ETV Bharat / state

ಚಾಮರಾಜನಗರ ಬಸ್ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಸೋಮಣ್ಣ

ಕೊಳ್ಳೇಗಾಲ ಉಪವಿಭಾಗ ‌ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ.

author img

By

Published : Mar 18, 2022, 1:22 PM IST

visits to Minister V. somanna Chamarajanagar hospital
ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ವಿ.ಸೋಮಣ್ಣ

ಕೊಳ್ಳೇಗಾಲ(ಚಾಮರಾಜನಗರ): ಪಿ‌ಜಿ ಪಾಳ್ಯ ಬಳಿ ನಡೆದಿದ್ದ ಕೆಎಸ್​​ಆರ್​​ಟಿಸಿಬಸ್ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬಸ್ ದುರಂತ.. ತಪಿತಸ್ಥರಿಗೆ ಶಿಕ್ಷೆಯಾಗುತ್ತದೆ- ಸಚಿವ ವಿ. ಸೋಮಣ್ಣ

ಮಾ.14 ರಂದು ಪಿಜಿ ಪಾಳ್ಯದ ಬಳಿ ಕೆಎಸ್​​ಆರ್​​ಟಿಸಿ ಬಸ್​​ ಹಳ್ಳಕ್ಕೆ ಉರುಳಿದ ಘಟನೆ ನಡೆದಿತ್ತು. ಬಸ್​​ನಲ್ಲಿದ್ದ 80ಕ್ಕೂ ಹೆಚ್ಚು ಮಂದಿಗಳ ಪೈಕಿ ಮೂವರು ಮೃತ ಪಟ್ಟಿದ್ದರು. ಕೊಳ್ಳೇಗಾಲ ಆಸ್ಪತ್ರೆಗೆ 30ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದರು. ಇನ್ನು ತೀವ್ರ ಗಾಯಗೊಂಡು 7 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ‌ ಹಿನ್ನೆಲೆ ಇಂದು ಸಚಿವರು ಕೊಳ್ಳೇಗಾಲ ಉಪವಿಭಾಗ ‌ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಸ್ ದುರಂತ ಆಗಬಾರದಿತ್ತು. ನಡೆದು ಹೋಗಿದೆ. ಬಸ್​​ನಲ್ಲಿ 80ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.

ಇದನ್ನೂ ಓದಿ: ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್​ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ಕೆಲವರ ಸ್ಥಿತಿ ಗಂಭೀರ

ಕೊಳ್ಳೇಗಾಲ(ಚಾಮರಾಜನಗರ): ಪಿ‌ಜಿ ಪಾಳ್ಯ ಬಳಿ ನಡೆದಿದ್ದ ಕೆಎಸ್​​ಆರ್​​ಟಿಸಿಬಸ್ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬಸ್ ದುರಂತ.. ತಪಿತಸ್ಥರಿಗೆ ಶಿಕ್ಷೆಯಾಗುತ್ತದೆ- ಸಚಿವ ವಿ. ಸೋಮಣ್ಣ

ಮಾ.14 ರಂದು ಪಿಜಿ ಪಾಳ್ಯದ ಬಳಿ ಕೆಎಸ್​​ಆರ್​​ಟಿಸಿ ಬಸ್​​ ಹಳ್ಳಕ್ಕೆ ಉರುಳಿದ ಘಟನೆ ನಡೆದಿತ್ತು. ಬಸ್​​ನಲ್ಲಿದ್ದ 80ಕ್ಕೂ ಹೆಚ್ಚು ಮಂದಿಗಳ ಪೈಕಿ ಮೂವರು ಮೃತ ಪಟ್ಟಿದ್ದರು. ಕೊಳ್ಳೇಗಾಲ ಆಸ್ಪತ್ರೆಗೆ 30ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದರು. ಇನ್ನು ತೀವ್ರ ಗಾಯಗೊಂಡು 7 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ‌ ಹಿನ್ನೆಲೆ ಇಂದು ಸಚಿವರು ಕೊಳ್ಳೇಗಾಲ ಉಪವಿಭಾಗ ‌ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಸ್ ದುರಂತ ಆಗಬಾರದಿತ್ತು. ನಡೆದು ಹೋಗಿದೆ. ಬಸ್​​ನಲ್ಲಿ 80ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.

ಇದನ್ನೂ ಓದಿ: ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್​ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ಕೆಲವರ ಸ್ಥಿತಿ ಗಂಭೀರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.