ETV Bharat / state

ಶ್ರೀರಾಮಚಂದ್ರ ಕಾಲ ಕಳೆದ ಮಾಲ್ಯವಂತ ರಘುನಾಥ್ ದೇವಾಲಯ...ನಿತ್ಯ ರಾಮಭಕ್ತರಿಂದ ವಿಶೇಷ ಪೂಜೆ

author img

By

Published : Oct 10, 2019, 12:46 PM IST

ಶ್ರೀ ರಾಮ ಹಂಪಿಯ ಮಾಲ್ಯವಂತ ಗುಡ್ಡದಲ್ಲಿ ಕೆಲ ಕಾಲ ಇದ್ದನೆಂಬ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ರಾಮನ ಭಕ್ತರು ಆಗಮಿಸಿ ವಿಶೇಷ ಪೂಜೆ ಸಮರ್ಪಿಸುತ್ತಾರೆ.

ಶ್ರೀರಾಮಚಂದ್ರ ಕಾಲ ಕಳೆದ ಮಾಲ್ಯವಂತ ರಘುನಾಥ್ ದೇವಾಲಯ...ಪ್ರತಿದಿನ ರಾಮಭಕ್ತರಿಂದ ವಿಶೇಷ ಪೂಜೆ

ಹೊಸಪೇಟೆ: ಶ್ರೀ ರಾಮ ಹಂಪಿಯ ಮಾಲ್ಯವಂತ ಗುಡ್ಡದಲ್ಲಿ ಕೆಲ ಕಾಲ ಇದ್ದನೆಂಬ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ರಾಮನ ಭಕ್ತರು ಆಗಮಿಸಿ ವಿಶೇಷ ಪೂಜೆ ಮಾಡಿಸುತ್ತಾರೆಂದು ರಘುನಾಥ ದೇವಾಲಯದ ಅರ್ಚಕರಾದ ಮನೀಷ್ ಮಾಲ್ಯವಂತ ಮಾಹಿತಿ ಹಂಚಿಕೊಂಡಿದ್ದಾರೆ.

ಸೀತೆಯನ್ನು ಹುಡುಕಿಕೊಂಡು ಬಂದ ಶ್ರೀರಾಮ ಮತ್ತು ತಮ್ಮ ಲಕ್ಷ್ಮಣ ಮಳೆಗಾಲದ ಸಮಯದಲ್ಲಿ ಇಲ್ಲಿ ಕೆಲ ಕಾಲ ಕಳೆದಿದ್ದರು ಎಂಬ ಪ್ರತೀಕ ಮಾಲ್ಯವಂತ ರಘುನಾಥ್ ದೇವಾಲಯದ ಕುರುಹುಗಳು ತಿಳಿಸುತ್ತಿವೆ. ರಾಮನು ಯಾವ ಸ್ಥಳದಲ್ಲಿಯೂ ಕೆಲಕಾಲ ಕುಳಿತುಕೊಂಡಿಲ್ಲ, ಆದರೆ, ಮಾಲ್ಯವಂತ ಬೆಟ್ಟದಲ್ಲಿ‌ ಮಾತ್ರ ಕುಳಿತುಕೊಂಡಿದ್ದಾನೆಂದು ರಾಮಾಯಣ ಕಥೆಗಳು ತಿಳಿಸುತ್ತವೆ.

ಶ್ರೀರಾಮಚಂದ್ರ ಕಾಲ ಕಳೆದ ಮಾಲ್ಯವಂತ ರಘುನಾಥ್ ದೇವಾಲಯ...ನಿತ್ಯ ರಾಮಭಕ್ತರಿಂದ ವಿಶೇಷ ಪೂಜೆ

ಶ್ರೀ ರಾಮ ಮತ್ತು ಲಕ್ಷ್ಮಣ ಮಾಲ್ಯವಂತ ಬೆಟ್ಟಕ್ಕೆ ಬಂದ ಸಮಯದಲ್ಲಿ ಆಂಜನೇಯ ಆನೆಗೊಂದಿಯ ಬೆಟ್ಟದ ಮೇಲೆ ನಿಂತು ಇವರನ್ನು ವೀಕ್ಷಣೆ ಮಾಡುತ್ತಿದ್ದ ಎನ್ನಲಾಗುತ್ತದೆ. ವಿಜಯ ನಗರದ ಸುತ್ತಮುತ್ತಲಿನಲ್ಲಿ ಶ್ರೀ ರಾಮ, ಲಕ್ಷ್ಮಣ ,ಅಂಜೇನೆಯ ಹಾಗೂ ವಾಲಿ ಮತ್ತು ಸುಗ್ರೀವರು ಇಲ್ಲಿದ್ದರು ಎಂದು ಸಾಕಷ್ಟು ಪುರಾವೆಗಳು ಸಿಗುತ್ತವೆ.

