ETV Bharat / state

ಬಂದ್ ಎಫೆಕ್ಟ್: ಚಾಮರಾಜನಗರ ಕೆಎಸ್ಆರ್​​ಟಿಸಿಗೆ 20 ಲಕ್ಷ ರೂ. ನಷ್ಟ

author img

By

Published : Dec 8, 2020, 8:20 PM IST

ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ ಚಾಮರಾಜನಗರದಿಂದ ಬೇರೆಡೆಗೆ ತೆರಳುವ 150ಕ್ಕೂ ಹೆಚ್ಚು ಬಸ್​​ಗಳು ತೆರಳದೆ ಇರುವುದರಿಂದ 19-20 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

band-effect-chamarajanagar-ksr-tc-gets-loss-money-news
ಚಾಮರಾಜನಗರ ಕೆಎಸ್ಆರ್​​ಟಿಸಿ

ಚಾಮರಾಜನಗರ: ನೂತನ ಕೃಷಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಕರೆ ನೀಡಿದ್ದ ಬಂದ್​​ನಿಂದಾಗಿ ಕೆಎಸ್ಆರ್​ಟಿಸಿ ಚಾಮರಾಜನಗರ ಉಪವಿಭಾಗಕ್ಕೆ ಬರೋಬ್ಬರಿ 19-20 ಲಕ್ಷ ರೂ. ನಷ್ಟವಾಗಿದೆ.

ಚಾಮರಾಜನಗರ ಕೆಎಸ್ಆರ್​​ಟಿಸಿಗೆ ನಷ್ಟ

ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ ಚಾಮರಾಜನಗರದಿಂದ ಬೇರೆಡೆಗೆ ತೆರಳುವ 150ಕ್ಕೂ ಹೆಚ್ಚು ಬಸ್​​ಗಳು ತೆರಳದೇ ಇರುವುದರಿಂದ 19-20 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಬಸ್ ಸಿಗದೇ ಬೆಳಗ್ಗೆಯಿಂದ ಪರಿತಪಿಸಿದ ಕೆಲವರು ರೈಲುಗಳನ್ನು ಹಿಡಿದು ಮೈಸೂರು, ಮಂಡ್ಯ, ಬೆಂಗಳೂರಿಗೆ ತೆರಳಿದರು. ಸೋಮವಾರದಿಂದ ಆರಂಭವಾದ ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್‌ ರೈಲು ಮೊದಲ ದಿನ ಖಾಲಿ ಹೊರಟಿದ್ದು, ಎರಡನೇ ದಿನ ಬಂದ್ ಎಫೆಕ್ಟ್​​​ನಿಂದಾಗಿ ರೈಲಿನಲ್ಲಿ ಜನರ ಸಂಚಾರ ಹೆಚ್ಚಾಗಿತ್ತು.

ಇದನ್ನೂ ಓದಿ : ಹೊಸಕೋಟೆ: ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ!

ಕೆಲವರು ಬೆಳಗ್ಗೆ 8ರಿಂದ ಬಸ್​​ಗಾಗಿ ಕಾದು ಕಾದು ರೋಸಿ ಹೋಗಿ ಅನ್ಯ ಮಾರ್ಗವಿಲ್ಲದೆ ರೈಲಿನ ಮೊರೆ ಹೋಗಿದ್ದಾರೆ. ಕೆಲವರು ಬಂದ್ ಮುನ್ನೆಚ್ಚರಿಕೆ ಅರಿತು ಮೊದಲೇ ಟಿಕೆಟ್ ಬುಕ್ ಮಾಡಿದ್ದು ಕಂಡು ಬಂದಿತು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವ ಕುರಿತು ಆರ್​ಪಿಎಫ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ಕೊಟ್ಟು ಕೋವಿಡ್ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

ಬುಧವಾರದಿಂದ ಇನ್ನೊಂದು ರೈಲು:

