ಹೊಸಪೇಟೆ: ವಿಜಯನಗರ ಉಪ ಚುನಾಣೆಯ ನಾಮಪತ್ರ ಸಲ್ಲಿಸಿದ ದಿನದಿಂದ ಶಾಸಕ ಆನಂದ್ ಸಿಂಗ್ ಅವರು ಒಂದೇ ಬಣ್ಣದ ಅಂಗಿಯನ್ನು ಧರಿಸಿ ಸುದ್ದಿಯಾಗಿದ್ದರು. ಅದೇ ಮಾದರಿಯಲ್ಲಿ ಶಾಸಕ ಆನಂದ್ ಸಿಂಗ್ ದುಷ್ಟ ಶಕ್ತಿ ದೂರವಾಗಲೆಂದು ಒಂಭತ್ತನೇ ದಿನ ಮಹಸತ್ ಚಂಡಿಕಾ ಯಜ್ಞ ಹೋಮ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಇಂದು ಸಂಜೆ ಆನಂದ್ ಸಿಂಗ್ ಒಂಭತ್ತನೇ ದಿನದ ಚಂಡಿಕಾ ಯಜ್ಞ ಮತ್ತು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯನಗರದ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಯಾದ ದಿನದಿಂದ ಗುಲಾಬಿ ಬಣ್ಣದ ಅಂಗಿಯನ್ನು ಧರಿಸಿದ್ದರು.
ಫಲಿತಾಂಶ ಬರುವವರೆಗೆ ಅದೇ ಬಣ್ಣದ ಅಂಗಿಯನ್ನು ಅವರು ಧರಿಸುವುದನ್ನು ನಿಲ್ಲಿಸಿರಲಿಲ್ಲ. ತಾಲೂಕಿನ ಮೈದಾನದಲ್ಲಿ ಹೋಮ ಮತ್ತು ಯಜ್ಞದ ಒಂಭತ್ತನೇ ದಿನದ ಚಂಡಿಕಾ ಕಾರ್ಯಕ್ರಮದಲ್ಲಿ ಆನಂದ್ ಸಿಂಗ್ ಪೂಜೆ ಮಾಡಿಸಿದ್ದಾರೆ.