ಮಾಲ್ಯವಂತ ದೇವಾಲಯದ ವೈಶಿಷ್ಟ್ಯತೆ: 16ನೇ ಶತಮಾನದಲ್ಲಿ ನಿರ್ಮಿಸಲಾದ ಬೃಹತ್ತಾಕಾರದ ಈ ದೇವಾಲಯದ ಮುಂಭಾಗದಲ್ಲಿ ಒಂದು ವೇದಿಕೆಯನ್ನು ಕಟ್ಟಲಾಗಿದೆ. ಇದರ ಮೇಲೆ ಶ್ರೀ ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹವನ್ನು ಕೆತ್ತಲಾಗಿದೆ. ಕಲ್ಲಿನಲ್ಲಿ ಆಂಜನೇಯನ ಚಿತ್ರವನ್ನು ಬಿಡಿಸಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇದು ಪೂರ್ವಾಭಿಮುಖವಾಗಿದೆ ಹಾಗೂ ತಲವಿನ್ಯಾಸದಲ್ಲಿ ಗರ್ಭಗೃಹ ಹೊಂದಿದೆ. ಅಂತರಾಳದಲ್ಲಿ ಸ್ತಂಭಗಳುಳ್ಳ ಮಹಾಮಂಟಪವಿದೆ. ಗುಡಿಯ ಉತ್ತರಕ್ಕೆ ದೇವಿಯ ಮಂದಿರವನ್ನು ಕಟ್ಟಲಾಗಿದ್ದು ಈ ಮಂದಿರಕ್ಕೆ ಉನ್ನತವಾದ ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ಪೂರ್ವ ಮತ್ತು ದಕ್ಷಿಣದಲ್ಲಿ ಈ ದ್ವಾರಗಳಿಂದ ಗುಡಿಯ ಪ್ರವೇಶವನ್ನು ಮಾಡಬಹುದಾಗಿದೆ. ಶ್ರೀರಾಮ ನೆಲೆಸಿದ್ದ ಎನ್ನುವ ಕಾರಣಕ್ಕೆ ರಾಮನ ಭಕ್ತರು ಇಲ್ಲಿ ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ಬಳಿಕ ಕಿಸ್ಕಿಂದ ಬೆಟ್ಟದಲ್ಲಿರುವ ಆಂಜನೇಯನ ದೇವಾಸ್ಥಾನಕ್ಕೆ ಹೋಗುತ್ತಾರೆ.

ಹೊಸಪೇಟೆ: ಶ್ರೀ ರಾಮ ಹಂಪಿಯ ಮಾಲ್ಯವಂತ ಗುಡ್ಡದಲ್ಲಿ ಕೆಲ ಕಾಲ ಇದ್ದನೆಂಬ ಹಿನ್ನೆಲೆಯಲ್ಲಿ, ಈ ಸ್ಥಳಕ್ಕೆ ರಾಮನ ಭಕ್ತರು ಆಗಮಿಸಿ ವಿಶೇಷ ಪೂಜೆ ಮಾಡಿಸುತ್ತಾರೆಂದು ರಘುನಾಥ ದೇವಾಲಯದ ಅರ್ಚಕರಾದ ಮನೀಷ್ ಮಾಲ್ಯವಂತ ಮಾಹಿತಿ ಹಂಚಿಕೊಂಡಿದ್ದಾರೆ.

