ETV Bharat / state

ಹಣದ ಆಸೆಗೆ ಗೆಳಯನನ್ನೇ ಕೊಲೆಗೈದ ಪಾಪಿಗೆ ಜೀವಾವಧಿ ಶಿಕ್ಷೆ - murder news

ಹಣದ ಆಸೆಗಾಗಿ ಗೆಳೆಯನನ್ನು ಕೊಲೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ಮುರುಮ್ ಗ್ರಾಮದ ನಿವಾಸಿ ಬಸವರಾಜ ನಾಗಯ್ಯ ಸ್ವಾಮಿ ಶಿಕ್ಷೆಗೆ ಗುರಿಯಾದ ಅಪರಾಧಿ.

life-imprisonment-for-killing-a-friend
life-imprisonment-for-killing-a-friend
author img

By

Published : Jan 28, 2020, 10:45 PM IST

ಬಸವಕಲ್ಯಾಣ: ಹಣದ ಆಸೆಗಾಗಿ ಗೆಳೆಯನನ್ನು ಕೊಲೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ಮುರುಮ್ ಗ್ರಾಮದ ನಿವಾಸಿ ಬಸವರಾಜ ನಾಗಯ್ಯ ಸ್ವಾಮಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಮುರುಮ್ ಗ್ರಾಮದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದ ಉಸ್ಮಾನಾಬಾದ್​ ಮೂಲದ ವಿಜಯಕುಮಾರ ಧಾರೂರಕರ್ ಎನ್ನುವ ವ್ಯಕ್ತಿಯನ್ನು 2013 ನವೆಂಬರ್ 15ರಂದು ತಾಲೂಕಿನ ಮಂಠಾಳ ಗ್ರಾಮದ ಬಳಿ ಬಸವರಾಜ ನಾಗಯ್ಯ ಸ್ವಾಮಿ ಕೊಲೆ ಮಾಡಿದ್ದ.

ಪ್ರಕರಣದ ಹಿನ್ನೆಲೆ: ಕೊಲೆಯಾದ ವಿಜಯಕುಮಾರ ಧಾರೂರಕರ್ ಹಾಗೂ ಬಸವರಾಜ ಇಬ್ಬರು ಸ್ನೇಹಿತರಾಗಿದ್ದರು. 2013 ನವೆಂಬರ್ 15 ರಂದು ಸಂಜೆ ಉಮರ್ಗಾ ಚೌರಸ್ತಾ ಬಳಿ ಆಕಸ್ಮಿಕ ಭೇಟಿಯಾಗಿದ್ದು, ನಂತರ ಇಬ್ಬರು ಕೂಡಿ ಡಾಬಾ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಇದೇ ವೇಳೆ ಅಪರಾಧಿ ಬಸವರಾಜ ಕೊಲೆಯಾದ ವಿಜಯಕುಮಾರನ ಬಳಿ 5 ಸಾವಿರ ರೂ. ಹಣ ಸಾಲ ಕೇಳಿದ್ದ, ಹೀಗಾಗಿ ಹಣ ನೀಡಲೆಂದು ವಿಜಯಕುಮಾರ ಬಸವರಾಜನೊಂದಿಗೆ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿ 5 ಸಾವಿರ ರೂ. ನೀಡಿದ್ದ. ಹಣ ಡ್ರಾ ಮಾಡುವಾಗ ಎಟಿಎಂ ಪಿನ್ ಸಂಖ್ಯೆ ಗಮನಿಸಿದ ಅಪರಾಧಿ ಬಸವರಾಜ, ನಂತರ ವಿಜಯಕುಮಾರನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕ್ ಮೇಲೆ ಮಂಠಾಳ ಕಡೆಗೆ ಕರೆದುಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವದ ಮೇಲಿನ ಸಂಪೂರ್ಣ ಬಟ್ಟೆ ಹಾಗೂ ಎಟಿಎಂ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಆರೋಪಿ ನಾಪತ್ತೆಯಾಗಿದ್ದ.

