ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್​ ಜುಲ್ಫೇಕರ್ ಹಾಸ್ಮಿ ಹೇಳಿದರು.

author img

By

Published : Dec 20, 2019, 7:54 PM IST

Updated : Dec 21, 2019, 8:02 PM IST

The Citizenship Amendment Bill is discriminatory: former legislator Hasmi
ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್​ ಜುಲ್ಫೇಕರ್ ಹಾಸ್ಮಿ ಹೇಳಿದರು.

ಬಹುಜನ ಕ್ರಾಂತಿ ಮೋರ್ಚಾದಿಂದ ಸ್ಥಳೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಮಿನಿ ವಿಧಾನ ಸೌಧದ ತಹಸೀಲ್ ಕಚೇರಿಗೆ ಅವರು ಆಗಮಿಸಿದ್ದರು. ಈ ವೇಳೆ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.

ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ. ಇದು ಮುಸ್ಲಿಂ ವಿರೋಧಿಯಷ್ಟೇ ಅಲ್ಲ, ಎಸ್‌ಸಿ/ಎಸ್‌ಟಿ, ಒಬಿಸಿ, ಸೇರಿದಂತೆ ಅನೇಕ ಸಮುದಾಯಗಳಿಗೆ ವಿರೋಧಿಯಾಗಿದೆ. ದೇಶದ ಅಖಂಡತೆಗಾಗಿ ದೇಶದಾದ್ಯಂತ ಆಂದೋಲನ ಮಾಡಲಿದ್ದೇವೆ ಎಂದರು.

ಹೋರಾಟದ ಪ್ರಥಮ ಭಾಗವಾಗಿ ಎಲ್ಲೆಡೆ ಇಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜನವರಿ 3 ರಂದು ಜಾಥಾ ನಡೆಸಲಾಗುವುದು. ಅನಂತರ ಜನವರಿ 30ರಂದು ಭಾರತ ಬಂದ್ ಮಾಡುವ ಯೋಚನೆಯೂ ಇದೆ ಎಂದರು.

ಇನ್ನೂ ಹಾಸ್ಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಸುನೀಲ್​ ಕುಮಾರ್​ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ, ಅಷ್ಟರಲ್ಲಾಗಲೇ ಅವರು ಮನವಿ ಪತ್ರ ಸಲ್ಲಿಸಿ ತೆರಳಿದ್ದರು.

ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಸೈಯದ್​ ಜುಲ್ಫೇಕರ್ ಹಾಸ್ಮಿ ಹೇಳಿದರು.

ಬಹುಜನ ಕ್ರಾಂತಿ ಮೋರ್ಚಾದಿಂದ ಸ್ಥಳೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಮಿನಿ ವಿಧಾನ ಸೌಧದ ತಹಸೀಲ್ ಕಚೇರಿಗೆ ಅವರು ಆಗಮಿಸಿದ್ದರು. ಈ ವೇಳೆ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.

ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ: ಮಾಜಿ ಶಾಸಕ ಹಾಸ್ಮಿ

ಪೌರತ್ವ ತಿದ್ದುಪಡಿ ಕಾಯ್ದೆ ತಾರತಮ್ಯದಿಂದ ಕೂಡಿದೆ. ಇದು ಮುಸ್ಲಿಂ ವಿರೋಧಿಯಷ್ಟೇ ಅಲ್ಲ, ಎಸ್‌ಸಿ/ಎಸ್‌ಟಿ, ಒಬಿಸಿ, ಸೇರಿದಂತೆ ಅನೇಕ ಸಮುದಾಯಗಳಿಗೆ ವಿರೋಧಿಯಾಗಿದೆ. ದೇಶದ ಅಖಂಡತೆಗಾಗಿ ದೇಶದಾದ್ಯಂತ ಆಂದೋಲನ ಮಾಡಲಿದ್ದೇವೆ ಎಂದರು.

ಹೋರಾಟದ ಪ್ರಥಮ ಭಾಗವಾಗಿ ಎಲ್ಲೆಡೆ ಇಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜನವರಿ 3 ರಂದು ಜಾಥಾ ನಡೆಸಲಾಗುವುದು. ಅನಂತರ ಜನವರಿ 30ರಂದು ಭಾರತ ಬಂದ್ ಮಾಡುವ ಯೋಚನೆಯೂ ಇದೆ ಎಂದರು.

ಇನ್ನೂ ಹಾಸ್ಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಸುನೀಲ್​ ಕುಮಾರ್​ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ, ಅಷ್ಟರಲ್ಲಾಗಲೇ ಅವರು ಮನವಿ ಪತ್ರ ಸಲ್ಲಿಸಿ ತೆರಳಿದ್ದರು.

