ETV Bharat / state

ಹೊಸದಾಗಿ ಶುರುವಾಗೈತಂತೆ.. ಬನ್ರೀ,, ಒಂದ್ಸಾರಿ ಗಣಿನಾಡಿನ 'ಭಾನುವಾರ ಸಂತೆ'ಗೆ ಹೋಗಿ ಬರೋಣ..

author img

By

Published : Sep 21, 2019, 9:20 AM IST

ಡಿಸಿ ನಕುಲ್ ಅವರ ಖಡಕ್ ಸೂಚನೆಯ ಮೇರೆಗೆ ಭಾನುವಾರದ ಸಂತೆ ಮಾರುಕಟ್ಟೆ ಶುರುವಾಗಿದೆ. ಸಣ್ಣ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ವಹಿವಾಟು ನಡೆಸುವ ಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ವ್ಯಾಪಾರಸ್ಥರು ಖುಷಿಯಿಂದಲೇ ತಮ್ಮ ವ್ಯಾಪಾರ, ವಹಿವಾಟನ್ನು ಮುಂದುವರಿಸಿದ್ದಾರೆ.

ಭಾನುವಾರ ಸಂತೆ ಮಾರುಕಟ್ಟೆ

ಬಳ್ಳಾರಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಿರ್ಮಿಸಲಾಗಿದ್ದ ಭಾನುವಾರದ ಸಂತೆ ಮಾರುಕಟ್ಟೆಯನ್ನು ವ್ಯಾಪಾರ ವಹಿವಾಟು ನಡೆಸುವವರ ಬಳಕೆಗೆ ಅನುಕೂಲ ಮಾಡಿ ಕೊಡಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿ ಭಾನುವಾರದ ಸಂತೆ ಮಾರುಕಟ್ಟೆಯನ್ನು ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿತ್ತು. ಆದರೆ, ಅದರೊಳಗೆ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಸ್ಥರು ಒಪ್ಪುತ್ತಿರಲಿಲ್ಲ. ಬದಲಾಗಿ ಎದಿರುಗಡೆಯಿದ್ದ ಬಯಲಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದರು.

ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಮ ಪ್ರಸಾತ್ ಮನೋಹರ ಮಾರುಕಟ್ಟೆಯ ಬಗ್ಗೆ ಗಮನ ಹರಿಸಲೇ ಇಲ್ಲ. ಮನೋಹರವರು ವರ್ಗಾವಣೆಯಾದ ನಂತರ ಅಧಿಕಾರಕ್ಕೆ ಬಂದ ನೂತನ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಸಿ ಸಂತೆ ಮಾರುಕಟ್ಟೆ ಬಳಕೆಯ ಕುರಿತು ಚರ್ಚೆ ನಡೆಸಿದರು.

ಗಣಿನಾಡಿನ ಭಾನುವಾರದ ಸಂತೆ..

ಜನರಿಗೆ ಮತ್ತು ವ್ಯಾಪರಸ್ಥರಿಗೆ ಮಾರುಕಟ್ಟೆಯ ಪ್ರಯೋಜನ ಹಾಗೂ ಶುಚಿತ್ವದ ಬಗ್ಗೆ ತಿಳಿ ಹೇಳಿದರು. ದಲ್ಲಾಳಿಗಳ ಮತ್ತು ಸಣ್ಣ ವ್ಯಾಪಾರಸ್ಥರ ನಡುವಿನ ವೈಮನಸ್ಸಿನಿಂದ ಮಾರುಕಟ್ಟೆ ಬಳಕೆಯಾಗಿಲ್ಲ ಎಂಬುದನ್ನು ತಿಳಿದುಕೊಂಡ ಡಿಸಿ, ನೀವಾಗಿ ನೀವೇ ಬಗೆಹರಿಸಿಕೊಂಡು ಸಂತೆ ಮಾರುಕಟ್ಟೆ ಬಳಕೆ ಮಾಡಿಕೊಂಡ್ರೇ ಸರಿ, ಇಲ್ಲಾಂದ್ರೆ ಜಿಲ್ಲಾಡಳಿತ ಎಂಟ್ರಿಯಾಗಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಸದ್ಯ ಡಿಸಿ ನಕುಲ್ ಅವರ ಖಡಕ್ ಸೂಚನೆಯ ಮೇರೆಗೆ ಭಾನುವಾರದ ಸಂತೆ ಶುರುವಾಗಿದೆ. ಸಣ್ಣ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ವಹಿವಾಟು ನಡೆಸುವ ಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ವ್ಯಾಪಾರಸ್ಥರು ಖುಷಿಯಿಂದಲೇ ತಮ್ಮ ವ್ಯಾಪಾರ, ವಹಿವಾಟನ್ನು ಮುಂದುವರಿಸಿದ್ದಾರೆ.

