ETV Bharat / state

ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನ

author img

By

Published : Jul 29, 2022, 10:10 AM IST

ಚಿಕ್ಕಬಳ್ಳಾಪುರ ತಾಲೂಕಿನ ಹನುಮಂತಪುರ ಗ್ರಾಮದ ಬೆಟ್ಟದಲ್ಲಿರುವ ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಒಡೆದಿರುವ ಕಳ್ಳರು ಹರಕೆ ಹಣ ದೋಚಿದ್ದಾರೆ.

jaalari-yoga-narasimhaswami-temple-theft
ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನ

ಚಿಕ್ಕಬಳ್ಳಾಪುರ: ತಾಲೂಕಿನ ಹನುಮಂತಪುರ ಗ್ರಾಮದ ಬಳಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ಈ ಹಿಂದೆ ಇದೇ ದೇಗುಲದಲ್ಲಿ ನಾಲ್ಕು ಬಾರಿ ಕಳ್ಳತನವಾಗಿತ್ತು. ಇದೀಗ 5ನೇ ಬಾರಿ ಕಳ್ಳರು ಹುಂಡಿ ಒಡೆದು ಹರಕೆ ಹಣ ದೋಚಿದ್ದಾರೆ.

ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನ ಪ್ರಸಿದ್ದವಾಗಿದ್ದು, ಅಕ್ಕಪಕ್ಕದ ಊರಿನ ಸಾವಿರಾರು ಭಕ್ತರು ಭೇಟಿ ನೀಡಿ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇದನ್ನು ಗಮನಸಿರುವ ಕಳ್ಳರು ಕಳೆದ ರಾತ್ರಿ ದೇಗುಲಕ್ಕೆ ನುಗ್ಗಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಕಳ್ಳತನವಾಗಿದೆ. ಸಿಸಿಟಿವಿ ಅಳವಡಿಸುವಂತೆ ಮುಜರಾಯಿ ಇಲಾಖೆ ಮತ್ತು ತಹಶೀಲ್ದಾರ್‌ಗೆ ಅರ್ಚಕರು ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ತಾಲೂಕಿನ ಹನುಮಂತಪುರ ಗ್ರಾಮದ ಬಳಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ಈ ಹಿಂದೆ ಇದೇ ದೇಗುಲದಲ್ಲಿ ನಾಲ್ಕು ಬಾರಿ ಕಳ್ಳತನವಾಗಿತ್ತು. ಇದೀಗ 5ನೇ ಬಾರಿ ಕಳ್ಳರು ಹುಂಡಿ ಒಡೆದು ಹರಕೆ ಹಣ ದೋಚಿದ್ದಾರೆ.

ಜಾಲಾರಿ ಯೋಗ ನರಸಿಂಹಸ್ವಾಮಿ ದೇವಸ್ಥಾನ ಪ್ರಸಿದ್ದವಾಗಿದ್ದು, ಅಕ್ಕಪಕ್ಕದ ಊರಿನ ಸಾವಿರಾರು ಭಕ್ತರು ಭೇಟಿ ನೀಡಿ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇದನ್ನು ಗಮನಸಿರುವ ಕಳ್ಳರು ಕಳೆದ ರಾತ್ರಿ ದೇಗುಲಕ್ಕೆ ನುಗ್ಗಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಕಳ್ಳತನವಾಗಿದೆ. ಸಿಸಿಟಿವಿ ಅಳವಡಿಸುವಂತೆ ಮುಜರಾಯಿ ಇಲಾಖೆ ಮತ್ತು ತಹಶೀಲ್ದಾರ್‌ಗೆ ಅರ್ಚಕರು ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯದ ಪ್ರತಿ ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.