ಚಾಮರಾಜನಗರ: ಚಿರತೆಯೊಂದು ಕೊಟ್ಟಿಗೆಗೆ ದಾಳಿ ಮಾಡಿ ಕರು, ಕೋಳಿ ಹಾಗೂ ಕುರಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಕಡುವಿನಕಟ್ಟೆಯಲ್ಲಿ ನಡೆದಿದೆ.
ಗ್ರಾಮದ ಬಸವಣ್ಣ ಎಂಬವರಿಗೆ ಸೇರಿದ 2 ಕುರಿಗಳ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ ಹೊಲ ಗದ್ದೆಗಳಲ್ಲಿ ಓಡಾಡುವವರ ಮೇಲೂ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಗ್ರಾಮದೊಳಗೆ ನುಗ್ಗಿ ಜನರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ಎರಡು ತಿಂಗಳಲ್ಲಿ ಮೂರು ಮಂದಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಚಿರತೆ ಇದೇ ಎಂಬುದು ಗ್ರಾಮಸ್ಥರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಸ್ಥಳಕ್ಕೆ ಚಾಮರಾಜನಗರ ಆರ್ಎಫ್ಒ ಭೇಟಿ ನೀಡಿ ಪರಿಶೀಲಿಸಿದ್ದಾರೆ.