ETV Bharat / state

ಸುಳ್ವಾಡಿ ಮಾರಮ್ಮನ ದೇಗುಲದ ಬಾಗಿಲು ತೆರೆಯಬೇಕೆಂದು ಗೋಳಾಡಿದ ಭಕ್ತರು.. - ಸುಳ್ವಾಡಿ ಮಾರಮ್ಮನ ದೇಗುಲದ ಬಾಗಿಲು

ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.

ಸುಳ್ವಾಡಿ ಮಾರಮ್ಮನ ದೇಗುಲ
author img

By

Published : Nov 19, 2019, 5:43 PM IST

ಚಾಮರಾಜನಗರ: ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.

ಸುಳ್ವಾಡಿ ಮಾರಮ್ಮನ ದೇಗುಲ..

ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಿಚ್ಚುಗುತ್ತಿ ಮಾರಮ್ಮನ ದೇಗುಲಕ್ಕೆ ಭೇಟಿಯಿತ್ತ ವೇಳೆ ಮಹಿಳೆಯರು ದೇವರ ಮುಂದೆ ಗೋಳಾಡಿ, ತಾಯಿಗೆ ಪೂಜೆ-ಪುನಸ್ಕಾರ, ಅಭಿಷೇಕವಾಗಿ ಒಂದು ವರ್ಷ ಕಳೆದಿದೆ. ಕೇಳಿದ್ದನ್ನೆಲ್ಲಾ ನೀಡುತ್ತಿದ್ದ ರೋಗ-ರುಜಿನ ಪರಿಹರಿಸುತ್ತಿದ್ದ ತಾಯಿಯನ್ನು ಕಾಣಲು ಬಿಡಿ ಎಂದು ಸಚಿವರನ್ನು ಭಕ್ತರು ಒತ್ತಾಯಿಸಿದರು.

ಭಕ್ತರೆಲ್ಲಾ ಆಗಮಿಸಿ ನಿರಾಸೆ ಮುಖ ಹೊತ್ತು ತೆರಳುತ್ತಿದ್ದಾರೆ. ಬಾಯಿ ಬೀಗ, ಹರಕೆ ಬಲಿ, ಮುಡಿ ಹರಕೆಗಳನ್ನು ತೀರಿಸಲಾಗದೇ ಕಾಯುತ್ತಿದ್ದಾರೆ. ಅಮ್ಮನ ಪೂಜೆ ನಡೆದರೆ ಸಾಕೆಂಬಂತಾಗಿದ್ದು, ದೇಗುಲದ ಬಾಗಿಲು ತೆಗೆದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಹೆಸರಿಡದೆ ಹಲವರು ಕಾಯುತ್ತಿದ್ದಾರೆಂದು ಗ್ರಾಮದ ಬೊಂಬಮ್ಮ ಹೇಳಿದರು.

ಈ ಬಗ್ಗೆ ಶೀಘ್ರ ಕ್ರಮಕೊಳ್ಳುವುದಾಗಿ ಸಚಿವರ ಭರವಸೆ : ಈಗಾಗಲೇ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅರ್ಚಕರೊಬ್ಬರನ್ನು ನೇಮಿಸಿ ಶೀಘ್ರವೇ ಪೂಜೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದರು.

ಚಾಮರಾಜನಗರ: ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.

ಸುಳ್ವಾಡಿ ಮಾರಮ್ಮನ ದೇಗುಲ..

ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಿಚ್ಚುಗುತ್ತಿ ಮಾರಮ್ಮನ ದೇಗುಲಕ್ಕೆ ಭೇಟಿಯಿತ್ತ ವೇಳೆ ಮಹಿಳೆಯರು ದೇವರ ಮುಂದೆ ಗೋಳಾಡಿ, ತಾಯಿಗೆ ಪೂಜೆ-ಪುನಸ್ಕಾರ, ಅಭಿಷೇಕವಾಗಿ ಒಂದು ವರ್ಷ ಕಳೆದಿದೆ. ಕೇಳಿದ್ದನ್ನೆಲ್ಲಾ ನೀಡುತ್ತಿದ್ದ ರೋಗ-ರುಜಿನ ಪರಿಹರಿಸುತ್ತಿದ್ದ ತಾಯಿಯನ್ನು ಕಾಣಲು ಬಿಡಿ ಎಂದು ಸಚಿವರನ್ನು ಭಕ್ತರು ಒತ್ತಾಯಿಸಿದರು.

ಭಕ್ತರೆಲ್ಲಾ ಆಗಮಿಸಿ ನಿರಾಸೆ ಮುಖ ಹೊತ್ತು ತೆರಳುತ್ತಿದ್ದಾರೆ. ಬಾಯಿ ಬೀಗ, ಹರಕೆ ಬಲಿ, ಮುಡಿ ಹರಕೆಗಳನ್ನು ತೀರಿಸಲಾಗದೇ ಕಾಯುತ್ತಿದ್ದಾರೆ. ಅಮ್ಮನ ಪೂಜೆ ನಡೆದರೆ ಸಾಕೆಂಬಂತಾಗಿದ್ದು, ದೇಗುಲದ ಬಾಗಿಲು ತೆಗೆದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಹೆಸರಿಡದೆ ಹಲವರು ಕಾಯುತ್ತಿದ್ದಾರೆಂದು ಗ್ರಾಮದ ಬೊಂಬಮ್ಮ ಹೇಳಿದರು.

