುಡಿದು ಅನೇಕ ಗ್ರಾಮಗಳ ಜನರು ಆಸ್ಪತ್ರೆಗೆ ಸೇರಿದ್ದಾರೆ.

ಈ ದುಸ್ಥಿತಿಗೆ ಪುಷ್ಟಿ ನೀಡುವಂತೆ
ಚಿಂತಾಮಣಿ ತಾಲೂಕಿನ ನ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಶವಂತಪುರ ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಗ್ರಾಮದ ಜನರಿಗೆ ಕುಡಿಯುವ ಯೋಗ್ಯ ನೀರಿಗಾಗಿ ಎಂಟರಿಂದ ಹತ್ತು ಕಿಲೋಮೀಟರ್ ದೂರ ನಡೆದುಕೊಂಡು ಹೋಗುವಂತಾಗಿದೆ.

ಈ ಗ್ರಾಮದಲ್ಲಿ ಪಂಚಾಯತಿ ಕಡೆಯಿಂದ ಸರ್ಕಾರಿ ಕೊಳವೆ ಬಾವಿ ಕೊರೆಸಿದರೂ ಸಹಾ ಪ್ರಯೋಜನ ವಾಗದಂತಾಗಿದೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾವಿಯ ನೀರನ್ನು ಗ್ರಾಮದ ಜನತೆಗೆ ಸಮರ್ಪಕವಾಗಿ ಒದಗಿಸಿಕೊಡುವುದರಲ್ಲಿ ವಿಫಲರಾಗಿದ್ದಾರೆ.

ಈ ಕೊಳವೆ ಬಾವಿಯಿಂದ ಬರುವ ಅಲ್ಪಸ್ವಲ್ಪ ಫ್ಲೋರೈಡ್ ನೀರನ್ನೇ ಈ ಊರಿನ ಗ್ರಾಮಸ್ಥರು ಕುಡಿದು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಊರಿನ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪಂಚಾಯಿತಿ ಪಿಡಿಒ ಹಾಗೂ ಅಧ್ಯಕ್ಷರು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಬೇಕಿತ್ತು.ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಿಗಳಿಗೆ ಸರಿಯಾಗಿ ನೀರನ್ನು ಒದಗಿಸದೇ ಬೇಜವಾಬ್ದಾರಿತನ ತೋರುತ್ತಿದ್ದಾರೆ.

ಅಧಿಕಾರಿಗಳ ವರ್ತನೆಗೆ ಬೇಸತ್ತ ಸ್ಥಳೀಯರು ಪಿಡಿಒ ಹಾಗೂ ಅಧ್ಯಕ್ಷರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಲಬೇಕಿದೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.