ETV Bharat / state

ಸಿಡಿಬಂಡಿ ಉತ್ಸವಕ್ಕೆ ಮೂರು ಜೊತೆ ಎತ್ತುಗಳ ಮೆರವಣಿಗೆ: ನೋಡಲು ಜನಸಾಗರ

ಗಡಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ವಿಶೇಷವಾಗಿ ನಡೆಯುತ್ತಿದೆ.

author img

By

Published : Mar 19, 2019, 10:54 AM IST

ಸಿಡಿಬಂಡಿ ಉತ್ಸವ

ಬಳ್ಳಾರಿ: ಗಡಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ವಿಶೇಷವಾಗಿದ್ದು, ನಗರದ ಕೌಲ್ ಬಜಾರ್​ನಲ್ಲಿರುವ ಗಾಣಿಗರ ಸಮುದಾಯದ ಜನರು ಈ ಸಿಡಿಬಂಡಿ ಉತ್ಸವವನ್ನು ಆಚರಿಸುವಲ್ಲಿ ಅತಿ ಪ್ರಮುಖರು.

ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನವನ್ನು ಗಾಣಿಗರ ಸಮುದಾಯದ ಸಿರುಗುಪ್ಪದ ಒಂದು ಜೊತೆ ಹಾಗೂ ಬಳ್ಳಾರಿಯ ಎರಡು ಜೊತೆ ಒಟ್ಟು ಆರು ಎತ್ತುಗಳು ಮೂರು ಸುತ್ತು ಸುತ್ತಿ ಸಿಡಿಬಂಡಿ ಎಳೆಯುವ ಮೂಲಕ ಪ್ರದರ್ಶನ ಹಾಕಿ ದೇವಿ ಕೃಪೆಗೆ ಪಾತ್ರವಾಗುತ್ತವೆ.

ಸಿಡಿಬಂಡಿ ಉತ್ಸವ

ಹಿನ್ನೆಲೆ:

ಶ್ರೀ ಕನಕ ದುರ್ಗಮ್ಮ ದೇವಾಲಯಕ್ಕೆ 350 ವರ್ಷಗಳ ಇತಿಹಾಸವಿದೆ. ಜಿಲ್ಲೆಯ ಗಾಣಿಗ (ಗಾಂಡ್ಲ) ಸಮಾಜದ ಜನರು ಸಿಡಿಬಂಡಿ ಉತ್ಸವವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಸಿಡಿಬಂಡಿಗೆ 155 ವರ್ಷಗಳ ಕಾಲ ಇತಿಹಾಸಿ ಇದೆ.

ಜಾತ್ಯಾತೀತ ಸಿಡಿಬಂಡಿ:

ಸಿಡಿಬಂಡಿ ಕಟ್ಟುವವರು ವಾಲ್ಮೀಕಿ ಜನಾಂಗ, ಸಿಡಿಎ ಪೂಜೆ ಮಾಡುವವರು ಸಿಡಿಬಂಡಿ ಓಡಿಸುವವರು ಗಾಣಿಗ ಸಮುದಾಯ, ತಪಡಿ ಬಾರಿಸುವವರು ಮತ್ತೊಂದು ಜನಾಂಗ. ಈ ಸಿಡಿಬಂಡಿ ಮೆರವಣಿಗೆಯನ್ನು ನೀಡುವವರು ಹಲವಾರು ಜಾತಿ ಜನಾಂಗದವರಾಗಿದ್ದಾರೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿದ್ದಾರೆ. ಇದು ವಿವಿಧ ಉತ್ಸವಗಳಿಗೆ ಮಾದರಿಯಾಗಿದೆ.

ಎತ್ತುಗಳಿಗೆ ವಿಶೇಷ ಅಲಂಕಾರ:

ದಾರಿ ಉದ್ದಕ್ಕೂ ಎತ್ತುಗಳಿಗೆ ಪಾದಗಳಿಗೆ ನೀರು ಹಾಕಿ, ಊದಿನಕಡ್ಡಿ ಹಚ್ಚಿ, ಮಂಗಳಾರತಿಯನ್ನು ಮಾಡಿ ನಮಸ್ಕಾರ ಮಾಡಿ ಮುಂದಕ್ಕೆ ಕಳಿಸುವ ಪದ್ಧತಿ ನೂರಾರು ಭಕ್ತರಿಂದ ನಡೆಯುತ್ತದೆ.