ನಂತರ ಮೂರು ದಿಗಳ ಕಾಲ ಮಹಾರಾಷ್ಟ್ರದ ಉಮರ್ಗಾ ಹಾಗೂ ಪೂನಾ ನಗರದ ವಿವಿಧ ಎಟಿಎಂಗಳಲ್ಲಿ 80 ಸಾವಿರಕ್ಕೂ ಅಧಿಕ ಹಣ ಡ್ರಾ ಮಾಡಿಕೊಂಡಿದ್ದ. ಕೊಲೆಯಾದ ನಾಲ್ಕು ದಿನಗಳ ನಂತರ ಶವ ಪತ್ತೆಯಾಗಿದ್ದನ್ನು ಗಮನಿಸಿದ ಮಂಠಾಳ ಪೊಲೀಸರ ತಂಡ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಪರಾಧಿ ಪತ್ತೆಗೆ ಜಾಲ ಬೀಸಿತ್ತು. ಅಂದಿನ ಮಂಠಾಳ ಸಿಪಿಐ(ಈಗ ಡಿವೈಎಸ್ಪಿ) ಶಿವನಗೌಡ ಪಾಟೀಲ ನೇತೃತ್ವದ ತಂಡ, ತನಿಖೆ ನಡೆಸಿ, ಮಹಾರಾಷ್ಟ್ರದ ವಿವಿಧ ಎಟಿಎಂಗಳಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಅಪರಾಧಿಯನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು.

ಬಸವಕಲ್ಯಾಣ: ಹಣದ ಆಸೆಗಾಗಿ ಗೆಳೆಯನನ್ನು ಕೊಲೆ ಮಾಡಿದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ಮುರುಮ್ ಗ್ರಾಮದ ನಿವಾಸಿ ಬಸವರಾಜ ನಾಗಯ್ಯ ಸ್ವಾಮಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಮುರುಮ್ ಗ್ರಾಮದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದ ಉಸ್ಮಾನಾಬಾದ್​ ಮೂಲದ ವಿಜಯಕುಮಾರ ಧಾರೂರಕರ್ ಎನ್ನುವ ವ್ಯಕ್ತಿಯನ್ನು 2013 ನವೆಂಬರ್ 15ರಂದು ತಾಲೂಕಿನ ಮಂಠಾಳ ಗ್ರಾಮದ ಬಳಿ ಬಸವರಾಜ ನಾಗಯ್ಯ ಸ್ವಾಮಿ ಕೊಲೆ ಮಾಡಿದ್ದ.

ಪ್ರಕರಣದ ಹಿನ್ನೆಲೆ: ಕೊಲೆಯಾದ ವಿಜಯಕುಮಾರ ಧಾರೂರಕರ್ ಹಾಗೂ ಬಸವರಾಜ ಇಬ್ಬರು ಸ್ನೇಹಿತರಾಗಿದ್ದರು. 2013 ನವೆಂಬರ್ 15 ರಂದು ಸಂಜೆ ಉಮರ್ಗಾ ಚೌರಸ್ತಾ ಬಳಿ ಆಕಸ್ಮಿಕ ಭೇಟಿಯಾಗಿದ್ದು, ನಂತರ ಇಬ್ಬರು ಕೂಡಿ ಡಾಬಾ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಇದೇ ವೇಳೆ ಅಪರಾಧಿ ಬಸವರಾಜ ಕೊಲೆಯಾದ ವಿಜಯಕುಮಾರನ ಬಳಿ 5 ಸಾವಿರ ರೂ. ಹಣ ಸಾಲ ಕೇಳಿದ್ದ, ಹೀಗಾಗಿ ಹಣ ನೀಡಲೆಂದು ವಿಜಯಕುಮಾರ ಬಸವರಾಜನೊಂದಿಗೆ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿ 5 ಸಾವಿರ ರೂ. ನೀಡಿದ್ದ. ಹಣ ಡ್ರಾ ಮಾಡುವಾಗ ಎಟಿಎಂ ಪಿನ್ ಸಂಖ್ಯೆ ಗಮನಿಸಿದ ಅಪರಾಧಿ ಬಸವರಾಜ, ನಂತರ ವಿಜಯಕುಮಾರನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕ್ ಮೇಲೆ ಮಂಠಾಳ ಕಡೆಗೆ ಕರೆದುಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವದ ಮೇಲಿನ ಸಂಪೂರ್ಣ ಬಟ್ಟೆ ಹಾಗೂ ಎಟಿಎಂ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಆರೋಪಿ ನಾಪತ್ತೆಯಾಗಿದ್ದ.

