ಕೊಳ್ಖೇಗಾಲ: ತಾಲೂಕಿನ ನಗರದ ಭೀಮನಗರದ ದಿಡ್ಡದಕೇರಿ ಬಡಾವಣೆಯ ನವೀನ್ ಎಂಬುವರ ಮನೆಯಲ್ಲಿ ಚಿಪ್ಪು ಹಂದಿ ಪ್ರತ್ಯಕ್ಷವಾಗಿದೆ.
ನವೀನ್ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಕೊಠಡಿಯ ಮೂಲೆಯಲ್ಲಿ ಅವಿತು ಕುಳಿತಿದ್ದ ಚಿಂಪು ಹಂದಿಯನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಈ ಬಗ್ಗೆ ಉರಗ ತಜ್ಞ ಸ್ನೇಕ್ ರಘು ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಸ್ನೇಕ್ ರಘು ಚಿಂಪು ಹಂದಿಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಆರ್ಟಿ ಅರಣ್ಯ ವ್ಯಾಪ್ತಿಯ ಗುಂಡಾಲ್ ಸಮೀಪದ ಕಾಡಿಗೆ ಚಿಪ್ಪುಹಂದಿಯನ್ನು ಬಿಡಲಾಗಿದೆ.