ETV Bharat / state

ರಸ್ತೆಗುಂಡಿ ಮುಚ್ಚದ ಅಧಿಕಾರಿಗಳು: ಈಟಿವಿ ಭಾರತ ವರದಿ ನಿಜವಾಯ್ತು- ಸಂಸದರ ಗಡುವು ಸುಳ್ಳಾಯ್ತು! - latest chamrajnagara road problem news

ಕಾಮಗಾರಿಯ ಆಮೆಗತಿ ಕಾರ್ಯವನ್ನು ವೀಕ್ಷಿಸಿದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕಾಮಗಾರಿ ಪ್ರಾರಂಭವಾಗಿಲ್ಲ.

ರಸ್ತೆಗುಂಡಿ ಮುಚ್ಚದ ಅಧಿಕಾರಿಗಳು : ಈಟಿವಿ ಭಾರತ ವರದಿ ನಿಜವಾಯ್ತು-ಸಂಸದರ ಗಡುವು ಸುಳ್ಳಾಯ್ತು!
author img

By

Published : Nov 24, 2019, 10:11 AM IST

ಚಾಮರಾಜನಗರ: ಕಳೆದ 25ರಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳೀಪುರ, ಕೋಳಿಪಾಳ್ಯ-ಪುಣಜನೂರು ಮಾರ್ಗದ ರಸ್ತೆ ಕಾಮಗಾರಿಯ ಆಮೆಗತಿ ಕಾರ್ಯವನ್ನು ವೀಕ್ಷಿಸಿದ್ದರು. ಈ ವೇಳೆ ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕಾಮಗಾರಿಯೇ ಪ್ರಾರಂಭವಾಗಿಲ್ಲ.

ರಸ್ತೆಗುಂಡಿ ಮುಚ್ಚದ ಅಧಿಕಾರಿಗಳು : ಈಟಿವಿ ಭಾರತ ವರದಿ ನಿಜವಾಯ್ತು-ಸಂಸದರ ಗಡುವು ಸುಳ್ಳಾಯ್ತು!

ಚಾಮರಾಜನಗರ ತಾಲೂಕಿನ ಅಟ್ಟುಗೂಳೀಪುರದಿಂದ ಪುಣಜನೂರು ಮಾರ್ಗದಲ್ಲಿನ 22 ಕಿ.ಮೀ ರಸ್ತೆ ಕಾಮಗಾರಿಗಾಗಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ತಮಿಳುನಾಡು ಮಾದರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. 3-4 ಅಡಿಗಳಷ್ಟು ಆಳದ ರಸ್ತೆ ಗುಂಡಿಗಳಾಗಿರುವುದರಿಂದ ಮೊದಲು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು‌.

ರಸ್ತೆ ಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟ ಸಂಸದರು... ಡೆಡ್ ಲೈನ್ ಪಾಲನೆಯಾಗುತ್ತೆ ಅನ್ನೋದೆ ಡೌಟು!?

ಸಂಸದರು ನೀಡಿದ ಗಡುವು ಪಾಲನೆಯಾಗುವುದೇ ಅನುಮಾನ ಎಂದು ಅವರು ಗಡುವು ನೀಡಿದ ದಿನವೇ ರಸ್ತೆಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟರು. ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ ಈಟಿವಿ ಭಾರತ, ಡೆಡ್‌ಲೈನ್ ಪಾಲನೆಯಾಗುತ್ತೆ ಅನ್ನೋದೇ ಡೌಟು ಎಂಬ ಬಗ್ಗೆ ವರದಿ ಬಿತ್ತರಿಸಿತ್ತು. ಇದೀಗ ವರದಿ ನಿಜವಾಗಿದ್ದು ಸಂಸದರು ಭೇಟಿ ನೀಡಿ 1 ತಿಂಗಳಾದರೂ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದರಿಂದಾಗಿ ವಾಹನ ಸಂಚಾರ ಹೆಚ್ಚಿದ್ದು, ರಸ್ತೆಬದಿ ಜಮೀನುಗಳ ಬೆಳೆಗೆ, ಬೈಕ್ ಸವಾರರಿಗೆ ಧೂಳು ಮಾರಕವಾಗಿ ಪರಿಣಮಿಸಿದೆ.