ಬಳ್ಳಾರಿ: ಗಡಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ವಿಶೇಷವಾಗಿದ್ದು, ನಗರದ ಕೌಲ್ ಬಜಾರ್​ನಲ್ಲಿರುವ ಗಾಣಿಗರ ಸಮುದಾಯದ ಜನರು ಈ ಸಿಡಿಬಂಡಿ ಉತ್ಸವವನ್ನು ಆಚರಿಸುವಲ್ಲಿ ಅತಿ ಪ್ರಮುಖರು.

ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನವನ್ನು ಗಾಣಿಗರ ಸಮುದಾಯದ ಸಿರುಗುಪ್ಪದ ಒಂದು ಜೊತೆ ಹಾಗೂ ಬಳ್ಳಾರಿಯ ಎರಡು ಜೊತೆ ಒಟ್ಟು ಆರು ಎತ್ತುಗಳು ಮೂರು ಸುತ್ತು ಸುತ್ತಿ ಸಿಡಿಬಂಡಿ ಎಳೆಯುವ ಮೂಲಕ ಪ್ರದರ್ಶನ ಹಾಕಿ ದೇವಿ ಕೃಪೆಗೆ ಪಾತ್ರವಾಗುತ್ತವೆ.

ಸಿಡಿಬಂಡಿ ಉತ್ಸವ

ಹಿನ್ನೆಲೆ:

ಶ್ರೀ ಕನಕ ದುರ್ಗಮ್ಮ ದೇವಾಲಯಕ್ಕೆ 350 ವರ್ಷಗಳ ಇತಿಹಾಸವಿದೆ. ಜಿಲ್ಲೆಯ ಗಾಣಿಗ (ಗಾಂಡ್ಲ) ಸಮಾಜದ ಜನರು ಸಿಡಿಬಂಡಿ ಉತ್ಸವವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಸಿಡಿಬಂಡಿಗೆ 155 ವರ್ಷಗಳ ಕಾಲ ಇತಿಹಾಸಿ ಇದೆ.

ಜಾತ್ಯಾತೀತ ಸಿಡಿಬಂಡಿ:

ಸಿಡಿಬಂಡಿ ಕಟ್ಟುವವರು ವಾಲ್ಮೀಕಿ ಜನಾಂಗ, ಸಿಡಿಎ ಪೂಜೆ ಮಾಡುವವರು ಸಿಡಿಬಂಡಿ ಓಡಿಸುವವರು ಗಾಣಿಗ ಸಮುದಾಯ, ತಪಡಿ ಬಾರಿಸುವವರು ಮತ್ತೊಂದು ಜನಾಂಗ. ಈ ಸಿಡಿಬಂಡಿ ಮೆರವಣಿಗೆಯನ್ನು ನೀಡುವವರು ಹಲವಾರು ಜಾತಿ ಜನಾಂಗದವರಾಗಿದ್ದಾರೆ. ನಾವೆಲ್ಲರೂ ಒಂದೇ ಎನ್ನುವ ಭಾವನೆ ಹೊಂದಿದ್ದಾರೆ. ಇದು ವಿವಿಧ ಉತ್ಸವಗಳಿಗೆ ಮಾದರಿಯಾಗಿದೆ.

ಎತ್ತುಗಳಿಗೆ ವಿಶೇಷ ಅಲಂಕಾರ:

ದಾರಿ ಉದ್ದಕ್ಕೂ ಎತ್ತುಗಳಿಗೆ ಪಾದಗಳಿಗೆ ನೀರು ಹಾಕಿ, ಊದಿನಕಡ್ಡಿ ಹಚ್ಚಿ, ಮಂಗಳಾರತಿಯನ್ನು ಮಾಡಿ ನಮಸ್ಕಾರ ಮಾಡಿ ಮುಂದಕ್ಕೆ ಕಳಿಸುವ ಪದ್ಧತಿ ನೂರಾರು ಭಕ್ತರಿಂದ ನಡೆಯುತ್ತದೆ.

Intro:ಸಿಡಿಬಂಡಿ ಉತ್ಸವಕ್ಕೆ ಮೂರು ಜೊತೆ ಎತ್ತುಗಳು ಮೆರವಣಿಗೆ: ನೋಡಲು ಜನಸಾಗರ.