ಮಾರುಕಟ್ಟೆಗೆ ಸಿಸಿಟಿವಿ ಕಣ್ಗಾವಲು

ಮಾರುಕಟ್ಟೆಯ ಭದ್ರತಾ ದೃಷ್ಟಿಯಿಂದಾಗಿ ಈಗಾಗಲೇ ಎಪಿಎಂಸಿ ಮಾರುಕಟ್ಟೆ ಸಮಿತಿ ಸಿಸಿ ಕ್ಯಾಮೆರಾಗಳ ಖರೀದಿ ಮತ್ತು ಅಳವಡಿಕೆಗೆ ಅಗತ್ಯ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿಯ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿ ಹೆಚ್ ಮೋಹನ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಅಲ್ಲದೇ, ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಗೂ ತಯಾರು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಿರ್ಮಿಸಲಾಗಿದ್ದ ಭಾನುವಾರದ ಸಂತೆ ಮಾರುಕಟ್ಟೆಯನ್ನು ವ್ಯಾಪಾರ ವಹಿವಾಟು ನಡೆಸುವವರ ಬಳಕೆಗೆ ಅನುಕೂಲ ಮಾಡಿ ಕೊಡಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿ ಭಾನುವಾರದ ಸಂತೆ ಮಾರುಕಟ್ಟೆಯನ್ನು ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿತ್ತು. ಆದರೆ, ಅದರೊಳಗೆ ವ್ಯಾಪಾರ ವಹಿವಾಟು ಮಾಡಲು ವ್ಯಾಪಾರಸ್ಥರು ಒಪ್ಪುತ್ತಿರಲಿಲ್ಲ. ಬದಲಾಗಿ ಎದಿರುಗಡೆಯಿದ್ದ ಬಯಲಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದರು.

ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಮ ಪ್ರಸಾತ್ ಮನೋಹರ ಮಾರುಕಟ್ಟೆಯ ಬಗ್ಗೆ ಗಮನ ಹರಿಸಲೇ ಇಲ್ಲ. ಮನೋಹರವರು ವರ್ಗಾವಣೆಯಾದ ನಂತರ ಅಧಿಕಾರಕ್ಕೆ ಬಂದ ನೂತನ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಸಿ ಸಂತೆ ಮಾರುಕಟ್ಟೆ ಬಳಕೆಯ ಕುರಿತು ಚರ್ಚೆ ನಡೆಸಿದರು.

ಗಣಿನಾಡಿನ ಭಾನುವಾರದ ಸಂತೆ..

ಜನರಿಗೆ ಮತ್ತು ವ್ಯಾಪರಸ್ಥರಿಗೆ ಮಾರುಕಟ್ಟೆಯ ಪ್ರಯೋಜನ ಹಾಗೂ ಶುಚಿತ್ವದ ಬಗ್ಗೆ ತಿಳಿ ಹೇಳಿದರು. ದಲ್ಲಾಳಿಗಳ ಮತ್ತು ಸಣ್ಣ ವ್ಯಾಪಾರಸ್ಥರ ನಡುವಿನ ವೈಮನಸ್ಸಿನಿಂದ ಮಾರುಕಟ್ಟೆ ಬಳಕೆಯಾಗಿಲ್ಲ ಎಂಬುದನ್ನು ತಿಳಿದುಕೊಂಡ ಡಿಸಿ, ನೀವಾಗಿ ನೀವೇ ಬಗೆಹರಿಸಿಕೊಂಡು ಸಂತೆ ಮಾರುಕಟ್ಟೆ ಬಳಕೆ ಮಾಡಿಕೊಂಡ್ರೇ ಸರಿ, ಇಲ್ಲಾಂದ್ರೆ ಜಿಲ್ಲಾಡಳಿತ ಎಂಟ್ರಿಯಾಗಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಸದ್ಯ ಡಿಸಿ ನಕುಲ್ ಅವರ ಖಡಕ್ ಸೂಚನೆಯ ಮೇರೆಗೆ ಭಾನುವಾರದ ಸಂತೆ ಶುರುವಾಗಿದೆ. ಸಣ್ಣ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ವಹಿವಾಟು ನಡೆಸುವ ಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ವ್ಯಾಪಾರಸ್ಥರು ಖುಷಿಯಿಂದಲೇ ತಮ್ಮ ವ್ಯಾಪಾರ, ವಹಿವಾಟನ್ನು ಮುಂದುವರಿಸಿದ್ದಾರೆ.

