ETV Bharat / state

ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ: ಕುಂ. ವೀರಭದ್ರಪ್ಪ

author img

By

Published : Nov 8, 2019, 2:11 AM IST

ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ. ಇದು ಈ ಭಾಗದ ಜನರ ಕನಸಾಗಿದೆ. ಹೀಗಾಗಿ ಮುಖ್ಯಮಂತ್ರಿಗಳೇ, ಹೊಸಪೇಟೆಯನ್ನು ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಸಾಹಿತಿ ವೀರಭದ್ರಪ್ಪ ತಿಳಿಸಿದ್ದಾರೆ.

ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ

ಹೊಸಪೇಟೆ: ಚಿಕ್ಕ ಕುಟುಂಬವೇ ಚೊಕ್ಕ ಕುಟುಂಬ. ಹೀಗಾಗಿ ವಿಶಾಲ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಇದು ಈ ಭಾಗದ ಜನರ ಕನಸಾಗಿದೆ. ವಿಭಜನೆಗೊಂಡು ತೆಲಂಗಾಣ ರಾಜ್ಯವಾಗಿದೆ. ಅಲ್ಲಿ ಹಲವು ಜಿಲ್ಲೆಗಳು ರೂಪುಗೊಂಡಿದೆ. ಆದರೂ ಅಲ್ಲಿ ಯಾವುದೇ ತಕರಾರು ಏಳಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳೇ, ಹೊಸಪೇಟೆಯನ್ನು ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ವೀರಭದ್ರಪ್ಪ ತಿಳಿಸಿದ್ದಾರೆ.

ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ

ಹೊಸಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕು ಸಮಿತಿ ರಚನೆಯನ್ನು ಮಾಡಿ, ಬಳಿಕ ಮಾತನಾಡಿದ ಅವರು, ಹೊಸಪೇಟೆ ನಗರದಲ್ಲಿ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ನಾನು ಬರವಣಿಗೆ ಆರಂಭಿಸಿದ್ದು ಇಲ್ಲೇ. ಕನ್ನಡ ಎಂದರೆ ನೆಲ, ಜಲ, ಭಾಷೆಯನ್ನು ಬೆಳೆಸುವುದು. ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಭಾಷೆಗಳು ಬೇರೆಯಾಗಿವೆ. ಆದರೂ ನಾವೆಲ್ಲ ಕನ್ನಡಿಗರು‌‌ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.

ಹೊಸಪೇಟೆ: ಚಿಕ್ಕ ಕುಟುಂಬವೇ ಚೊಕ್ಕ ಕುಟುಂಬ. ಹೀಗಾಗಿ ವಿಶಾಲ ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಇದು ಈ ಭಾಗದ ಜನರ ಕನಸಾಗಿದೆ. ವಿಭಜನೆಗೊಂಡು ತೆಲಂಗಾಣ ರಾಜ್ಯವಾಗಿದೆ. ಅಲ್ಲಿ ಹಲವು ಜಿಲ್ಲೆಗಳು ರೂಪುಗೊಂಡಿದೆ. ಆದರೂ ಅಲ್ಲಿ ಯಾವುದೇ ತಕರಾರು ಏಳಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳೇ, ಹೊಸಪೇಟೆಯನ್ನು ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ವೀರಭದ್ರಪ್ಪ ತಿಳಿಸಿದ್ದಾರೆ.

ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ

ಹೊಸಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕು ಸಮಿತಿ ರಚನೆಯನ್ನು ಮಾಡಿ, ಬಳಿಕ ಮಾತನಾಡಿದ ಅವರು, ಹೊಸಪೇಟೆ ನಗರದಲ್ಲಿ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ನಾನು ಬರವಣಿಗೆ ಆರಂಭಿಸಿದ್ದು ಇಲ್ಲೇ. ಕನ್ನಡ ಎಂದರೆ ನೆಲ, ಜಲ, ಭಾಷೆಯನ್ನು ಬೆಳೆಸುವುದು. ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಭಾಷೆಗಳು ಬೇರೆಯಾಗಿವೆ. ಆದರೂ ನಾವೆಲ್ಲ ಕನ್ನಡಿಗರು‌‌ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.

