ETV Bharat / state

ಗ್ರಾಮಕ್ಕೆ ನುಗ್ಗಿ ಕರು, ಕೋಳಿ, ಕುರಿಗಳನ್ನು ಕೊಂದ ಚಿರತೆ

author img

By

Published : May 19, 2020, 12:12 PM IST

ಚಾಮರಾಜನಗರದ ಕಡುವಿನಕಟ್ಟೆ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ್ದು, ಕುರಿ, ಕೋಳಿ ಮತ್ತು ಕರುವನ್ನು ಕೊಂದು ಹಾಕಿದೆ. ಅಷ್ಟೇ ಅಲ್ಲದೆ ಕಳೆದ ಎರಡು ತಿಂಗಳಲ್ಲಿ ಮೂರು ಮಂದಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕರು, ಕೋಳಿ, ಕುರಿಗಳನ್ನು ಕೊಂದ ವ್ಯಾಘ್ರ
ಕರು, ಕೋಳಿ, ಕುರಿಗಳನ್ನು ಕೊಂದ ವ್ಯಾಘ್ರ

ಚಾಮರಾಜನಗರ: ಚಿರತೆಯೊಂದು ಕೊಟ್ಟಿಗೆಗೆ ದಾಳಿ ಮಾಡಿ ಕರು, ಕೋಳಿ ಹಾಗೂ ಕುರಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಕಡುವಿನಕಟ್ಟೆಯಲ್ಲಿ ನಡೆದಿದೆ.

ಗ್ರಾಮದ ಬಸವಣ್ಣ ಎಂಬವರಿಗೆ ಸೇರಿದ 2 ಕುರಿಗಳ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ ಹೊಲ ಗದ್ದೆಗಳಲ್ಲಿ ಓಡಾಡುವವರ ಮೇಲೂ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಗ್ರಾಮದೊಳಗೆ ನುಗ್ಗಿ ಜನರನ್ನು ಆತಂಕಕ್ಕೀಡು ಮಾಡಿದೆ.

ಕರು, ಕೋಳಿ, ಕುರಿಗಳನ್ನು ಕೊಂದ ಚಿರತೆ

ಕಳೆದ ಎರಡು ತಿಂಗಳಲ್ಲಿ ಮೂರು ಮಂದಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಚಿರತೆ ಇದೇ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಸ್ಥಳಕ್ಕೆ ಚಾಮರಾಜನಗರ ಆರ್​ಎಫ್ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಾಮರಾಜನಗರ: ಚಿರತೆಯೊಂದು ಕೊಟ್ಟಿಗೆಗೆ ದಾಳಿ ಮಾಡಿ ಕರು, ಕೋಳಿ ಹಾಗೂ ಕುರಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಕಡುವಿನಕಟ್ಟೆಯಲ್ಲಿ ನಡೆದಿದೆ.

ಗ್ರಾಮದ ಬಸವಣ್ಣ ಎಂಬವರಿಗೆ ಸೇರಿದ 2 ಕುರಿಗಳ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ ಹೊಲ ಗದ್ದೆಗಳಲ್ಲಿ ಓಡಾಡುವವರ ಮೇಲೂ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಗ್ರಾಮದೊಳಗೆ ನುಗ್ಗಿ ಜನರನ್ನು ಆತಂಕಕ್ಕೀಡು ಮಾಡಿದೆ.

ಕರು, ಕೋಳಿ, ಕುರಿಗಳನ್ನು ಕೊಂದ ಚಿರತೆ

ಕಳೆದ ಎರಡು ತಿಂಗಳಲ್ಲಿ ಮೂರು ಮಂದಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಚಿರತೆ ಇದೇ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಸ್ಥಳಕ್ಕೆ ಚಾಮರಾಜನಗರ ಆರ್​ಎಫ್ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.