ETV Bharat / state

ಚಾಮರಾಜನಗರ: ಅರಣ್ಯಾಧಿಕಾರಿ ಜೀಪನ್ನು ತುಳಿದು, ಪಲ್ಟಿ ಹೊಡೆಸಿದ ಕಾಡಾನೆ..ಸಿಬ್ಬಂದಿ ಪಾರು - ಚಾಮಾರಾಜನಗರದಲ್ಲಿ ಕಾಡಾನೆ ಉಪಟಳ

ಮಾನವ-ವನ್ಯಮೃಗ ಸಂಘರ್ಷ ಇಂದು ನಿನ್ನೆಯದಲ್ಲ. ಆಗಾಗ ಈ ಸಂಘರ್ಷ ನಡೆಯುತ್ತಲೇ ಇರುತ್ತದೆ. ಚಾಮರಾಜನಗರಲ್ಲೊಂದು ಇಂಥದ್ದೇ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್‌ ಅರಣ್ಯಾಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ..

wild Elephant crushed forest officers jeep in  chamarajanagar
ಅರಣ್ಯಾಧಿಕಾರಿ ಜೀಪನ್ನು ತುಳಿದು, ಪಲ್ಟಿ ಹೊಡೆಸಿದ ಕಾಡಾನೆ: ಸಿಬ್ಬಂದಿ ಪಾರು
author img

By

Published : Jan 7, 2022, 11:53 AM IST

Updated : Jan 7, 2022, 7:00 PM IST

ಚಾಮರಾಜನಗರ : ಕಾಡಾನೆಯೊಂದರ ದಾಳಿಯಿಂದಾಗಿ ಅರಣ್ಯಾಧಿಕಾರಿಯ ವಾಹನ ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರ-ಕುರುಬರ ಹುಂಡಿ ಸಮೀಪ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಬಂದ ಅರಣ್ಯ ಸಿಬ್ಬಂದಿಯ ಜೀಪಿನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಜೀಪಿನ ಮುಂಭಾಗ ತುಳಿದು, ವಾಹನವನ್ನು ಪಲ್ಟಿ ಹೊಡೆಸಿ ರೋಷಾವೇಷ ತೋರಿದೆ.

wild Elephant crushed forest officers jeep in  chamarajanagar
ಹಾನಿಗೀಡಾದ ಅರಣ್ಯಾಧಿಕಾರಿ ಜೀಪ್​

ಸದ್ಯ ಜೀಪಿನಲ್ಲಿ ಮೂವರು ಸಿಬ್ಬಂದಿ ಇದ್ದರೆಂದು ತಿಳಿದು ಬಂದಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು

ಚಾಮರಾಜನಗರ : ಕಾಡಾನೆಯೊಂದರ ದಾಳಿಯಿಂದಾಗಿ ಅರಣ್ಯಾಧಿಕಾರಿಯ ವಾಹನ ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರ-ಕುರುಬರ ಹುಂಡಿ ಸಮೀಪ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಬಂದ ಅರಣ್ಯ ಸಿಬ್ಬಂದಿಯ ಜೀಪಿನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಜೀಪಿನ ಮುಂಭಾಗ ತುಳಿದು, ವಾಹನವನ್ನು ಪಲ್ಟಿ ಹೊಡೆಸಿ ರೋಷಾವೇಷ ತೋರಿದೆ.

wild Elephant crushed forest officers jeep in  chamarajanagar
ಹಾನಿಗೀಡಾದ ಅರಣ್ಯಾಧಿಕಾರಿ ಜೀಪ್​

ಸದ್ಯ ಜೀಪಿನಲ್ಲಿ ಮೂವರು ಸಿಬ್ಬಂದಿ ಇದ್ದರೆಂದು ತಿಳಿದು ಬಂದಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು

Last Updated : Jan 7, 2022, 7:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.