ETV Bharat / state

ಸಾಕು ಬಿಡ್ರೋ ನಮ್ಮನ್ನೇಕೆ ಕೊಲ್ತೀರಿ... ಬೀದರ್​ ಜಿಲ್ಲೆಯಲ್ಲಿ ಮರಗಳ ಆರ್ಥನಾದ

author img

By

Published : Jul 24, 2019, 11:00 AM IST

ಬರದ ನಾಡಿನ ಹಣೆಪಟ್ಟಿ ಕಟ್ಟಿಕೊಳ್ಳುವ ಬೀದರ್ ಜಿಲ್ಲೆಯಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಚೊಂಡಿಮುಖೇಡ್ ಗ್ರಾಮದಲ್ಲಿ ಅಕ್ರಮವಾಗಿ ಸಾಮಿಲ್(ಕಟ್ಟಿಗೆ ಕತ್ತರಿಸುವ ಯಂತ್ರ) ಹಾಕಲಾಗಿದ್ದು, 1800 ಎಕರೆಯಲ್ಲಿನ ವೃಕ್ಷಗಳು ಬಲಿಯಾಗಿವೆ ಎಂಬ ಆರೋಪಗಳು ಕೇಳಿಬಂದಿದೆ. ಅಳಿದುಳಿದ ಮರಗಳ ಆರ್ಥನಾದ ವ್ಯಥೆ ಇಲ್ಲಿದೆ ನೋಡಿ..

ಗಡಿ ಜಿಲ್ಲೆಯಲ್ಲಿ ಮರಗಳ ಮಾರಣಹೋಮ

ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚೊಂಡಿಮುಖೇಡ್ ಗ್ರಾಮದಲ್ಲಿ ಅಕ್ರಮವಾಗಿ ಸಾಮಿಲ್(ಕಟ್ಟಿಗೆ ಕತ್ತರಿಸುವ ಯಂತ್ರ) ಹಾಕಲಾಗಿದೆ. ಇದಕ್ಕಾಗಿ ಗಡಿ ಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗಡಿ ಜಿಲ್ಲೆಯಲ್ಲಿ ಮರಗಳ ಆರ್ಥನಾದ

ಮಹಾರಾಷ್ಟ್ರ ಮೂಲದ ಅದೆಷ್ಟೊ ಜನರು ಕನ್ನಡದ ನೆಲದ ಅರಣ್ಯ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುವ ಮಾಫಿಯಾ ನಡೆಸಿದ್ದಾರೆ. ಚೊಂಡಿಮುಖೇಡ್ ಗ್ರಾಮದಲ್ಲಿ ನಾಲ್ಕು ಸಾಮಿಲ್ ಕಂಡು ಬಂದಿದ್ದು, ದಶಕಗಳಿಂದ ಈ ಅಕ್ರಮ ದಂಧೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಈ ಕಡೆಗೆ ಗಮನ ಹರಿಸುತ್ತಿಲ್ಲ ಅಂತಾರೆ ಸ್ಥಳೀಯರು.

ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 100 ಕಿಲೋ ಮಿಟರ್ ದೂರದಲ್ಲಿರುವ ಈ ಗ್ರಾಮ ಭೌಗೋಳಿಕವಾಗಿ ಕರ್ನಾಟಕಕ್ಕೆ ಸೇರಿದೆ. ಆದ್ರೆ ಇಲ್ಲಿ ಸರ್ಕಾರದ ಅಧಿಕಾರಿಗಳು ಮಾತ್ರ ಕಣ್ಣಾಯಿಸದೇ ಇರುವುದರಿಂದ ಬೃಹತ್ತಾಗಿ ಬೆಳೆದುನಿಂತ ಮರಗಳು ಸರ್ವನಾಶವಾಗುತ್ತಿವೆ.