ಕಲೆ ಸಂಸ್ಕೃತಿ ಆಚಾರ ವಿಚಾರ ಅದನ್ನು ಉಳಿಸಿಕೊಂಡು ಹೋಗುವುದ ಆಧುನಿಕ ಯುಗದಲ್ಲಿ ಅತಿ ಮುಖ್ಯವಾಗಿದೆ. ಅದಕ್ಕೆ ಸಾಕ್ಷಿಯಾಗಿ ಗಡಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವವಾಗಿದೆ.


Body:ಬಳ್ಳಾರಿ ನಗರದ ಕೌಲ್ ಬಜಾರ್ ನಲ್ಲಿರುವ ಗಾಣಿಗರ ಸಮುದಾಯದ ಜನರು ಈ ಸಿಡಿಬಂಡಿ ಉತ್ಸವವನ್ನು ಆಚರಿಸುವಲ್ಲಿ ಅತಿ ಪ್ರಮುಖರು.

ಸಿಡಿಬಂಡಿ ನಾಳೆ ಸಂಜೆ ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನವನ್ನು ಗಾಣಿಗರ ಸಮುದಾಯದ ಸಿರುಗುಪ್ಪದ ಒಂದು ಜೊತೆ ಹಾಗೂ ಬಳ್ಳಾರಿಯ ಎರಡು ಜೊತೆಯ ಒಟ್ಟು ಆರು ಎತ್ತುಗಳ ಮೂರು ಸುತ್ತಿ ಸಿಡಿಬಂಡಿ ಎಳೆಯುವ ಮೂಲಕ ಪ್ರದರ್ಶನ ಹಾಕಿ ದೇವಿಕ ಕೃಪೆಗೆ ಪಾತ್ರವಾಗುತ್ತವೆ.


ಹಿನ್ನೆಲೆ:

ಶ್ರೀ ಕನಕ ದುರ್ಗಮ್ಮ ದೇವಾಲಯಕ್ಕೆ 350 ವರ್ಷಗಳ ಇತಿಹಾಸವಿದೆ. ಬಳ್ಳಾರಿ ಜಿಲ್ಲೆಯ ಗಾಣಿಗ ( ಗಾಂಡ್ಲ) ಸಮಾಜದ ಜನರು ಸಿಡಿಬಂಡಿ ಉತ್ಸವವನ್ನು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಸಿಡಿಬಂಡಿಗೆ 155 ವರ್ಷಗಳ ಕಾಲ ಇತಿಹಾಸಿ ಇದೆ.

ಬಳ್ಳಾರಿ ನಗರದ ಕೊನೆಯ ಭಾಗದಲ್ಲಿ ಚಿನ್ನ ಪೋಲೆರಮ್ಮ ಗುಡಿ ಸುತ್ತ ಮೂರು ಬಾರಿ ಸುತ್ತಿ ದೃಷ್ಟಿ ತೆಗೆದು ಬರುವುದೊಳಗಾಗಿ ಗ್ರಾಮದಲ್ಲಿ ಪ್ರಜೆಗಳು ರೋಗಭಾದೆಯಿಂದ ಗುಣ ಹೊಂದಿದ್ದಾರೆ.

ಒಂದು ದಿನ ಗಾಣಿಗರ ಸ್ತ್ರೀ ಗೆ ಕನಕದುರ್ಗಮ್ಮ ಕನಸಿನಲ್ಲಿ ಬಂದು ಸ್ತ್ರೀಯು ಬಳ್ಳಾರಿ ಗುಡ್ಡದ ಮೇಲೆ ಏರಿ ಆ ಹೆಂಗಸು ಅಮ್ಮ ಕೊಟ್ಟ ನಿಂಬೆ ಹಣ್ಣು ಊರ ಮಧ್ಯದಲ್ಲಿ ಎಸೆದಾಗ ಅದು ಬಂದು ಹುತ್ತ ದಲ್ಲಿ ಬಿದ್ದಿದೆ, ಆ ಸ್ಥಳದಲ್ಲಿಯೇ ಅಮ್ಮನ ಪ್ರತಿರೂಪ ಶಿಲೆಯಾಗಿ ನಿಂತಿದೆ. ಅಂದಿನಿಂದ ಇಂದಿನವರೆಗೆ ಜಿಲ್ಲಾ ಗಾಣಿಗ ಸಮಾಜ ಸಿಡಿಬಂಡಿ ರಥೋತ್ಸವವನ್ನು ಮಾಡುತ್ತಾ ಬಂದಿದೆ. ಭಕ್ತರ ಬೇಡಿಕೆ ಕೋರಿಕೆಗಳನ್ನು ನೀಡುದ್ದಾಳೆ ತಾಯಿ ಕನಕದುರ್ಗಮ್ಮ‌ .