ನಂತರ ಮೂರು ದಿಗಳ ಕಾಲ ಮಹಾರಾಷ್ಟ್ರದ ಉಮರ್ಗಾ ಹಾಗೂ ಪೂನಾ ನಗರದ ವಿವಿಧ ಎಟಿಎಂಗಳಲ್ಲಿ 80 ಸಾವಿರಕ್ಕೂ ಅಧಿಕ ಹಣ ಡ್ರಾ ಮಾಡಿಕೊಂಡಿದ್ದ. ಕೊಲೆಯಾದ ನಾಲ್ಕು ದಿನಗಳ ನಂತರ ಶವ ಪತ್ತೆಯಾಗಿದ್ದನ್ನು ಗಮನಿಸಿದ ಮಂಠಾಳ ಪೊಲೀಸರ ತಂಡ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಪರಾಧಿ ಪತ್ತೆಗೆ ಜಾಲ ಬೀಸಿತ್ತು. ಅಂದಿನ ಮಂಠಾಳ ಸಿಪಿಐ(ಈಗ ಡಿವೈಎಸ್ಪಿ) ಶಿವನಗೌಡ ಪಾಟೀಲ ನೇತೃತ್ವದ ತಂಡ, ತನಿಖೆ ನಡೆಸಿ, ಮಹಾರಾಷ್ಟ್ರದ ವಿವಿಧ ಎಟಿಎಂಗಳಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಅಪರಾಧಿಯನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು.