Intro: ವಿಜಯ ನಗರವನ್ನು ಜಿಲ್ಲಾ ಕೇಂದ್ರವಾಗಿ ಮಾಡಿ ರಾಜಕೀಯ ಬಿಡಿ : ಕುಂ. ವೀರಭದ್ರಪ್ಪ
ಹೊಸಪೇಟೆ : ನಗರದ ಮಾರ್ಕಂಡೇಶ್ವರ ಕಲ್ಯಾಣಪದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣ ತಾಲೂಕ ಸಮಿತಿ ರಚನೆಯನ್ನು ಮಾಡಿತು.
ಭಾರತದಲ್ಲಿ ಸಂಪತ್ತು ಮತ್ತು ಸೌಜನ್ಯದ ರಾಜ್ಯ ಕರ್ನಾಟಕವಾಗಿದೆ‌. ಇಲ್ಲಿನ ಭಾಷೆಗಳು ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಉತ್ತರ ಕರ್ನಾಟಕದ ಭಾಷೆಯನ್ನು ಅಪಹಾಸ್ಯ ಮಾಡುವುದು ಸರಿ ಅಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅವರು ಮಾತನಾಡಿದರು.



Body:ಹೊಸಪೇಟೆ ನಗರದಲ್ಲಿ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ಇಲ್ಲಿ ಬಹುಭಾಷೆಯ ಜನರು ನಗರದಲ್ಲಿ ಜೀವನ ನಡೆಸುತ್ತಿದ್ದಾರೆ. ಮನುಷ್ಯನಾಗಿ ಹುಟ್ಟದಿದ್ರು ಪರವಾಗಿಲ್ಲ ಕಲ್ಲಾಗಿದ್ದರು ಹಂಪಿಯ ಕಲ್ಲಿನ ರಥವಾಗಿ ಕನ್ನಡದ ಹಿರಿಮೆಯನ್ನು ಸಾರುತ್ತಿದ್ದೆ. ಜನರು ಜಗಳ ಮಾಡಿದರು ಕನ್ನಡದಲ್ಲಿ ಜಗಳವನ್ನು ಮಾಡಬೇಕು. ಕನ್ನಡದ ಪದಗಳು ಮಾತನಾಡಿದರು ಅತ್ತರು ನಕ್ಕರು ಕಿವಿಗೆ ಚಂದವಾಗಿ ಕಾಣಿಸುತ್ತದೆ. ಇಂಗ್ಲಿಷ್ ಭಾಷೆಯ ವ್ಯಾಮೋಹವನ್ನು ಬಿಟ್ಟಾಕಿ. ನಿಮ್ಮ ಮಕ್ಕಳಿಗೆ ಡ್ಯಾಡಿ ಮಮ್ಮಿ ಎನ್ನುವ ಶಬ್ದಗಳನ್ನು ಕಲಿಸುವುದಕ್ಕಿಂತ ಅಪ್ಪ ಅಮ್ಮ ಎಂದು ಮಾತನಾಡುವುದನ್ನು ಕಲಿಸಿ ಎಂದು ಹೇಳಿದರು.
ನಾವು ಸತ್ತಾಗ ಅಳುವುದು ಕನ್ನಡದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅಳುವುದಕ್ಕೆ ಬರುವುದಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಇಂಗ್ಲಿಷ್ ಶಾಲೆಗಳಿಗೆ ಅನುಮತಿಯನ್ನು ನೀಡಿದ್ದರು ಆದರೆ ಅವು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಿದರು. ಕನ್ನಡ ಎಂದರೆ ನೆಲ,ಜಲ, ಭಾಷೆಯನ್ನು ಬೆಳೆಸುವುದು. ನಮ್ಮ ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಭಾಷೆಗಳು ಬೇರೆಯಾಗಿವೆ ಆದರು ನಾವೆಲ್ಲ ಕನ್ನಡಿಗರು‌‌ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ.
ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂದು ಬಳ್ಳಾರಿಯನ್ನು ಬಹುತೇಕ ಜನರು ನೋಡಿಯೆ ಇಲ್ಲ ನಮ್ಮ ಮನೆಯ ಸದಸ್ಯರು ಸಹ ಬಳ್ಳಾರಿಗೆ ಹೊಗಿಲ್ಲ. ವಿಜಯ ನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ. ಇದು ಆನಂದ ಸಿಂಗ್ ಅವರ ಬೇಡಿಕೆ ಅಷ್ಟೆ ಅಲ್ಲ ಈ ಭಾಗದ ಜನರ ಕನಸಾಗಿದೆ. ವಿಜಯ ನಗರ ಜಿಲ್ಲಾಕೇಂದ್ರದಲ್ಲಿ ರಾಜಕೀಯ ನಾಯಕರು ಮೂಗಿಗೆ ತುಪ್ಪವನ್ನು ಸವರುತ್ತಿದ್ದಾರೆ. ಮುಖ್ಯ ಮಂತ್ರಿಗಳೆ ಹೊಸಪೇಟೆಯನ್ನು ಜಿಲ್ಲೆ ಎಂದು ಘೋಷಣೆಯನ್ನು ಮಾಡಿ ಎಂದು ಮಾತನಾಡಿದರು.


Conclusion:KN_HPT_3_ KARNATAK_ RAXANA_ VEDIKE_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.