ETV Bharat / state

ನೆರೆಹಾವಳಿಗೆ ಅಪಾರ ಹಾನಿ: ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದ ಡಿಸಿ - ballary floods news

ನೆರೆ ಹಾವಳಿ ಪರಿಹಾರ ಕಾರ್ಯವನ್ನು ಜಿಲ್ಲೆಯಾದ್ಯಂತ ಕೈಗೆತ್ತಿಕೊಳ್ಳಲಾಗಿದೆ. ತುರ್ತಾಗಿ ಕೆಲವು ಕಡೆ ಪರಿಹಾರ ನೀಡಿದ್ದು, ಪರಿಶೀಲನೆ ನಂತರ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಎಸ್.ಎಲ್. ಹೇಳಿದರು.

ಜಿಲ್ಲಾಧಿಕಾರಿ ನಕುಲ್ ಎಸ್.ಎಲ್.
author img

By

Published : Aug 15, 2019, 9:39 PM IST

ಬಳ್ಳಾರಿ: ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದು, ಹಂತ, ಹಂತವಾಗಿ ಪರಿಹಾರ ವಿತರಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಎಸ್.ಎಲ್​. ತಿಳಿಸಿದರು.

ಜಿಲ್ಲಾಧಿಕಾರಿ ನಕುಲ್ ಎಸ್.ಎಲ್.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾಂಗಣ ಅಭಿವೃದ್ಧಿಯನ್ನು ಜ. 26ರ ಒಳಗೆ ಪೂರ್ಣಗೊಳಿಸಲಾಗುವುದು. ತುಂಗಾಭದ್ರ ನದಿ ಪಾತ್ರದಲ್ಲಿನ ಅಚ್ಚೊಳ್ಳಿ ಮತ್ತು ಬ್ಯಾಲಹುಣಸಿ ಗ್ರಾಮಗಳ ಸ್ಥಳಾಂತರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ನೆರೆ ಹಾವಳಿಯಿಂದ 657 ಮನೆಗಳು ಹಾನಿಯಾಗಿದ್ದು, ₹18.47 ಲಕ್ಷ ಪರಿಹಾರ ನೀಡಲಾಗಿದೆ. 4,267 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ₹11 ಲಕ್ಷ ಪರಿಹಾರವನ್ನು ತುರ್ತಾಗಿ ನೀಡಲಾಗಿದೆ. ಸಮೀಕ್ಷೆ ನಂತರ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಎಂದರು.

934 ವಿದ್ಯುತ್ ಕಂಬಗಳು, 203 ಟ್ರಾನ್ಸ್​​ಫಾರ್ಮರ್​​​​ಗಳು ಜಿಲ್ಲೆಯಲ್ಲಿ ಹಾನಿಗೊಳಗಾಗಿವೆ. ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಹಾನಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ತುಂಗಭದ್ರಾ ಜಲಾಶಯದಿಂದ ಅತಿ ಹೆಚ್ಚು ನೀರು ಹೊರಬಿಟ್ಟಾಗ ಕಂಪ್ಲಿ ಮತ್ತು ಗಂಗಾವತಿ ಸೇತುವೆ ಮೇಲೆ ನೀರು ಹರಿಯುತ್ತದೆ. ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ಬಳ್ಳಾರಿ: ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿದ್ದು, ಹಂತ, ಹಂತವಾಗಿ ಪರಿಹಾರ ವಿತರಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಎಸ್.ಎಲ್​. ತಿಳಿಸಿದರು.

ಜಿಲ್ಲಾಧಿಕಾರಿ ನಕುಲ್ ಎಸ್.ಎಲ್.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾಂಗಣ ಅಭಿವೃದ್ಧಿಯನ್ನು ಜ. 26ರ ಒಳಗೆ ಪೂರ್ಣಗೊಳಿಸಲಾಗುವುದು. ತುಂಗಾಭದ್ರ ನದಿ ಪಾತ್ರದಲ್ಲಿನ ಅಚ್ಚೊಳ್ಳಿ ಮತ್ತು ಬ್ಯಾಲಹುಣಸಿ ಗ್ರಾಮಗಳ ಸ್ಥಳಾಂತರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ನೆರೆ ಹಾವಳಿಯಿಂದ 657 ಮನೆಗಳು ಹಾನಿಯಾಗಿದ್ದು, ₹18.47 ಲಕ್ಷ ಪರಿಹಾರ ನೀಡಲಾಗಿದೆ. 4,267 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ₹11 ಲಕ್ಷ ಪರಿಹಾರವನ್ನು ತುರ್ತಾಗಿ ನೀಡಲಾಗಿದೆ. ಸಮೀಕ್ಷೆ ನಂತರ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಎಂದರು.

934 ವಿದ್ಯುತ್ ಕಂಬಗಳು, 203 ಟ್ರಾನ್ಸ್​​ಫಾರ್ಮರ್​​​​ಗಳು ಜಿಲ್ಲೆಯಲ್ಲಿ ಹಾನಿಗೊಳಗಾಗಿವೆ. ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಹಾನಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ತುಂಗಭದ್ರಾ ಜಲಾಶಯದಿಂದ ಅತಿ ಹೆಚ್ಚು ನೀರು ಹೊರಬಿಟ್ಟಾಗ ಕಂಪ್ಲಿ ಮತ್ತು ಗಂಗಾವತಿ ಸೇತುವೆ ಮೇಲೆ ನೀರು ಹರಿಯುತ್ತದೆ. ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

Intro:ಜಿಲ್ಲೆಯಲ್ಲಿ ನೆರೆಹಾವಳಿ, ಹಂತ ಹಂತವಾಗಿ ಪರಿಹಾರ ವಿತರಣೆ: ಜಿಲ್ಲಾಧಿಕಾರಿ ಎಸ್.ಎಸ್ ನಕುಲ್.

