ETV Bharat / state

KSRTC ಬಸ್​ ಮುಷ್ಕರ: ಚಾಮರಾಜನಗರ ವಿಭಾಗಕ್ಕೆ 5.5 ಕೋಟಿ ರೂ. ನಷ್ಟ

author img

By

Published : Apr 17, 2021, 8:53 PM IST

ಕೆಎಸ್​​ಆರ್​ಟಿಸಿ ಸಿಬ್ಬಂದಿ ಮುಷ್ಕರ ಹಿನ್ನೆಲೆ ಚಾಮರಾಜನಗರ ವಿಭಾಗಕ್ಕೆ ಬರೋಬ್ಬರಿ 5.5 ಕೋಟಿ ನಷ್ಟವಾಗಿದೆ ಎಂದು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.

5.5 crore loss to chamrajnagar ksrtc division
ಚಾಮರಾಜನಗರ ವಿಭಾಗಕ್ಕೆ 5.5 ಕೋಟಿ ನಷ್ಟ

ಚಾಮರಾಜನಗರ: ಸಾರಿಗೆ ನೌಕರರು ಕಳೆದ 11 ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮ ಚಾಮರಾಜನಗರ ವಿಭಾಗಕ್ಕೆ ಬರೋಬ್ಬರಿ ಐದೂವರೆ ಕೋಟಿ ರೂ. ನಷ್ಟವಾಗಿದೆ.

ಚಾಮರಾಜನಗರ ವಿಭಾಗಕ್ಕೆ 5.5 ಕೋಟಿ ರೂ. ನಷ್ಟ

ಈ ಕುರಿತು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯ ದಿನಗಳಲ್ಲಿ‌ ದಿನವೊಂದಕ್ಕೆ 50 ಲಕ್ಷ ರೂ. ಆದಾಯ ಬರುತ್ತಿದ್ದು, ಈಗ ಮುಷ್ಕರ ನಡೆಸುತ್ತಿರುವ ಪರಿಣಾಮ ಅಂದಾಜು ಐದೂವರೆ ಕೋಟಿ ರೂ. ನಷ್ಟ ಉಂಟಾಗಿದೆ‌. ಕಳೆದ 6 ದಿನಗಳಿಂದ 11 ಲಕ್ಷ ಹಣ ಬಂದಿದೆ ಎಂದರು.

518 ಬಸ್​ಗಳಲ್ಲಿ 260 ಬಸ್​ಗಳು ಕಾರ್ಯಾಚರಣೆ ನಡೆಸುತ್ತಿದ್ದು, 460 ರೂಟ್​ಗಳಲ್ಲಿ ಶೇ. 60ರಷ್ಟು ಬಸ್ ಸಂಚಾರ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಸ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 31 ಮಂದಿಯನ್ನು ಬೇರೆ ವಿಭಾಗಕ್ಕೆ, 17 ಮಂದಿಯನ್ನು ನಮ್ಮ ವಿಭಾಗದ ಬೇರೆ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

9 ಮಂದಿ ಕಾಯಂ ನೌಕರರನ್ನು ವಜಾ ಮಾಡಿದ್ದು, ನೋಟಿಸ್ ಕೊಟ್ಟರೂ ಹಾಜರಾಗದ 67 ಟ್ರೈನಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲು ಶಿಫಾರಸು ಮಾಡಲು ಮುಂದಾಗಿದ್ದೇವೆ. ಸೋಮವಾರ 10 ಗಂಟೆಯ ತನಕ ಕಾಲಾವಕಾಶ ಕೊಟ್ಟಿದ್ದು, ಬರದಿದ್ದರೆ ವಜಾಕ್ಕೆ ಶಿಫಾರಸು ಮಾಡುತ್ತೇನೆ ಎಂದರು.

ಚಾಮರಾಜನಗರ: ಸಾರಿಗೆ ನೌಕರರು ಕಳೆದ 11 ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮ ಚಾಮರಾಜನಗರ ವಿಭಾಗಕ್ಕೆ ಬರೋಬ್ಬರಿ ಐದೂವರೆ ಕೋಟಿ ರೂ. ನಷ್ಟವಾಗಿದೆ.

ಚಾಮರಾಜನಗರ ವಿಭಾಗಕ್ಕೆ 5.5 ಕೋಟಿ ರೂ. ನಷ್ಟ

ಈ ಕುರಿತು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯ ದಿನಗಳಲ್ಲಿ‌ ದಿನವೊಂದಕ್ಕೆ 50 ಲಕ್ಷ ರೂ. ಆದಾಯ ಬರುತ್ತಿದ್ದು, ಈಗ ಮುಷ್ಕರ ನಡೆಸುತ್ತಿರುವ ಪರಿಣಾಮ ಅಂದಾಜು ಐದೂವರೆ ಕೋಟಿ ರೂ. ನಷ್ಟ ಉಂಟಾಗಿದೆ‌. ಕಳೆದ 6 ದಿನಗಳಿಂದ 11 ಲಕ್ಷ ಹಣ ಬಂದಿದೆ ಎಂದರು.

518 ಬಸ್​ಗಳಲ್ಲಿ 260 ಬಸ್​ಗಳು ಕಾರ್ಯಾಚರಣೆ ನಡೆಸುತ್ತಿದ್ದು, 460 ರೂಟ್​ಗಳಲ್ಲಿ ಶೇ. 60ರಷ್ಟು ಬಸ್ ಸಂಚಾರ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಸ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 31 ಮಂದಿಯನ್ನು ಬೇರೆ ವಿಭಾಗಕ್ಕೆ, 17 ಮಂದಿಯನ್ನು ನಮ್ಮ ವಿಭಾಗದ ಬೇರೆ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

9 ಮಂದಿ ಕಾಯಂ ನೌಕರರನ್ನು ವಜಾ ಮಾಡಿದ್ದು, ನೋಟಿಸ್ ಕೊಟ್ಟರೂ ಹಾಜರಾಗದ 67 ಟ್ರೈನಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲು ಶಿಫಾರಸು ಮಾಡಲು ಮುಂದಾಗಿದ್ದೇವೆ. ಸೋಮವಾರ 10 ಗಂಟೆಯ ತನಕ ಕಾಲಾವಕಾಶ ಕೊಟ್ಟಿದ್ದು, ಬರದಿದ್ದರೆ ವಜಾಕ್ಕೆ ಶಿಫಾರಸು ಮಾಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.