ಸೋಮವಾರದಿಂದ ತಿರುಪತಿ ಎಕ್ಸ್‌ಪ್ರೆಸ್ ರೈಲು‌ ಆರಂಭವಾದ ಬೆನ್ನಲ್ಲೇ ಬುಧವಾರದಿಂದ ಸಂಜೆ 5ಕ್ಕೆ ಪ್ಯಾಸೆಂಜರ್ ರೈಲು ಆರಂಭವಾಗಲಿದೆ. ಈ ರೈಲಿಗೆ ಮಾಸಿಕ ಪಾಸ್ ಸೌಲಭ್ಯ ಇರುವುದಿಲ್ಲ. ಆದರೆ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಚಾಮರಾಜನಗರ: ನೂತನ ಕೃಷಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಕರೆ ನೀಡಿದ್ದ ಬಂದ್​​ನಿಂದಾಗಿ ಕೆಎಸ್ಆರ್​ಟಿಸಿ ಚಾಮರಾಜನಗರ ಉಪವಿಭಾಗಕ್ಕೆ ಬರೋಬ್ಬರಿ 19-20 ಲಕ್ಷ ರೂ. ನಷ್ಟವಾಗಿದೆ.

ಚಾಮರಾಜನಗರ ಕೆಎಸ್ಆರ್​​ಟಿಸಿಗೆ ನಷ್ಟ

ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ ಚಾಮರಾಜನಗರದಿಂದ ಬೇರೆಡೆಗೆ ತೆರಳುವ 150ಕ್ಕೂ ಹೆಚ್ಚು ಬಸ್​​ಗಳು ತೆರಳದೇ ಇರುವುದರಿಂದ 19-20 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಬಸ್ ಸಿಗದೇ ಬೆಳಗ್ಗೆಯಿಂದ ಪರಿತಪಿಸಿದ ಕೆಲವರು ರೈಲುಗಳನ್ನು ಹಿಡಿದು ಮೈಸೂರು, ಮಂಡ್ಯ, ಬೆಂಗಳೂರಿಗೆ ತೆರಳಿದರು. ಸೋಮವಾರದಿಂದ ಆರಂಭವಾದ ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್‌ ರೈಲು ಮೊದಲ ದಿನ ಖಾಲಿ ಹೊರಟಿದ್ದು, ಎರಡನೇ ದಿನ ಬಂದ್ ಎಫೆಕ್ಟ್​​​ನಿಂದಾಗಿ ರೈಲಿನಲ್ಲಿ ಜನರ ಸಂಚಾರ ಹೆಚ್ಚಾಗಿತ್ತು.

ಇದನ್ನೂ ಓದಿ : ಹೊಸಕೋಟೆ: ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ!

ಕೆಲವರು ಬೆಳಗ್ಗೆ 8ರಿಂದ ಬಸ್​​ಗಾಗಿ ಕಾದು ಕಾದು ರೋಸಿ ಹೋಗಿ ಅನ್ಯ ಮಾರ್ಗವಿಲ್ಲದೆ ರೈಲಿನ ಮೊರೆ ಹೋಗಿದ್ದಾರೆ. ಕೆಲವರು ಬಂದ್ ಮುನ್ನೆಚ್ಚರಿಕೆ ಅರಿತು ಮೊದಲೇ ಟಿಕೆಟ್ ಬುಕ್ ಮಾಡಿದ್ದು ಕಂಡು ಬಂದಿತು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವ ಕುರಿತು ಆರ್​ಪಿಎಫ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ಕೊಟ್ಟು ಕೋವಿಡ್ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

ಬುಧವಾರದಿಂದ ಇನ್ನೊಂದು ರೈಲು:

ಸೋಮವಾರದಿಂದ ತಿರುಪತಿ ಎಕ್ಸ್‌ಪ್ರೆಸ್ ರೈಲು‌ ಆರಂಭವಾದ ಬೆನ್ನಲ್ಲೇ ಬುಧವಾರದಿಂದ ಸಂಜೆ 5ಕ್ಕೆ ಪ್ಯಾಸೆಂಜರ್ ರೈಲು ಆರಂಭವಾಗಲಿದೆ. ಈ ರೈಲಿಗೆ ಮಾಸಿಕ ಪಾಸ್ ಸೌಲಭ್ಯ ಇರುವುದಿಲ್ಲ. ಆದರೆ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.