ಚಾಮರಾಜನಗರ: ಕಳೆದ 25ರಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳೀಪುರ, ಕೋಳಿಪಾಳ್ಯ-ಪುಣಜನೂರು ಮಾರ್ಗದ ರಸ್ತೆ ಕಾಮಗಾರಿಯ ಆಮೆಗತಿ ಕಾರ್ಯವನ್ನು ವೀಕ್ಷಿಸಿದ್ದರು. ಈ ವೇಳೆ ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕಾಮಗಾರಿಯೇ ಪ್ರಾರಂಭವಾಗಿಲ್ಲ.

ರಸ್ತೆಗುಂಡಿ ಮುಚ್ಚದ ಅಧಿಕಾರಿಗಳು : ಈಟಿವಿ ಭಾರತ ವರದಿ ನಿಜವಾಯ್ತು-ಸಂಸದರ ಗಡುವು ಸುಳ್ಳಾಯ್ತು!

ಚಾಮರಾಜನಗರ ತಾಲೂಕಿನ ಅಟ್ಟುಗೂಳೀಪುರದಿಂದ ಪುಣಜನೂರು ಮಾರ್ಗದಲ್ಲಿನ 22 ಕಿ.ಮೀ ರಸ್ತೆ ಕಾಮಗಾರಿಗಾಗಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ತಮಿಳುನಾಡು ಮಾದರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. 3-4 ಅಡಿಗಳಷ್ಟು ಆಳದ ರಸ್ತೆ ಗುಂಡಿಗಳಾಗಿರುವುದರಿಂದ ಮೊದಲು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು‌.

ರಸ್ತೆ ಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟ ಸಂಸದರು... ಡೆಡ್ ಲೈನ್ ಪಾಲನೆಯಾಗುತ್ತೆ ಅನ್ನೋದೆ ಡೌಟು!?

ಸಂಸದರು ನೀಡಿದ ಗಡುವು ಪಾಲನೆಯಾಗುವುದೇ ಅನುಮಾನ ಎಂದು ಅವರು ಗಡುವು ನೀಡಿದ ದಿನವೇ ರಸ್ತೆಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟರು. ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ ಈಟಿವಿ ಭಾರತ, ಡೆಡ್‌ಲೈನ್ ಪಾಲನೆಯಾಗುತ್ತೆ ಅನ್ನೋದೇ ಡೌಟು ಎಂಬ ಬಗ್ಗೆ ವರದಿ ಬಿತ್ತರಿಸಿತ್ತು. ಇದೀಗ ವರದಿ ನಿಜವಾಗಿದ್ದು ಸಂಸದರು ಭೇಟಿ ನೀಡಿ 1 ತಿಂಗಳಾದರೂ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದರಿಂದಾಗಿ ವಾಹನ ಸಂಚಾರ ಹೆಚ್ಚಿದ್ದು, ರಸ್ತೆಬದಿ ಜಮೀನುಗಳ ಬೆಳೆಗೆ, ಬೈಕ್ ಸವಾರರಿಗೆ ಧೂಳು ಮಾರಕವಾಗಿ ಪರಿಣಮಿಸಿದೆ.

Intro:ರಸ್ತೆಗುಂಡಿ ಮುಚ್ಚದ ಅಧಿಕಾರಿಗಳು... ಈಟಿವಿ ಭಾರತ ವರದಿ ನಿಜವಾಯ್ತು- ಸಂಸದರ ಗಡುವು ಸುಳ್ಳಾಯ್ತು!


ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳನ್ನು 10 ದಿನದೊಳಗೆ ಮುಚ್ಚಬೇಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ ಗಡುವು ನೀಡಿ 1 ತಿಂಗಳಾದರೂ ಕಾಮಗಾರಿಯೇ ಪ್ರಾರಂಭವಾಗಿಲ್ಲ.