ಸೀತೆಯನ್ನು ಹುಡುಕಿಕೊಂಡು ಬಂದ ಶ್ರೀರಾಮ ಮತ್ತು ತಮ್ಮ ಲಕ್ಷ್ಮಣ ಮಳೆಗಾಲದ ಸಮಯದಲ್ಲಿ ಇಲ್ಲಿ ಕೆಲ ಕಾಲ ಕಳೆದಿದ್ದರು ಎಂಬ ಪ್ರತೀಕ ಮಾಲ್ಯವಂತ ರಘುನಾಥ್ ದೇವಾಲಯದ ಕುರುಹುಗಳು ತಿಳಿಸುತ್ತಿವೆ. ರಾಮನು ಯಾವ ಸ್ಥಳದಲ್ಲಿಯೂ ಕೆಲಕಾಲ ಕುಳಿತುಕೊಂಡಿಲ್ಲ, ಆದರೆ, ಮಾಲ್ಯವಂತ ಬೆಟ್ಟದಲ್ಲಿ‌ ಮಾತ್ರ ಕುಳಿತುಕೊಂಡಿದ್ದಾನೆಂದು ರಾಮಾಯಣ ಕಥೆಗಳು ತಿಳಿಸುತ್ತವೆ.

ಶ್ರೀರಾಮಚಂದ್ರ ಕಾಲ ಕಳೆದ ಮಾಲ್ಯವಂತ ರಘುನಾಥ್ ದೇವಾಲಯ...ನಿತ್ಯ ರಾಮಭಕ್ತರಿಂದ ವಿಶೇಷ ಪೂಜೆ

ಶ್ರೀ ರಾಮ ಮತ್ತು ಲಕ್ಷ್ಮಣ ಮಾಲ್ಯವಂತ ಬೆಟ್ಟಕ್ಕೆ ಬಂದ ಸಮಯದಲ್ಲಿ ಆಂಜನೇಯ ಆನೆಗೊಂದಿಯ ಬೆಟ್ಟದ ಮೇಲೆ ನಿಂತು ಇವರನ್ನು ವೀಕ್ಷಣೆ ಮಾಡುತ್ತಿದ್ದ ಎನ್ನಲಾಗುತ್ತದೆ. ವಿಜಯ ನಗರದ ಸುತ್ತಮುತ್ತಲಿನಲ್ಲಿ ಶ್ರೀ ರಾಮ, ಲಕ್ಷ್ಮಣ ,ಅಂಜೇನೆಯ ಹಾಗೂ ವಾಲಿ ಮತ್ತು ಸುಗ್ರೀವರು ಇಲ್ಲಿದ್ದರು ಎಂದು ಸಾಕಷ್ಟು ಪುರಾವೆಗಳು ಸಿಗುತ್ತವೆ.

ಮಾಲ್ಯವಂತ ದೇವಾಲಯದ ವೈಶಿಷ್ಟ್ಯತೆ: 16ನೇ ಶತಮಾನದಲ್ಲಿ ನಿರ್ಮಿಸಲಾದ ಬೃಹತ್ತಾಕಾರದ ಈ ದೇವಾಲಯದ ಮುಂಭಾಗದಲ್ಲಿ ಒಂದು ವೇದಿಕೆಯನ್ನು ಕಟ್ಟಲಾಗಿದೆ. ಇದರ ಮೇಲೆ ಶ್ರೀ ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹವನ್ನು ಕೆತ್ತಲಾಗಿದೆ. ಕಲ್ಲಿನಲ್ಲಿ ಆಂಜನೇಯನ ಚಿತ್ರವನ್ನು ಬಿಡಿಸಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇದು ಪೂರ್ವಾಭಿಮುಖವಾಗಿದೆ ಹಾಗೂ ತಲವಿನ್ಯಾಸದಲ್ಲಿ ಗರ್ಭಗೃಹ ಹೊಂದಿದೆ. ಅಂತರಾಳದಲ್ಲಿ ಸ್ತಂಭಗಳುಳ್ಳ ಮಹಾಮಂಟಪವಿದೆ. ಗುಡಿಯ ಉತ್ತರಕ್ಕೆ ದೇವಿಯ ಮಂದಿರವನ್ನು ಕಟ್ಟಲಾಗಿದ್ದು ಈ ಮಂದಿರಕ್ಕೆ ಉನ್ನತವಾದ ಎರಡು ದ್ವಾರಗಳನ್ನು ನಿರ್ಮಿಸಲಾಗಿದೆ. ಪೂರ್ವ ಮತ್ತು ದಕ್ಷಿಣದಲ್ಲಿ ಈ ದ್ವಾರಗಳಿಂದ ಗುಡಿಯ ಪ್ರವೇಶವನ್ನು ಮಾಡಬಹುದಾಗಿದೆ. ಶ್ರೀರಾಮ ನೆಲೆಸಿದ್ದ ಎನ್ನುವ ಕಾರಣಕ್ಕೆ ರಾಮನ ಭಕ್ತರು ಇಲ್ಲಿ ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ಬಳಿಕ ಕಿಸ್ಕಿಂದ ಬೆಟ್ಟದಲ್ಲಿರುವ ಆಂಜನೇಯನ ದೇವಾಸ್ಥಾನಕ್ಕೆ ಹೋಗುತ್ತಾರೆ.