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಯನ್ನು ಮುಂದಿನ ಜನವರಿ 26 ವರೆಗೆ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್.




Body:ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ತುಂಗಾಭದ್ರ ನದಿಯ ಪಕ್ಕದಲ್ಲಿರುವ ಅಚ್ಚೊಳ್ಳಿ ಮತ್ತು ಬ್ಯಾಲಹುಣಸಿ ಗ್ರಾಮಗಳ ಸ್ಥಳಾಂತರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಅದನ್ನು ಪರಿಶೀಲಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.


ಜಿಲ್ಲೆಯಲ್ಲಿ ನೆರೆಹಾವಳಿ ಬಗ್ಗೆ : -

ಜಿಲ್ಲೆಯಲ್ಲಿ ನೆರೆಹಾವಳಿಯಿಂದ 657 ಮನೆಗಳಿಗೆ ಹಾನಿ, 18.47 ಲಕ್ಷ ಪರಿಹಾರ ನೀಡಲಾಗಿದೆ, 4267 ಹೆಕ್ಟೇರ್ ಬೆಳೆಹಾನಿಯಾಗಿದ್ದು ಸದ್ಯ 11 ಲಕ್ಷ ಪರಿಹಾರವನ್ನು ನೀಡಿದೆ.
ಸಮೀಕ್ಷೆ ಆದ ನಂತರ ಹಂತ ಹಂತವಾಗಿ ಪರಿಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 934 ವಿದ್ಯುತ್ ಕಂಬಗಳು, 203 ಟ್ರಾನ್ಸ್ ಫಾರ್ಮ್ ಗಳು ಹಾಬಿಯಾಗಿವೆ. ಜನರ ಹಾನಿಗೊಳಗಾದ ಮೂಲಭೂತ ಸೌಲಭ್ಯಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ನೀಡಲಿದೆ ಎಂದರು.

ಸೇತುವೆ ಫಿಟ್ನೆಸ್ ರಿರ್ಪೋಟ್ ನಂತರ ಮುಂದಿನ ಕ್ರಮ:-

ತುಂಗಭದ್ರಾ ಜಲಾಶಯದಿಂದ ಅತಿ ಹೆಚ್ಚು ನೀರು ಹೊರಬಿಟ್ಟಾಗ ಕಂಪ್ಲಿ ಮತ್ತು ಗಂಗಾವತಿ ಸೇತುವೆ ಮೇಲೆ ನೀರು ಬಂದು ಸಂಚಾರ ಸಂಪೂರ್ಣ ಬಂದ್ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ, ಅದರಲ್ಲಿ ಫಿಟ್ನೇಸ್ ರಿರ್ಫೋಟ್ ಬಂದ ನಂತರ ಕ್ರಮತೆಗದುಕೊಳ್ಳಲಾಗುತ್ತದೆ ಎಂದರು.

ಹೊಸ ಸೇತುವೆ ನಿರ್ಮಾಣಕ್ಕಾಗಿ ಕೊಪ್ಪಳ ಮತ್ರು ಬಳ್ಳಾರಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಅ್ ನಕುಲ್ ತಿಳಿಸಿದರು.

ಕೆರೆಗಳಿಗೆ ನೀರು:-

ಜಿಲ್ಲೆಯಲ್ಲಿ ಖಾಲಿಯಾಗಿದ್ದ ಕೆರೆಗಳನ್ನು ತುಂಗಭದ್ರಾ ಜಲಾಶಯಗಳಿಂದ ತುಂಬಿಸುವ ಕೆಲಸ ನಡೆದಿದೆ. ಅದರಲ್ಲಿ ಸಿರಗುಪ್ಪ ತಾಲೂಕಿನಲ್ಲಿ 28 ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆದಿದೆ ಮತ್ತು ಅಲ್ಲಿಪುರ ಕೆರೆ, ಮೋಕ ಕೆರೆ ತುಂಬಿಸುತ್ತಿದ್ದೆವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದರು.


ಕ್ರೀಡಾಂಗಣ ಅಭಿವೃದ್ಧಿ :-

ಬಳ್ಳಾರಿ‌ ನಗರದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಯ ಕಾರ್ಯಕ್ಕೆ ಬೇರೆ ಬೇರೆ ಅನುದಾನ ಬಳಸಿ ಮತ್ತು ಜಿಂದಾಲ್ ಸಹಕಾರದೊಂದಿಗೆ ಹೊಸ ಯೋಜನೆ ನಿರ್ದೇಶಕರನ್ನು ಮೂರು ದಿನಗಳ ಹಿಂದೆ ಆಯ್ಕೆ ಮಾಡಿದ್ದೇವೆ, ಜನವರಿ 26 ಪೂರ್ಣಗೊಳ್ಳಿಸಲಾಗುತ್ತದೆ ಎಂದು ಡಿಸಿ ‌ಎಸ್. ಎಸ್ ನಕುಲ್ ತಿಳಿಸಿದರು.





Conclusion:ಈ ಸುದ್ದಿಗೋಷ್ಠಿಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಎಸ್.ಪಿ ಸಿಕೆ ಬಾಬಾ, ಸಿಇಒ ನಿತೀಶ್ , ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.