ETV Bharat / state

ಜನರಲ್ಲಿ ಭೀತಿ ಹುಟ್ಟಿಸಿದ ಸೂರ್ಯಗ್ರಹಣ.. ದಾವಣಗೆರೆ, ಬಳ್ಳಾರಿಯಲ್ಲಿ ದೇವರ ಮೊರೆ ಹೋದ ಜನ - The eclipse special pooje in davanagere and ballary

ಸೂರ್ಯಗ್ರಹಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ.

The eclipse special pooje in davanagere and ballary
ದಾವಣಗೆರೆ, ಬಳ್ಳಾರಿಯಲ್ಲಿ ದೇವರ ಮೊರೆ ಹೋದ ಜನರು
author img

By

Published : Dec 26, 2019, 12:05 PM IST

ದಾವಣಗೆರೆ/ಬಳ್ಳಾರಿ: ಸೂರ್ಯಗ್ರಹಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ದಾವಣಗೆರೆಯ ಕೆ.ಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ 500 ಕ್ಕೂ ಅಧಿಕ ಜನರು ಪೂಜೆ ಸಲ್ಲಿಸಿದರು.

ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕದ ಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದಾರೆ. ಹರಿಹರದ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ನಿರಂತರ ಅಭಿಷೇಕ ಮಾಡಲಾಗುತ್ತಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಸಲಾಗುತ್ತಿದೆ.

ದಾವಣಗೆರೆ, ಬಳ್ಳಾರಿಯಲ್ಲಿ ದೇವರ ಮೊರೆ ಹೋದ ಜನರು

ಬಳ್ಳಾರಿಯಲ್ಲಿ ಮನೆ ಬಿಟ್ಟು ಹೊರ ಬಾರದ ಜನರು

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ, ಹತ್ತಾರು ಮಹಿಳೆಯರು ಎಕ್ಕೆ ಗಿಡ ಸಿಂಗರಿಸಿ ಪೂಜಿಸಿದರು. ಒಬ್ಬರೇ ಮಕ್ಕಳಿದ್ದವರಿಗೆ ಗ್ರಹಣದಿಂದ ದೋಷವಾಗಲಿದೆ ಎಂಬ ವದಂತಿ ಹಬ್ಬಿದ ಕಾರಣಕ್ಕೆ ಎಕ್ಕೆ ಗಿಡ ಹುಡುಕಿಕೊಂಡು ಹೋಗಿ ಕೆಲವರು ಪೂಜೆ ಸಲ್ಲಿಸಿದ್ದಾರೆ. ಮಾಡ್ಗೇರಿ ತಾಂಡದ ನಿವಾಸಿಗಳು ಗ್ರಹಣದ ವೇಳೆ ಹೊರಗೆ ಬಂದರೆ ಅಪಾಯವಾಗುತ್ತೆ ಎಂಬ ಸುದ್ದಿ ಹಬ್ಬಿದ ಕಾರಣಕ್ಕೆ ಮನೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ.

ದಾವಣಗೆರೆ/ಬಳ್ಳಾರಿ: ಸೂರ್ಯಗ್ರಹಣ ಜನರಲ್ಲಿ ಭೀತಿ ಹುಟ್ಟಿಸಿದ್ದು, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ದಾವಣಗೆರೆಯ ಕೆ.ಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ 500 ಕ್ಕೂ ಅಧಿಕ ಜನರು ಪೂಜೆ ಸಲ್ಲಿಸಿದರು.

ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕದ ಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದಾರೆ. ಹರಿಹರದ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ನಿರಂತರ ಅಭಿಷೇಕ ಮಾಡಲಾಗುತ್ತಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಸಲಾಗುತ್ತಿದೆ.