ಬಳ್ಳಾರಿ ಮಿಲ್ಲರ್ ಪೇಟ್, ಕೌಲ್ ಬಜಾರ್ ಇನ್ಬಿತರ ಪ್ರದೇಶಗಳಲ್ಲಿ ಭಯಂಕರ ಕಾಯಿಲೆಗಳಾದ ಕಾಲರಾ, ಪ್ಲೇಗ್ ರೋಗಕ್ಕೆ ಪ್ರಾಣ ಕಳೆದುಕೊಳ್ಳತ್ತಿರುವ ಸಮಯದಲ್ಲಿ ಒಂದುರಾತ್ರಿ ಗ್ರಾಮ ದೇವತೆ ಪೋಲೆರಮ್ಮ ಗಾಣಿಗ ಸಮಾಜದವರ ಒಬ್ಬ ಹೆಣ್ಣಿಗೆ ಕನಸಿನಲ್ಲಿ ಕಾಣಿಸಿಕೊಂಡು ಗ್ರಾಮದ ಪ್ರಜೆಗಳನ್ನು ಕಾಡಿಸುತ್ತಿರುವುದನ್ನು ತೊಲಗಿ ಹೋಗಲು ಸಿಡಿಬಂಡಿ ಗೆ ದೃಷ್ಟಿಗೊಂಬೆಯನ್ನು ಕಟ್ಟಿ ಅಮಗಮನ ಗುಡಿ ಸುತ್ತಾ ಮೂರು ಬಾರಿ ಸುತ್ತಿ ಊರ ಹೊರಗೆ ಬಿಡಬೇಕೆಂದು ಕನಸಿನಲ್ಲಿ ಒಂದು ನಿಂಬೆಹಣ್ಣು ಕೊಟ್ಟು ಊರಿನಲ್ಲಿರುವ ಗುಡ್ಡದ ಮೇಲಿಂದ ಎಸೆಯಬೇಕೆಂದು ಹೇಳಿದರಂತೆ ಎನ್ಹುವು ಇಲ್ಲಿಯ ಹಿನ್ನಲೆಯಾಗಿದೆ.

ಜಾತ್ಯಾತೀತ ಸಿಡಿಬಂಡಿ:

ಸಿಡಿಬಂಡಿ ಕಟ್ಟುವವರು ವಾಲ್ಮೀಕಿ ಜನಾಂಗ, ಸಿಡಿಎ ಪೂಜೆ ಮಾಡುವವರು ಸಿಡಿಬಂಡಿ ಓಡಿಸುವವರು ಗಾಣಿಗ ಸಮುದಾಯ, ತಪಡಿ ಬಾರಿಸುವವರು ಮತ್ತೊಂದು ಜನಾಂಗ ಈ ಸಿಡಿಬಂಡಿ ಮೆರವಣಿಗೆಯನ್ನು ನೀಡುವವರು ಹಲವಾರು ಜಾತಿ ಜನಾಂಗದವರಾಗಿದ್ದಾರೆ. ನಾವೆಲ್ಲರೂ ಒಂದೇ ಎನ್ಬುವ ಭಾವನೆ ಹೊಂದಿದ್ದಾರೆ ಇದು ವಿವಿಧ ಉತ್ಸವಗಳಿಗೆ ಮಾದರಿಯಾಗಿದೆ.

ಎತ್ತುಗಳಿಗೆ ವಿಶೇಷ ಅಲಂಕಾರ:
ದಾರಿ ಉದ್ದಕ್ಕೂ ಎತ್ತುಗಳಿಗೆ ಪಾದಗಳಿಗೆ ನೀರು ಹಾಕಿ, ಊದಿನಕಡ್ಡಿ ಹಚ್ಚಿ, ಮಂಗಳಾರತಿ ಯನ್ನು ಮಾಡಿ ನಮಸ್ಕಾರ ಮಾಡಿ ಮುಂದಕ್ಕೆ ಕಳಿಸುವ ಪದ್ಧತಿ ನೂರಾರು ಭಕ್ತರಿಂದ ನಡೆಯುತ್ತದೆ.