ಅಕ್ರಮ ದಂಧೆಗೆ ಪೂರಕ ಸ್ಥಾನವಾದ ಗಡಿಗ್ರಾಮ:

ಸುತ್ತಲೂ ಮಹಾರಾಷ್ಟ್ರ ಆವರಿಸಿ ನಡುಗಡ್ಡೆಯಂತಿರುವ ರಾಜ್ಯದ ಸುಮಾರು 1800 ಎಕರೆ ಜಮೀನು ಹೊಂದಿರುವ ಚೊಂಡಿಮುಖೇಡ್ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದವರು ಅಕ್ರಮ ಅಡ್ಡೆಗಳನ್ನು ಹಾಕಿಕೊಂಡು ರಾಜ್ಯದ ಮರಗಳ ಮಾರಣಹೋಮ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಹಸಿರಿದ್ದರೆ ಉಸಿರು ಅನ್ನೋದನ್ನು ಇಲ್ಲಿನ ಜನರೆಲ್ಲರೂ ಎಚ್ಚೆತ್ತೆಉಕೊಂಡು ಅಕ್ರಮದ ವಿರುದ್ಧ ಧ್ವನಿ ಎತ್ತಬೇಕಿದೆ. ಅರಣ್ಯ ಇಲಾಖೆಯವರು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.

ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚೊಂಡಿಮುಖೇಡ್ ಗ್ರಾಮದಲ್ಲಿ ಅಕ್ರಮವಾಗಿ ಸಾಮಿಲ್(ಕಟ್ಟಿಗೆ ಕತ್ತರಿಸುವ ಯಂತ್ರ) ಹಾಕಲಾಗಿದೆ. ಇದಕ್ಕಾಗಿ ಗಡಿ ಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗಡಿ ಜಿಲ್ಲೆಯಲ್ಲಿ ಮರಗಳ ಆರ್ಥನಾದ

ಮಹಾರಾಷ್ಟ್ರ ಮೂಲದ ಅದೆಷ್ಟೊ ಜನರು ಕನ್ನಡದ ನೆಲದ ಅರಣ್ಯ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುವ ಮಾಫಿಯಾ ನಡೆಸಿದ್ದಾರೆ. ಚೊಂಡಿಮುಖೇಡ್ ಗ್ರಾಮದಲ್ಲಿ ನಾಲ್ಕು ಸಾಮಿಲ್ ಕಂಡು ಬಂದಿದ್ದು, ದಶಕಗಳಿಂದ ಈ ಅಕ್ರಮ ದಂಧೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಈ ಕಡೆಗೆ ಗಮನ ಹರಿಸುತ್ತಿಲ್ಲ ಅಂತಾರೆ ಸ್ಥಳೀಯರು.

ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 100 ಕಿಲೋ ಮಿಟರ್ ದೂರದಲ್ಲಿರುವ ಈ ಗ್ರಾಮ ಭೌಗೋಳಿಕವಾಗಿ ಕರ್ನಾಟಕಕ್ಕೆ ಸೇರಿದೆ. ಆದ್ರೆ ಇಲ್ಲಿ ಸರ್ಕಾರದ ಅಧಿಕಾರಿಗಳು ಮಾತ್ರ ಕಣ್ಣಾಯಿಸದೇ ಇರುವುದರಿಂದ ಬೃಹತ್ತಾಗಿ ಬೆಳೆದುನಿಂತ ಮರಗಳು ಸರ್ವನಾಶವಾಗುತ್ತಿವೆ.

ಅಕ್ರಮ ದಂಧೆಗೆ ಪೂರಕ ಸ್ಥಾನವಾದ ಗಡಿಗ್ರಾಮ:

