ETV Bharat / state

ಪಾಲಿಶ್ ನೆಪದಲ್ಲಿ ಬಂದ ಖದೀಮರು... ನಂಬಿ 52 ಗ್ರಾಂ ಚಿನ್ನಾಭರಣ ಕೊಟ್ಟ ಮಹಿಳೆಗೆ ಶಾಕ್ - ಹಾಡಹಗಲೇ ಕದಿಯುತ್ತಿದ್ದಾರೆ ಚಿನ್ನಾಭರಣ

ಪಾಲಿಶ್ ನೆಪದಲ್ಲಿ ಖದೀಮರು ಮಹಿಳೆಯ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

ಚಿನ್ನಾಭರಣ ಕಳ್ಳತನ
author img

By

Published : Oct 6, 2019, 12:57 PM IST

ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದರೇ ಜಾಣತನದಿಂದ ಹಾಡಹಗಲೇ ಚಿನ್ನಾಭರಣ ಎಗರಿಸುತ್ತಿರುವ ಪ್ರಕರಣಗಳು ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ.

ಹಾಡಹಗಲೇ ಮಾಯದ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು 52 ಗ್ರಾಂ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ ಇಬ್ಬರು ಕಳ್ಳರು, ಸಿದ್ದಯ್ಯನಪುರ ಗ್ರಾಮದ ಮಹಾದೇವಿ ಎಂಬವರನ್ನು ಬಣ್ಣದ ಮಾತುಗಳಿಂದ ಮರಳು ಮಾಡಿ ಪಾಲಿಶ್ ಹಾಕಿಕೊಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದಾರೆ.

ಪಾಲಿಶ್ ಬಳಿಕ ಚಿನ್ನಾಭರಣಗಳು ಹೊಳೆಯುತ್ತವೆ ಎಂಬ ಖದೀಮರ ಮಾತು ನಂಬಿ ಕತ್ತಿನಲ್ಲಿದ್ದ ಸರ, ಓಲೆ, ಉಂಗುರ ಹಾಗೂ ಇನ್ನುಳಿದ ಚಿನ್ನಾಭರಣ ನೀಡಿದ್ದರು. ಕಳ್ಳರು ಚಿನ್ನವನ್ನು ಪಾತ್ರೆಗೆ ಹಾಕಿ ಅದರಲ್ಲಿ ಪೌಡರ್ ಮತ್ತು ನೀರನ್ನು ಹಾಕಿ ಹತ್ತು ನಿಮಿಷ ಬಿಟ್ಟು ತೆಗೆಯುವಂತೆ ಮಹಿಳೆಗೆ ತಿಳಿಸಿ ತೆರಳಿದ್ದರು. ಬಳಿಕ, ಪಾತ್ರೆಯಲ್ಲಿ ಚಿನ್ನವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಇನ್ನು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಾದ್ಯಂತ ಜಾಣತನದಿಂದ ಚಿನ್ಮಾಭರಣ ಕಸಿಯುತ್ತಿರುವ ಪ್ರಕರಣ ಹೆಚ್ಚಿದ್ದು, ಕಳ್ಳರು ಪ್ರತಿಬಾರಿಯೂ ಹೊಸ ಜಾಡನ್ನೇ ಹಿಡಿಯುತ್ತಿರುವುದು ಆತಂಕಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕಿದೆ.

ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಸರಗಳ್ಳರ ಹಾವಳಿ ಒಂದೆಡೆಯಾದರೇ ಜಾಣತನದಿಂದ ಹಾಡಹಗಲೇ ಚಿನ್ನಾಭರಣ ಎಗರಿಸುತ್ತಿರುವ ಪ್ರಕರಣಗಳು ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ.

ಹಾಡಹಗಲೇ ಮಾಯದ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು 52 ಗ್ರಾಂ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ ಇಬ್ಬರು ಕಳ್ಳರು, ಸಿದ್ದಯ್ಯನಪುರ ಗ್ರಾಮದ ಮಹಾದೇವಿ ಎಂಬವರನ್ನು ಬಣ್ಣದ ಮಾತುಗಳಿಂದ ಮರಳು ಮಾಡಿ ಪಾಲಿಶ್ ಹಾಕಿಕೊಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದಾರೆ.

