ETV Bharat / state

ಪ್ರವಾಸಿಗರು ಬರುತ್ತಿರುವುದಕ್ಕೆ ವಿರೋಧ: ಸೋಲಿಗರಿಂದ ರಸ್ತೆ ತಡೆ

author img

By

Published : Jul 6, 2020, 3:14 PM IST

ಕೆಎಸ್​ಆರ್​ಟಿಸಿ ಬಸ್​ ಮೂಲಕ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಭೀತಿಗೊಳಗಾಗಿರುವ ಸೋಲಿಗರು ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಕೇವಲ‌ ಸ್ಥಳೀಯರನ್ನು ಮಾತ್ರ ಹತ್ತಿಸಬೇಕು ಎಂದು ಒತ್ತಾಯಿಸಿದ್ದಾರೆ.

Road block by Soliga community
ಕೊರೊನಾ ಭೀತಿ: ಪ್ರವಾಸಿಗರು ಬರುತ್ತಿರುವುದಕ್ಕೆ ಸೋಲಿಗರಿಂದ ರಸ್ತೆ ತಡೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಆತಂಕಗೊಂಡ ಸೋಲಿಗರು ಹಾಗೂ ಸ್ಥಳೀಯರು ಕೆಎಸ್​ಆರ್​ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಭೀತಿ: ಪ್ರವಾಸಿಗರ ಆಗಮನಕ್ಕೆ ವಿರೋಧ: ಸೋಲಿಗರಿಂದ ರಸ್ತೆ ತಡೆ


ದೂರದ ಊರುಗಳಿಂದ ಕೆಎಸ್​ಆರ್​ಟಿಸಿ ಬಸ್​ ಮೂಲಕ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಭೀತಿಗೊಳಗಾಗಿರುವ ಸೋಲಿಗರು ಕೆಎಸ್​ಆರ್​ಟಿಸಿ ಬಸ್ ನಲ್ಲಿ ಕೇವಲ‌ ಸ್ಥಳೀಯರನ್ನು ಮಾತ್ರ ಹತ್ತಿಸಬೇಕು. ಬೇರೆಯವರನ್ನು ಯಾವುದೇ ಕಾರಣಕ್ಕೂ ಹತ್ತಿಸಕೂಡದು ಎಂದು ರಸ್ತೆ ತಡೆದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಪ್ರವಾಸಿತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ, ಧಾರ್ಮಿಕ ಕೇಂದ್ರಗಳಿಗೆ ಅವಕಾಶ ನೀಡಿತ್ತು. ಆದರೆ, ಬೆಟ್ಟಕ್ಕೆ ಪ್ರವಾಸಿಗರು ಕೆಎಸ್​ಆರ್​ಟಿಸಿ ಬಸ್​ ಮೂಲಕ ಬರುತ್ತಿದ್ದಾರೆ. ಇದರಿಂದ ಸೋಲಿಗರು ಆತಂಕಗೊಂಡಿದ್ದು, ಪ್ರವಾಸಿಗರೊಟ್ಟಿಗೆ ಭಕ್ತರನ್ನೂ ಬೆಟ್ಟಕ್ಕೆ ನಿರ್ಬಂಧಿಸುವಂತೆ ಆಗ್ರಹಿಸಿದ್ದಾರೆ.

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಆತಂಕಗೊಂಡ ಸೋಲಿಗರು ಹಾಗೂ ಸ್ಥಳೀಯರು ಕೆಎಸ್​ಆರ್​ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಭೀತಿ: ಪ್ರವಾಸಿಗರ ಆಗಮನಕ್ಕೆ ವಿರೋಧ: ಸೋಲಿಗರಿಂದ ರಸ್ತೆ ತಡೆ


ದೂರದ ಊರುಗಳಿಂದ ಕೆಎಸ್​ಆರ್​ಟಿಸಿ ಬಸ್​ ಮೂಲಕ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಭೀತಿಗೊಳಗಾಗಿರುವ ಸೋಲಿಗರು ಕೆಎಸ್​ಆರ್​ಟಿಸಿ ಬಸ್ ನಲ್ಲಿ ಕೇವಲ‌ ಸ್ಥಳೀಯರನ್ನು ಮಾತ್ರ ಹತ್ತಿಸಬೇಕು. ಬೇರೆಯವರನ್ನು ಯಾವುದೇ ಕಾರಣಕ್ಕೂ ಹತ್ತಿಸಕೂಡದು ಎಂದು ರಸ್ತೆ ತಡೆದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಪ್ರವಾಸಿತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ, ಧಾರ್ಮಿಕ ಕೇಂದ್ರಗಳಿಗೆ ಅವಕಾಶ ನೀಡಿತ್ತು. ಆದರೆ, ಬೆಟ್ಟಕ್ಕೆ ಪ್ರವಾಸಿಗರು ಕೆಎಸ್​ಆರ್​ಟಿಸಿ ಬಸ್​ ಮೂಲಕ ಬರುತ್ತಿದ್ದಾರೆ. ಇದರಿಂದ ಸೋಲಿಗರು ಆತಂಕಗೊಂಡಿದ್ದು, ಪ್ರವಾಸಿಗರೊಟ್ಟಿಗೆ ಭಕ್ತರನ್ನೂ ಬೆಟ್ಟಕ್ಕೆ ನಿರ್ಬಂಧಿಸುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.