ETV Bharat / state

ಮಹದೇಶ್ವರ ಬೆಟ್ಟ-ತಮಿಳುನಾಡು ರಸ್ತೆಯಲ್ಲಿ ಗುಡ್ಡ ಕುಸಿತ: ಸಂಚಾರಕ್ಕೆ ತಡೆ - ಚಾಮರಾಜನಗರ ಮಳೆ ಸುದ್ದಿ

ಸುರಿಯುತ್ತಿವ ಭಾರೀ ಮಳೆಗೆ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಹಾಗೂ ಗುಡ್ಡವೊಂದು ಕುಸಿದು  ವಾಹನಗಳು ಸಂಚಾರಕ್ಕೆ ತಡೆಯುಂಟಾಗಿದ್ದು,  ಪೊಲೀಸರು ಜೆಸಿಬಿ ಮೂಲಕ ಮಣ್ಣಿನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಳೆ ಅವಾಂತರ: ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ
author img

By

Published : Oct 23, 2019, 3:26 PM IST

ಚಾಮರಾಜನಗರ: ಸುರಿಯುತ್ತಿವ ಭಾರೀ ಮಳೆಗೆ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಹಾಗೂ ಗುಡ್ಡವೊಂದು ಕುಸಿದು ವಾಹನಗಳು ಸಂಚಾರಕ್ಕೆ ತಡೆಯುಂಟಾಗಿದ್ದು, ಪೊಲೀಸರು ಜೆಸಿಬಿ ಮೂಲಕ ಮಣ್ಣಿನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಳೆ ಅವಾಂತರ: ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಇನ್ನು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿದ್ದು, ವೈದ್ಯ ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವಂತಾಗಿದೆ. ಇನ್ನಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಆಸ್ಪತ್ರೆಯ ಅನಾರೋಗ್ಯ ಸರಿಪಡಿಸಬೇಕಿದೆ ಎಂದು ಗ್ರಾಪಂ ಸದಸ್ಯ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.

Chamrajnagar
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ನೀರು

ಹನೂರು ತಾಲೂಕಿನ ಮಾರ್ಟಳ್ಳಿಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತ ವಿರುದ್ಧ ಕಿಡಿಕಾರಿದ್ದಾರೆ.

Chamrajnagar
ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯರು

ಚಾಮರಾಜನಗರ: ಸುರಿಯುತ್ತಿವ ಭಾರೀ ಮಳೆಗೆ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಹಾಗೂ ಗುಡ್ಡವೊಂದು ಕುಸಿದು ವಾಹನಗಳು ಸಂಚಾರಕ್ಕೆ ತಡೆಯುಂಟಾಗಿದ್ದು, ಪೊಲೀಸರು ಜೆಸಿಬಿ ಮೂಲಕ ಮಣ್ಣಿನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಳೆ ಅವಾಂತರ: ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ

ಇನ್ನು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿದ್ದು, ವೈದ್ಯ ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವಂತಾಗಿದೆ. ಇನ್ನಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಆಸ್ಪತ್ರೆಯ ಅನಾರೋಗ್ಯ ಸರಿಪಡಿಸಬೇಕಿದೆ ಎಂದು ಗ್ರಾಪಂ ಸದಸ್ಯ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.

Chamrajnagar
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ನೀರು

ಹನೂರು ತಾಲೂಕಿನ ಮಾರ್ಟಳ್ಳಿಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತ ವಿರುದ್ಧ ಕಿಡಿಕಾರಿದ್ದಾರೆ.

Chamrajnagar
ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯರು
Intro:ಮಹದೇಶ್ವರ ಬೆಟ್ಟದ ರಸ್ತೆ ಕುಸಿತ, ಆಸ್ಪತ್ರೆಗೆ ನುಗ್ಗಿದ ನೀರು, ಹಾದಿಯಲ್ಲೇ ಭತ್ತ ನಾಟಿ.. ಇದು ಚಾಮರಾಜನಗರ ಪರಿಸ್ಥಿತಿ!


ಚಾಮರಾಜನಗರ: ಮಳೆ ಇಂದು ಕೊಂಚ ಬಿಡುವು ಕೊಟ್ಟಿದ್ದರೂ ಸತತ ಎರಡು ದಿನ ಸುರಿದ ಭಾರೀ ಮಳೆಗೆ ಇಂದೂ ಕೂಡ ಜಿಲ್ಲೆಯ ಜನರು ಪ್ರಯಾಸ ಪಡುವಂತಾಗಿದೆ.

Body:ಸೋಮವಾರ ಸುರಿದ ಭಾರೀ ಮಳೆಗೆ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಹಾಗೂ ಗುಡ್ಡವೊಂದು ಕುಸಿದು ಭಾರೀ ವಾಹನಗಳು ಸಂಚಾರಕ್ಕೆ ತಡೆ ಬಿದ್ದಿತ್ತು. ಬಳಿಕ, ಮಂಗಳವಾರ ಪೊಲೀಸರು ಜೆಸಿಬಿ ಮೂಲಕ ಮಣ್ಣಿನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ವಾಹನ ಸವಾರರಲ್ಲಿ ಭೀತಿಯೇನು ಕಡಿಮೆಯಾಗಿಲ್ಲ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿ ವೈದ್ಯ ಸಿಬ್ಬಂದಿ ಹಾಗೂ ರೋಗಿಗಳು ಇಂದು ಪಡಿಪಾಟಲನ್ನು ಪಡುತ್ತಿದ್ದು ಆಸ್ಪತ್ರೆ ಆವರಣದ ನೀರು ಹೊರ ಹೋಗಲು ಸ್ಥಳವೇ ಇಲ್ಲದೇ ಪಜೀತಿ ಉಂಟಾಗಿದೆ ಇನ್ನಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಆಸ್ಪತ್ರೆಯ ಅನಾರೋಗ್ಯ ಸರಿಪಡಿಸಬೇಕಿದೆ ಎಂದು ಗ್ರಾಪಂ ಸದಸ್ಯ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.

ರಸ್ತೆಯಲ್ಲೇ ನಾಟಿ: ಹನೂರು ತಾಲೂಕಿನ ಮಾರ್ಟಳ್ಳಿಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತ ವಿರುದ್ಧ ಕಿಡಿಕಾರಿದರು.

ಬೈಟ್- ರಾಜೇಶ್ವರಿ, ಮಾರ್ಟಳ್ಳಿ

ಉಳಿದಂತೆ ಹೊಸಮೋಳೆ, ಚೆನ್ನಿಕಟ್ಟೆಮೋಳೆ, ಬೊಮ್ಮಲಾಪುರ ಗ್ರಾಮದ ರಸ್ತೆಗಳು ತೀರಾ ಹದೆಗಟ್ಟಿದ್ದು ರೈತರು, ವಿದ್ಯಾರ್ಥಿಗಳು ಹರಸಾಹಸಪಟ್ಟು ಸಂಚರಿಸುವಂತಾಗಿದೆ.


Conclusion:ಮಳೆ ನಿಂತರೂ ಅದರ ಪರಿಣಾಮ ಗಡಿಜಿಲ್ಲೆಯಲ್ಲಿ ಮುಂದುವರೆದಿದ್ದು ಚಿತ್ತ ಮಳೆ ಜನರ ಚಿತ್ತವನ್ನು ಗಲಿಬಿಲಿಗೊಳಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.