ETV Bharat / state

ಬೀದರ್​ ಪಶು ವಿವಿಯಲ್ಲಿ ₹ 32 ಕೋಟಿ ಅವ್ಯವಹಾರ... ತನಿಖೆಗೆ ಸಚಿವರ ಸೂಚನೆ - ಬೀದರ್ ಗೋಲ್​ಮಾಲ್​ ಸುದ್ದಿ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸಂಘಟನೆಯೊಂದು ಆರೋಪಿಸಿ ದೂರು ನೀಡಿದೆ.

ಸಚಿವ ಪ್ರಭು ಚವ್ಹಾಣ್
author img

By

Published : Nov 13, 2019, 7:01 AM IST

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ದೂರು ನೀಡಲಾಗಿದೆ.

ಬೀದರ್​ ಪಶು ವಿವಿಗೆ ಸಚಿವ ಪ್ರಭು ಚವ್ಹಾಣ್ ಭೇಟಿದೂರನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯಕ್ಕೆ ದಿಢೀರನೇ ಭೇಟಿ ನೀಡಿ ಲಿಖಿತವಾಗಿ ಬಂದ 32 ಕೋಟಿ ರೂ.ಗಳ ಅವ್ಯವಹಾರ ದೂರಿನ ಬಗ್ಗೆ ಸಚಿವರು ಕುಲಪತಿಯೊಂದಿಗೆ ಚರ್ಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡುವಂತೆ ವಿವಿಯ ಉಪ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಅಂತಹ ಯಾವುದೇ ಅವ್ಯವಹಾರ ವಿವಿಯಲ್ಲಿ ನಡೆದಿಲ್ಲ ಎಂದು ಉಪ ಕುಲಪತಿ ಸ್ಪಷ್ಟನೆ ನೀಡಿದ್ದರೂ ಸಮಾಧಾನಗೊಳ್ಳದ ಸಚಿವರು, ತನಿಖಾ ವರದಿ ನೀಡುವಂತೆ ಸೂಚಿಸಿದರು.

ಒಂದು ವೇಳೆ ಅವ್ಯವಹಾರ ನಡೆದಿರುವುದು ಸಾಬೀತಾದಲ್ಲಿ ಕುಲಪತಿಯವರ ಮೇಲೆ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಈ ಬಳಿಕ ಅಚಿವರು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಬೀದರ್: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ದೂರು ನೀಡಲಾಗಿದೆ.

ಬೀದರ್​ ಪಶು ವಿವಿಗೆ ಸಚಿವ ಪ್ರಭು ಚವ್ಹಾಣ್ ಭೇಟಿದೂರನ್ನು ಗಂಭೀರವಾಗಿ ತೆಗೆದುಕೊಂಡ ಸಚಿವರು, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯಕ್ಕೆ ದಿಢೀರನೇ ಭೇಟಿ ನೀಡಿ ಲಿಖಿತವಾಗಿ ಬಂದ 32 ಕೋಟಿ ರೂ.ಗಳ ಅವ್ಯವಹಾರ ದೂರಿನ ಬಗ್ಗೆ ಸಚಿವರು ಕುಲಪತಿಯೊಂದಿಗೆ ಚರ್ಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡುವಂತೆ ವಿವಿಯ ಉಪ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ ಅವರಿಗೆ ಸೂಚಿಸಿದ್ದಾರೆ.

ಅಂತಹ ಯಾವುದೇ ಅವ್ಯವಹಾರ ವಿವಿಯಲ್ಲಿ ನಡೆದಿಲ್ಲ ಎಂದು ಉಪ ಕುಲಪತಿ ಸ್ಪಷ್ಟನೆ ನೀಡಿದ್ದರೂ ಸಮಾಧಾನಗೊಳ್ಳದ ಸಚಿವರು, ತನಿಖಾ ವರದಿ ನೀಡುವಂತೆ ಸೂಚಿಸಿದರು.