ಸುತ್ತಲೂ ಮಹಾರಾಷ್ಟ್ರ ಆವರಿಸಿ ನಡುಗಡ್ಡೆಯಂತಿರುವ ರಾಜ್ಯದ ಸುಮಾರು 1800 ಎಕರೆ ಜಮೀನು ಹೊಂದಿರುವ ಚೊಂಡಿಮುಖೇಡ್ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದವರು ಅಕ್ರಮ ಅಡ್ಡೆಗಳನ್ನು ಹಾಕಿಕೊಂಡು ರಾಜ್ಯದ ಮರಗಳ ಮಾರಣಹೋಮ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಹಸಿರಿದ್ದರೆ ಉಸಿರು ಅನ್ನೋದನ್ನು ಇಲ್ಲಿನ ಜನರೆಲ್ಲರೂ ಎಚ್ಚೆತ್ತೆಉಕೊಂಡು ಅಕ್ರಮದ ವಿರುದ್ಧ ಧ್ವನಿ ಎತ್ತಬೇಕಿದೆ. ಅರಣ್ಯ ಇಲಾಖೆಯವರು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.

Intro:ಗಡಿ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಮರಣಗಳ ಮಾರಣ ಹೋಮ...!

ಬೀದರ್:
ಅತ್ತ ಮಹಾರಾಷ್ಟ್ರ ಇತ್ತ ಕರ್ನಾಟಕ ಎರಡು ರಾಜ್ಯಗಳ ನಡುವೆ ನಡುಗಡ್ಡೆಯಾಗಿ ಅನಾಥ ಪ್ರಜ್ಞೆಯಿಂದ ಬಳಲುತ್ತಿರುವ ರಾಜ್ಯದ ಅವಿಭಾಜ್ಯ ಅಂಗವಾದ ಗಡಿ ಗ್ರಾಮದಲ್ಲಿ ನಡೆಯುತ್ತಿದೆ ಅವ್ಯಾಹತವಾಗಿ ಮರಗಳ ಮಾರಣ ಹೋಮ. ರಾಜ್ಯ ಅರಣ್ಯ ಇಲಾಖೆ ಕಣ್ತಪ್ಪಿಸಿ ಕಟ್ಟಿಗೆ ಯಂತ್ರಗಳ(ಸಾವ್ ಮಿಲ್) ಮಾಫೀಯಾಕ್ಕೆ ಬರಿದಾಗುತ್ತಿದೆ ಕಾಡು. ಹಸಿರಿನಿಂದ ತುಂಬಿ ತುಳುಕುತ್ತಿದ್ದ ಗಡಿ ಭಾಗವಾಗಿದೆ ಈಗ ಅಕ್ಷರಶಃ ಬಂಜರು ಭೂಮಿ. ಈ ಮಾಫೀಯಾದ ಅಟ್ಟಹಾಸಕ್ಕೆ ಹೇಳೊರು ಇಲ್ಲ ಕೇಳೋರು ಇಲ್ಲ.

ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಚೊಂಡಿಮುಖೇಡ್ ಗ್ರಾಮದಲ್ಲಿ ಅಕ್ರಮವಾಗಿ ನಾಯಿ ಕೊಡೆಯಂತೆ ಎಲ್ಲಂದರಲ್ಲಿ ಸಾವ್ ಮಿಲ್(ಕಟ್ಟಿಗೆ ಕತ್ತಿರಿಸುವ ಯಂತ್ರ) ಹಾಕಲಾಗಿದೆ. ಮಹಾರಾಷ್ಟ್ರ ಮೂಲದ ಅದೇಷ್ಟೊ ಜನರು ಕನ್ನಡದ ನೆಲದಲ್ಲಿ ಬಂದು ಅರಣ್ಯ ಸಂಪತ್ತನ್ನು ಸಾಮೂಹಿಕವಾಗಿ ಲೂಟಿ ಮಾಡುವ ಮಾಫೀಯಾ ಎಗ್ಗಿಲ್ಲದೆ ನಡೆಯುತ್ತಿದೆ. ಚೊಂಡಿ ಮುಖೇಡ್ ಗ್ರಾಮದಲ್ಲಿ ನಾಲ್ಕು ಸಾವ್ ಮಿಲ್ ಕಂಡು ಬಂದಿವೆ. ದಶಕಗಳಿಂದ ಈ ಅಕ್ರಮ ದಂಧೆ ನಡೆಯುತ್ತಿದ್ದು ಯಾರೋಬ್ಬರು ಇದರತ್ತ ಗಮನ ಹರಿಸಿಲ್ಲ. ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 100 ಕಿಲೋ ಮಿಟರ್ ದೂರದಲ್ಲಿರುವ ಈ ಗ್ರಾಮ ಭೌಗೊಳಿಕವಾಗಿ ಕರ್ನಾಟಕಕ್ಕೆ ಸೇರಿದೆ ಆದ್ರೆ. ಇಲ್ಲಿ ಸರ್ಕಾರದ ಅಧಿಕಾರಿಗಳು ಮಾತ್ರ ಕಣ್ಣು ಹಾಯಿಸದೆ ಇರುವುದರಿಂದ ಬೃಹತಾಗಿ ಬೆಳೆದು ನಿಂತ ಮರಗಳು ಈ ಮಾಫೀಯಾಕ್ಕೆ ಬಲಿಯಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದ ಕರುನಾಡಿನ ಭಾಗ ಈಗ ಬಂಜರು ಭೂಮಿಯ ಸ್ವರೂಪ ಪಡೆದುಕೊಂಡು ಬೀಕೊ ಎನ್ನುತ್ತಿದೆ.