ದಾವಣಗೆರೆ, ಬಳ್ಳಾರಿಯಲ್ಲಿ ದೇವರ ಮೊರೆ ಹೋದ ಜನರು

ಬಳ್ಳಾರಿಯಲ್ಲಿ ಮನೆ ಬಿಟ್ಟು ಹೊರ ಬಾರದ ಜನರು

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ, ಹತ್ತಾರು ಮಹಿಳೆಯರು ಎಕ್ಕೆ ಗಿಡ ಸಿಂಗರಿಸಿ ಪೂಜಿಸಿದರು. ಒಬ್ಬರೇ ಮಕ್ಕಳಿದ್ದವರಿಗೆ ಗ್ರಹಣದಿಂದ ದೋಷವಾಗಲಿದೆ ಎಂಬ ವದಂತಿ ಹಬ್ಬಿದ ಕಾರಣಕ್ಕೆ ಎಕ್ಕೆ ಗಿಡ ಹುಡುಕಿಕೊಂಡು ಹೋಗಿ ಕೆಲವರು ಪೂಜೆ ಸಲ್ಲಿಸಿದ್ದಾರೆ. ಮಾಡ್ಗೇರಿ ತಾಂಡದ ನಿವಾಸಿಗಳು ಗ್ರಹಣದ ವೇಳೆ ಹೊರಗೆ ಬಂದರೆ ಅಪಾಯವಾಗುತ್ತೆ ಎಂಬ ಸುದ್ದಿ ಹಬ್ಬಿದ ಕಾರಣಕ್ಕೆ ಮನೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ.

Intro:KN_DVG_03_SPL_POOJE_SCRIPT_7203307

REPORTER : YOGARAJA G. H.


ಗ್ರಹಣ ದೋಷದ ಭೀತಿ ಹಿನ್ನೆಲೆ - ಜನರು ಏನೆಲ್ಲಾ ಪೂಜೆ ಮಾಡಿದರು ಅನ್ನೋದನ್ನು ಇಲ್ನೋಡಿ...

ದಾವಣಗೆರೆ : ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕೆಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದರೆ, ಮತ್ತೆ ತಾಂಡಾವೊಂದರಲ್ಲಿ
ಜನರು ಮನೆಯಿಂದ ಹೊರ ಬಂದಿಲಲ್ಲ. ಗ್ರಹಣ ದೋಷ ನಿವಾರಣೆಗಾಗಿ 500 ಕ್ಕೂ ಹೆಚ್ಚು ಮಂದಿ ಹೋಮ, ಹವನ, ಮಂತ್ರಪಠಣ ಮಾಡಿದರು. ಬೇರೆ ಬೇರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಸಲ್ಲಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಹತ್ತಾರು ಮಹಿಳೆಯರು ಎಕ್ಕೆ ಗಿಡ ಸಿಂಗರಿಸಿ, ಪೂಜಿಸಿದರು. ಒಬ್ಬರೇ ಮಕ್ಕಳಿದ್ದವರಿಗೆ ಗ್ರಹಣದಿಂದ ದೋಷವಾಗಲಿದೆ
ಎಂಬ ವದಂತಿ ಹಬ್ಬಿದ ಕಾರಣಕ್ಕೆ ಎಕ್ಕೆ ಗಿಡ ಹುಡುಕಿಕೊಂಡು ಹೋಗಿ ಕೆಲವರು ಪೂಜೆ ಸಲ್ಲಿಸಿದರೆ, ಮತ್ತೆ ಕೆಲವರು ಮನೆ ಮುಂದಿನ ಗಿಡಕ್ಕೆ ಊದುಬತ್ತಿ ಬೆಳಗಿ, ಸಿಂಗರಿಸಿ ತೊಂದರೆಯಾಗದಿರಲು
ಎಂದು ಪ್ರಾರ್ಥನೆ ಸಲ್ಲಿಸಿದರು.

ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನ ಮಾಡ್ಗೇರಿ ತಾಂಡದ ನಿವಾಸಿಗಳು ಮನೆಯಿಂದ ಹೊರ ಬಂದಿಲ್ಲ. ಬೆಳಿಗ್ಗೆಯಿಂದಲೂ ಮನೆ ಬಾಗಿಲು ಮುಚ್ಚಿಕೊಂಡಿದ್ದು, ಗ್ರಹಣ ಮುಗಿದ
ಬಳಿಕ ಮನೆಯಲ್ಲಿಯೇ ಇದ್ರು. ಗ್ರಹಣದ ವೇಳೆ ಹೊರಗೆ ಬಂದರೆ ಅಪಾಯವಾಗುತ್ತೆ ಎಂಬ ಸುದ್ದಿ ಹಬ್ಬಿದ ಕಾರಣಕ್ಕೆ ಜನರು ಹೊರಬರಲು ಹೆದರಿದರು ಎನ್ನಲಾಗಿದೆ.

