ETV Bharat / state

ಬಡವರ ಮನೆ ಬಾಗಿಲಿಗೆ ಬಂದು ಪಡಿತರ ಚೀಟಿ ವಿತರಿಸಿದ ಅಧಿಕಾರಿಗಳು..

author img

By

Published : Jul 23, 2019, 6:26 PM IST

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಇಂದು ಬಳ್ಳಾರಿ ಜಿಲ್ಲೆಯ ಕೋಟಾಲಪಲ್ಲಿಯ ಕೊಳಚೆ ಪ್ರದೇಶದ ಜನರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಯಿತು.

ಪಡಿತರ ಚೀಟಿ ವಿತರಿಸಿದ ಅಧಿಕಾರಿಗಳು

ಬಳ್ಳಾರಿ: ಜಿಲ್ಲೆಯ ಕೋಟಾಲಪಲ್ಲಿಯ ಕೊಳಚೆ ಪ್ರದೇಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಬಡವರ ಮನೆಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ವಿತರಿಸಲಾಯಿತು.

ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ ಮತ್ತು ಕಚೇರಿಗೆ ಅಲೆದು ಸುಸ್ತಾಗಿದ್ದ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಅವರಿಗೆ ಮನೆ ಬಾಗಿಲಿನಲ್ಲೇ ಪಡಿತರ ಚೀಟಿ ದೊರಕಿದೆ. ಇದೇ ರೀತಿ ಅನೇಕ ಜನರಿಗೆ ಮನೆ ಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ನೀಡಲಾಯಿತು.

ಪಡಿತರ ಚೀಟಿ ವಿತರಿಸಿದ ಅಧಿಕಾರಿಗಳು

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗದವರಿಂದ ಸ್ಥಳದಲ್ಲಿಯೇ ಆನ್​ಲೈನ್​​ ಅರ್ಜಿಗಳನ್ನು ಸ್ವೀಕರಿಸಿ, ಹೊಸ ಪಡಿತರ ಚೀಟಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ವಿಲೇವಾರಿ ಮಾಡಿ, ಪಡಿತರ ಚೀಟಿಗಳಲ್ಲಿ ತಿದ್ದುಪಡಿಗಳನ್ನು ಅಧಿಕಾರಿಗಳು ಮಾಡಿದ್ರು.

ಬಳ್ಳಾರಿ: ಜಿಲ್ಲೆಯ ಕೋಟಾಲಪಲ್ಲಿಯ ಕೊಳಚೆ ಪ್ರದೇಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಬಡವರ ಮನೆಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ವಿತರಿಸಲಾಯಿತು.

ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ ಮತ್ತು ಕಚೇರಿಗೆ ಅಲೆದು ಸುಸ್ತಾಗಿದ್ದ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಅವರಿಗೆ ಮನೆ ಬಾಗಿಲಿನಲ್ಲೇ ಪಡಿತರ ಚೀಟಿ ದೊರಕಿದೆ. ಇದೇ ರೀತಿ ಅನೇಕ ಜನರಿಗೆ ಮನೆ ಬಾಗಿಲಿಗೆ ತೆರಳಿ ಪಡಿತರ ಚೀಟಿಯನ್ನು ನೀಡಲಾಯಿತು.

ಪಡಿತರ ಚೀಟಿ ವಿತರಿಸಿದ ಅಧಿಕಾರಿಗಳು

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗದವರಿಂದ ಸ್ಥಳದಲ್ಲಿಯೇ ಆನ್​ಲೈನ್​​ ಅರ್ಜಿಗಳನ್ನು ಸ್ವೀಕರಿಸಿ, ಹೊಸ ಪಡಿತರ ಚೀಟಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ವಿಲೇವಾರಿ ಮಾಡಿ, ಪಡಿತರ ಚೀಟಿಗಳಲ್ಲಿ ತಿದ್ದುಪಡಿಗಳನ್ನು ಅಧಿಕಾರಿಗಳು ಮಾಡಿದ್ರು.

