ETV Bharat / state

ಫೆ. 24 ರ ಒಳಗೆ ರೈತರಿಗೆ ಬೆಳೆಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು : ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಸೂಚನೆ

author img

By

Published : Feb 11, 2020, 2:13 AM IST

ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 1,94,024 ರೈತರು ಅರ್ಹರಿದ್ದಾರೆ. ಇವರಿಗೆ ಸಾಲ ನೀಡಲಾಗುವುದು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.

prime-minister-kisan-samman-plan
prime-minister-kisan-samman-plan

ಬಳ್ಳಾರಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಫೆ.24ರೊಳಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಬೆಳೆಸಾಲ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 1,94,024 ರೈತರು ಅರ್ಹರಿದ್ದಾರೆ. ಅದರಲ್ಲಿ ಇದುವರೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ಗ್ರಾಮೀಣ ಬ್ಯಾಂಕ್‍ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಂದ 1,65,566 ರೈತರು ಬೆಳೆ ಸಾಲ ಪಡೆದಿದ್ದಾರೆ. ಇನ್ನುಳಿದ 28,458 ರೈತರು ಈ ಆದ್ಯತೆ ಮೇರೆಗೆ ಬೆಳೆಸಾಲ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2018 ಡಿ.1ರಿಂದ ಪ್ರಾರಂಭವಾಗಿದೆ.

ಬಳ್ಳಾರಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಫೆ.24ರೊಳಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಬೆಳೆಸಾಲ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 1,94,024 ರೈತರು ಅರ್ಹರಿದ್ದಾರೆ. ಅದರಲ್ಲಿ ಇದುವರೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ಗ್ರಾಮೀಣ ಬ್ಯಾಂಕ್‍ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಂದ 1,65,566 ರೈತರು ಬೆಳೆ ಸಾಲ ಪಡೆದಿದ್ದಾರೆ. ಇನ್ನುಳಿದ 28,458 ರೈತರು ಈ ಆದ್ಯತೆ ಮೇರೆಗೆ ಬೆಳೆಸಾಲ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2018 ಡಿ.1ರಿಂದ ಪ್ರಾರಂಭವಾಗಿದೆ.

Intro:kn_05_bly_100220_govfarmernews_ka10007

*ಫೆ.24ರೊಳಗೆ ಬಳ್ಳಾರಿ ಜಿಲ್ಲೆಯ ರೈತರು ಪ್ರಯೋಜನ ಪಡೆದುಕೊಳ್ಳಿ*

*ಪಿಎಂ ಕಿಸಾನ್ ಸಮ್ಮಾನ್ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಬೆಳೆಸಾಲ ಒದಗಿಸಲು ಸೂಚನೆ*