ಅಕ್ರಮ ದಂಧೆಗೆ ಪೂರಕ ಸ್ಥಾನವಾದ ಗಡಿಗ್ರಾಮ:

ಸುತ್ತಲೂ ಮಹಾರಾಷ್ಟ್ರ ಆವರಿಸಿ ನಡುಗಡ್ಡೆಯಂತಿರುವ ರಾಜ್ಯದ ಸುಮಾರು 1800 ಎಕರೆ ಜಮಿನು ಹೊಂದಿರುವ ಚೊಂಡಿಮುಖೇಡ್ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದವರು ಅಕ್ರಮ ಅಡ್ಡೆಗಳು ಹಾಕಿಕೊಂಡು ರಾಜ್ಯದ ಮರಗಳ ಮಾರಣ ಹೋಮ ಮಾಡ್ತಿದ್ದಾರೆ. ರಾಜ್ಯದ ನೆಲದಲ್ಲಿ ಅಕ್ರಮ ನಡೆಯುತ್ತಿದ್ದರು ಈ ಭಾಗದ ವರೆಗೆ ಅಧಿಕಾರಿಗಳು ಬಂದು ದಾಳಿ ಮಾಡ್ತಿಲ್ಲ. ಅತ್ತ ಮಹಾರಾಷ್ಟ್ರ ದ ಅಧಿಕಾರಿಗಳು ಬಂದು ದಾಳಿ ಮಾಡಲು ಆಗ್ತಿಲ್ಲ. ಈ ಗ್ರಾಮದ ಭೋಗೊಳಿಕ ಅಸ್ತಿತ್ವದ ಲಾಭ ಪಡೆದಿರುವ ದಂಧೆಕೊರರು ಅಟ್ಟಹಾಸ ಮೇರೆಯಲು ಮೂಲ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.

ಒಟ್ಟನಲ್ಲಿ ಕರುನಾಡಿನ ನೆಲದಲ್ಲಿ ಕಟ್ಟಿಗೆ ಕತ್ತರಿಸಿ ಹಣ ಸಂಪಾದನೆ ಮಾಡುವ ಪಟ್ಟಭದ್ರ ವ್ಯಾಪರಸ್ಥರ ದಶಕಗಳ ಅಕ್ರಮಕ್ಕೆ ಬ್ರೇಕ್ ಹಾಕುಮ ಮೂಲಕ ಈ ಭಾಗದ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.

ಬೈಟ್-೦೧: ಶ್ರೀಮಂತ ಸಪಾಟೆ- ಅಧ್ಯಕ್ಷರು ಜೈ ಕರ್ನಾಟಕ ರಕ್ಷಣಾ ವೇದಿಕೆ ಬೀದರ್.


Body:ಅನೀಲ


Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.