ಈ ಬಗ್ಗೆ ಶೀಘ್ರ ಕ್ರಮಕೊಳ್ಳುವುದಾಗಿ ಸಚಿವರ ಭರವಸೆ : ಈಗಾಗಲೇ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅರ್ಚಕರೊಬ್ಬರನ್ನು ನೇಮಿಸಿ ಶೀಘ್ರವೇ ಪೂಜೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದರು.

Intro:ಸುಳ್ವಾಡಿ ಮಾರಮ್ಮನ ದೇಗುಲ ತೆರೆಯಲು ಭಕ್ತರ ಕಣ್ಣೀರು- ಆಕ್ರಂದನ... ಪೂಜೆ ನಡೆಯುವವರೆಗೂ ಮುಡಿ ಬಿಟ್ಟ ಯುವಕರು!


ಚಾಮರಾಜನಗರ: ಕಳೆದ ಡಿಸೆಂಬರ್ ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತರ ಕೇಂದ್ರಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತರೆ ಭಕ್ತರು ಗೋಳಾಡಿದ್ದಾರೆ.

Body:ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಿಚ್ಚುಗುತ್ತಿ ಮಾರಮ್ಮ ದೇಗುಲಕ್ಕೆ ಭೇಟಿಯಿತ್ತ ವೇಳೆ ಮಹಿಳೆಯರು ದೇವರ ಮುಂದೆ ಗೋಳಾಡಿ, ತಾಯಿಗೆ ಪೂಜೆ-ಪುನಸ್ಕಾರ, ಅಭಿಷೇಕವಾಗಿ ಒಂದು ವರ್ಷ ಕಳೆದಿದೆ ಕೇಳಿದ್ದನ್ನೆಲ್ಲಾ ನೀಡುತ್ತಿದ್ದ, ರೋಗ-ರುಜಿನ ಪರಿಹರಿಸುತ್ತಿದ್ದ ತಾಯಿಯನ್ನು ಕಾಣಲು ಬಿಡಿ ಎಂದು ಸಚಿವರನ್ನು ಒತ್ತಾಯಿಸಿದರು.

ಭಕ್ತರೆಲ್ಲಾ ಆಗಮಿಸಿ ನಿರಾಸೆ ಮುಖ ಹೊತ್ತು ತೆರಳುತ್ತಿದ್ದಾರೆ. ಬಾಯಿಬೀಗ, ಹರಕೆಬಲಿ, ಮುಡಿ ಹರಕೆಗಳನ್ನು ತೀರಿಸಲಾಗದೇ ಕಾದಿದ್ದಾರೆ. ಅಮ್ಮನ ಪೂಜೆ ನಡೆದರೇ ಸಾಕೆಂಬತಾಗಿದ್ದು ದೇಗುಲ ಬಾಗಿಲು ತೆಗೆದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಹೆಸರಿಡದೇ ಹಲವರು ಕಾಯುತ್ತಿದ್ದಾರೆಂದು ಗ್ರಾಮದ ಬೊಂಬಮ್ಮ ಹೇಳಿದರು.

Bite2- ಬೊಂಬಮ್ಮ, ಮಾರಮ್ಮನ ಭಕ್ತೆ


ಇನ್ನು, ದೇಗುಲ ಬಂದ್ದಾಗಿದಿನಿಂದ ದೇಗುಲದಲ್ಲಿ ಶೀಘ್ರವೇ ಪೂಜೆ ನಡೆಯಬೇಕೆಂದು ಹಲವರು ಮುಡಿ ಬಿಟ್ಟಿದ್ದು ದೇಗುಲದ ಬಾಗಿಲು ತೆರೆಯುವ ತನಕ ಮುಡಿ ತೆಗೆಯುವುದಿಲ್ಲ ಎಂದು
ಗೈದಿದ್ದಾರೆ.

ದೇವರಿಗೆ ಅರ್ಪಿಸಲು ಚಿನ್ನ, ಬೆಳ್ಳಿ, ಆಡು, ಕುರಿಗಳನ್ನು ಬಿಟ್ಟಿದ್ದು ದೇಗುಲ ಬೇಗ ತೆರೆಯಲೆಂದು ತಾನು ಮುಡಿ ಬಿಟ್ಟಿರುವುದಾಗಿ ಗ್ರಾಮದ ಯುವಕ ಶಂಕರ ತಿಳಿಸಿದರು.

Bite 2- ಶಂಕರ, ಮುಡಿ ಬಿಟ್ಟ ಯುವಕ

ಶೀಘ್ರ ಕ್ರಮ: ಸಚಿವ ಸುರೇಶ್ ಕುಮಾರ್ ದೇಗುಲ ತೆರೆಯುವ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ದೇಗುಲ ಮುಜರಾಯಿ ಇಲಾಖೆ ಒಳಪಟ್ಟಿದ್ದು, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅರ್ಚಕರೊಬ್ಬರನ್ನು ನೇಮಿಸಿ ಶೀಘ್ರವೇ ಪೂಜೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

Bite3- ಸುರೇಶ್ ಕುಮಾರ್, ಸಚಿವ

Conclusion:
ವಿಷ ಪ್ರಸಾದ ದುರಂತದ ಬಳಿಕ ಕಿಚ್ಚುಗುತ್ತಿ ಮಾರಮ್ನ ದೇಗುಲ ಬಂದ್ದಾಗಿ ಒಂದು ವರ್ಷವಾಗುತ್ತಿದ್ದು ದೇಗುಲದ ಆವರಣದಲ್ಲಿ ಮಾರಮ್ಮನ ಫೋಟೋವನ್ನಿಟ್ಟು ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.