ETV Bharat / state

ಚಾಮರಾಜನಗರದಲ್ಲಿ ಲಾಕ್​ಡೌನ್​​​: ಮದ್ಯ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು!

author img

By

Published : May 19, 2021, 12:09 PM IST

ಸೋಂಕು ನಿಯಂತ್ರಣಕ್ಕೆ ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಮತ್ತು 3 ದಿನಗಳ ಕಾಲ ನಿಯಮ ಸಡಿಲಿಸಿ ಅಗತ್ಯ ವಸ್ತುಗಳ ವ್ಯವಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಾಳೆಯಿಂದ 4 ದಿನ ಸಂಪೂರ್ಣ ಲಾಕ್​ಡೌನ್​ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನರು ನಿಯಮ ಮರೆತು ಮುಗಿಬಿದ್ದ ಘಟನೆ ಇಂದು ನಡೆದಿದೆ.

chamrajanagara people violate the covid rules in market area
ಮದ್ಯ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು!

ಚಾಮರಾಜನಗರ: ಜಿಲ್ಲಾದ್ಯಂತ ನಾಳೆಯಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​​​ ಹಿನ್ನೆಲೆ ಮದ್ಯ ಖರೀದಿಸಲು ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಮುಗಿಬಿದ್ದ ಘಟನೆ ನಡೆಯಿತು.

ಮದ್ಯ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು!

4 ದಿನಗಳ ಬಂದ್​​ ಹಿನ್ನೆಲೆ ಎಣ್ಣೆ ಶೇಖರಿಸಲು ಕ್ಯೂ ನಿಂತ ಮದ್ಯಪ್ರಿಯರು ಬ್ಯಾಗ್, ಕವರ್​​ಗಳಲ್ಲಿ ತಮ್ಮಿಷ್ಟದ‌ ಮದ್ಯ ತುಂಬಿಸಿಕೊಂಡು ಕೊಂಡೊಯ್ದರು.‌ ಕಳೆದ ಮೂರು ದಿನಗಳಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ಮದ್ಯದಂಗಡಿ ಮಾಲೀಕರು ಇಂದು ಸ್ವಲ್ಪ ಆದಾಯ ಕಂಡುಕೊಂಡರು. ಬೆಳಗ್ಗೆ 8 ಗಂಟೆ ಆಗುತ್ತಿದ್ದಂತೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಮದ್ಯ ಖರೀದಿಸಿ ಕೊಂಡೊಯ್ದಿದ್ದಾರೆ.

ದಿನಸಿ, ಅಗತ್ಯ ವಸ್ತುಗಳ ಖರೀದಿ-ನಿಯಮ ಮಾಯ:

ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮೂರು ದಿನಗಳವರೆಗೆ ಅವಕಾಶ, ನಾಲ್ಕು ದಿನ ಸಂಪೂರ್ಣ ಲಾಕ್​​ಡೌನ್​​ ನಿಯಮ ರೂಪಿಸಿರುವುದರಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿದ ಜನರು, ಸಾಮಾಜಿಕ ಅಂತರವನ್ನೇ ಮರೆತು ಗುಂಪು ಗುಂಪಾಗಿ ನಿಂತರು. ಕೆಲವು ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಸೋಂಕು ನಿಯಂತ್ರಣಕ್ಕೆ ವಾರದಲ್ಲಿ 4 ದಿನ ಸಂಪೂರ್ಣ ಲಾಕ್​ಡೌನ್​​, 3 ದಿನ ಸಡಿಲಿಕೆ ಮಾಡಿದ್ದು, ಜನಜಾತ್ರೆ ನೋಡಿದರೆ ಆ ನಿಯಮ ಫಲಪ್ರದವಾಗುವುದು ಅನುಮಾನವೆಂಬಂತೆ ಕಾಣುತ್ತಿದೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ರಾಯಚೂರಿನ ಮಾರುಕಟ್ಟೆಗಳಲ್ಲಿ ಜನಜಂಗುಳಿ

ಚಾಮರಾಜನಗರ: ಜಿಲ್ಲಾದ್ಯಂತ ನಾಳೆಯಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​​​ ಹಿನ್ನೆಲೆ ಮದ್ಯ ಖರೀದಿಸಲು ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಮುಗಿಬಿದ್ದ ಘಟನೆ ನಡೆಯಿತು.

ಮದ್ಯ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು!

4 ದಿನಗಳ ಬಂದ್​​ ಹಿನ್ನೆಲೆ ಎಣ್ಣೆ ಶೇಖರಿಸಲು ಕ್ಯೂ ನಿಂತ ಮದ್ಯಪ್ರಿಯರು ಬ್ಯಾಗ್, ಕವರ್​​ಗಳಲ್ಲಿ ತಮ್ಮಿಷ್ಟದ‌ ಮದ್ಯ ತುಂಬಿಸಿಕೊಂಡು ಕೊಂಡೊಯ್ದರು.‌ ಕಳೆದ ಮೂರು ದಿನಗಳಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ಮದ್ಯದಂಗಡಿ ಮಾಲೀಕರು ಇಂದು ಸ್ವಲ್ಪ ಆದಾಯ ಕಂಡುಕೊಂಡರು. ಬೆಳಗ್ಗೆ 8 ಗಂಟೆ ಆಗುತ್ತಿದ್ದಂತೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಮದ್ಯ ಖರೀದಿಸಿ ಕೊಂಡೊಯ್ದಿದ್ದಾರೆ.

ದಿನಸಿ, ಅಗತ್ಯ ವಸ್ತುಗಳ ಖರೀದಿ-ನಿಯಮ ಮಾಯ:

ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮೂರು ದಿನಗಳವರೆಗೆ ಅವಕಾಶ, ನಾಲ್ಕು ದಿನ ಸಂಪೂರ್ಣ ಲಾಕ್​​ಡೌನ್​​ ನಿಯಮ ರೂಪಿಸಿರುವುದರಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳ ಮುಂದೆ ಜಮಾಯಿಸಿದ ಜನರು, ಸಾಮಾಜಿಕ ಅಂತರವನ್ನೇ ಮರೆತು ಗುಂಪು ಗುಂಪಾಗಿ ನಿಂತರು. ಕೆಲವು ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಸೋಂಕು ನಿಯಂತ್ರಣಕ್ಕೆ ವಾರದಲ್ಲಿ 4 ದಿನ ಸಂಪೂರ್ಣ ಲಾಕ್​ಡೌನ್​​, 3 ದಿನ ಸಡಿಲಿಕೆ ಮಾಡಿದ್ದು, ಜನಜಾತ್ರೆ ನೋಡಿದರೆ ಆ ನಿಯಮ ಫಲಪ್ರದವಾಗುವುದು ಅನುಮಾನವೆಂಬಂತೆ ಕಾಣುತ್ತಿದೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ರಾಯಚೂರಿನ ಮಾರುಕಟ್ಟೆಗಳಲ್ಲಿ ಜನಜಂಗುಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.