ಒಂದು ವೇಳೆ ಅವ್ಯವಹಾರ ನಡೆದಿರುವುದು ಸಾಬೀತಾದಲ್ಲಿ ಕುಲಪತಿಯವರ ಮೇಲೆ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಈ ಬಳಿಕ ಅಚಿವರು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

Intro:ಪಶು ವಿವಿಯಲ್ಲಿ 32 ಕೋಟಿ ರು. ಗೊಲಮಾಲ್ ಪ್ರಕರಣ ತನಿಖೆಗೆ ಆದೇಶ...!

ಬೀದರ್:
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 32 ಕೋಟಿ ರೂ ಗಳ ಅವ್ಯವಹಾರ ನಡೆದಿದೆ ಎಂದು ಸಂಘಟನೆಯೊಂದು ಆರೋಪಿಸಿ ದೂರು ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ವರದಿ ಕೊಡಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ವಿವಿಯ ಉಪ ಕುಲಪತಿಗಳಾದ ಎಚ್.ಡಿ. ನಾರಾಯಣಸ್ವಾಮಿ ಅವರಿಗೆ ಖಡಕ್ ವಾರ್ನಿಂಗ್ ನೀಡಿದರು.

ನಗರದ ಕಮಠಾಣ ರಸ್ತೆಯಲ್ಲಿರುವ ಪಶು ವೈದ್ಯಕೀಯ ಮತ್ತು ಮಿನುಗಾರಿಕೆ ವಿಶ್ವ ವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ವೇಳೆಯಲ್ಲಿ, ತಮಗೆ ಲಿಖಿತವಾಗಿ ಬಂದಿರುವ 32 ಕೋಟಿ ರೂ.ಗಳ ಅವ್ಯವಹಾರದ ದೂರಿನ ಬಗ್ಗೆ ಸಚಿವರು ಕುಲಪತಿಯವರ ಗಮನಕ್ಕೆ ತಂದರು. ಆ ರೀತಿ ಏನೂ ಅವ್ಯವಹಾರ ನಡೆದಿಲ್ಲ ಎಂದು ಕುಲಪತಿಯವರು ಸಮಜಾಯಿಸಿ ನೀಡಿದರು ತೃಪ್ತಿಯಾಗದ ಸಚಿವ ಪ್ರಭು ಚವ್ಹಾಣ ತನಿಖಾ ವರದಿ ನೀಡುವಂತೆ ಸೂಚನೆ ನೀಡಿದರು.

32 ಕೋಟಿ ರೂ.ಗಳ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಎಂದು ಸಮಿತಿಯ ಸದಸ್ಯರು ವಿವಿ ಆವರಣದಲ್ಲಿ ಖುದ್ದು ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ ಪ್ರಸಂಗ ಕೂಡ ನಡೆಯಿತು. ಈ ಬಗ್ಗೆ ಪರಿಶೀಲನೆಗೊಳಪಡಿಸುತ್ತೇನೆ. ಒಂದು ವೇಳೆ ಅವ್ಯವಹಾರ ನಡೆದಿರುವುದು ಸಾಬೀತಾದಲ್ಲಿ ಕುಲಪತಿಯವರ ಮೇಲೆ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದರು. ತಾವು ಬರೀ ಬೆಂಗಳೂರು ಇರುತ್ತೀರಿ ಎನ್ನುವ ದೂರುಗಳಿವೆ. ಇದು ಸರಿಯಲ್ಲ. ಕೇಂದ್ರ ಸ್ಥಾನದಲ್ಲಿರಬೇಕು ಎಂದು ಸಚಿವರು, ಕುಲಪತಿ ನಾರಾಯಣಸ್ವಾಮಿ ಅವರ ಬೆವರಿಳಿಸಿದರು.

