ETV Bharat / state

ಸಾಲದ ಬಾಧೆ ಯುವ ರೈತ ಆತ್ಮಹತ್ಯೆಗೆ ಶರಣು

author img

By

Published : Jun 7, 2020, 2:31 AM IST

ತಂದೆ ಮಾಡಿದ್ದ ಸಾಲ ತೀರಿಸಲಾಗದೇ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್​ನಲ್ಲಿ ನಡೆದಿದೆ.

Farmer commits suicide
Farmer commits suicide

ಬೀದರ್​: ಸಾಲದ ಬಾಧೆ ತಾಳಲಾರದೇ ಯುವ ರೈತನೊರ್ವ ಹೈ-ಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದ ಅಮೊಲ(28) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ವೆಂಕಟರಾವ್ ಮಾಡಿದ ಎಕ್ಸಿಸ್ ಬ್ಯಾಂಕ್​ನ 5 ಲಕ್ಷ ಸಾಲ ಹಾಗೂ ವೈಯಕ್ತಿಕವಾಗಿ ಮಾಡಿಕೊಂಡ 4 ಲಕ್ಷ ರೂ. ಸಾಲ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಭಾಲ್ಕಿ ಸಿಪಿಐ ವಿಜಯಕುಮಾರ್ ಬಿರಾದರ್, ಪಿಎಸ್ಐ ಕಾಶಿನಾಥ್ ರೋಳಾ ಭೇಟಿ ನೀಡಿದ್ದಾರೆ. ಈ ಕುರಿತು ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್​: ಸಾಲದ ಬಾಧೆ ತಾಳಲಾರದೇ ಯುವ ರೈತನೊರ್ವ ಹೈ-ಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದ ಅಮೊಲ(28) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ವೆಂಕಟರಾವ್ ಮಾಡಿದ ಎಕ್ಸಿಸ್ ಬ್ಯಾಂಕ್​ನ 5 ಲಕ್ಷ ಸಾಲ ಹಾಗೂ ವೈಯಕ್ತಿಕವಾಗಿ ಮಾಡಿಕೊಂಡ 4 ಲಕ್ಷ ರೂ. ಸಾಲ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಭಾಲ್ಕಿ ಸಿಪಿಐ ವಿಜಯಕುಮಾರ್ ಬಿರಾದರ್, ಪಿಎಸ್ಐ ಕಾಶಿನಾಥ್ ರೋಳಾ ಭೇಟಿ ನೀಡಿದ್ದಾರೆ. ಈ ಕುರಿತು ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.