Body:
ಹೌದು, ಕಳೆದ 25 ರಂದು ಸಂಸದ ವಿ.ಶ್ರೀನಿವಾಸಪ್ರಸಾದ್ ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳೀಪುರ, ಕೋಳೀಪಾಳ್ಯ-ಪುಣಜನೂರು ಮಾರ್ಗದ ರಸ್ತೆ ಕಾಮಗಾರಿಯ ಆಮೆಗತಿ ಕಾರ್ಯವನ್ನು ವೀಕ್ಷಿಸಿ ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಸಂಸದರ ಮಾತಿಗೆ ಬೆಲೆ ಕೊಟ್ಟಂತೆ ಕಾಣುತ್ತಿಲ್ಲ.

ಚಾಮರಾಜನಗರ ತಾಲೂಕಿನ ಅಟ್ಟುಗೂಳೀಪುರದಿಂದ ಪುಣಜನೂರು ಮಾರ್ಗದಲ್ಲಿನ 22 ಕಿ.ಮೀ. ರಸ್ತೆ ಕಾಮಗಾರಿಗಾಗಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. .
ತಮಿಳುನಾಡು ಮಾದರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. 3-4 ಅಡಿಗಳಷ್ಟು ಆಳದ ರಸ್ತೆ ಗುಂಡಿಗಳಾಗಿರುವುದರಿಂದ ಮೊದಲು ರಸ್ತಗುಂಡಿಯನ್ನು ಮುಚ್ಚಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು‌.

ಸಂಸದರು ನೀಡಿದ ಗಡುವು ಪಾಲನೆಯಾಗುವುದೇ ಅನುಮಾನ ಎಂದು ಅವರು ಗಡುವು ನೀಡಿದ ದಿನವೇ " ರಸ್ತೆಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟ ಸಂಸದರು...ಡೆಡ್ ಲೈನ್ ಪಾಲನೆಯಾಗುತ್ತೇ ಅನ್ನೋದೆ ಡೌಟು" ಎಂದು ವರದಿ ಬಿತ್ತರಿಸಿತ್ತು. ಇದೀಗ ಅದು ನಿಜವಾಗಿದ್ದು ವಿ.ಶ್ರೀ ಭೇಟಿ ನೀಡಿ 1 ತಿಂಗಳಾದರೂ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅತ್ತ ಕಡೆ ತಲೆಯೇ ಹಾಕಿಲ್ಲ.

ಧೂಳುಮಯ: ಭಾರೀ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆಬದಿ ಜಮೀನುಗಳ ಬೆಳೆಗೆ , ಬೈಕ್ ಸವಾರರಿಗೆ ಧೂಳು ಮಾರಕವಾಗಿ ಪರಿಣಮಿಸಿದ್ದು ರೈತರಿಗೆ ಬೆಳೆ ನಾಶದ ಚಿಂತೆಯಾದರೇ ಬೈಕ್ ಸವಾರರು ಮೂಗು‌ ಮುಚ್ಚಿ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ತಲೆದೂರಿದೆ.


Conclusion:ಇನ್ನಾದರೂ ಸಂಸದರು, ಜಿಲ್ಲಾಧಿಕಾರಿ ಧೂಳುಮಯ ರಸ್ತೆಗೆ ಮುಕ್ತಿ ಕಾಣಿಸಿ ಗಂಡಾಗುಂಡಿ ರಸ್ತೆಗೆ ಇತಿಶ್ರೀ ಹಾಡಬೇಕಿದೆ.

Bite 1: ಮಹಮ್ಮದ್ ಯಾಸಿನ್,ಚಾಮರಾಜನಗರ ನಿವಾಸಿ

Bite2: ರವಿಚಂದ್ರ, ಚಿಕ್ಕಹೊಳೆ ನಿವಾಸಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.