Intro:ಎರಡು ವಿಡಿಯೊ ಕಳಿಸಲಾಗಿದೆ



ಬಸವಕಲ್ಯಾಣ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಲಾಗುತ್ತಿದೆ ಎಂದು ಬಿಎಂಪಿ ರಾಜ್ಯಾಧ್ಯಕ್ಷ ಮಾಜಿ ಶಾಸಕ ಸೈಯದ ಜುಲ್ಫೇಕರ್ ಹಾಸ್ಮಿ ಹೇಳಿದರು. ಬಹುಜನ ಕ್ರಾಂತಿ ಮೋರ್ಚಾದಿಂದ ಸ್ಥಳೀಯ ಪದಾಧಿಕಾರಿಗಳ ನಿಯೋಗದೊಂದಿಗೆ ಇಲ್ಲಿ ಮಿನಿ ವಿಧಾನ ಸೌಧದಲ್ಲಿಯ ತಹಸಿಲ್ ಕಚೇರಿಗೆ ಆಗಮಿಸಿ ರಾಷ್ಟçಪತಿಗಳಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಬಿಲ್ ತಾರತಮ್ಯದಿಂದ ಕೂಡಿದೆ. ಮುಸ್ಲಿಂ ವಿರೋಧಿಯಷ್ಟೇ ಅಲ್ಲ. ಈ ಬಿಲ್ ಎಸ್‌ಸಿ/ಎಸ್‌ಟಿ, ಒಬಿಸಿ, ಮುಸ್ಲಿಮ್ ಸೇರಿದಂತೆ ಅನೇಕ ಸಮುದಾಯಗಳಿಗೆ ವಿರೋಧಿಯಾಗಿದೆ. ದೇಶದ ಅಖಂಡತೆಗಾಗಿ ದೇಶ ಉಳಿಸಲು ದೇಶದಾದ್ಯಂತ ಆಂದೋಲನ ಮಾಡಲಿದ್ದೇವೆ ಎಂದರು.
ಹೋರಾಟದ ಪ್ರಥಮ ಭಾಗವಾಗಿ ಎಲ್ಲೆಡೆ ಇಂದು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಜನೆವರಿ ೩ರಂದು ರ‍್ಯಾಲಿ ನಡೆಸಲಾಗುತ್ತಿದೆ. ಜನೆವರಿ ೩೦ರಂದು ಭಾರತ ಬಂದ್ ಮಾಡುವ ಕಾರ್ಯಕ್ರಮ ಇದೆ ಎಂದರು.
ಬಹುಜನ ಕ್ರಾಂತಿ ಮೋರ್ಚಾದ ತಾಲೂಕು ಸಂಚಾಲಕ ಪಾಂಡುರAಗ ಪೊದ್ದಾರ, ಮುಖಂಡರಾದ ಮಿಲಿಂದ ಹೂಬರೆ, ಪ್ರಶಾಂತ ಸೂರ್ಯವಶಿ ಉಪಸ್ಥಿತರಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿಯೂ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಯಲ್ಲಿ ಮುಂಜಾಗೃತಾ ಕ್ರಮವಾಗಿ ೧೪೪ ಕಲಂ ಅನ್ವಯ ನಿಷೆಧಾಜ್ಞೆ ಜಾರಿಯಲ್ಲಿರುವ ಕಾರಣ ಧರಣೆ, ರ‍್ಯಾಲಿ ಸೇರಿದಂತೆ ಯಾವುದೇ ರಿತಿಯ ಪ್ರತಿಭಟನೆಗೆ ಅವಕಾಶವಿಲ್ಲ. ಹೀಗಾಗಿ ಮಾಜಿ ಶಾಸಕ ಜುಲ್ಪೇಕರ್ ಹಾಸ್ಮಿ ನೇತೃತ್ವದಲ್ಲಿ ಕೆಲ ಪ್ರಮುಖರು ನೇರವಾಗಿ ತಹಸಿಲ್ ಕಚೇರಿಗೆ ಆಗಮಿಸಿ ತಹಸಿಲ್ ಕಚೇರಿ ಒಳಗೆಯೇ ತೆರಳಿ ಮನವಿಪತ್ರ ಸಲ್ಲಿಸಿ ವಾಪಸ್ ತೆರಳಿದರು.
ಹಾಸ್ಮಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಸುನೀಲಕುಮಾರ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಆಗಮಿಸಿದರು, ಆದರೆ ಅಷ್ಟೊತ್ತಿಗಾಗಲೇ ಹಾಸ್ಮಿ ಅವರುಮನವಿ ಪತ್ರ ಸಲ್ಲಿಸಿ ಹೊರ ನಡೆದಿದ್ದರು.


ಬೈಟ್-೧

ಜುಲ್ಪೇಕರ್ ಹಾಸ್ಮಿ
ಮಾಜಿ ಶಾಸಕ
(ಬಿಳಿ ಅಂಗಿ ತೊಟ್ಟು ಕಣ್ಣಿಗೆ ಕಪ್ಪು ಕನ್ನಡಕ ಧರಿಸಿದವರು)



ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ




Body:UDAYAKUMAR MULEConclusion:BASAVAKALYAN
Last Updated : Dec 21, 2019, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.