Intro:
ಎರಡು ವಿಡಿಯೊ ಕಳಿಸಲಾಗಿದೆ


ಬಸವಕಲ್ಯಾಣ: ಹಣದ ಆಸೆಗಾಗಿ ಗೆಳೆಯನನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿಯ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೬೦ ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ಮುರುಮ್ ಗ್ರಾಮದ ನಿವಾಸಿ ಬಸವರಾಜ ನಾಗಯ್ಯ ಸ್ವಾಮಿ ಶಿಕ್ಷೆಗೆ ಗುರಿಯಾದ ಆರೋಪಿ.
ಮುರುಮ್ ಗ್ರಾಮದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದ ಉಸ್ಮಾನಬಾದ ಮೂಲದ ವಿಜಯಕುಮಾರ ಧಾರೂರಕರ್ ಎನ್ನುವ ವ್ಯಕ್ತಿಯನ್ನು ೨೦೧೩ ನವೆಂಬರ್ ೧೫ ರಂದು ತಾಲೂಕಿನ ಮಂಠಾಳ ಗ್ರಾಮದ ಬಳಿ ಕೊಲೆ ನಡೆದಿತ್ತು.
ಘಟನೆ ವಿವರ: ಕೊಲೆಯಾದ ವಿಜಯಕುಮಾರ ಧಾರೂರಕರ್ ಹಾಗೂ ಆರೋಪಿ ಬಸವರಾಜ ಸ್ವಾಮಿ ಸ್ನೇಹಿರಾತಗಿದ್ದರು.
೨೦೧೩ ನವೆಂಬರ್ ೧೫ ರಂದು ಸಂಜೆ ಉಮ್ಮರ್ಗಾ ಚೌರಸ್ತಾ ಬಳಿ ಆಕಸ್ಮಿಕ ಭೇಟಿಯಾಗಿದ್ದು, ನಂತರ ಇಬ್ಬರು ಕೂಡಿ ಧಾಬಾ ಒಂದರಲ್ಲಿ ಮದ್ಯ ಸೇವಿಸಿದ್ದಾರೆ.
ಇದೇ ವೇಳೆ ಆರೋಪಿ ಬಸವರಾಜ ಕೊಲೆಯಾದ ವಿಜಯಕುಮಾರನ ಬಳಿ ೫ ಸಾವಿ ರೂ. ಹಣ ಸಾಲ ಕೇಳಿದ್ದ, ಹೀಗಾಗಿ ಹಣ ನೀಡಲೆಂದು ವಿಜಯಕುಮಾರ ಬಸವರಾಜನೊಂದಿಗೆ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿ ೫ ಸಾವಿರ ರೂ. ನೀಡಿದ್ದ.
ಹಣ ಡ್ರಾ ಮಾಡುವಾಗ ಎಟಿಎಂ ಪಿನ್ ಸಂಖ್ಯೆ ಗಮನಿಸಿದ ಆರೋಪಿ ಬಸವರಾಜ, ನಂತರ ವಿಜಯಕುಮಾರನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕ್ ಮೇಲೆ ಮಂಠಾಳ ಕಡೆಗೆ ಕರೆದುಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವದ ಮೇಲಿನ ಸಂಪೂರ್ಣ ಬಟ್ಟೆ ಹಾಗೂ ಎಟಿಎಂ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಆರೋಪಿ ನಾಪತ್ತೆಯಾಗಿದ್ದ.
ನಂತರ ಮೂರು ದಿಗಳ ಕಾಲ ಮಹಾರಾಷ್ಟçದ ಉಮ್ಮರ್ಗಾ ಹಾಗೂ ಪೂನಾ ನಗರದ ವಿವಿಧ ಎಟಿಎಂಗಳಲ್ಲಿ ೮೦ ಸಾವಿರಕ್ಕೂ ಅಧಿಕ ಹಣ ಡ್ರಾ ಮಾಡಿಕೊಂಡಿದ್ದ.
ಕೊಲೆಯಾದ ನಾಲ್ಕುದಿನಗಳ ನಂತರ ಶವ ಪತ್ತೆಯಾಗಿದ್ದನ್ನು ಗಮನಿಸಿದ ಮಂಠಾಳ ಪೊಲೀಸರ ತಂಡ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಜಾಲ ಬಿಸಿತ್ತು.
ಅಂದಿನ ಮಂಠಾಳ ಸಿಪಿಐ(ಈಗ ಡಿವೈಎಸ್ಪಿ) ಶಿವನಗೌಡ ಪಾಟೀಲ ನೇತೃತ್ವದ ತಂಡ, ತನಿಖೆ ನಡೆಸಿ, ಮಹಾರಾಷ್ಟçದ ವಿವಿಧ ಎಟಿಎಂಗಳಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಆರೋಪಿ ಬಸವರಾಜ ಸ್ವಾಮಿ ಎನ್ನುವಾತನನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು.
ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಕಣುಮಯ್ಯ ನವರು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವ ಜೊತೆಗೆ ೬೦ ಸಾವಿರ ರೂ. ದಂಢ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ದೂರುದಾರರ ಪರ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಪತ್ತಾರ ವಾದ ಮಂಡಿಸಿದ್ದಾರೆ.


ಒಂದು ವಿಡಿಯೊ ನ್ಯಾಯಾಲಯದ್ದು, ಮತ್ತೊಂದು ವಿಡಿಯೊದಲ್ಲಿ ಕೈ ಕಟ್ಟಿ ನಿಂತಿರುವ ಆರೋಪಿದ್ದು ಆಗಿದೆ




ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.