ವಿಶ್ವ ವಿದ್ಯಾಲಯದ ಹಲವಾರು ಕಡೆಗಳಲ್ಲಿ ಸಂಚರಿಸಿದ ಸಚಿವರು, ಆಯಾ ಕಡೆಗಳಲ್ಲಿ ವಿಪರೀತ ಬೆಳೆದು ನಿಂತಿದ್ದ ಕಸದ ಗಿಡಗಳನ್ನು ಕಂಡು ಗರಂ ಆದರು. ಅಲ್ಲದೆ ವಿವಿಯ ಕೊಠಡಿಯೊಂದರಲ್ಲಿ ಕಿಂಗ್ ಫೀಶರ್ ಬೀಯರ್ ಕವರ್ ಬಿದ್ದಿರುವುದು ನೋಡಿ ಕೆಂಡಾಮಂಡಲರಾದ ಸಚಿವ ಪ್ರಭು ಚವ್ಹಾಣ ವಿವಿ ಆವರಣದಲ್ಲಿ ಜೋರು ಪಾರ್ಟಿ ಮಾಡ್ತಿದ್ದಿರಾ ಎಂದು ಉಪಕುಲಪತಿಗಳ ಬೆವರಿಳಿಸಿದರು. ತಾವು ನಿಯಮಿತ ಎಲ್ಲ ಕಡೆ ಭೇಟಿ ನೀಡಿದರೆ ವಿವಿಯ ಆವರಣ ಹೀಗಿರುವುದಿಲ್ಲ. ವಿವಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ತಮ್ಮ ಕಂಟ್ರೋಲ್ ಇಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ ಎಂದು ಸಚಿವರು ಕುಲಪತಿಯವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೀದರ ಜಿಲ್ಲೆಯಲ್ಲಿ ಇಂತಹದ್ದೊಂದು ವಿಶ್ವವಿದ್ಯಾಲಯ ಇರುವುದು ನಮ್ಮ ಪುಣ್ಯ. ಇಲ್ಲಿ ಎಲ್ಲ ಕಾರ್ಯವು ಪಾರದರ್ಶಕವಾಗಿ ನಡೆಯಬೇಕು. ಇದರಿಂದ ಜಿಲ್ಲೆಯ ಜನತೆಗೆ ಒಳ್ಳೆಯದಾಗಬೇಕಿದೆ. ಆದರೆ, ವಿವಿಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಲ್ಲಿನ ದೇವಣಿ ತಳಿ ಬಗ್ಗೆ ದೂರುಗಳು ಬಂದಿವೆ. ಸಿಬ್ಬಂದಿ ನೇಮಕಾತಿ ಸರಿಯಾಗಿ ನಡೆದಿಲ್ಲ ಎನ್ನುವ ದೂರುಗಳಿವೆ. ಹೀಗಾಗಿ ವಿವಿಯ ಆವರಣದಲ್ಲಿ ದೂರು ಪೆಟ್ಟಿಗೆ ಇಡಲಾಗುವುದು. ಏನೇ ದೂರು ಬಂದರೂ ಅದನ್ನು ತಾವೇ ಖುದ್ದು ಪರಿಶೀಲಿಸಬೇಕು ಎಂದು ಕುಲಪತಿಯವರಿಗೆ ಸಚಿವ ಚವ್ಹಾಣ ಸೂಚಿಸಿದರು.

ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರ ಮುಂದೆ ಅಲ್ಲಿನ ವಿದ್ಯಾರ್ಥಿನಿಯರು, ವಸತಿ ನಿಲಯದಲ್ಲಿ ಗುಣಮಟ್ಟದ ಊಟ ಕೊಡುತ್ತಿಲ್ಲ. ಕುಡಿಯುವ ನೀರು ಸರಿ ಇಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ತಿಳಿಸಿದರು. ಇದೆಲ್ಲವನ್ನು ವಾರದೊಳಗೆ ಸರಿಪಡಿಸಬೇಕು ಎಂದು ಸಚಿವರು ಕುಲಪತಿಗಳು ಮತ್ತು ಇತರೆ ಅಧಿಕಾರಿಗಳಿಗೆ
ವಾರದ ಗಡುವು ವಿದಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಾರುತಿ ಚವ್ಹಾಣ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ,
ವಿವಿಯ ರಿಜಿಸ್ಟರ್ ಕೆ.ಸಿ.ವೀರಣ್ಣ ಹಾಗೂ ಇತರರು ಇದ್ದರು.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.