ಕೇಂದ್ರ ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಫೆ.24ರೊಳಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಬೆಳೆಸಾಲ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 194024 ರೈತರು ಅರ್ಹರಿದ್ದಾರೆ. ಅದರಲ್ಲಿ ಇದುವರೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ಗ್ರಾಮೀಣ ಬ್ಯಾಂಕ್‍ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಂದ 165566ರೈತರು ಬೆಳೆ ಸಾಲ ಪಡೆದಿದ್ದಾರೆ. ಇನ್ನೂಳಿದ 28458 ರೈತರು ಈ ಆದ್ಯತೆ ಮೇರೆಗೆ ಬೆಳೆಸಾಲ ಪಡೆದುಕೊಳ್ಳಲು ಮುಂದಾಗಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಲ್ಪಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದೇ ಇದ್ದವರು ಇದೇ ಫೆ.24ರೊಳಗೆ ಹತ್ತಿರದ ಬ್ಯಾಂಕ್‍ಗಳನ್ನು ಸಂಪರ್ಕಿಸಿ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆBody:.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು 2018 ಡಿ.1ರಿಂದ ಪ್ರಾರಂಭವಾಗಿದೆ. ದೇಶದ ಎಲ್ಲ ರೈತಕುಟುಂಬಗಳಿಗೆ ಆದಾಯ ಬೆಂಬಲ ನೀಡುವ ಉದ್ದೇಶದಿಂದ ಕೃಷಿಭೂಮಿಯನ್ನು ಹೊಂದಿರುವ ರೈತರಿಗೆ ಕೇಂದ್ರ ಸರಕಾರವು ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿವರ್ಷ ಆರು ಸಾವಿರ ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿಯೂ ರೈತರು ನೋಂದಣಿ ಮಾಡಿಕೊಳ್ಳಬಹುದು. ಹಾಗೆಯೇ ಪಿಎಂ ಕಿಸಾನ್ ಡಾಟಾ ಬೇಸ್‍ನಲ್ಲಿರೋ ಮಾಹಿತಿಯನ್ನು ಆಧಾರ್ ಡಾಟಾ ಬೇಸ್‍ನಲ್ಲಿರೋ ರೀತಿಯಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಅದೇ ಡೇಟಾಬೇಸ್‍ನಲ್ಲಿ ಹಣಪಾವತಿಯ ಮಾಹಿತಿಯನ್ನು ಕೂಡ ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.
2 ಹೆಕ್ಟೇರ್‍ಗಿಂತ ಹೆಚ್ಚಿನ ಸಾಗುವಳಿ ಭೂಮಿ ಹೊಂದಿರುವ ರೈತಕುಟುಂಬ,ಮಾಜಿ ಅಥವಾ ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿರುವವರು,ಮಾಜಿ ಅಥವಾ ಹಾಲಿ ಸಚಿವರು,ನಗರಸಭೆ,ಪುರಸಭೆ,ಜಿಪಂ ಅಧ್ಯಕ್ಷರು, ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಮತ್ತು ಸ್ಥಳೀಯ ಸಂಸ್ಥೆಗಳ ಕಾಯಂ ನೌಕರರು(ಡಿ ಗ್ರೂಪ್ ಹೊರತುಪಡಿಸಿ), ಆದಾಯ ತೆರಿಗೆ ಪಾವತಿ ಮಾಡಿದವರು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
*6.76ಕೋಟಿ ರೈತರಿಗೆ ಕಿಸಾನ್ ಕ್ರೇಡಿಟ್ ಸೌಲಭ್ಯ*: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಈವರೆಗೆ 9.22 ಕೋಟಿ ಕುಟುಂಬಗಳು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿ ದೇಶದಾದ್ಯಂತ 6.76ಕೋಟಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‍ನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪಡೆದುಕೊಂಡಿದ್ದಾರೆ.
ದೇಶದಾದ್ಯಂತ 2.47 ಕೋಟಿ ರೈತರು ಇವರೆಗೆ ಕಿಸಾನ್ ಕ್ರೇಡಿಟ್ ಕಾರ್ಡ್ ಲಾಭ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದ ಸೂಚನೆ ಮೇರೆಗೆ ಬ್ಯಾಂಕ್‍ಗಳಿಗೆ ಈ ಸೂಚನೆ ನೀಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
Conclusion:ಕಿಸಾನ್ ಕ್ರಿಡೆಟ್ ಕಾರ್ಡ್‍ವು 1.60 ಲಕ್ಷ ರೂ.ಗಳ ಮಿತಿಯವರೆಗೆ ಮೇಲಾಧಾರ (ಕೊಲ್ಯಾಟರಲ್) ಭದ್ರತಾವನ್ನು ಮನ್ನಾ ಮಾಡಲಾಗುತ್ತದೆ. 3 ಲಕ್ಷ ರೂ.ಗಳ ಸಾಲದ ಮೊತ್ತಕ್ಕೆ ಸಬ್ಸಿಡಿ ದರವು ಲಭ್ಯವಿರುತ್ತದೆ. ತ್ವರಿತ ಮರುಪಾವತಿಗಾಗಿ ಹೆಚ್ಚುವರಿ ಸಬ್ಸಿಡಿ ದರವು ನೀಡಲಾಗುತ್ತದೆ. ಮೊದಲನೇ ವರ್ಷದ ಸಾಲದ ಪ್ರಮಾಣವನ್ನು ಕೃಷಿ ವೆಚ್ಚ, ಸುಗ್ಗಿಯ ವೆಚ್ಚ ಹಾಗೂ ಇತರೆ ಕೃಷಿಯ ನಿರ್ವಹಣೆ ವೆಚ್ಚದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಸಂಸ್ಕರಣೆ, ಪರಿಶೀಲನೆ, ದಾಸ್ತಾನುವೇಜು, ಖಾತಾ ಪುಸ್ತಕ ಹಾಗೂ ಇತರೆ ಶುಲ್ಕದೊಂದಿಗೆ 3 ಲಕ್ಷ ರೂ.ಗಳವರೆಗೆ ಎಸ್‍ಕೆಸಿಸಿ ಸಾಲಗಳಿಗೆ ಮನ್ನಾ ಮಾಡಲಾಗುತ್ತದೆ. 5 ವರ್ಷಗಳ ಸಾಲಕ್ಕೆ ಹಣಕಾಸಿನ ಪ್ರಮಾಣದ ಹೆಚ್ಚಳ ಆಧಾರದ ಮೇಲೆ ಅನುಮತಿ ನೀಡಲಾಗುವುದು. 
70 ವರ್ಷ ವಯಸ್ಸಿನ ರೈತರಿಗೆ ಅತ್ಯಲ್ಪ ಮೊತ್ತದ ಪ್ರೀಮಿಯಂ ನೊಂದಿಗೆ 50 ಸಾವಿರ ರೂ.ಗಳವರೆಗೆ ಅಪಾಯ ವಿಮಾ ರಕ್ಷಣೆ ಲಭ್ಯವಿದೆ. ಅಪಘಾತ ಮತ್ತು ಅಪಘಾತದಿಂದ ಉಂಟಾಗುವ ಶಾಶ್ವತ ಒಟ್ಟು ಅಂಗವೈಕಲ್ಯದೊಂದಿಗೆ ಮತ್ತು ಸಾವಿಗೆ ಮಾತ್ರ ವಿಮಾ ರಕ್ಷಣೆ ಅನ್ವಯಿಸುತ್ತದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ರೈತರಿಗೂ ಸಹ ಕಿಸಾನ್ ಕ್ರೆಡಿಟ್ ಕಾರ್ಡ್‍ನ ಪ್ರಯೋಜನವನ್ನು ವಿಸ್ತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
--- 
ETV Bharat Logo

Copyright © 2024 Ushodaya Enterprises Pvt. Ltd., All Rights Reserved.