ETV Bharat / state

ಫಲ-ಪುಷ್ಪ ಪ್ರದರ್ಶನಕ್ಕೆ ಸಿದ್ಧತೆ.. ಚಂದ್ರಯಾನ, ಅಂಬೇಡ್ಕರ್‌ ಮುಖ್ಯ ಆಕರ್ಷಣೆ! - ಚಾಮರಾಜನಗರದಲ್ಲಿ ಫಲ-ಪುಷ್ಪ ಪ್ರದರ್ಶನಕ್ಕೆ ಸಿದ್ಧತೆ

ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆಸಲಾಗುತ್ತಿದೆ.

flower show
ಫಲ-ಪುಷ್ಪ ಪ್ರದರ್ಶನ
author img

By

Published : Jan 25, 2020, 8:01 PM IST

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮೂರು ದಿನ ನಡೆಯುವ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಫಲ-ಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ..

ಹೂವಿನಲ್ಲಿ ಅರಳಿದ ಇಸ್ರೋ ಚಂದ್ರಯಾನ, ಮರಳಿನಲ್ಲಿ ಅರಳಿದ ಡಾ. ಬಿ ಆರ್ ಅಂಬೇಡ್ಕರ್, ಕಲ್ಲಂಗಡಿ ಹಣ್ಣುಗಳಲ್ಲಿ ಅರಳಿದ ಭಗತ್ ಸಿಂಗ್, ಪೇಜಾವರಶ್ರೀ, ಕದ್ರಿ ಗೋಪಾಲನಾಥ್, ಸಚಿವ ಸುರೇಶ ಕುಮಾರ್ ಸೇರಿ ಇನ್ನಿತರ ಚಿತ್ರಗಳು ಅದ್ಭುತವಾಗಿ ಮೂಡಿ ಬಂದಿವೆ.

ಕಳೆದ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಉದ್ಘಾಟನೆಯಾದ ಬಳಿಕ ನಿಂತಿದ್ದ ಕೃತಕ ಜಲಾಪತ ಇಂದು ಚಾಲೂ ಆಗಿದ್ದು 2 ಸೆಲ್ಫಿ ಸ್ಟಾಂಡ್‌ಗಳನ್ನೂ ಈ ಬಾರಿ ನಿರ್ಮಿಸಲಾಗಿದೆ. ಇದರೊಟ್ಟಿಗೆ ಆರೋಗ್ಯ, ಶಿಕ್ಷಣ, ಕೃಷಿ, ಮೀನುಗಾರಿಕೆ ಇಲಾಖೆಯು ಮಳಿಗೆಗಳನ್ನು ತೆರೆದಿದ್ದು ಜನರಿಗೆ ಸಲಹೆ ಸೂಚನೆಗಳನ್ನು ನೀಡಲಿದೆ.

ಇದರೊಟ್ಟಿಗೆ ಡಾ. ಬಿ ಆರ್‌ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವವೂ ಭಾನುವಾರ ನಡೆಯಲಿದೆ. ಈಗಾಗಲೇ ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿ ನಡೆಸಿದೆ.

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮೂರು ದಿನ ನಡೆಯುವ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಫಲ-ಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ..

ಹೂವಿನಲ್ಲಿ ಅರಳಿದ ಇಸ್ರೋ ಚಂದ್ರಯಾನ, ಮರಳಿನಲ್ಲಿ ಅರಳಿದ ಡಾ. ಬಿ ಆರ್ ಅಂಬೇಡ್ಕರ್, ಕಲ್ಲಂಗಡಿ ಹಣ್ಣುಗಳಲ್ಲಿ ಅರಳಿದ ಭಗತ್ ಸಿಂಗ್, ಪೇಜಾವರಶ್ರೀ, ಕದ್ರಿ ಗೋಪಾಲನಾಥ್, ಸಚಿವ ಸುರೇಶ ಕುಮಾರ್ ಸೇರಿ ಇನ್ನಿತರ ಚಿತ್ರಗಳು ಅದ್ಭುತವಾಗಿ ಮೂಡಿ ಬಂದಿವೆ.