ಮಾರುಕಟ್ಟೆಗೆ ಸಿಸಿಟಿವಿ ಕಣ್ಗಾವಲು

ಮಾರುಕಟ್ಟೆಯ ಭದ್ರತಾ ದೃಷ್ಟಿಯಿಂದಾಗಿ ಈಗಾಗಲೇ ಎಪಿಎಂಸಿ ಮಾರುಕಟ್ಟೆ ಸಮಿತಿ ಸಿಸಿ ಕ್ಯಾಮೆರಾಗಳ ಖರೀದಿ ಮತ್ತು ಅಳವಡಿಕೆಗೆ ಅಗತ್ಯ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿಯ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿ ಹೆಚ್ ಮೋಹನ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. ಅಲ್ಲದೇ, ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆಗೂ ತಯಾರು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Intro:ಗಣಿನಗರಿಯಲಿ ಸುಸಜ್ಜಿತ ಭಾನುವಾರದ ಸಂತೆ ಮಾರುಕಟ್ಟೆ
ಅವಘಡಗಳು ನಡೆಯದಂತೆ ಸಿಸಿ ಕ್ಯಾಮರಾಗಳ ಕಣ್ಗಾವಲು!
ಬಳ್ಳಾರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಅಂದಾಜು ಎರಡೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಭಾನುವಾರದ ಸಂತೆ ಮಾರುಕಟ್ಟೆಯನ್ನು ವ್ಯಾಪಾರ ವಹಿವಾಟು ನಡೆಸುವವರ ಬಳಕೆಗೆ ಅನವು ಮಾಡಿಕೊಡಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಈ ಭಾನುವಾರದ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತಾದರೂ, ಅದರೊಳಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವವರು ಸುತಾರಾಂ ಒಪ್ಪುತ್ತಿರಲಿಲ್ಲ.
ಆ ಭಾನುವಾರದ ಸಂತೆ ಮಾರುಕಟ್ಟೆ ಮುಂದಿನ ಬಯಲು ಪ್ರದೇಶದಲ್ಲೇ ತರಕಾರಿ ಮಾರಾಟ ಸೇರಿದಂತೆ ಇನ್ನಿತರೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಮಳೆ ಬಂತೆಂದರೆ
ಸಾಕು. ಆ ಪ್ರದೇಶವಂತೂ ತಿಪ್ಪೇಗುಂಡಿಯಂತಾಗುತ್ತಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಎಪಿಎಂಸಿ ಮಾರುಕಟ್ಟೆ ಸಮಿತಿಯು ಕಾರ್ಯದರ್ಶಿಗಳು ಕೋಟ್ಯಾಂತರ ರೂ.ಗಳ ವ್ಯಯಮಾಡಿ ಈ ಭಾನುವಾರದ ಸಂತೆ ಮಾರುಕಟ್ಟೆಯನ್ನು ನಿರ್ಮಿಸಿತ್ತು. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಮ ಪ್ರಸಾತ್ ಮನೋಹರ ಇತ್ತಕಡೆ ಗಮನ ಹರಿಸಲೇ ಇಲ್ಲ.
ಮನೋಹರ ವರ್ಗಾವಣೆಯಾದ ಎರಡ್ಮೂರು ದಿನಗಳಲ್ಲೇ ಭಾನುವಾರದ ಸಂತೆ ಮಾರುಕಟ್ಟೆ ಬಳಕೆ ಮಾಡದಿರೋದರ ಬಗ್ಗೆ ಮಾಹಿತಿ ಪಡೆದಿದ್ದ ನೂತನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಭಾನುವಾರದ ಸಂತೆ ಮಾರುಕಟ್ಟೆ ಬಳಕೆಯಾಗದಿರೋದರ ಕುರಿತು ವಿಶೇಷ ಗಮನ ಸೆಳೆದಿದ್ದರು.
ಅದರಿಂದಾಗುವ ಪ್ರಯೋಜನೆ ಹಾಗೂ ಶುಚಿತ್ವದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದರ ಬಗ್ಗೆಯೂ ವಿವರಣೆ ನೀಡಿದ್ದರು. ದಲ್ಲಾಳಿಗಳು, ಸಣ್ಣ ವ್ಯಾಪಾರಸ್ಥರ ನಡುವಿನ ವೈಮನಸ್ಸಿನಿಂದ ಈ ಮಾರುಕಟ್ಟೆ ಬಳಕೆಯಾಗದಿರೋದರ ಕುರಿತೂ ಕೂಡ ಸಭೆಯ ಗಮನ ಸೆಳೆದಿದ್ದರು. ನೀವಾಗಿ ನೀವೇ ಬಗೆಹರಿಸಿ ಕೊಂಡು ಸಂತೆ ಮಾರುಕಟ್ಟೆ ಬಳಕೆ ಮಾಡಿಕೊಳ್ಳುತ್ತಿರೋ ಇಲ್ಲಾಂದ್ರೆ ಜಿಲ್ಲಾಡಳಿತ ಎಂಟ್ರಿಯಾಗಬೇಕಾಗುತ್ತೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಡಿಸಿ ನಕುಲ್ ಅವರ ಖಡಕ್ ಸೂಚನೆಯ ಮೇರೆಗೆ ಭಾನುವಾರದ ಸಂತೆ ಮಾರುಕಟ್ಟೆ ಶುರುವಾಗಿದೆ. ಸಣ್ಣ
ಮತ್ತು ಅತೀ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ವಹಿವಾಟು ನಡೆಸುವಕಾರ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ವ್ಯಾಪಾರಸ್ಥರು ಖುಷಿಯಿಂದಲೇ ತಮ್ಮ ವ್ಯಾಪಾರ, ವಹಿವಾಟನ್ನು ಮುಂದುವರಿಸಿದ್ದಾರೆ.