ಇನ್ನು ಕೆಲವರಿಗೆ ಗ್ರಹಣ ದೋಷವಿದೆ ಎಂದುಕೊಂಡು ದಾವಣಗೆರೆ ನಗರದ ಕೆಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ ಬೆಳಿಗ್ಗೆಯೇ 500 ಕ್ಕೂ ಹೆಚ್ಚು ಜನರು ಪೂಜೆ ಸಲ್ಲಿಸಿದರು. ಗ್ರಹಣ
ದೋಷ ನಿವಾರಣೆಗೆ ಹೋಮ, ಮಂತ್ರಜಪ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಹರಿಹರದಲ್ಲಿರುವ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ಗ್ರಹಲ ಕಾಲದಲ್ಲಿ ನಿರಂತರ ಅಭಿಷೇಕ ನಡೆಸಲಾಯಿತು. ಗ್ರಹಣ ಸ್ಪರ್ಷ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಯಲಿದೆ.
ಗ್ರಹಣ ಕಾಲದ ಜಲಾಭಿಕ್ಷೇಕ, ಕ್ಷೀರಾಭಿಷೇಕ, ನಾರಿಕೇಳ ಅಭಿಷೇಕ ವೀಕ್ಷಣೆ ಹಾಗೂ ದೇವರ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಪ್ರಸಾದದ ವಿತರಣೆ ವ್ಯವಸ್ಥೆ
ರದ್ದುಪಡಿಸಲಾಗಿತ್ತು. ಗ್ರಹಣ ಮುಗಿದ ಬಳಿಕ ವಿಶೇಷ ಅಭಿಷೇಕ, ಅಲಂಕಾರ ಪೂಜೆ ನಡೆಯಲಿದೆ.

ಬೈಟ್-01

ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿದ ಮಹಿಳೆ

ಬೈಟ್- 02

ಗುರುಪ್ರಸಾದ್ ನಾಡಿಗೇರ್, ಹರಿಹರೇಶ್ವರ ದೇವಸ್ಥಾನದ ಪುರೋಹಿತರು
Body:KN_DVG_03_SPL_POOJE_SCRIPT_7203307

REPORTER : YOGARAJA G. H.


ಗ್ರಹಣ ದೋಷದ ಭೀತಿ ಹಿನ್ನೆಲೆ - ಜನರು ಏನೆಲ್ಲಾ ಪೂಜೆ ಮಾಡಿದರು ಅನ್ನೋದನ್ನು ಇಲ್ನೋಡಿ...

ದಾವಣಗೆರೆ : ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ವಿವಿಧ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಹಬ್ಬಿದ ವದಂತಿಗೆ ಎಕ್ಕೆಗಿಡಕ್ಕೆ ಪೂಜೆ ಸಲ್ಲಿಸಲಾಗಿದ್ದರೆ, ಮತ್ತೆ ತಾಂಡಾವೊಂದರಲ್ಲಿ
ಜನರು ಮನೆಯಿಂದ ಹೊರ ಬಂದಿಲಲ್ಲ. ಗ್ರಹಣ ದೋಷ ನಿವಾರಣೆಗಾಗಿ 500 ಕ್ಕೂ ಹೆಚ್ಚು ಮಂದಿ ಹೋಮ, ಹವನ, ಮಂತ್ರಪಠಣ ಮಾಡಿದರು. ಬೇರೆ ಬೇರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಸಲ್ಲಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಹತ್ತಾರು ಮಹಿಳೆಯರು ಎಕ್ಕೆ ಗಿಡ ಸಿಂಗರಿಸಿ, ಪೂಜಿಸಿದರು. ಒಬ್ಬರೇ ಮಕ್ಕಳಿದ್ದವರಿಗೆ ಗ್ರಹಣದಿಂದ ದೋಷವಾಗಲಿದೆ
ಎಂಬ ವದಂತಿ ಹಬ್ಬಿದ ಕಾರಣಕ್ಕೆ ಎಕ್ಕೆ ಗಿಡ ಹುಡುಕಿಕೊಂಡು ಹೋಗಿ ಕೆಲವರು ಪೂಜೆ ಸಲ್ಲಿಸಿದರೆ, ಮತ್ತೆ ಕೆಲವರು ಮನೆ ಮುಂದಿನ ಗಿಡಕ್ಕೆ ಊದುಬತ್ತಿ ಬೆಳಗಿ, ಸಿಂಗರಿಸಿ ತೊಂದರೆಯಾಗದಿರಲು
ಎಂದು ಪ್ರಾರ್ಥನೆ ಸಲ್ಲಿಸಿದರು.

ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನ ಮಾಡ್ಗೇರಿ ತಾಂಡದ ನಿವಾಸಿಗಳು ಮನೆಯಿಂದ ಹೊರ ಬಂದಿಲ್ಲ. ಬೆಳಿಗ್ಗೆಯಿಂದಲೂ ಮನೆ ಬಾಗಿಲು ಮುಚ್ಚಿಕೊಂಡಿದ್ದು, ಗ್ರಹಣ ಮುಗಿದ
ಬಳಿಕ ಮನೆಯಲ್ಲಿಯೇ ಇದ್ರು. ಗ್ರಹಣದ ವೇಳೆ ಹೊರಗೆ ಬಂದರೆ ಅಪಾಯವಾಗುತ್ತೆ ಎಂಬ ಸುದ್ದಿ ಹಬ್ಬಿದ ಕಾರಣಕ್ಕೆ ಜನರು ಹೊರಬರಲು ಹೆದರಿದರು ಎನ್ನಲಾಗಿದೆ.

ಇನ್ನು ಕೆಲವರಿಗೆ ಗ್ರಹಣ ದೋಷವಿದೆ ಎಂದುಕೊಂಡು ದಾವಣಗೆರೆ ನಗರದ ಕೆಬಿ ಬಡಾವಣೆಯ ಶ್ರೀ ರಾಘವೇಂದ್ರ ರಾಯರ ಮಠದಲ್ಲಿ ಬೆಳಿಗ್ಗೆಯೇ 500 ಕ್ಕೂ ಹೆಚ್ಚು ಜನರು ಪೂಜೆ ಸಲ್ಲಿಸಿದರು. ಗ್ರಹಣ
ದೋಷ ನಿವಾರಣೆಗೆ ಹೋಮ, ಮಂತ್ರಜಪ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಹರಿಹರದಲ್ಲಿರುವ ಐತಿಹಾಸಿಕ ಹರಿಹರೇಶ್ವರ ದೇವಸ್ಥಾನದಲ್ಲಿ ಗ್ರಹಲ ಕಾಲದಲ್ಲಿ ನಿರಂತರ ಅಭಿಷೇಕ ನಡೆಸಲಾಯಿತು. ಗ್ರಹಣ ಸ್ಪರ್ಷ ಕಾಲದಿಂದ ಮೋಕ್ಷ ಕಾಲದವರೆಗೆ ಜಲಾಭಿಷೇಕ ನಡೆಯಲಿದೆ.
ಗ್ರಹಣ ಕಾಲದ ಜಲಾಭಿಕ್ಷೇಕ, ಕ್ಷೀರಾಭಿಷೇಕ, ನಾರಿಕೇಳ ಅಭಿಷೇಕ ವೀಕ್ಷಣೆ ಹಾಗೂ ದೇವರ ಮೂರ್ತಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಪ್ರಸಾದದ ವಿತರಣೆ ವ್ಯವಸ್ಥೆ
ರದ್ದುಪಡಿಸಲಾಗಿತ್ತು. ಗ್ರಹಣ ಮುಗಿದ ಬಳಿಕ ವಿಶೇಷ ಅಭಿಷೇಕ, ಅಲಂಕಾರ ಪೂಜೆ ನಡೆಯಲಿದೆ.

ಬೈಟ್-01

ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿದ ಮಹಿಳೆ

ಬೈಟ್- 02

ಗುರುಪ್ರಸಾದ್ ನಾಡಿಗೇರ್, ಹರಿಹರೇಶ್ವರ ದೇವಸ್ಥಾನದ ಪುರೋಹಿತರು
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.