ಕಳೆದ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಉದ್ಘಾಟನೆಯಾದ ಬಳಿಕ ನಿಂತಿದ್ದ ಕೃತಕ ಜಲಾಪತ ಇಂದು ಚಾಲೂ ಆಗಿದ್ದು 2 ಸೆಲ್ಫಿ ಸ್ಟಾಂಡ್‌ಗಳನ್ನೂ ಈ ಬಾರಿ ನಿರ್ಮಿಸಲಾಗಿದೆ. ಇದರೊಟ್ಟಿಗೆ ಆರೋಗ್ಯ, ಶಿಕ್ಷಣ, ಕೃಷಿ, ಮೀನುಗಾರಿಕೆ ಇಲಾಖೆಯು ಮಳಿಗೆಗಳನ್ನು ತೆರೆದಿದ್ದು ಜನರಿಗೆ ಸಲಹೆ ಸೂಚನೆಗಳನ್ನು ನೀಡಲಿದೆ.

ಇದರೊಟ್ಟಿಗೆ ಡಾ. ಬಿ ಆರ್‌ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವವೂ ಭಾನುವಾರ ನಡೆಯಲಿದೆ. ಈಗಾಗಲೇ ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿ ನಡೆಸಿದೆ.

Intro:ಗಡಿಜಿಲ್ಲೆಯ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ... ಚಂದ್ರಯಾನ, ಅಂಬೇಡ್ಕರ್ ಈ ಬಾರಿ ಆಕರ್ಷಣೆ!

ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮೂರು ದಿನ ನಡೆಯುವ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದ್ದು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಲಿದ್ದಾರೆ.

Body:ಹೂವಿನಲ್ಲಿ ಅರಳಿದ ಇಸ್ರೋ ಚಂದ್ರಯಾನ, ಮರಳಿನಲ್ಲಿ ಅರಳಿದ ಡಾ.ಬಿ.ಆರ್.ಅಂಬೇಡ್ಕರ್, ಕಲ್ಲಂಗಡಿ ಹಣ್ಣುಗಳಲ್ಲಿ ಅರಳಿದ ಭಗತ್ ಸಿಂಗ್, ಪೇಜಾವರಶ್ರೀ, ಕದ್ರಿ ಗೋಪಾಲನಾಥ್, ಸಚಿವ ಸುರೇಶಕುಮಾರ್ ಸೇರಿದಂತೆ ಇನ್ನಿತರ ಚಿತ್ರಗಳು ಅದ್ಭುತವಾಗಿ ಮೂಡಿಬಂದಿದೆ.

ಕಳೆದ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಉದ್ಘಾಟನೆಯಾಗಿ ಬಳಿಕ ನಿಂತಿದ್ದ ಕೃತಕ ಜಲಾಪತ ಇಂದು ಚಾಲೂ ಆಗಿದ್ದು 2 ಸೆಲ್ಫಿ ಸ್ಟಾಂಡ್ ಗಳನ್ನೂ ಈ ಬಾರಿ ನಿರ್ಮಿಸಲಾಗಿದೆ. ಇದರೊಟ್ಟಿಗೆ , ಆರೋಗ್ಯ,ಶಿಕ್ಷಣ, ಕೃಷಿ, ಮೀನುಗಾರಿಕೆ ಇಲಾಖೆಯು ಮಳಿಗೆಗಳನ್ನು ತೆರೆದಿದ್ದು ಜನರಿಗೆ ಸಲಹೆ ಸೂಚನೆಗಳನ್ನು ನೀಡಲಿದೆ.

Conclusion:ಇದರೊಟ್ಟಿಗೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವವೂ ಭಾನುವಾರ ನಡೆಯಲಿದ್ದು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.