Intro:ಬಡವರ ಮನೆಬಾಗಿಲಿಗೆ ಪಡಿತರ ಚೀಟಿ ವಿತರಣೆ
ಕೋಟಾಲಪಲ್ಲಿ ಮುತ್ಯಾಲಮ್ಮನಿಗೆ ಅಂತು ಸಿಕ್ತು ರೇಶನ್ ಕಾರ್ಡ್!
ಬಳ್ಳಾರಿ: ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಪರಿತಪಿಸುತ್ತಿದ್ದ
ಮತ್ತು ಕಚೇರಿ ಅಲೆದು ಸುಸ್ತಾಗಿದ್ದ ಬಳ್ಳಾರಿಯ ಕೋಟಾಲಪಲ್ಲಿಯ 81 ವರ್ಷದ ಮುತ್ಯಾಲಮ್ಮನ ಸಂತಸಕ್ಕೆ ಮಂಗಳವಾರ ಪಾರವೇ ಇರಲಿಲ್ಲ.
ಇದಕ್ಕೆ ಕಾರಣಿಕರ್ತವಾಗಿದ್ದು ಅವರಿಗೆ ಸ್ಥಳದಲ್ಲಿಯೇ ದೊರಕಿದ ಹೊಸ ಪಡಿತರ ಚೀಟಿ. ಮುತ್ಯಾಲಮ್ಮನ ಕೈಗೆಪಡಿತರ ಚೀಟಿ ನೀಡಿದಾಗ ಆ ದಣಿದ ಜೀವದ 
ಸಂತಸ ಹೇಳ ತೀರದಂತಿತ್ತು.
ನಗರದ ಕೋಟಾಲಪಲ್ಲಿ ಕೊಳಚೆ ಪ್ರದೇಶದಲ್ಲಿ ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ ಬಡವರ ಮನೆ
ಬಾಗಿಲಿನಲ್ಲಿಯೇ ಪಡಿತರ ಸಮಸ್ಯೆಗಳನ್ನು ಪರಿಹರಿಸುವ ಕ್ಷಿಪ್ರ ಕಾರ್ಯಕ್ರಮದಲ್ಲಿ ಇಂತಹ ಅನೇಕರಿಗೆ ಪಡಿತರ ಚೀಟಿಗಳನ್ನು ಸ್ಥಳದಲ್ಲಿಯೇ ಒದಗಿಸಲಾಯಿತು. 
ಮುತ್ಯಾಲಮ್ಮನಂತೆಯೇ ಪಡಿತರ ಚೀಟಿ ಪಡೆದ ವಿಕಲಾಂಗ ಚೇತನ ಆಟೊ ಮಲ್ಲಿಕಾರ್ಜುನ ಕೂಡ ಸಂತಸದಿಂದ ಕೈಮುಗಿದ.
ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಂಡಿರುವವರ ಮನೆಬಾಗಿಲಿನಲ್ಲಯೇ ಅನ್ನಭಾಗ್ಯದ ಆಸೆ ಈಡೇರಿದ್ದ ಕಂಡುಜನ ಸಂತಸಗೊಂಡರು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಅವರು ಸತ್ಯನಾರಾಯಣಪೇಟೆ,  ಪಟೇಲ್ ನಗರ, ಹುಸೇನ್ ನಗರ, ಕೊಟಾಲಪಲ್ಲಿ, ಡಿ.ಎ.ಆರ್ ವಸತಿ ನಿಲಯ ಸೇರಿದಂತೆ ಇನ್ನೀತರ ಬಡಾವಣೆಗಳಲ್ಲಿ ಕೆಲಸ ಮಾಡುತ್ತಿರುವ 04 ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಹೊಸ ಪಡಿತರ ಚೀಟಿ, ತಿದ್ದುಪಡಿ ವಿಷಯಗಳು ಮತ್ತು  ಪಡಿತರ ವಿತರಣೆ ವಿಷಯಗಳ ಬಗ್ಗೆ ಸ್ಥಳದಲ್ಲಿಯೇ  ಪರಿಶೀಲಿಸಿ ಇತ್ಯರ್ಥಪಡಿಸಿದರು.
Body:ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲಾಗದವರಿಂದ ಸ್ಥಳದಲ್ಲಿಯೇ ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಿ  ಹೊಸಪಡಿತರ ಚೀಟಿಗಳನ್ನು ಇದೇ ಸಂದರ್ಭದಲ್ಲಿ  ಅವರು ವಿತರಿಸಿದರು.
ಈಗಾಗಲೇ ಅರ್ಜಿ ಸಲ್ಲಿಸಿದ್ದವರ ಅರ್ಜಿಗಳನ್ನು ಇದೇ ಸಂದರ್ಭದಲ್ಲಿ ವಿಲೇವಾರಿ ಮಾಡಿದ ಅವರು
ಪಡಿತರ ಚೀಟಿಗಳಲ್ಲಿನ ತಿದ್ದುಪಡಿಗಳನ್ನು ಮಾಡಿಕೊಟ್ಟಿದ್ದು ವಿಶೇಷ.
ಈ ಸಂದರ್ಭದಲ್ಲಿ ಅನೇಕ ಪಡಿತರ ಸಂಬಂಧಿತ ಸಮಸ್ಯೆಗಳನ್ನು ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕರಾದ ಡಾ.ಕಾ.ರಾಮೇಶ್ವರಪ್ಪ ಅವರು ಬಗೆಹರಿಸಿದರು.
ಆಹಾರ ಇಲಾಖೆ ಸಹಾಯಕ ನಿರ್ದೇಶಕ ರಾದ ಹಲೀಮಾ, ಆಹಾರ ನಿರೀಕ್ಷಕ ರಾದ ರವಿ ರಾಠೋಡ್, ಆದಿಶೇಷ ಅಂಬೇಡ್ಕರ್ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_BPL_CARD_ISSUED_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.