ಪಾಲಿಶ್ ಬಳಿಕ ಚಿನ್ನಾಭರಣಗಳು ಹೊಳೆಯುತ್ತವೆ ಎಂಬ ಖದೀಮರ ಮಾತು ನಂಬಿ ಕತ್ತಿನಲ್ಲಿದ್ದ ಸರ, ಓಲೆ, ಉಂಗುರ ಹಾಗೂ ಇನ್ನುಳಿದ ಚಿನ್ನಾಭರಣ ನೀಡಿದ್ದರು. ಕಳ್ಳರು ಚಿನ್ನವನ್ನು ಪಾತ್ರೆಗೆ ಹಾಕಿ ಅದರಲ್ಲಿ ಪೌಡರ್ ಮತ್ತು ನೀರನ್ನು ಹಾಕಿ ಹತ್ತು ನಿಮಿಷ ಬಿಟ್ಟು ತೆಗೆಯುವಂತೆ ಮಹಿಳೆಗೆ ತಿಳಿಸಿ ತೆರಳಿದ್ದರು. ಬಳಿಕ, ಪಾತ್ರೆಯಲ್ಲಿ ಚಿನ್ನವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಇನ್ನು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಾದ್ಯಂತ ಜಾಣತನದಿಂದ ಚಿನ್ಮಾಭರಣ ಕಸಿಯುತ್ತಿರುವ ಪ್ರಕರಣ ಹೆಚ್ಚಿದ್ದು, ಕಳ್ಳರು ಪ್ರತಿಬಾರಿಯೂ ಹೊಸ ಜಾಡನ್ನೇ ಹಿಡಿಯುತ್ತಿರುವುದು ಆತಂಕಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕಿದೆ.

Intro:ಜಾಣತನದಿಂದಲೇ ಕಸಿಯುತ್ತಿದ್ದಾರೆ ಚಿನ್ನಾಭರಣ: ಪೊಲೀಸರೇ ಜಾಗೃತಿ ಮೂಡಿಸಿ

ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಸರಗಳವು ಒಂದೆಡೆಯಾದರೇ ಜಾಣತನದಿಂದ ಹಾಡಹಗಲೇ ಚಿನ್ನಾಭರಣ ಎಗರಿಸುತ್ತಿರುವುದು ಜಿಲ್ಲಾದ್ಯಂತ ಹೆಚ್ಚಾಗುತ್ತಿದೆ.

Body:ಹಾಡಹಗಲೇ ಮಾಯದ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು 52 ಗ್ರಾಂ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿದ ಇಬ್ಬರು ಕಳ್ಳರು
ಸಿದ್ದಯ್ಯನಪುರ ಗ್ರಾಮದ ಮಹಾದೇವಿ ಎಂಬವರನ್ನು ಬಣ್ಧದ ಮಾತುಗಳಿಂದ ಮರಳು ಮಾಡಿ ಪಾಲಿಶ್ ಹಾಕಿಕೊಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದಾರೆ.

ಪಾಲಿಶ್ ಬಳಿಕ ಚಿನ್ನಾಭರಣಗಳು ಹೊಳೆಯುತ್ತವೆ ಎಂಬ ಖದೀಮರ ಮಾತು ನಂಬಿ ಕತ್ತಿನನಲ್ಲಿದ್ದ ಸರ, ಓಲೆ, ಉಂಗುರ, ಡಾಲರ್ ಹಾಗೂ ಇತಪರೆ ಪದಾಥ೯ಗಳನ್ನು ನೀಡಿದ್ದಾರೆ. ಕಳ್ಳರು ಚಿನ್ನವನ್ನು
ಪಾತ್ರೆಗೆ ಹಾಕಿ ಅದರಲ್ಲಿ ಪೌಡರ್ ಮತ್ತು ನೀರನ್ನು ಹಾಕಿ ಹತ್ತು ನಿಮಿಷ ಬಿಟ್ಟು ತೆಗೆಯುವಂತೆ ಮಹಿಳೆಗೆ ತಿಳಿಸಿ ತೆರಳಿದ್ದಾರೆ. ಬಳಿಕ, ಪಾತ್ರೆಯಲ್ಲಿ ಚಿನ್ನವೇ ಇರಲಿಲ್ಲ ಎಂದು ತಿಳಿದುಬಂದಿದೆ.

ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಜಿಲ್ಲಾದ್ಯಂತ ಜಾಣತನದಿಂದ ಚಿನ್ಮಾಭರಣ ಕಸಿಯುತ್ತಿರುವ ಪ್ರಕರಣ ಹೆಚ್ಚಿದ್ದು ಕಳ್ಳರು ಪ್ರತಿಬಾರಿಯೂ ಹೊಸ ಜಾಡನ್ನೇ ಹಿಡಿಯುತ್ತಿರುವುದು ಆತಂಕಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಬೇಕಿದೆ


File photo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.