ಚಾಮರಾಜನಗರ: ಕಾನೂನಿನ ರಕ್ಷಕರು, ಹಗಲು-ರಾತ್ರಿ ಎನ್ನದೇ ದುಡಿಯುವ ಪೊಲೀಸರಿಗೆ 17 ದಿನಗಳಾದರೂ ವೇತನವಾಗಿಲ್ಲ.
ಮಾರ್ಚ್ ಮುಗಿಯುತ್ತಾ ಬಂದಿದ್ದರೂ ಅನುದಾನ ಕೊರತೆಯಿಂದ ಫೆಬ್ರವರಿ ವೇತನವೇ ಇನ್ನೂ ಆಗಿಲ್ಲ. ಈ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಒಂದೆರೆಡು ದಿನ ಸಂಬಳ ನಿಧಾನವಾದರೆ ನಿಭಾಯಿಸಬಹುದು ಸಂಬಳ ಬಾರದೆ 17 ದಿನವಾಗಿದ್ದು, ಕುಟುಂಬ ನಿರ್ವಹಿಸುವುದೇ ಕಷ್ಟವಾಗಿದೆ. ಕೆಲವು ಸಿಬ್ಬಂದಿಗೆ ವೇತನ ಆಗಿದ್ದು, ಹಲವರಿಗೆ ವೇತನ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ತವರಿನ ಕೊನೆಯ ಭೇಟಿಯಲ್ಲಿ 'ಅಪ್ಪು'ಗೆ ಮುತ್ತು.. ಪುನೀತ್ ನೆನೆದು ಬಿಕ್ಕಳಿಸಿದ ಅಣ್ಣಾವ್ರ ಮನೆಯ ನೌಕರ
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಪ್ರತಿಕ್ರಿಯಿಸಿ, ಅನುದಾನ ಕೊರತೆಯಿಂದ ವೇತನ ಆಗಿಲ್ಲ. ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ, ಬೇರೆ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ ಎಂದು ಮಾಹಿತಿ ನೀಡಿದರು.