ETV Bharat / state

RSS, ತಾಲಿಬಾನ್ ಎರಡೂ ಒಂದೇ..ಇವರು ಕೋಲು ಹಿಡಿತಾರೆ ಅವರು ಗನ್ ಹಿಡಿತಾರೆ: ಶಾಸಕ ಪುಟ್ಟರಂಗಶೆಟ್ಟಿ

author img

By

Published : Oct 2, 2021, 10:29 AM IST

ಆರ್​ಎಸ್​ಎಸ್ ಕುರಿತಂತೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಶಾಸಕ ಪುಟ್ಟರಂಗಶೆಟ್ಟಿ ಬ್ಯಾಟ್ ಬೀಸಿದ್ದಾರೆ. ಆರ್​ಎಸ್​ಎಸ್​ ಮತ್ತು ತಾಲಿಬಾನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.

MLA Puttaranga Shetty
ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಆರ್​ಎಸ್​​​ಎಸ್ ಹಾಗೂ ತಾಲಿಬಾನ್ ಸಿದ್ಧಾಂತ ಎರಡೂ ಒಂದೇ, ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಪರ ದನಿಗೂಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ತಾಲಿಬಾನಿಗಳು ಅಲ್ಲಿ ಗನ್ ಹಿಡಿದು ಪರೇಡ್ ನಡೆಸುತ್ತಾರೆ, ಆರ್​ಎಸ್ಎಸ್​​​ನವರು ಕೋಲು ಹಿಡಿದುಕೊಂಡು‌ ಇಲ್ಲಿ ಪಥ ಸಂಚಲನ ನಡೆಸುತ್ತಾರೆ, ತಾಲಿಬಾನಿಗೂ ಸಂಘ ಪರಿವಾರಕ್ಕೂ ಅಂಥಾ ವ್ಯತ್ಯಾಸವೇನು ಇಲ್ಲ ಎಂದರು.

RSS, ತಾಲಿಬಾನ್ ಎರಡೂ ಒಂದೇ..ಇವರು ಕೋಲು ಹಿಡಿತಾರೆ ಅವರು ಗನ್ ಹಿಡಿತಾರೆ: ಶಾಸಕ ಪುಟ್ಟರಂಗಶೆಟ್ಟಿ

ಸಿದ್ದರಾಮಯ್ಯ ಹೇಗೇಗೋ ಆಡ್ತಾರೆ ಎಂದಿದ್ದ ಸಚಿವ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಅವರು ಹೋಗಿರುವುದರಿಂದ ಅಲ್ಲಿನ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ, ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯೋಗ್ಯತೆ ಸೋಮಶೇಖರ್​ಗೆ ಇಲ್ಲ, ಸಿದ್ದರಾಮಯ್ಯ ಅವರ ಮಾತಿಗೆ ಅದರದೇ ಆದ ಘನತೆ ಇದೆ ಎಂದು ಸಚಿವರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: Video: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಮತ್ತು ಯುವಕ!

ಚಾಮರಾಜನಗರ: ಆರ್​ಎಸ್​​​ಎಸ್ ಹಾಗೂ ತಾಲಿಬಾನ್ ಸಿದ್ಧಾಂತ ಎರಡೂ ಒಂದೇ, ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸಿದ್ದರಾಮಯ್ಯ ಪರ ದನಿಗೂಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ತಾಲಿಬಾನಿಗಳು ಅಲ್ಲಿ ಗನ್ ಹಿಡಿದು ಪರೇಡ್ ನಡೆಸುತ್ತಾರೆ, ಆರ್​ಎಸ್ಎಸ್​​​ನವರು ಕೋಲು ಹಿಡಿದುಕೊಂಡು‌ ಇಲ್ಲಿ ಪಥ ಸಂಚಲನ ನಡೆಸುತ್ತಾರೆ, ತಾಲಿಬಾನಿಗೂ ಸಂಘ ಪರಿವಾರಕ್ಕೂ ಅಂಥಾ ವ್ಯತ್ಯಾಸವೇನು ಇಲ್ಲ ಎಂದರು.

RSS, ತಾಲಿಬಾನ್ ಎರಡೂ ಒಂದೇ..ಇವರು ಕೋಲು ಹಿಡಿತಾರೆ ಅವರು ಗನ್ ಹಿಡಿತಾರೆ: ಶಾಸಕ ಪುಟ್ಟರಂಗಶೆಟ್ಟಿ

ಸಿದ್ದರಾಮಯ್ಯ ಹೇಗೇಗೋ ಆಡ್ತಾರೆ ಎಂದಿದ್ದ ಸಚಿವ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಅವರು ಹೋಗಿರುವುದರಿಂದ ಅಲ್ಲಿನ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ, ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಯೋಗ್ಯತೆ ಸೋಮಶೇಖರ್​ಗೆ ಇಲ್ಲ, ಸಿದ್ದರಾಮಯ್ಯ ಅವರ ಮಾತಿಗೆ ಅದರದೇ ಆದ ಘನತೆ ಇದೆ ಎಂದು ಸಚಿವರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: Video: ನಡುರಸ್ತೆಯಲ್ಲಿ ಹೊಡೆದಾಡಿಕೊಂಡ ಪೊಲೀಸ್ ಮತ್ತು ಯುವಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.