ಚಿಕ್ಕಬಳ್ಳಾಪುರ : ಮಾಜಿ ಸಿಎಂ ಕುಮಾರಸ್ವಾಮಿ ಅವಕಾಶವಾದಿ, ಡಿ ಕೆ ಸುರೇಶರನ್ನ ಕೇಡಿ ಎಂದು ಕರೆಯಲು ಸಾಧ್ಯವಾಗುತ್ತಾ? ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಕಿಚಾಯಿಸಿದ್ದಾರೆ.
ನಂದಿಬೆಟ್ಟದಲ್ಲಿ ಈ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಅವರ ನಿಲುವೇ ಗೊಂದಲ. ಬೇಕಾದಾಗ ಕೃಷ್ಣಾ, ಕಾವೇರಿಗೆ ಹೋಗಿ ಯಡಿಯೂರಪ್ಪ ಹತ್ರ ತಮ್ಮ ಕೆಲಸ ಮಾಡಿಸಿಕೊಳ್ತಾರೆ.
ತಮ್ಮ ಕೆಲಸ ಮಾಡಿಸಿಕೊಂಡು, ಯಡಿಯೂರಪ್ಪರನ್ನು ದೂಷಣೆ ಮಾಡುತ್ತಾರೆ. ಅದಕ್ಕೆ ನಾನು ಹೇಳೋದು, ಕುಮಾರಸ್ವಾಮಿಯನ್ನು ಯಾವುದೇ ಕಾರಣಕ್ಕೂ ಹತ್ರ ಬಿಟ್ಕೋಬೇಡಿ ಅಂತಾ. ಹೆಚ್ಡಿಕೆ ಒಬ್ಬ ಅವಕಾಶವಾದಿ. ಅವರನ್ನು ನಂಬಬೇಡಿ ಅಂತಾ ಬಹಳಷ್ಟು ಬಾರಿ ಹೇಳಿದ್ದೇನೆ ಎಂದರು.
ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ನಾನು ಬಹಳಷ್ಟು ವಿರೋಧಗಳನ್ನು ಎದುರಿಸುತ್ತಿದ್ದೀನಿ. ಡಿಕೆ ಬ್ರದರ್ಸ್ ರಾಜಕೀಯ ವಿರೋಧಿ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಾರೆ. ಈಗ ನಾನು ಡಿ ಕೆ ಸುರೇಶ್ರನ್ನು ಕೇಡಿ ಸುರೇಶ್ ಅಂತಾ ಕರೆಯೋದಕ್ಕೆ ಆಗುತ್ತಾ?. ಡಿಕೆಶಿ ಬ್ರದರ್ಸ್ ಭ್ರಮರನಿರಸರಾಗಿದ್ದಾರೆ ಎಂದು ತಿಳಿಸಿದರು.
ಓದಿ: ಇತ್ತ ಜಲದಿಗ್ಬಂಧನ ಅತ್ತ ಹೆರಿಗೆ ನೋವು : ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದ ಯುವಕರು