Body:ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಭಾನುವಾರದ ಸಂತೆ ಮಾರುಕಟ್ಟೆ: ಇನ್ಮುಂದೆ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ
ಈ ಭಾನುವಾರದ ಸಂತೆ ಮಾರುಕಟ್ಟೆ ಬರಲಿದೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆ ಸಮಿತಿಯಿಂದ ಸಿಸಿ ಕ್ಯಾಮರಾಗಳ ಖರೀದಿ ಮತ್ತು ಅಳವಡಿಕೆಗೆ ಅಗತ್ಯ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ಸಮಿತಿಯ ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿ.ಹೆಚ್.ಮೋಹನ್ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಅಲ್ಲದೇ, ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆಗೂ ತಯಾರು ಮಾಡಿಕೊಳ್ಳಲಾಗಿದೆ ಎಂದರು.
ಅಭಿನಂದನೆ: ಭಾನುವಾರದ ಸಂತೆ ಮಾರುಕಟ್ಟೆ ಶುರುವಾಗಲು ಕಾರಣೀಭೂತರಾದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿಯವರಿಗೆ ಕಾರ್ಯದರ್ಶಿ ಮೋಹನ್ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ಬೈಟ್: ಸಿ.ಹೆಚ್.ಮೋಹನ್, ಜಂಟಿ ನಿರ್ದೇಶಕ ಹಾಗೂ ಕಾರ್ಯದರ್ಶಿ, ಎಪಿಎಂಸಿ ಮಾರುಕಟ್ಟೆ ಸಮಿತಿ.



Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_5_SANDAY_MARKET_STORY_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.