Intro:ಶ್ರೀ ರಾಮ ಚಂದ್ರ ಕಾಲ ಕಳೆದ ಮಾಲ್ಯವಂತ ರಘುನಾಥ್ ದೇವಾಲಯ: ಹಂಪೆ
ಹೊಸಪೇಟೆ : ಹಿಂಧೂ ದೇವರುಗಳೆಂದು ಕಾಯ,ವಾಚ, ಮನಸಿನಿಂದ ಪೂಜೆ ಮಾಡುವ ಶ್ರೀ ರಾಮ ಹಂಪೆಯ ಮಾಲ್ಯವಂತ ಗುಡ್ಡದಲ್ಲಿ ಇದ್ದನು. ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಮತ್ತು ತಮ್ಮ ಲಕ್ಷ್ಮಣನು ಮಳೆಗಾಲದ ಸಮಯದಲ್ಲಿ ಕಾಲವನ್ನು ಕಳೆದನು ಎಂಬ ಪ್ರತೀಕವನ್ನು ಮಾಲ್ಯವಂತ ರಘುನಾಥ್ ದೇವಲಯದ ಕುರುಗಳು ತಿಳಿಸುತ್ತದೆ. ರಾಮನು ಯಾವ ಸ್ಥಳದಲ್ಲಿಯೂ ಕುಳಿತುಕೊಂಡಿರುವುದಿಲ್ಲ. ಮಾಲ್ಯವಂತ ಬೆಟ್ಟದಲ್ಲಿ‌ಮಾತ್ರ ಕುಳಿತುಕೊಂಡಿದ್ದಾನೆ ಎಂದು ರಾಮಾಯಣ ತಿಳಿಸುತ್ತದೆ.