ಸಿಡಿಬಂಡಿ ಮೆರವಣಿಗೆ :
ನಗರದ ದುಗ್ಗಿ ಮಾಧ್ವಯ್ಯ ಬೀದಿಯಿಂದ ಕೌಲ್ ಬಜಾರ್, ಒಂದನೇ ರೈಲ್ವೆ ಗೇಟ್ ನಿಂದ ಪ್ಲೇ ಓವರ್ ಮೂಲಕ ಬಸವನಕುಂಟೆ ಮಾರ್ಗವಾಗಿ ಎಸ್.ಪಿ ಸರ್ಕಲ್ ದಿಂದ ಶ್ರೀ ಕನಕದುರ್ಗಮ್ಮ ದೇವಸ್ಥಾನ ತಲುಪಿಸುತ್ತವೆ. ದಾರಿ ಊದ್ದಕ್ಕೂ ಭಕ್ತರು ಎತ್ತು ಗಳಿಗೆ ನೀರುಹಾಕಿ ಪಾದ ತೊಳೆದು ವಿಭೂತಿ, ಅರಿಸಿಣ, ಕುಂಕುಮ ದೊಂದಿಗೆ ಹೂಬಿನ ಹಾರ ಗಳನ್ನು ಹಾಕಿ, ಮಂಗಳಾರತಿ ಮಾಡಿ ಭಕ್ತಿ ಪೂರಕವಾಗಿ ಬಸವಣ್ಣನಿಗೆ ಸ್ವಾಗತವನ್ನು ಸಲ್ಲಿಸುತ್ತಾರೆ ಭಕ್ತರು.

ಸೋಮವಾರ ಸಂಜೆ ಕುಂಬಾರ ಕುಲದವವ ಬೋಣಂ, ಬಡಿಗ ಸಮಾಜದ ಬೋಣಂ, ಗಾಣಿಗ ಸಮಾಜದವರು ಬೋಣಂ ದೊಮದಿಗೆ ಸಿಡಿಬಂಡಿ ಪೂಜೆ ಮಾಡಿ, ಮೂರು ಜೊತೆಗೆ ಎತ್ತುಗಳೊಂದಿಗೆ ತಪ್ಪಡಿ, ಬ್ಯಾಂಡ್, ಮೇಳದೊಂದಿಗೆ ಸಂಭ್ರಮದಿಂದ ಸಿಡಿಬಂಡಿ ಹತ್ತಿರ ತೆಗೆದುಕೊಂಡು ಹೋಗಿ ಸಿಂಗರಸಿದ ಸಿಡಿಬಂಡಿಗೆ ಎತ್ತುಗಳನ್ನು ಕಟ್ಡಿ ಗಾಣಿಗ ದುಗ್ಗಿ ಮಾಧ್ವಯ್ಯ ಬೀದಿಯಿಂದ ಕನಕದುರ್ಗಮ್ಮ ದೇವಸ್ಥಾನಕ್ಕೆ ಹೋಗುತ್ತವೆ.
ಈ ಮೆರವಣಿಗೆಯಲ್ಲಿ ಬಳ್ಳಾರಿ ನಗರದ ಮತ್ತು ಊರಿನ ಸುತ್ತ ಮುತ್ತಲಿನ ಹಳ್ಳಿಯ ಸಾವಿರಾರೂ ಭಕ್ತರು ಭಾಗವಹಿಸುತ್ತಾರೆ.

ನಾಳೆ ಸಿಡಿಬಂಡಿ ಉತ್ಸವ:

ನಾಳೆ ಸಂಜೆ 5 ಗಂಟೆ 30 ನಿಮಿಷಕ್ಕೆ ಸಿಡಿಬಂಡಿಯು ಕನಕದುರ್ಗಮ್ಮ ದೇವಸ್ಥಾನ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವ ಯಶಸ್ವಿ ಯಾಗಿ ಜರುಗಲಿದೆ.


Conclusion:ಒಟ್ಟಾರೆಯಾಗಿ ಗಣಿನಾಡಿನ ಅದಿದೇವತೆ ಈ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ನೋಡಿಗರನ್ನು ಮನಸೆಳೆಯುವಂತೆ ಮಾಡುತ್ತದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.