Body:
ಶ್ರೀ ರಾಮ ಮತ್ತು ಲಕ್ಷ್ಮಣನು ಮಾಲ್ಯವಂತ ಬೆಟ್ಟಕ್ಕೆ ಬಂದ ಸಮಯದಲ್ಲಿ ಆಂಜನೇಯನು ಆನೆಗೊಂದಿಯ ಬೆಟ್ಟದ ಮೇಲೆ ನಿಂತು ಇವರನ್ನು ವಿಕ್ಷಣ ಮಾಡುತ್ತಿದ್ದ ಎನ್ನುತ್ತಾರೆ. ವಿಜಯ ನಗರದ ಸುತ್ತಮುತ್ತಲಿನಲ್ಲಿ ರಾಮಾಯಣ ಕಾಲದಲ್ಲಿ ಇಲ್ಲಿ ಶ್ರೀ ರಾಮ, ಲಕ್ಷ್ಮಣ ,ಅಂಜೇನೆಯ, ಹಾಗೂ ವಾಲಿ ಮತ್ತು ಸುಗ್ರೀವರು ಇಲ್ಲಿದ್ದರೆಂದು ಸಾಕಷ್ಟು ಪುರಾವೆಗಳು ಸಿಗುತ್ತವೆ.
ಮಾಲ್ಯವಂತ ದೇವಾಲಯದ ವೈಶಿಷ್ಟ್ಯತೆ.
ಈ ದೇವಾಲಯವು ಬೃಹತ್ತಾಕರದ ಬಂಡೆಯ ಕಲ್ಲನ್ನು ಹೊಂದಿದೆ. ಇದನ್ನು 16 ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ದೊಡ್ಡದಾದ ಬಂಡೆಯ ಮುಂಭಾಗದಲ್ಲಿ ಒಂದು ವೇದಿಕೆಯನ್ನು ಕಟ್ಟಲಾಗಿದೆ. ಇದರ ಮೇಲೆ ಶ್ರೀ ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹ ವನ್ನು ಕೆತ್ತಲಾಗಿದೆ. ಕಲ್ಲಿನಲ್ಲಿ ಆಂಜನೇಯನ ಚಿತ್ರವನ್ನು ಬಿಡಿಸಲಾಗಿದೆ. ಈ ದೇವಸ್ಥಾನವನ್ನು ವಿಜಯ ನಗರ ಸಾಮ್ರಾಜ್ಯದ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇದು ಪೂರ್ವಾಭಿಮುಖವಾಗಿದೆ. ತಲವಿನ್ಯಾಸದಲ್ಲಿ ಗರ್ಭಗೃಹವನ್ನು ಹೊಂದಿದೆ. ಅಂತರಾಳದಲ್ಲಿ ಸ್ತಂಭಗಳುಳ್ಳ ಮಹಾಮಂಟಪವಿದೆ. ಗುಡಿಯ ಉತ್ತರಕ್ಕೆ ದೇವಿಯ ಮಂದಿರವನ್ನು ಕಟ್ಟಲಾಗಿದೆ. ಈ ಮಂದಿರಕ್ಕೆ ಉನ್ನತವಾದ ಎರಡು ದ್ವಾರಗಳನ್ನು ನಿರ್ಮಿಸಿದ್ದಾರೆ.ಪೂರ್ವ ಮತ್ತು ದಕ್ಷಿಣದಲ್ಲಿ ಇವುಗಳಿಂದ ಗುಡಿಯ ಪ್ರವೇಶವನ್ನು ಮಾಡಬಹುದಾಗಿದೆ.
ಶ್ರೀ ರಾಮನು ಇಲ್ಲಿ ಬಂದಿದ್ದ ಎಂದು ದಿನಾಲೂ ಈ ಸ್ಥಳಕ್ಕೆ ರಾಮನ ಭಕ್ತರು ವಿಶೇಷ ಪೂಜೆಯನ್ನು ಮಾಡಿಸುತ್ತಾರೆ. ನಂತರದಲ್ಲಿ ಕಿಸ್ಕಿಂದ ಬೆಟ್ಟದಲ್ಲಿರುವ ಆಂಜನೇಯನ ದೇವಾಸ್ಥಾನಕ್ಕೆ ಹೋಗುತ್ತಾರೆಂದು ಅರ್ಚಕರಾದ ಮನೀಷ್ ಹೇಳಿದರು.



Conclusion:KN_ HPT_5_ SHREE RAM SPEND TIME IN HAMPE MALYAVANT TEMPLE VISUALS_KA10028
bite : ಮನೀಷ್ ಮಾಲ್ಯವಂತ ರಘುನಾಥ ದೇವಲಯದ ಅರ್ಚಕರು.
ಶ್ರೀ ರಾಮ ಚಂದ್ರ ಹಾಗೂ ಲಕ್ಷಣನು ಮಾಲ್ಯವಂತ ಬೆಟ್ಟಕ್ಕೆ ಸ್ಈತೆಯನ್ನು ಹುಡುಕಿಕೊಂಡು ಬಂದಿದ್ದರಂತೆ. ರಾಮನು ಯಾವ ಸ್ಥಳದಲ್ಲಿ ಕುಳಿತುಕೊಂಡಿರುವುದಿಲ್ಲ. ಮಳೆ ಬರುವ ಸಮಯದಲ್ಲಿ ಎಂಬ ಗಳಿಂದ ಮಾಲ್ಯವಂತ ಗುಡ್ಡದ ಬಂಡೆಯ ಮೇಎ ಕುಳಿತು ವಿಶ್ರಾಂತಿಯನ್ನು ಮಾಡಿದ್ದರು.ಇವರನ್ನು ಆಂಜನೇಯನು ಬೆಟ್ಟ ಹತ್ತಿ ವಿಕ್ಷೀಸಿದ ಎಂದು ರಾಮಾಯಣ ತಿಳಿಸುತ್ತದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.